Saturday, June 26, 2010

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು! Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ-ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು!

Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ ಮಾತ್ರ


ಕಳೆದ ಬ್ಲಾಗ್ ಪೋಸ್ಟಿನಲ್ಲಿ ವಿ.ಕ.ದ "ವರ್ಗಾವಣೆ ದಂಧೆ" fixer ಪತ್ರಕರ್ತರು ಖಡಕ್ ಅಧಿಕಾರಿ ಅಜಯ ಸಿಂಗರ ವಿರುದ್ಧ ಸಾರಿರುವ ಯುದ್ಧದ ಕುರಿತು ಬರೆದಿದ್ದೆ.

ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಯಾರೋ ಕಾರಖೂನ ಮಾಡಿದ ಪ್ರೊಸೀಜರಲ್ ತಪ್ಪಿಗಾಗಿ ಕರ್ನಾಟಕದ ಡಿ.ಜಿ./ಐಜಿಪಿಯ ವಿರುದ್ಧ ಯಕ:ಶ್ಚಿತ್ ಯುದ್ಧ ಸಾರಿ, "ಪತ್ರಿಕಾ ಸ್ವಾತಂತ್ರ್ಯ ಹರಣ" ಎಂದೆಲ್ಲಾ ಬಡಬಡಿಸಿದ ವಿ.ಕ.ದ ಸಂಪಾದಕೀಯ ಮಂಡಳಿಯ ಅಸಲೀತನವನ್ನು ಅಜಯ್ ಸಿಂಗರು ತಮ್ಮ ಪತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಆದರೆ ಮೊದಲ ಪುಟದಲ್ಲಿ ಐಜಿಯನ್ನು ಹಿಗ್ಗಾ ಮುಗ್ಗಾ ಅವಹೇಳನ ಮಾಡಿದ ವಿ.ಕ.ದ ವರ್ಗಾವಣೆ ಪತ್ರಕರ್ತ ಏಜೆಂಟರ ಪೌರುಷ, ಐಜಿ ಅಜಯ ಸಿಂಗರ ಪತ್ರ ಪ್ರಕಟಿಸುವಲ್ಲಿ ಕಂಡು ಬಂದಿಲ್ಲ - ಎಲ್ಲೋ "ಹೆಸರು ಗೊತ್ತಿಲ್ಲ ಊರು ಬೇಡ"ದಂತಹ ಪತ್ರಗಳನ್ನು ಪ್ರಕಟಿಸುವ "ಓದುಗರ ಓಲೆ" ವಿಭಾಗದಲ್ಲಿ ಅಜಯ ಸಿಂಗರ ಪತ್ರವನ್ನು - ಅದೂ ಅರ್ಧ ಕತ್ತರಿಸಿ ಪ್ರಕಟಿಸಿ - ತಾವೆಂತಹ ಹೇಡಿಗಳು ಎಂದು ಭಟ್-ತ್ಯಾಗರಾಜ್-ರಾಘವೇಂದ್ರ ಭಟ್-ವಗೈರೆಗಳು ತೋರಿಸಿವೆ.

ಆದರೆ ಪ್ರಪಂಚ ಬದಲಾಗಿದೆ ಎಂದು ಈ ಕೂಪ ಮಂಡೂಕಗಳು ಅರಿತಂತಿಲ್ಲ! ಇಂಟರನೆಟ್ ಎಂಬ ಮಾಧ್ಯಮ ಎಷ್ಟು ಪ್ರಭಾವಶಾಲಿ ಎಂದು ಪೊಲೀಸರ ವರ್ಗಾವಣೆ ದಂಧೆಯಲ್ಲಿ ಮುಳುಗಿರುತ್ತಿದ್ದ ಈ ಪತ್ರಕರ್ತ ಶಿಖಾಮಣಿಗಳು ಅರಿತಂತಿಲ್ಲ. ಇಲ್ಲದಿದ್ದರೆ ಅಜಯ ಸಿಂಗರಂತಹ tech savvy ಸಜ್ಜನ ಅಧಿಕಾರಿಯ ವಿರುದ್ಧ ಹಿಗ್ಗಾಮುಗ್ಗಾ ಬರೆಯುತ್ತಿದ್ದರೆ?

