Showing posts with label ಕರ್ನಾಟಕ ರಕ್ಷಣಾ ವೇದಿಕೆ. Show all posts
Showing posts with label ಕರ್ನಾಟಕ ರಕ್ಷಣಾ ವೇದಿಕೆ. Show all posts

Wednesday, August 12, 2009

ಹುಡುಕಿಕೊಡಿ: ಎಲ್ಲಿ ಕಾಣೆಯಾಗಿದ್ದಾರೆ ಕರ್ನಾಟಕ ರಕ್ಕಸವೇದಿಕೆಯ ೪೦ ಲಕ್ಷ ಕಾರ್ಯಕರ್ತರು?



ಆಗಸ್ಟ್ ೯ರಂದು ತಿರುವಳ್ಳುವಾರ್ ಪ್ರತಿಮೆ ಸ್ಥಾಪನೆ ವಿರೋಧಿಸಿ ಬೆಂಗಳೂರಲ್ಲಿ ಬಂದ್, ಗಲಭೆ ನಡೆಯುವುದು ಖಚಿತವೆಂದು ರಾಷ್ಟ್ರ‍ೀಯ ಮತ್ತು ರಾಜ್ಯ ಮಾಧ್ಯಮಗಳು ಬೆಳಗಿನಿಂದಲೂ ಕಾದು ಕೂತದ್ದೇ ಬಂತು.

ಊಹೂಂ..ಎಲ್ಲೋ ೨೦ ರಕ್ಕಸ ವೇದಿಕೆಯ ಕಾರ್ಯಕರ್ತರು ಕ್ರಿಕೆಟ್ ಆಡುವ ನೆಪದಲ್ಲಿ ಒಟ್ಟಾಗಿ ಅರೆಮನಸ್ಸಿನಿಂದ ರಸ್ತೆ ತಡೆ ಮಾಡಲು ತೊಡಗಿದ ನಿಮಿಷಗಳಲ್ಲೆ ಪೊಲೀಸರಿಂದ ಬಂಧನಕ್ಕೊಳಗಾದರು.

ನಾರಾಯಣ ಗೌಡರು ಮತ್ತವರ ಚೇಲಾಗಳು (ಕೆಲ ಮಾಧ್ಯಮ ಮಂದಿ ಕೂಡಾ) ಆಗಾಗ ಹೇಳುತ್ತಿರುತ್ತಾರೆ - ಕ.ರ.ವೇ.೪೦ ಲಕ್ಷ ಕಾರ್ಯಕರ್ತರ ಪಡೆ, ರಾಜ್ಯದೆಲ್ಲೆಡೆ ೪೦೦೦ ಕರವೇ ಶಾಖೆಗಳಿವೆ. ಗೌಡರು ಒಂದು ಮಾತು ಹೇಳಿದರೆ ಬೆಂಗಳೂರು ಹೊತ್ತಿ ಉರಿಯುತ್ತದೆ, ಸಾವಿರಾರು ಲಕ್ಷಾಂತರ ಮಂದಿ ಸಾಗರೋಪಾದಿಯಲ್ಲಿ ಕನ್ನಡಕ್ಕಾಗಿ ನುಗ್ಗಿ ಬರುತ್ತಾರೆ ಇತ್ಯಾದಿ ಇತ್ಯಾದಿ.

ಆಗಸ್ಟ್ ೯ರಂದು ಎಲ್ಲಿ ಹೋದರಯ್ಯಾ ಈ ಕಾರ್ಯಕರ್ತರು?

ಶಾಸಕರ ಭವನದಲ್ಲಿ, ಕಾರವಾರದಲ್ಲಿ ವೃದ್ಧ ಮುದುಕರ ಮುಖಕ್ಕೆ ಮಸಿ ಬೆಳೆದ ಕರವೇಯ ಪೌರುಷವೆಲ್ಲಿ ಕಳೆದು ಹೋಯಿತು?

ವಾರಾಂತ್ಯದಲ್ಲಿ ಖಾಸಗೀ ಪ್ರದೇಶದಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದ ಯುವಕ ಯುವತಿಯರ ಮೇಲೆ ಕೈ ಮಾಡಿ ಅವರ ಲ್ಯಾಪ್ ಟಾಪ್, ಮೊಬೈಲ್ ಕದ್ದುಕೊಂಡ ಕರವೇ ಹೀರೋಗಳೆಲ್ಲಿದ್ದರು ಆಗಸ್ಟ್ ೯ರಂದು???

