Thursday, September 9, 2010

ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?


ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?

ಈ ಬ್ಲಾಗ್ ಪೋಸ್ಟಿನ ಹೆಡ್ಡಿಂಗು rhetorical ಅಲ್ಲ. ಎರಡು ದಿನಗಳ ಹಿಂದೆ ಕುಮಟಾದಲ್ಲಿ ನಡೆದ ಘಟನೆಯ ಅವಲೋಕನ.

ಒಂದು ಘಟನೆಯನ್ನು - ಅದರಲ್ಲೂ ಪತ್ರಕರ್ತನೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಾಗ ಅದನ್ನು ತಮಗೆ ಬೇಕಾದಂತೆ ಹೇಗೆ ತಿರುಚಬಹುದೆನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.



ಕುಮಟಾದ "ವಿಜಯ ಕರ್ನಾಟಕ"ದ ವರದಿಗಾರ ವಿ.ಡಿ.ಭಟ್ಟ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆ ಕಿರುಚಿದಾಗ ಜಮಾಯಿಸಿದ ಜನರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಪೊಲೀಸ್ ಅತಿಥಿಯಾದನೆಂದು ಒಂದು ವರದಿ. ಅದೇ ಪ್ರಕರಣ "ವಿಜಯ ಕರ್ನಾಟಕ"ದಲ್ಲಿ ಪ್ರಕಟವಾದ ಧಾಟಿಯೇ ಬೇರೆ. ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಥಳಿಸಿದರಂತೆ, ಅದು ಮಾಧ್ಯಮ ಸ್ವಾತಂತ್ರ್ಯದ ಹರಣವಂತೆ! ಉ.ಕ.ದ ಉಸ್ತುವಾರಿ ಸಚಿವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೆಂಬ ಒಗ್ಗರಣೆ ಬೇರೆ. ಅಲ್ಲಾ ಸ್ವಾಮೀ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದವರನ್ನೆಲ್ಲಾ ಉಸ್ತುವಾರಿ ಸಚಿವರು ವಿಚಾರಿಸುತ್ತಾ ಕುಳಿತುಕೊಳ್ಳಲು ಅವರಿಗೇನು ತಿಗಣೆ ಕಚ್ಚಿದೆಯಾ ಸ್ವಾಮೀ?

ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೊರೆಯುವ ವಿ.ಕ. ಈಗ ಪತ್ರಕರ್ತನ ವಿರುದ್ಧ ದೂರು ನೀಡಿದ ಬಡಪಾಯಿ ಮಹಿಳೆಯನ್ನೇ ವೇಶ್ಯೆಯೆಂದು ಹೀಯಾಳಿಸಿದಷ್ಟೇ ಅಲ್ಲ, ಮಹಿಳೆಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿ ಮಾನಹರಣ ಮಾಡಿದೆ. ಒಂಥರಾ "ಮಹಿಳೆ provocative ಆಗಿ dress ಮಾಡಿಕೊಂಡರೆ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ - ಅವಳದ್ದೇ ತಪ್ಪು" ಎಂಬ ತಾಲಿಬಾನಿಗಳ, ಕೆಲ Male Chauvinist Pigಗಳು ವಾದಿಸಿದಂತೆ. ಮಾಧ್ಯಮ ಸ್ವಾತಂತ್ರ್ಯವೆಂದರೆ ಪತ್ರಕರ್ತರು ಅತ್ಯಾಚಾರ ಮಾಡುವುದು OK ಎಂಬಲ್ಲಿಗೆ ಬಂದಿರುವುದು ನಮ್ಮ ದೌರ್ಭಾಗ್ಯವಷ್ಟೇ.