ವಿ.ಕ. ಸಂಪಾದಕರಿಗೆ ಕಳಿಸಿದ ಪತ್ರದ ಮೂಲ ಪ್ರತಿಯನ್ನು ಕರ್ನಾಟಕ ಪೋಲಿಸ್ ವೆಬ್ ಸೈಟಿನಲ್ಲಿ ಕಾಣ ಬಹುದು (ಇಲ್ಲಿ ನೋಡಿ - http://media.ksp.diqtech.com/files/DO_to_VK.pdf)

ತಮ್ಮ ಪತ್ರವನ್ನು ಕತ್ತರಿಸಿದಲ್ಲದೆ, ಹೇಡಿಗಳಂತೆ ಎಲ್ಲೋ ಒಳಪುಟದಲ್ಲಿ ಪ್ರಕಟಿಸಿರುವ ಬಗ್ಗೆಯೂ ಅಜಯ ಸಿಂಗರು ಆಕ್ರೋಶ ಪಟ್ಟು follow-up ಪತ್ರ ಕಳಿಸಿದ್ದಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದ್ದಾರೆ.

ಅಜಯ ಸಿಂಹರ ಮೂಲ ಪತ್ರದಲ್ಲಿದ್ದ ಆದರೆ ವಿಕದಲ್ಲಿ ಕತ್ತರಿ ಪ್ರಯೋಗಕ್ಕೊಳಗಾದ ಒಂದು ಪ್ಯಾರಾಗ್ರಾಫ್ ಉಲ್ಲೇಖನೀಯ: "ತಪ್ಪು ಮಾಹಿತಿಯ ಆಧಾರದ ಮೇಲೆ ಕೆಲವು ಮುಖ್ಯ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಂಡಿರುತ್ತೀರಿ ಎಂದು ಸ್ಪಷ್ಟವಾಗಿರುತ್ತದೆ. ಅದರಲ್ಲಿ ಕೆಲವರು ನನ್ನನ್ನು ನಿನ್ನೆಯಿಂದ ದೂರವಾಣಿ ಮೂಲಕ ಸಂಪರ್ಕಿಸಿ ಅವರು ಹೇಳಿದ್ದು ಒಂದಾದರೆ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ ಎಂದು ತಿಳಿಸಿದ್ದಾರೆ. ಇದು ಪತ್ರಿಕೆಯ ಸಂಪಾದಕರಾಗಿ ನಿಮ್ಮ ಸ್ವಾತಂತ್ರ್ಯ? ನೀವು ನ್ಯಾಯಯುತ, ಆತ್ಮಸಾಕ್ಷಿಯುಳ್ಳ ಸಜ್ಜನ ವ್ಯಕ್ತಿಯಾಗಿದ್ದರೆ, ವಾಸ್ತವಾಂಶವನ್ನು ವಿವರಿಸಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ನಮ್ಮ ಕಚೇರಿಯಿಂದ ಕಳುಹಿಸಲಾದ ಪತ್ರಗಳನ್ನು ಪ್ರಕಟಿಸಿ ನಂತರ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಬಹುದಾಗಿತ್ತು"

ಹೋಗಿ ಆ ಮೂಲ ಪತ್ರವನ್ನು ನೋಡಿ, ನಿಜಕ್ಕೂ ಅಜಯ ಸಿಂಗರ ಪತ್ರ ಒಂದು Class Act - ವಿಕದ ಒಳಹೂರಣವನ್ನು ಚೆನ್ನಾಗಿ ಬಯಲಿಗೆಳೆದಿದ್ದಾರೆ ಮತ್ತು ವಿಶ್ವೇಶ್ವರ ಭಟ್ಟರ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸಿದ್ದಾರೆ. "ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಿಗೆ ಅಲ್ಲ"ವೆಂಬ ಪದಗಳ ಹಿಂದಿರುವ ಅಜಯ ಸಿಂಹರ ನೋವನ್ನು ವಿಕದ ವರ್ಗಾವಣೆ ಏಜೆಂಟ್ ಗಡಣ, fixerಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬಹುದೇ?