ಬೆಳಗಾವಿಯಲ್ಲಿ ಶಕ್ತಿಕಳೆದುಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಮೀಸಲಾತಿಯಿಂದಾಗಿ ಕನ್ನಡಿಗರು ಮೇಯರ್ ಆದರೆ ರಾಜ್ಯದೆಲ್ಲೆಡೆ ಗೌಡರ ಉದ್ದಿನ ವಡೆಯಂತಹ ಮುಖದ ಫ್ಲೆಕ್ಸ್ ಹಾಕಿ ಕ್ರ‍ೆಡಿಟ್ ತೆಗೆದುಕೊಂಡ ರಕ್ಕಸವೇದಿಕೆಯವರು ಈಗೆಲ್ಲಿದ್ದಾರೆ!???

ಒಂದಂತೂ ಸ್ಪಷ್ಟ - ಹಿಂದಿನ ಸರಕಾರಗಳಲ್ಲಿ ಮುಖ್ಯಮಂತ್ರಿಗಳನ್ನೇ ಬೆದರಿಸುವ, ಮಾಧ್ಯಮಗಳನ್ನು "ಸಾಕಿಕೊಂಡು" ಇದ್ದು, ಪೊಲೀಸರನ್ನು ಬಗ್ಗಿಸಿಡುವಷ್ಟು ಬೆಳೆದಿದ್ದ ರಕ್ಕಸ ವೇದಿಕೆಯ ಜೀರೋಗಳ ನಿಜವಾದ ತಾಕತ್ತು ಎಷ್ಟುವೆಂಬುದು ಅವರ ಯಾವುದೇ ಒತ್ತಡಕ್ಕೆ ಮಣಿಯದ ಯಡ್ಯೂರಪ್ಪ ಮತ್ತು ಪೊಲೀಸರು ತೋರಿಸಿದ್ದಾರೆ. ಸರಕಾರ ಮನಸ್ಸು ಮಾಡಿದರೆ ಇಂತಹ ಸಮಾಜದ್ರೋಹಿ ಸಂಘಟನೆಗಳನ್ನು ಬಗ್ಗು ಬಡಿಯಬಹುದು ಎಂಬುದೂ ಸ್ಪಷ್ಟವಾಗುತ್ತದೆ.

ನಿನ್ನೆ ಯಾವುದೋ ಪತ್ರಿಕೆಯಲ್ಲಿ ಓದಿದೆ - ಯಾವಾಗಲೂ ಬೆಳಿಗ್ಗೆ ಓಪನ್ ಜೈಲಿಗೆ ಹೋಗಿ ಬಿಟ್ಟಿ ಊಟ ತಿಂದು ತೇಗಿ ಸಂಜೆ ಹೊರಗೆ ಹೋಗುತ್ತಿದ್ದ ಈ ಉಟ್ಟು ಓರಾಟಗಾರರು ಜೈಲಿನಲ್ಲೆರಡು ದಿನ ಕಳೆದ ಕೂಡಲೇ ಇಲಿಯಂತಾಗಿದ್ದಾರೆ. ಒಬ್ಬ ಓರಾಟಗಾರರಂತೂ ಎಟ್ಯಾಚ್ಡ್ ಬಾತ್ ರೂಮ್ ಬೇಕು, ಬೆಳಿಗ್ಗೆ ಕೊಡುವ ಬ್ರೆಡ್ ಸರಿಯಿಲ್ಲ, ಜೈಲಿನಲ್ಲಿ ಸೊಳ್ಳೆ ಕಾಟ ವಿಪರೀತವೆಂದೆಲ್ಲಾ ಬಡಬಡಿಸಿದ್ದಾರೆ.