ಹಿಂದೆ ಯಾರೋ ಪೇದೆ ನೋಟೀಸ್ ಕೊಟ್ಟನೆಂದ ಮಾತ್ರಕ್ಕೆ ಮಾಧ್ಯಮ ಸ್ವಾತಂತ್ರ್ಯಹರಣವಾಯಿತೆಂದು ಗಣ್ಯರ ಹೆಸರಲ್ಲಿ ಏನೇನೋ ಪ್ರಕಟಿಸಿ ಸಿಕ್ಕಿ ಬಿದ್ದ (ಇಲ್ಲಿ ನೋಡಿ DGP ಅಜಯ ಸಿಂಹರ ಪತ್ರ) ವಿಜಯ ಕರ್ನಾಟಕದ Fake SMS, Fake Opinion generators ಇನ್ನೂ ಪಾಠ ಕಲಿತಂತಿಲ್ಲ.

ಅತ್ಯಾಚಾರಿ ಪ್ರಕರಣ ಆರೋಪಿ ವಿ.ಕ.ನ. ಪತ್ರಕರ್ತನ ಪರವಾಗಿ ರಾಜಕೀಯ ನಿರುದ್ಯೋಗಿಗಳಾದ ಆರ್.ವಿ.ದೇಶಪಾಂಡೆ, ಎಂ.ಸಿ.ನಾಣಯ್ಯ ಮತ್ತು ಹೊರಟ್ಟಿಗಳಂತಹವರಿಂದ ಹೇಳಿಕೆ ಕೊಡಿಸಿದೆ. ಶಿಕ್ಷಕರ ವರ್ಗಾವಣೆ ದಂಧೆಗೆ ತಡೆ ಹಾಕಿ ತಮ್ಮ ಖಮಾಯಿಗೆ ಕಲ್ಲು ಹಾಕಿದ ವಿಶ್ವೇಶ್ವರ ಹೆಗಡೆಯವರ ಮೇಲಿರುವ ಸಿಟ್ಟನ್ನು ಹೊರಟ್ಟಿ ಈಗ ಅತ್ಯಾಚಾರಿಯನ್ನು ಬೆಂಬಲಿಸಲು ಬಳಸಿಕೊಂಡದ್ದು ಹೊರಟ್ಟಿಯ ಸದ್ಯದ ಮಾನಸಿಕತೆಯನ್ನು ತೋರಿಸುತ್ತದೆಯೆಷ್ಟೇ.

ಇನ್ನು ಅತ್ಯಾಚಾರಿಯನ್ನು ಬಂಧಿಸಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದರ ಸಾಕ್ಷಿಯೆಂದು ನಾಣಯ್ಯನವರು ಹೇಳಿದನ್ನು ನಂಬಲು ಜನರೇನು ಕಿವಿ ಮೇಲೆ ಹೂವಿಟ್ಟುಕೊಂಡಿದ್ದಾರ ಸ್ವಾಮೀ? ಸಂಜೆ ೭ ಘಂಟೆಯ ಮೇಲೆ ನಾಣಯ್ಯನವರಿಗೆ ಫೋನ್ ಮಾಡಿದರೆ ಹೇಗೆ ಬೇಕಾಂದಂತಹ ಅಭಿಪ್ರಾಯವನ್ನೂ ಪಡೆಯಬಹುದೆಂಬುದನ್ನು ಬೆಂಗಳೂರಿನ ಹಿರಿ ಮರಿ ಪತ್ರಕರ್ತರಿಗೂ ತಿಳಿದಿರುವ ವಿಷಯ - ಇಂತಹ ಕುಡುಕ ಹೇಳಿದನ್ನು box item ಮಾಡಿ ಹಾಕಿ ತನ್ನ ಅತ್ಯಾಚಾರಿ ವರದಿಗಾರನನ್ನು ಬೆಂಬಲಿಸುವ ಪರಿಸ್ಥಿತಿ ವಿ.ಕ. ಸಂಪಾದಕೀಯ ಮಂಡಳಿಗೆ ಬರಬಾರದಿತ್ತು.

ಪತ್ರಕರ್ತನೆಂದ ಮಾತ್ರಕ್ಕೆ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ವಿ.ಕ. ಅಭಿಪ್ರಾಯವೇ? ಅತ್ಯಾಚಾರಕ್ಕೂ ಮಾಧ್ಯಮ ಸ್ವಾತಂತ್ರ್ಯಕ್ಕಿರುವ ಸಂಬಂಧವೇನೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಏನೆನ್ನುತ್ತೀರಿ?