ವಿಕ ಪ್ರಮುಖ ವ್ಯಕ್ತಿಗಳ ಅಭಿಪ್ರಾಯವನ್ನು ತಿರುಚಿ ಬರೆದು ಡಿಜಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿದರೆ, ವಿಶ್ವೇಶ್ವರ ಭಟ್ಟರ ಈ ಓರಾಟಕ್ಕೆ ಇತರ main stream ಪತ್ರಿಕೆಗಳಿಂದ, ಮಾಧ್ಯಮಗಳಿಂದ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

ವಿಶ್ವೇಶ್ವರ ಭಟ್ಟರನ್ನು ಬೆಂಬಲಿಸಿದ ಏಕೈಕ ಸಂಪಾದಕ ಯಾರು ಗೊತ್ತೇ? ಮಂಗಳೂರಿನಲ್ಲಿ "ಕರಾವಳಿ ಅಲೆ"ಯೆಂಬ ಸೆಕ್ಸ್ ಪತ್ರಿಕೆ ನಡೆಸುತ್ತಿರುವ ಬಿ.ವಿ.ಸೀತಾರಾಮ್ ಮಾತ್ರ! ಎಂತಹ ವಿಪರ್ಯಾಸ ನೋಡಿ! ಯಾವ ಬಿವಿ ಸೀತಾರಾಂನ್ನು "ಅಂಡೆ ಪಿರ್ಕಿ"ಯೆಂದು ಬಣ್ಣಿಸಿದ್ದ ವಿಶ್ವೇಶ್ವರ ಭಟ್ಟರ ಬೆಂಬಲಕ್ಕೆ ಈಗ ನಿಂತಿರುವುದು ಅದೇ ಅಂಡೆ ಪಿರ್ಕಿ ಸೀತಾರಾಮ!

ವಿಕದ, ವಿಶ್ವೇಶ್ವರ ಭಟ್ಟರ ಅಧ:ಪತನಕ್ಕೆ ಬೇರೇನು ಸಾಕ್ಷಿ ಬೇಕು!??

Thursday, June 17, 2010

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ. ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ.ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!
ವಿಜಯ ಕರ್ನಾಟಕದ ಸಬ್ ಎಡಿಟರುಗಳಿಂದ ಹಿಡಿದು, ಅಂಕಣಕಾರರು ಸಂಪಾದಕರೆಲ್ಲಾ ವರ್ಗಾವಣೆ ದಂಧೆಯ ಸೈಡು ಬ್ಯುಸಿನೆಸ್ ನಡೆಸುವುದು ವಿಧಾನಸೌಧ ಯಡ ತಾಕುವವರೆಲ್ಲರಿಗೂ ಗೊತ್ತಿರುವಂತ್ತದ್ದೇ.

ಯಾವಾಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತೋ ಆ ದಿನದಿಂದಲೇ "ಈ ಸರ್ಕಾರ ಅಧಿಕಾರಕ್ಕೆ ಬಂದದ್ದು ನಮ್ಮ ಪತ್ರಿಕೆಯಿಂದಾಗಿಯೇ" ಎಂದು ವಿಜಯ ಕರ್ನಾಟಕದ ಅಂಕಣಕಾರರು, ಸಂಪಾದಕರು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬುದು ಸುಳ್ಳಲ್ಲ.

ಪ್ರಭಾವೀ ಖಾತೆಗಳ ಸಚಿವರ ಅಟೆಂಡರುಗಳು, ಪಿ.ಎ.ಗಳೇ "ಸಾರ್ ವಿಕ ಭಟ್ಟರ ಹತ್ತಿರ ಫೋನು ಮಾಡಿಸಿ" ಎಂದೋ, "ತ್ಯಾಗರಾಜ್ ಶೋಭಕ್ಕರಿಗೆ ಕ್ಲೋಸು, ಅವರ ಬಳಿ ಸಾಹೇಬ್ರಿಗೆ ಫೋನ್ ಮಾಡಿಸಿ"ಯೆಂದೋ ವಿ.ಕ.ಪತ್ರಕರ್ತರ ಅಂಕಣಕಾರರ ಖಾಸಗೀ ಮೊಬೈಲ್ ನಂಬರ್ ನೀಡುತ್ತಾರೆ.

ಇನ್ನು ಡಿ.ಆರ್.ಅಶೋಕರಾಮ್ ಎಂಬ ವಿ.ಆರ್.ಎಲ್.ಕಂಪೆನಿಯ ಕಾರಖೂನ ಕಮ್ "ವಿ.ಕ.ಅಂಕಣಕಾರ" ಅತ್ತ ಎಂ.ಎಲ್.ಸಿ. ವಿಜಯಾನಂದರೆ ಹೆಸರಲ್ಲಿ, ಇತ್ತ ಬಳ್ಳಾರಿ ರೆಡ್ಡಿಗಳ ಏಜೆಂಟರಂತೆ ಇದ್ದ ಬಿದ್ದ ಸಚಿವರ ಮನೆಗಳಲ್ಲಿ ಕಚೇರಿಗಳಲ್ಲಿ ಕಂಡು ಬರುತ್ತಾರೆ.