ಓಪನ್ ಜೈಲಿನಲ್ಲಿ ಸೆಲ್ ಫೋನಿಟ್ಟುಕೊಂಡು ಮಾಧ್ಯಮಗಳೊಂದಿಗೆ ಸಲೀಸಾಗಿ ಬೈಟ್ ಕೊಡುತ್ತಿದ್ದ ನಾರಾಯಣ ಗೌಡರಂತೂ ಈ ಬಾರಿ ಪರಪ್ಪನ ಅಗ್ರಹಾರದಲ್ಲಿ ಸೊಳ್ಳ ಕಡಿತ ತಿನ್ನುತ್ತಾ ತಾನು ಜೈಲಿನಲ್ಲಿದ್ದರೂ ಹೊರಗೆ ಲೋಕ ಎಂದಿನಂತೆ ನಡೆಯುತ್ತಿದೆಯೆಂದು ತಿಳಿದು ಉಗ್ರರಾಗಿ ಬಿಟ್ಟಿದ್ದಾರೆ. ಉಪಚುನಾವಣೆಯಲ್ಲಿ ವಿವಿಧ ಅಭ್ಯರ್ಥಿಗಳಿಂದ ತಿನ್ನಬಹುದಾಗಿದ್ದ opportunity ಮಿಸ್ ಆದಂತೆಯೇ ಎಂದು ಕೈ ಕೈ ಹಿಸಿಕಿಕೊಂಡಿದ್ದಾರಂತೆ.

ಈಗಿನ ಸುದ್ದಿಯ ಪ್ರಕಾರ ೧೩ರಂದು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ತನಕವೂ ಈ ಉಟ್ಟು ಓರಾಟಗಾರರು ಸೊಳ್ಳ ಕಡಿತ ತಿನ್ನುತ್ತಾ ಪರಪ್ಪನ ಅಗ್ರಹಾರದಲ್ಲೇ ಇರಬಹುದಂತೆ. ಪ್ರಾಯಶ: ಈ ಕೆಲ ದಿನಗಳಾದರೂ ಕರ್ನಾಟಕದ ಜನತೆ, MNCಗಳು ರಕ್ಕಸ ವೇದಿಕೆಯವರ ಕಾಟವಿಲ್ಲದೆ ಕಳೆಯಬಹುದೇನೋ.

ಇಡೀ ರಾಜ್ಯದ ಅಭಿಪ್ರಾಯದ ವಿರುದ್ಧ ಕೇವಲ ಪ್ರಚಾರಕ್ಕಾಗಿ ಹೋರಾಡಲು ಹೋಗಿ ಈಗ ಪರಪ್ಪನ ಅಗ್ರಹಾರದಲ್ಲಿ ಸೊಳ್ಳೆ ಕಡಿತ ತಿಂದುಕೊಂಡಿರುವ ರಕ್ಕಸ ವೇದಿಕೆ ಮತ್ತು ಗೌಡರ ಕಂಡು ಒಂದೆಡೆ ಕನಿಕರವೂ ಆಗುತ್ತದೆ. ಆದರೂ ಆಗುವುದೆಲ್ಲಾ ಒಳ್ಳೆಯದಕ್ಕಾಗಿ - ಈ ನೆಪದಿಂದಾದರೂ ಈ ಮದ್ದೂರು ವಡೆ ಸ್ವಲ್ಪ ಸ್ಲಿಂ ಆಗಬಹುದೇನೋ? ಏನಂತೀರಿ?
****
ಕೊನೆಯ ಗುಟುಕು: ಹಿಂದಿನ ಬ್ಲಾಗ್ ಪೋಸ್ಟಿಗೆ ಅಭಿಪ್ರಾಯ ಹಾಕಿದ ಎಲ್ಲರಿಗೂ ಧನ್ಯವಾದಗಳು. ಹಾಗೆಯೇ ಈ ಮೈಲ್ ಮುಖಾಂತರ "ಭೇಷ್" ಎಂದು ಬೆನ್ನು ತಟ್ಟಿದವರಿಗೂ ಥ್ಯಾಂಕ್ಸ್.