Saturday, June 26, 2010

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು! Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ-ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು!

Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ ಮಾತ್ರ


ಕಳೆದ ಬ್ಲಾಗ್ ಪೋಸ್ಟಿನಲ್ಲಿ ವಿ.ಕ.ದ "ವರ್ಗಾವಣೆ ದಂಧೆ" fixer ಪತ್ರಕರ್ತರು ಖಡಕ್ ಅಧಿಕಾರಿ ಅಜಯ ಸಿಂಗರ ವಿರುದ್ಧ ಸಾರಿರುವ ಯುದ್ಧದ ಕುರಿತು ಬರೆದಿದ್ದೆ.

ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಯಾರೋ ಕಾರಖೂನ ಮಾಡಿದ ಪ್ರೊಸೀಜರಲ್ ತಪ್ಪಿಗಾಗಿ ಕರ್ನಾಟಕದ ಡಿ.ಜಿ./ಐಜಿಪಿಯ ವಿರುದ್ಧ ಯಕ:ಶ್ಚಿತ್ ಯುದ್ಧ ಸಾರಿ, "ಪತ್ರಿಕಾ ಸ್ವಾತಂತ್ರ್ಯ ಹರಣ" ಎಂದೆಲ್ಲಾ ಬಡಬಡಿಸಿದ ವಿ.ಕ.ದ ಸಂಪಾದಕೀಯ ಮಂಡಳಿಯ ಅಸಲೀತನವನ್ನು ಅಜಯ್ ಸಿಂಗರು ತಮ್ಮ ಪತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಆದರೆ ಮೊದಲ ಪುಟದಲ್ಲಿ ಐಜಿಯನ್ನು ಹಿಗ್ಗಾ ಮುಗ್ಗಾ ಅವಹೇಳನ ಮಾಡಿದ ವಿ.ಕ.ದ ವರ್ಗಾವಣೆ ಪತ್ರಕರ್ತ ಏಜೆಂಟರ ಪೌರುಷ, ಐಜಿ ಅಜಯ ಸಿಂಗರ ಪತ್ರ ಪ್ರಕಟಿಸುವಲ್ಲಿ ಕಂಡು ಬಂದಿಲ್ಲ - ಎಲ್ಲೋ "ಹೆಸರು ಗೊತ್ತಿಲ್ಲ ಊರು ಬೇಡ"ದಂತಹ ಪತ್ರಗಳನ್ನು ಪ್ರಕಟಿಸುವ "ಓದುಗರ ಓಲೆ" ವಿಭಾಗದಲ್ಲಿ ಅಜಯ ಸಿಂಗರ ಪತ್ರವನ್ನು - ಅದೂ ಅರ್ಧ ಕತ್ತರಿಸಿ ಪ್ರಕಟಿಸಿ - ತಾವೆಂತಹ ಹೇಡಿಗಳು ಎಂದು ಭಟ್-ತ್ಯಾಗರಾಜ್-ರಾಘವೇಂದ್ರ ಭಟ್-ವಗೈರೆಗಳು ತೋರಿಸಿವೆ.

ಆದರೆ ಪ್ರಪಂಚ ಬದಲಾಗಿದೆ ಎಂದು ಈ ಕೂಪ ಮಂಡೂಕಗಳು ಅರಿತಂತಿಲ್ಲ! ಇಂಟರನೆಟ್ ಎಂಬ ಮಾಧ್ಯಮ ಎಷ್ಟು ಪ್ರಭಾವಶಾಲಿ ಎಂದು ಪೊಲೀಸರ ವರ್ಗಾವಣೆ ದಂಧೆಯಲ್ಲಿ ಮುಳುಗಿರುತ್ತಿದ್ದ ಈ ಪತ್ರಕರ್ತ ಶಿಖಾಮಣಿಗಳು ಅರಿತಂತಿಲ್ಲ. ಇಲ್ಲದಿದ್ದರೆ ಅಜಯ ಸಿಂಗರಂತಹ tech savvy ಸಜ್ಜನ ಅಧಿಕಾರಿಯ ವಿರುದ್ಧ ಹಿಗ್ಗಾಮುಗ್ಗಾ ಬರೆಯುತ್ತಿದ್ದರೆ?