ಶಾಲಾ ಶಿಕ್ಷಕರ ವರ್ಗಾಣೆಯಿಂದ ಹಿಡಿದು ಉನ್ನತ ಶಿಕ್ಷಕ ಇಲಾಖೆ (ಹೇಗೂ ಲಿಂಬಾವಳಿ "ನಮ್ಮ ಎಬಿವಿಪಿ ಹುಡುಗ" ನೋಡಿ), ಶೋಭಕ್ಕ ಇದ್ದಾಗ ಪಂಚಾಯತಿ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಸರಕಾರೀ ಮೆಡಿಕಲ್ ಕಾಲೀಜುಗಳ ಗುಮಾಸ್ತರಿಂದ ಹಿಡಿದು ಪೋಲಿಸ್ ಇಲಾಖೆಯ ವರ್ಗಾವಣೆಯಲ್ಲೂ ವಿ.ಕ.ದ ಪತ್ರಕರ್ತ ಮಿತ್ರರು ಕೈಯಾಡಿಸುವುದು ಖಮಾಯಿಸುವುದು ವಿಧಾನಮಂಡಲ ಬೀಟ್ ನ ಎಲ್ಲರಿಗೂ ತಿಳಿದಿರುವ ಸಂಗತಿ.
ಆದರೆ ಯಾವಾಗ ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಪೋಲೀಸ್ ವರ್ಗಾವಣೆ ಬೋರ್ಡ್ ಸ್ಥಾಪಿಸಿತೋ, ಅಂದಿನಿಂದ ಈ ವಿ.ಕ. ಪತ್ರಕರ್ತ coterie ಗೆ ಪೋಲಿಸ್ ಇಲಾಖೆಯ ವರ್ಗಾವಣೆ ಕೆಲಸವಿಲ್ಲದಂತಾಗಿ ಹೋಗಿ ಮೈ ಪರೆಚುಕೊಳ್ಳುತ್ತಿದ್ದಾರೆ.

ಇದರ ಪರಿಣಾಮವೇ ಇದ್ದಕ್ಕಿದ್ದಂತೆ ಯಾವುದೋ ಅನಾಮಧೇಯ ಪತ್ರದ ಜಾಡು ಹಿಡಿದು ಪೇದೆ ವಿ.ಕ.ದ ಕಚೇರಿಗೆ ಹೋದದ್ದನ್ನೇ ನೆಪ ಹಿಡಿದು ಡಿ.ಜಿ. ಅಜಯ್ ಸಿಂಗರ ವಿರುದ್ಧ ಕೀಳಭಿರುಚಿಯ ವರದಿಗಳನ್ನು ವಿಜಯ ಕರ್ನಾಟಕ ಪ್ರಕಟಿಸಿ ನಮ್ಮ ಕಾನೂನು ಪಾಲಕರನ್ನು ಕುಗ್ಗಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.

ಅದೂ ನಕ್ಸಲರಂತಹ ಹೇಡಿಗಳು ಪೋಲಿಸರ ರುಂಡ ಚೆಂಡಾಡುತ್ತಿರುವಾಗ ಪೋಲಿಸರ ಹಿಂದಿರುವ ಬದಲು ಕೇವಲ ತಮ್ಮ ವರ್ಗಾವಣೆ ಶಿಫಾರಸುಗಳಿಗೆ ಸೊಪ್ಪು ಹಾಕಿಲ್ಲವೆಂದು ಅಜಯ್ ಸಿಂಗರಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಹೀಯಾಳಿಸಿ ಬರೆಯುವುದು "ವಿಜಯ ಕರ್ನಾಟಕ" ಸಂಪಾದಕೀಯ ಮಂಡಳಿಗೆ "ಶೋಭೆ" ತರುವ ವಿಷಯವಲ್ಲ.

ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಕಂಡ ಸಭ್ಯ ಅಧಿಕಾರಿಗಳಲ್ಲಿ ಅಜಯ್ ಸಿಂಗ್ ಒಬ್ಬರು. ವರ್ಗಾವಣೆ ದಂಧೆಯನ್ನು ಯಕ:ಶ್ಚಿತ್ ನಿಲ್ಲಿಸಿರುವ ಅಜಯ್ ಸಿಂಗ್ CM ಕಚೇರಿಯಿಂದ ಬಂದ ಶಿಫಾರಸುಗಳನ್ನೇ ಕಡೆಗಣಿಸಿರುವಾಗ ವಿಜಯ ಕರ್ನಾಟಕದ ದಲ್ಲಾಳಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸರಿಯಾಗಿಯೇ ಇದೆ.