ಇನ್ನು ಇಮೈಲ್ ಮುಖಾಂತರ ಬೆದರಿಕೆ ಹಾಕಿದವರೂ, ವೈರಸ್ ಕಳಿಸಿದವರೂ, ಟ್ರ್ಯಾಕಿಂಗ್ ವೈರಸ್ ಕಳಿಸಿದವರೂ ಇದ್ದಾರೆ - ಆದರೆ ಆಶ್ಚರ್ಯವೇನೂ ಆಗಿಲ್ಲ. ನಾರಾಯಣ ಗೌಡರ ಬಳಿ ಅವರ ದೊಡ್ಡ ದೊಡ್ಡ ಐಷಾರಾಮಿ ಕಾರುಗಳ ಬಗ್ಗೆ ಕೇಳಿದಾಗ ಅವರ readymade ಉತ್ತರ ಯಾವಾಗಲೂ "ಪ್ರಪಂಚದೆಲ್ಲೆಡೆಯಿರುವ ಕನ್ನಡಿಗರು ನನಗ ಹಣ ಕಳಿಸುತ್ತಾರೆ" ಯೆಂದು. ಅಮೆರಿಕದಲ್ಲಿ, ಬ್ರಿಟನಿನಲ್ಲಿ ಕುಳಿತುಕೊಂಡು ತಾವೇ ಅನಿವಾಸಿಗಳಾಗಿದ್ದರೂ ಕರ್ನಾಟಕದಲ್ಲಿ ಹೊರಗಿನವರ ವಿರುದ್ಧ ಕೆಂಡ ಕಾರುವವರನ್ನು ಬೆಂಬಲಿಸುತ್ತಾರೆ ಈ ಅನಿವಾಸಿ ರಕ್ಕಸವೇದಿಕೆಯ ಬೆಂಬಲಿಗರು. ತಾವೇ ಇತರ ದೇಶದಲ್ಲಿ ಅನಿವಾಸಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ ಅದೇನೋ ಅವ್ಯಕ್ತ long distance ಕನ್ನಡ ಪ್ರೇಮ ಈ ವರ್ಷಕ್ಕೊಂದು ಬಾರಿ ಝೂಮೆಂದು ಹಾರಿ ಬಂದು ಹೋಗುವ ಕಂಪ್ಯೂಟರ್ ಹೀರೋಗಳಿಗೆ. ಅಮೆರಿಕದಲ್ಲಿ ಆರ್ಥಿಕ ತಾಪತ್ರಯಗಳಿಂದಾಗಿ ಪ್ರಾಯಷ: ಕೆಲಸವಿಲ್ಲದೆ ಇಡೀ ದಿನ ಇಂಟರ್ನೆಟ್ಟಿನಲ್ಲಿ ಕನ್ನಡ ಹೀರೋಗಳಾಗುವ ದೊಡ್ಡ ಗುಂಪೇ ಇದ್ದಂತಿದೆ.

ಒಮ್ಮೆ ಈ ಪ್ರತಿಮೆ ಗಲಾಟೆ ಮುಗಿದ ನಂತರ ಮಾನ್ಯ ಯಡ್ಯೂರಪ್ಪನವರು ಈ ರಕ್ಕಸವೇದಿಕೆಯವರಿಗೆ ಹಣ ಕಳಿಸುವ ಅನಿವಾಸಿ ಕನ್ನಡಿಗರಾರು ಎಂದು ಗುರುತಿಸಿ "ಗೂಂಡಾಗಳ ಅನಿವಾಸಿ ಬೆಂಬಲಿಗರ" ಪಟ್ಟಿ ಪ್ರಕಟಿಸಿದರೆ ಪ್ರಾಯಷ: ಈ long distance NRIs (Non Reliable Indians) ಗಳ ಇಂಟರ್ನೆಟ್ ಆಟೋಟಾಪಕ್ಕೆ ಕಡಿವಾಣ ಬೀಳಬಹುದೇನೋ!
*****

Saturday, August 8, 2009

Karnataka Rakshana Vedike KRV - mob of jobless hoodlums . Unholy nexus between Bangalore media and KRV


Karnataka Rakshana Vedike (KRV) is in the news all over again by protesting against installation of Tiruvalluvar statue in Bangalore.

Intention of this post is to clarify that not all Kannadigas are fanatics like Karnataka Rakshana Vedike - KRV hoodlums.

Also to expose the unholy nexus between Karnataka Rakshana Vedike and media in Bangalore.

Facts on the statue are:


  • All political parties met and decided to support installation of statue. Just like TN, it is very rare in Karnataka that all parties meet and agree on something, but on this issue they did.

  • Well known Kannada leaders like Patil Puttappa attended the meeting and supported statue.

  • Many Kannada writers, literary figures including Jnanapeetha Award winner U.R.Ananathamurthy have given public statements supporting statue installation.

  • Almost all Kannada newspapers have writtern Editorials and published articles supporting Thiruvalluvar statue in Bangalore.