ವಿ.ಕ. ಸಂಪಾದಕರಿಗೆ ಕಳಿಸಿದ ಪತ್ರದ ಮೂಲ ಪ್ರತಿಯನ್ನು ಕರ್ನಾಟಕ ಪೋಲಿಸ್ ವೆಬ್ ಸೈಟಿನಲ್ಲಿ ಕಾಣ ಬಹುದು (ಇಲ್ಲಿ ನೋಡಿ - http://media.ksp.diqtech.com/files/DO_to_VK.pdf)

ತಮ್ಮ ಪತ್ರವನ್ನು ಕತ್ತರಿಸಿದಲ್ಲದೆ, ಹೇಡಿಗಳಂತೆ ಎಲ್ಲೋ ಒಳಪುಟದಲ್ಲಿ ಪ್ರಕಟಿಸಿರುವ ಬಗ್ಗೆಯೂ ಅಜಯ ಸಿಂಗರು ಆಕ್ರೋಶ ಪಟ್ಟು follow-up ಪತ್ರ ಕಳಿಸಿದ್ದಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದ್ದಾರೆ.

ಅಜಯ ಸಿಂಹರ ಮೂಲ ಪತ್ರದಲ್ಲಿದ್ದ ಆದರೆ ವಿಕದಲ್ಲಿ ಕತ್ತರಿ ಪ್ರಯೋಗಕ್ಕೊಳಗಾದ ಒಂದು ಪ್ಯಾರಾಗ್ರಾಫ್ ಉಲ್ಲೇಖನೀಯ: "ತಪ್ಪು ಮಾಹಿತಿಯ ಆಧಾರದ ಮೇಲೆ ಕೆಲವು ಮುಖ್ಯ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಂಡಿರುತ್ತೀರಿ ಎಂದು ಸ್ಪಷ್ಟವಾಗಿರುತ್ತದೆ. ಅದರಲ್ಲಿ ಕೆಲವರು ನನ್ನನ್ನು ನಿನ್ನೆಯಿಂದ ದೂರವಾಣಿ ಮೂಲಕ ಸಂಪರ್ಕಿಸಿ ಅವರು ಹೇಳಿದ್ದು ಒಂದಾದರೆ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ ಎಂದು ತಿಳಿಸಿದ್ದಾರೆ. ಇದು ಪತ್ರಿಕೆಯ ಸಂಪಾದಕರಾಗಿ ನಿಮ್ಮ ಸ್ವಾತಂತ್ರ್ಯ? ನೀವು ನ್ಯಾಯಯುತ, ಆತ್ಮಸಾಕ್ಷಿಯುಳ್ಳ ಸಜ್ಜನ ವ್ಯಕ್ತಿಯಾಗಿದ್ದರೆ, ವಾಸ್ತವಾಂಶವನ್ನು ವಿವರಿಸಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ನಮ್ಮ ಕಚೇರಿಯಿಂದ ಕಳುಹಿಸಲಾದ ಪತ್ರಗಳನ್ನು ಪ್ರಕಟಿಸಿ ನಂತರ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಬಹುದಾಗಿತ್ತು"

ಹೋಗಿ ಆ ಮೂಲ ಪತ್ರವನ್ನು ನೋಡಿ, ನಿಜಕ್ಕೂ ಅಜಯ ಸಿಂಗರ ಪತ್ರ ಒಂದು Class Act - ವಿಕದ ಒಳಹೂರಣವನ್ನು ಚೆನ್ನಾಗಿ ಬಯಲಿಗೆಳೆದಿದ್ದಾರೆ ಮತ್ತು ವಿಶ್ವೇಶ್ವರ ಭಟ್ಟರ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸಿದ್ದಾರೆ. "ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಿಗೆ ಅಲ್ಲ"ವೆಂಬ ಪದಗಳ ಹಿಂದಿರುವ ಅಜಯ ಸಿಂಹರ ನೋವನ್ನು ವಿಕದ ವರ್ಗಾವಣೆ ಏಜೆಂಟ್ ಗಡಣ, fixerಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬಹುದೇ?