ತಾವೇ ಸೂಪರ್ ಮಿನಿಸ್ಟರ್, ತಾವೇ ಸೂಪರ್ ಗವರ್ಮೆಂಟು ಎಂದು ಬೀಗುತ್ತಿದ್ದ ವಿ.ಕ.ದ ಭಟ್ಟರು, ತ್ಯಾಗರಾಜ್ ಅಶೋಕರಾಮ್ ರಂತಹ ದಲ್ಲಾಳಿಗಳು ಅಜಯ್ ಸಿಂಗರಂತಹ ಅಧಿಕಾರಿಗಳ ವಿರುದ್ಧ ಏನೇನೋ ದಿನಗಟ್ಟಳೆ ಬರೆದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಹೊರಬಂದು ಆತ್ಮಾವಲೋಖನ ಮಾಡಿಕೊಳ್ಳಬೇಕಾಗಿದೆ.

**************
ಕೊನೆ ಮಾತು: ಶೋಭಕ್ಕನನ್ನು ಹಿಗ್ಗಾ ಮುಗ್ಗ ಹೊಗಳುವ ತ್ಯಾಗರಾಜ್, ಅಶೋಕರಾಮರಂತಹ ವರ್ಗಾವಣೆ ದಲ್ಲಾಳಿಗಳಿಗೊಂದು ಪ್ರಶ್ನೆ - ಶೋಭಕ್ಕ ಇತ್ತೀಚೆಗೆ ಮಾನಸ ಸರೋವರಕ್ಕೆ ಹೋಗಿ ಬಂದರು ತಾನೆ? ಅತ್ತ ಬಡ ಯಾತ್ರಿಕರು ಬಸ್ಸಿನಲ್ಲಿ, ಜೀಪಿನಲ್ಲಿ ಒದ್ದಾಡಿಕೊಂಡು ಮಾನಸ ಸರೋವರಕ್ಕೆ ಹೋದರೆ, ಶೋಭಕ್ಕ ಹೆಲಿಕಾಪ್ಟರಿನಲ್ಲಿ ಬುರ್ರೆಂದು ನೇಪಾಳ ಚೀನಾ ಹೋಗಲು ಆದ ಖರ್ಚು ಎಷ್ಟು ಎಂದು ಕೇಳುವ ಧೈರ್ಯ ತಮಗಿದೆಯೇ? ಯಾವುದೇ ಆದಾಯವಿಲ್ಲದೇ ಯಕ:ಶ್ಚಿತ್ ಎಂ.ಎಲ್.ಎ. ಆಗಿರುವ ಶೋಭಕ್ಕನಿಗೆ ಹೀಗೆ ಕೋಟ್ಯಾಂತರ ರೂಪಾಯಿ ಸಿಕ್ಕಿದ್ದು ಎಲ್ಲಿಂದ?

ಯಾವುದೋ ಹಳಸಲು "ಸುದ್ದಿಮನೆ" ಬದಲು ಅಥವಾ "ಹಾಲಪ್ಪ tape" ಎಂಬ political manipulatative ಗೆ ಬಲಿಬಿದ್ದು "ನಮ್ಮದು ತನಿಖಾ ಪತ್ರಿಕೋದ್ಯಮ" ಎಂದು ಕೊಚ್ಚಿಕೊಳ್ಳುವ ಬದಲು, ಒಂದಿನಿತೂ ಆದಾಯವಿಲ್ಲದೆಯೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾನಸ ಸರೋವರಕ್ಕೆ ಬುರ್ರೆಂದು ಹಾರಿಹೋದ ಶೋಭಕ್ಕರ finance ಮಾಡಿದ್ದು ಯಾರೆಂದು ಹುಡುಕಿ ನಿಜವಾದ ಪತ್ರಿಕೋದ್ಯಮ ಏನೆಂದು ತೀರಿಸುವ ತಾಖತ್ತು "ವಿಜಯ ಕರ್ನಾಟಕ"ದ ಪತ್ರಕರ್ತರೆಂಬ ವರ್ಗಾವಣೆ ಏಜೆಂಟರುಗಳಿಗಿದೆಯೇ?
&&&&&