  • Even Karanataka Highcourt came down heavily on anti-statue protesters and basically asked them to mind their own business and warned that they will be responsible for any untoward incidents on August 9th.
So why Karnataka Rakshana Vedike KRV and other fringe groups are up in arms?

Karnataka Rakshana Vedike is a fringe violent group in Bangalore. By claiming to be fighting for Kannada there are many accusastions against this organisation for involving in blackmail, hafta collection - in general what locals call as "Roll Call" business.

These fringe groups like to be in news all the time as that is how they build their image as ruthless extortionists. So statue issue has come as a boon to these useless jobless goons.

KRV's business must be booming - because there are lot of infighting within organisation and there are groups like "Narayana Gowda faction KRV", "Praveen Shetty faction KRV", "Shivarame Gowda faction KRV" each trying to get foothold and mark their territories in the name of "fighting for Kannada".




Many of Karnataka Rakshana Vedike's office bearers are ex-criminals now donning the roll of Kannada fighters.

Yellow and red shawl of these goons has become a symbol in Bangalore for roll call business and extort money from business in the name of Kannada.


Interestingly during general elections time these factions don't contest elections but go with any political parties or candidates who can bid for them! If these thugs are truly interested in development of Karnataka and Kannada why are they not contesting in elections?

Narayana Gowda President of Karnataka Rakshana Vedike


All times of the year Bangalore is plastered with chubby smiling face of Narayana Gowda and Karnataka Rakshana Vedike is a brain child of Narayana Gowda.

Narayana Gowda, President of Karnataka Rakshana Vedike is a returnee from Mumbai (where he supposedly worked in Dance Bars) so one would think he appreciates how Mumbai offered him food at the end of the day despite him being an outsider in Mumbai. But no, he poses as a crusader against outsiders in Bangalore.





Narayana Gowda has no known means of income now. But he can be seen driving around in large posh SUVs with dozens of hanger ons and goons posing as body guards. If this person is truly fighting for Kannada one has to wonder why does he require goons as his body guards.

Narayana Gowda and his band of followers don't have a normal job like you and me. They just go around Bangalore meeting businessmen and business owners including MNCs and BPOs and harass them for not having Kannada board, for example and leave the place after collecting you know what. No wonder Karnataka Rakshana Vedike has now become another name for Roll Call.


In January 2009, Narayana Gowda organised a huge conference in Bangalore. Of course, stage is imcomplete without chubby smiling face of Narayana Gowda in center. Crores of rupees were collected in the name of conference by all and sundry in the name of KRV, but no one has been account books even after so many months.

So question is why no one in Karnataka Media challenge this goon Narayana Gowda who is running roll call business in the name of protecting Kannada? Answer is simple - many in the media world are in the pockets of Rakshana Vedike.

Relation between Bangalore media and Rakshana Vedike is so close that many a times Rakshana Vedike goons inform journalists well in advance of any so called "raid", "attack" on business, property and people.

See disgusting vidoe below where Rakshana Vedike goons attack party goers and girls in Bangalore. KRV claimed this was a "drug""rave" party but only tablets they show are used for common cold, fever!! Karnataka Rakshana Vedike goons also stole laptops, cell phones of these poor party goers and allegedly molested girls (in video you can see them tearing top of a lady who screams in horror). One has to note that police ultimately dropped all charges against these party goers, but this incident truly established KRV as an extortion organisation who now rule all business establishement in outskirts of Bangalore.





It's time people of Karnataka raise their voice against undemocratic ways of Karnataka Rakshana Vedike and demand that Karnataka Govt ban this organisation and declare it a terrorist organisation. So far we are afraid that Govt won't act on KRV, but in the case of statue it is clear that Govt, Courts have seen real intention of KRV.

KRV now stands exposed. Govt should immediately put its leaders in jail under goonda act and ban KRV and its blackmail business. Govt should also need to take a look and seize bank accounts of Narayana Gowda, Shetty and other sundry blackmail leaders.

On a side note, it is unfortunate that there are many non-resident Kannadigas who support these thugs of Karnataka Rakshana Vedike. Typical long distance NRI patriotism syndrome. Karnataka Rakshana Vedike's web presence is maintained by these NRI Kannadigas who themselves are outsiders in countries they live but preach that Bangalore should be closed for outsiders.