ವಿಕ ಪ್ರಮುಖ ವ್ಯಕ್ತಿಗಳ ಅಭಿಪ್ರಾಯವನ್ನು ತಿರುಚಿ ಬರೆದು ಡಿಜಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿದರೆ, ವಿಶ್ವೇಶ್ವರ ಭಟ್ಟರ ಈ ಓರಾಟಕ್ಕೆ ಇತರ main stream ಪತ್ರಿಕೆಗಳಿಂದ, ಮಾಧ್ಯಮಗಳಿಂದ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

ವಿಶ್ವೇಶ್ವರ ಭಟ್ಟರನ್ನು ಬೆಂಬಲಿಸಿದ ಏಕೈಕ ಸಂಪಾದಕ ಯಾರು ಗೊತ್ತೇ? ಮಂಗಳೂರಿನಲ್ಲಿ "ಕರಾವಳಿ ಅಲೆ"ಯೆಂಬ ಸೆಕ್ಸ್ ಪತ್ರಿಕೆ ನಡೆಸುತ್ತಿರುವ ಬಿ.ವಿ.ಸೀತಾರಾಮ್ ಮಾತ್ರ! ಎಂತಹ ವಿಪರ್ಯಾಸ ನೋಡಿ! ಯಾವ ಬಿವಿ ಸೀತಾರಾಂನ್ನು "ಅಂಡೆ ಪಿರ್ಕಿ"ಯೆಂದು ಬಣ್ಣಿಸಿದ್ದ ವಿಶ್ವೇಶ್ವರ ಭಟ್ಟರ ಬೆಂಬಲಕ್ಕೆ ಈಗ ನಿಂತಿರುವುದು ಅದೇ ಅಂಡೆ ಪಿರ್ಕಿ ಸೀತಾರಾಮ!

ವಿಕದ, ವಿಶ್ವೇಶ್ವರ ಭಟ್ಟರ ಅಧ:ಪತನಕ್ಕೆ ಬೇರೇನು ಸಾಕ್ಷಿ ಬೇಕು!??

Thursday, June 17, 2010

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ. ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ.ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!
ವಿಜಯ ಕರ್ನಾಟಕದ ಸಬ್ ಎಡಿಟರುಗಳಿಂದ ಹಿಡಿದು, ಅಂಕಣಕಾರರು ಸಂಪಾದಕರೆಲ್ಲಾ ವರ್ಗಾವಣೆ ದಂಧೆಯ ಸೈಡು ಬ್ಯುಸಿನೆಸ್ ನಡೆಸುವುದು ವಿಧಾನಸೌಧ ಯಡ ತಾಕುವವರೆಲ್ಲರಿಗೂ ಗೊತ್ತಿರುವಂತ್ತದ್ದೇ.

ಯಾವಾಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತೋ ಆ ದಿನದಿಂದಲೇ "ಈ ಸರ್ಕಾರ ಅಧಿಕಾರಕ್ಕೆ ಬಂದದ್ದು ನಮ್ಮ ಪತ್ರಿಕೆಯಿಂದಾಗಿಯೇ" ಎಂದು ವಿಜಯ ಕರ್ನಾಟಕದ ಅಂಕಣಕಾರರು, ಸಂಪಾದಕರು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬುದು ಸುಳ್ಳಲ್ಲ.