*****Kannada Blog Post below / Cross Posted to Kannada Journalists*****



ಪ್ರತಿಮೆ ವಿವಾದ - ಜನಪ್ರತಿನಿಧಿಗಳಲ್ಲದ ಉಟ್ಟು ಓರಾಟಗಾರರಿಗೆ ಮಾಧ್ಯಮಗಳಲ್ಲೇಕಿಷ್ಟು ಪ್ರಚಾರ?

ಕರ್ನಾಟಕದ ಜನತೆಯ ಪ್ರತಿನಿಧಿಗಳಾದ ಕರ್ನಾಟಕದ ಸಮಸ್ತ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಎಂದಿನ ಗಲಾಟೆ ಬದಿಗಿಟ್ಟು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿರುವಳ್ಳವಾರ್ ಪ್ರತಿಮೆ ಸ್ಥಾಪನೆಗೆ ಒಪ್ಪಿರುವುದು ಶ್ಲಾಘನೀಯ ಸಂಗತಿ. ಏನೇ ಹೇಳಿ ಈ ವಿಷಯದಲ್ಲಂತೂ ಮಾನ್ಯ ಯಡ್ಯ್ರಪ್ಪನವರು ತಮ್ಮ ನಾಯಕತ್ವ ಮರೆದಿದ್ದಾರೆ.

ಅಂತೆಯೇ ಕನ್ನಡ ಸಂಸ್ಕೃತಿಯ ನಿಜವಾದ ಹರಿಕಾರರಾದ ಸಾಹಿತಿಗಳು, ಚಿಂತಕರು, ಪಾಟೀಲ್ ಪುಟ್ಟಪ್ಪರಂತಹ ಅಸಲೀ ಹೋರಾಟಗಾರರೂ ಒಮ್ಮತದಿಂದ ಸರಕಾರವನ್ನು ಬೆಂಬಲಿಸಿದ್ದಾರೆ. ಎಲ್ಲಾ ಮಾಧ್ಯಮ ಮತ್ತು ಪತ್ರಿಕೆ ಸಂಪಾದಕೀಯಗಳೂ ಇದನ್ನು ಸ್ವಾಗತಿಸಿವೆ.

ಆದರೆ ಬಹಳ ಸಮಯದಿಂದ ತಣ್ಣಗೆ ಕೆಲಸವಿಲ್ಲದೆ ಕುಳಿತಿದ್ದ ಕೆಲ "ಉಟ್ಟು ಓರಾಟಗಾರ"ರಿಗೆ ಬಹಳ ಸಿಟ್ಟು ಬಂದು ಬಿಟ್ಟಿದೆ. ಜನವರಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಮ್ಮೇಳನ ಮಾಡಿದ್ದ ಕ.ರಾ.ವೆ.ಯ ಗೌಡರೂ, ರೋಲ್ ಕಾಲ್ ಉದ್ದಿಮೆಯಲ್ಲಿ ತನ್ನದೇ ಅಸ್ತಿತ್ವ ಸ್ಥಾಪಿಸಲು ಒದ್ದಾಡುತ್ತಿರುವ ಇನ್ನೊಂದು "ಬಣ"ವೂ, ಸತತವಾಗಿ ಚುನಾವಣೆಯಲ್ಲಿ ಸೋತರೂ ಬುದ್ಧಿ ಬರದ ವಾಟಾಳರೂ ಸಡನ್ನಾಗಿ ಎದ್ದು ಬಿಟ್ಟಿದ್ದಾರೆ, ಕನ್ನಡ ಉಳಿಸುವ ಹೆಸರಲ್ಲಿ ಪ್ರತಿಮೆ ಸ್ಥಾಪನೆ ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಹಿರಿಯರೆದುರು ಸಭಾ ಮರ್ಯಾದೆಯನ್ನೂ ಮರೆತು ಯಕ:ಶ್ಚಿತ್ ಸ್ಟ್ರೀಟ್ ರೌಡಿಗಳಂತೆ ತಮ್ಮ ರೋಲ್ ಕಾಲ್ ಸ್ಟೈಲ್ ತೋರಿಸಿದ್ದು ತಾವು ಟಿ.ವಿ.ಯಲ್ಲಿ ನೋಡಿರಬಹುದು.