ಪ್ರಭಾವೀ ಖಾತೆಗಳ ಸಚಿವರ ಅಟೆಂಡರುಗಳು, ಪಿ.ಎ.ಗಳೇ "ಸಾರ್ ವಿಕ ಭಟ್ಟರ ಹತ್ತಿರ ಫೋನು ಮಾಡಿಸಿ" ಎಂದೋ, "ತ್ಯಾಗರಾಜ್ ಶೋಭಕ್ಕರಿಗೆ ಕ್ಲೋಸು, ಅವರ ಬಳಿ ಸಾಹೇಬ್ರಿಗೆ ಫೋನ್ ಮಾಡಿಸಿ"ಯೆಂದೋ ವಿ.ಕ.ಪತ್ರಕರ್ತರ ಅಂಕಣಕಾರರ ಖಾಸಗೀ ಮೊಬೈಲ್ ನಂಬರ್ ನೀಡುತ್ತಾರೆ.

ಇನ್ನು ಡಿ.ಆರ್.ಅಶೋಕರಾಮ್ ಎಂಬ ವಿ.ಆರ್.ಎಲ್.ಕಂಪೆನಿಯ ಕಾರಖೂನ ಕಮ್ "ವಿ.ಕ.ಅಂಕಣಕಾರ" ಅತ್ತ ಎಂ.ಎಲ್.ಸಿ. ವಿಜಯಾನಂದರೆ ಹೆಸರಲ್ಲಿ, ಇತ್ತ ಬಳ್ಳಾರಿ ರೆಡ್ಡಿಗಳ ಏಜೆಂಟರಂತೆ ಇದ್ದ ಬಿದ್ದ ಸಚಿವರ ಮನೆಗಳಲ್ಲಿ ಕಚೇರಿಗಳಲ್ಲಿ ಕಂಡು ಬರುತ್ತಾರೆ.

ಶಾಲಾ ಶಿಕ್ಷಕರ ವರ್ಗಾಣೆಯಿಂದ ಹಿಡಿದು ಉನ್ನತ ಶಿಕ್ಷಕ ಇಲಾಖೆ (ಹೇಗೂ ಲಿಂಬಾವಳಿ "ನಮ್ಮ ಎಬಿವಿಪಿ ಹುಡುಗ" ನೋಡಿ), ಶೋಭಕ್ಕ ಇದ್ದಾಗ ಪಂಚಾಯತಿ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಸರಕಾರೀ ಮೆಡಿಕಲ್ ಕಾಲೀಜುಗಳ ಗುಮಾಸ್ತರಿಂದ ಹಿಡಿದು ಪೋಲಿಸ್ ಇಲಾಖೆಯ ವರ್ಗಾವಣೆಯಲ್ಲೂ ವಿ.ಕ.ದ ಪತ್ರಕರ್ತ ಮಿತ್ರರು ಕೈಯಾಡಿಸುವುದು ಖಮಾಯಿಸುವುದು ವಿಧಾನಮಂಡಲ ಬೀಟ್ ನ ಎಲ್ಲರಿಗೂ ತಿಳಿದಿರುವ ಸಂಗತಿ.
ಆದರೆ ಯಾವಾಗ ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಪೋಲೀಸ್ ವರ್ಗಾವಣೆ ಬೋರ್ಡ್ ಸ್ಥಾಪಿಸಿತೋ, ಅಂದಿನಿಂದ ಈ ವಿ.ಕ. ಪತ್ರಕರ್ತ coterie ಗೆ ಪೋಲಿಸ್ ಇಲಾಖೆಯ ವರ್ಗಾವಣೆ ಕೆಲಸವಿಲ್ಲದಂತಾಗಿ ಹೋಗಿ ಮೈ ಪರೆಚುಕೊಳ್ಳುತ್ತಿದ್ದಾರೆ.

ಇದರ ಪರಿಣಾಮವೇ ಇದ್ದಕ್ಕಿದ್ದಂತೆ ಯಾವುದೋ ಅನಾಮಧೇಯ ಪತ್ರದ ಜಾಡು ಹಿಡಿದು ಪೇದೆ ವಿ.ಕ.ದ ಕಚೇರಿಗೆ ಹೋದದ್ದನ್ನೇ ನೆಪ ಹಿಡಿದು ಡಿ.ಜಿ. ಅಜಯ್ ಸಿಂಗರ ವಿರುದ್ಧ ಕೀಳಭಿರುಚಿಯ ವರದಿಗಳನ್ನು ವಿಜಯ ಕರ್ನಾಟಕ ಪ್ರಕಟಿಸಿ ನಮ್ಮ ಕಾನೂನು ಪಾಲಕರನ್ನು ಕುಗ್ಗಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.

ಅದೂ ನಕ್ಸಲರಂತಹ ಹೇಡಿಗಳು ಪೋಲಿಸರ ರುಂಡ ಚೆಂಡಾಡುತ್ತಿರುವಾಗ ಪೋಲಿಸರ ಹಿಂದಿರುವ ಬದಲು ಕೇವಲ ತಮ್ಮ ವರ್ಗಾವಣೆ ಶಿಫಾರಸುಗಳಿಗೆ ಸೊಪ್ಪು ಹಾಕಿಲ್ಲವೆಂದು ಅಜಯ್ ಸಿಂಗರಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಹೀಯಾಳಿಸಿ ಬರೆಯುವುದು "ವಿಜಯ ಕರ್ನಾಟಕ" ಸಂಪಾದಕೀಯ ಮಂಡಳಿಗೆ "ಶೋಭೆ" ತರುವ ವಿಷಯವಲ್ಲ.

ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಕಂಡ ಸಭ್ಯ ಅಧಿಕಾರಿಗಳಲ್ಲಿ ಅಜಯ್ ಸಿಂಗ್ ಒಬ್ಬರು. ವರ್ಗಾವಣೆ ದಂಧೆಯನ್ನು ಯಕ:ಶ್ಚಿತ್ ನಿಲ್ಲಿಸಿರುವ ಅಜಯ್ ಸಿಂಗ್ CM ಕಚೇರಿಯಿಂದ ಬಂದ ಶಿಫಾರಸುಗಳನ್ನೇ ಕಡೆಗಣಿಸಿರುವಾಗ ವಿಜಯ ಕರ್ನಾಟಕದ ದಲ್ಲಾಳಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸರಿಯಾಗಿಯೇ ಇದೆ.

ತಾವೇ ಸೂಪರ್ ಮಿನಿಸ್ಟರ್, ತಾವೇ ಸೂಪರ್ ಗವರ್ಮೆಂಟು ಎಂದು ಬೀಗುತ್ತಿದ್ದ ವಿ.ಕ.ದ ಭಟ್ಟರು, ತ್ಯಾಗರಾಜ್ ಅಶೋಕರಾಮ್ ರಂತಹ ದಲ್ಲಾಳಿಗಳು ಅಜಯ್ ಸಿಂಗರಂತಹ ಅಧಿಕಾರಿಗಳ ವಿರುದ್ಧ ಏನೇನೋ ದಿನಗಟ್ಟಳೆ ಬರೆದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಹೊರಬಂದು ಆತ್ಮಾವಲೋಖನ ಮಾಡಿಕೊಳ್ಳಬೇಕಾಗಿದೆ.

**************
ಕೊನೆ ಮಾತು: ಶೋಭಕ್ಕನನ್ನು ಹಿಗ್ಗಾ ಮುಗ್ಗ ಹೊಗಳುವ ತ್ಯಾಗರಾಜ್, ಅಶೋಕರಾಮರಂತಹ ವರ್ಗಾವಣೆ ದಲ್ಲಾಳಿಗಳಿಗೊಂದು ಪ್ರಶ್ನೆ - ಶೋಭಕ್ಕ ಇತ್ತೀಚೆಗೆ ಮಾನಸ ಸರೋವರಕ್ಕೆ ಹೋಗಿ ಬಂದರು ತಾನೆ? ಅತ್ತ ಬಡ ಯಾತ್ರಿಕರು ಬಸ್ಸಿನಲ್ಲಿ, ಜೀಪಿನಲ್ಲಿ ಒದ್ದಾಡಿಕೊಂಡು ಮಾನಸ ಸರೋವರಕ್ಕೆ ಹೋದರೆ, ಶೋಭಕ್ಕ ಹೆಲಿಕಾಪ್ಟರಿನಲ್ಲಿ ಬುರ್ರೆಂದು ನೇಪಾಳ ಚೀನಾ ಹೋಗಲು ಆದ ಖರ್ಚು ಎಷ್ಟು ಎಂದು ಕೇಳುವ ಧೈರ್ಯ ತಮಗಿದೆಯೇ? ಯಾವುದೇ ಆದಾಯವಿಲ್ಲದೇ ಯಕ:ಶ್ಚಿತ್ ಎಂ.ಎಲ್.ಎ. ಆಗಿರುವ ಶೋಭಕ್ಕನಿಗೆ ಹೀಗೆ ಕೋಟ್ಯಾಂತರ ರೂಪಾಯಿ ಸಿಕ್ಕಿದ್ದು ಎಲ್ಲಿಂದ?