ನಾನು ಕೇಳಿದಂತೆ ಗೌಡರೂ, ಶೆಟ್ಟರೂ ಪ್ರತಿಭಟನೆಯ ಹೆಸರಲ್ಲಿ, ಪ್ರತಿಭಟನೆಗಾಗುವ ಖರ್ಚಿನ ಹೆಸರಲ್ಲಿ ಎಂದಿನಂತೆ ಈಗಾಗಲೇ ಎರಡೆರಡು ಬಾರಿ ದೊಡ್ಡ ಕುಳಗಳ ಹತ್ತಿರ ಚಂದಾ ವಸೂಲಿ ಮಾಡಿಯಾಗಿದೆ. ಜನವರಿಯ ಸಮ್ಮೇಳನಕ್ಕೆ ಕ.ರಾ.ವೇ.ಯಿಂದ ಬಲಾತ್ಕಾರವಾಗಿ ಚಂದಾ ವಸೂಲಿ ಮಾಡಿಕೊಡಲ್ಪಟ್ಟಿದ್ದ ಗಾಂಧೀನಗರದ ಮಿತ್ರರೊಬ್ಬರು ಆರು ತಿಂಗಳಾಗುವುದರೊಳಗೆ ಕ.ರಾ.ವೇ.ಯ ಇನ್ನೊಂದು ಡಿಮಾಂಡ್ ಬಂದದ್ದು ನೋಡಿ ಹೌಹಾರಿದ್ದಾರೆ. ನವೆಂಬರ್ ೧ ನ್ನೂ ದೂರವಿಲ್ಲ ನೋಡಿ.

ನನ್ನ ಪ್ರಶ್ನೆ ಸಿಂಪಲ್ - ರಾಜ್ಯದ ಎಲ್ಲಾ ಪಕ್ಷಗಳು ಒಪ್ಪಿರುವಾಗ ಕ್ಷುಲ್ಲುಕ ಕಾರಣಗಳಿಗೆ, ಪ್ರಚಾರಕ್ಕಾಗಿ ವಿರೋಧಿಸುತ್ತಿರುವ ಈ ಉಟ್ಟು ಓರಾಟಗಾರರಿಗೆ ನಾವೇಕೆ ಕ್ಯಾರ್ ಮಾಡಬೇಕು? ವಿರೋಧಿಸುವ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆದುಕೊಂಡು ರೋಲ್ ಕಾಲ್ ಸಾಮ್ರಾಜ್ಯ ವಿಸ್ತರಿಸುತ್ತಿರುವ ಇವರಿಗೆ ಧಿಕ್ಕಾರ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಡದ ಈ ರೋಲ್ ಕಾಲ್ ಉದ್ದಿಮೆದಾರರು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ಮಾತನಾಡಲಿ.

ನಾಡಿದ್ದೂ ನೋಡಿ - ಪ್ರತಿಮೆ ಅನಾವರಣಕ್ಕಿಂತ ಈ ಗೌಡರ-ಶೆಟ್ಟರ-ವಾಟಾಳರ ಬೊಬ್ಬೆಗೇ ಪ್ರಚಾರ ಜಾಸ್ತಿ ಸಿಗಲಿದೆ. ಕೋಟ್ಯಾಂತರ ಕನ್ನಡಿಗರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗಿಂತ ನಮ್ಮ ಮಾಧ್ಯಮಗಳಿಗೆ ಈ ಬೆರಳೆಣಿಕೆಯ "ಓರಾಟ"ಗಾರರು ಮುಖ್ಯವೆನಿಸಲಿದ್ದಾರೆ.

ರಾಜಕಾರಣಿಗಳಂತೆ ವೇದಿಕೆಯವರೂ ಮಾಧ್ಯಮದವರನ್ನು ಸಾಕಿಕೊಂಡಿದ್ದಾರಾ? ರಾಜಕಾರಣಿಗಳಿಗೆ, ಚಿತ್ರ ನಟ ನಟಿಯರಿಗೆ ಏನೆಲ್ಲಾ pointed question ಕೇಳುವ ನಮಗೆ ಜನವರಿಯಲ್ಲಿ ನಡೆದ ಕ.ರಾ.ವೇ.ಯ ಭರ್ಜರಿ ಸಮ್ಮೇಳನದ ಲೆಕ್ಕವನ್ನು ಗೌಡರ ಬಳಿ ಕೇಳುವಷ್ಟು ಧೈರ್ಯವಿದೆಯೇ? There is a big story out there - if you are interested!
*******