ಯಾವುದೋ ಹಳಸಲು "ಸುದ್ದಿಮನೆ" ಬದಲು ಅಥವಾ "ಹಾಲಪ್ಪ tape" ಎಂಬ political manipulatative ಗೆ ಬಲಿಬಿದ್ದು "ನಮ್ಮದು ತನಿಖಾ ಪತ್ರಿಕೋದ್ಯಮ" ಎಂದು ಕೊಚ್ಚಿಕೊಳ್ಳುವ ಬದಲು, ಒಂದಿನಿತೂ ಆದಾಯವಿಲ್ಲದೆಯೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾನಸ ಸರೋವರಕ್ಕೆ ಬುರ್ರೆಂದು ಹಾರಿಹೋದ ಶೋಭಕ್ಕರ finance ಮಾಡಿದ್ದು ಯಾರೆಂದು ಹುಡುಕಿ ನಿಜವಾದ ಪತ್ರಿಕೋದ್ಯಮ ಏನೆಂದು ತೀರಿಸುವ ತಾಖತ್ತು "ವಿಜಯ ಕರ್ನಾಟಕ"ದ ಪತ್ರಕರ್ತರೆಂಬ ವರ್ಗಾವಣೆ ಏಜೆಂಟರುಗಳಿಗಿದೆಯೇ?
&&&&&

Wednesday, March 3, 2010

"ಕನ್ನಡ ಪ್ರಭ ಲೇಖನ ನನ್ನದಲ್ಲ": ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ

ಕನ್ನಡ ಪ್ರಭದ ಸಂಪಾದಕೀಯ ಮಂಡಳಿಯ ಅಸಲೀ ರೂಪ ಬಯಲಾಗಿದೆ.

ಇಸ್ಲಾಮ್ ಮತ್ತು ಪ್ರವಾದಿಯ ಬಗ್ಗೆ ಹೀನಾಯಮಾನವಾಗಿ ಬರೆದು ಆ ಗಲೀಜನ್ನು ತಸ್ಲೀಮಾ ಬಾಯಿಗೆ ಒರೆಸಿ ಬಚಾವ್ ಆಗುತ್ತೇವೆಯೆಂದು ಕನ್ನಡ ಪ್ರಭದ ಎಣಿಸಿದ್ದರೆ ಈಗ ಆದದ್ದೇ ಬೇರೆ. ವೀಸಾ ನವೀಕರಣಕ್ಕಾಗಿ ಭಾರತದಲ್ಲಿರುವ ತಸ್ಲೀಮಾ ತಾನೆಂದೂ ಪ್ರವಾದಿ ಮತ್ತು ಬುರ್ಖಾ ಬಗ್ಗೆ ಬರೆದಿಲ್ಲವೆಂದು ಹೇಳಿರುವುದು ಕನ್ನಡ ಪ್ರಭ ಅಸಲಿಯತ್ತನ್ನು ತೋರಿಸುತ್ತದೆ.

ಆದದ್ದು ಇಷ್ಟೇ: ದೇವೇಗೌಡ ಮತ್ತು ತಲೆಹರಟೆ ಕಾಂಗ್ರೆಸಿಗ ಗವರ್ನರ್ ಭಾರಾಧ್ವಾಜ್ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ನಡೆಸಿರುವ ಸಂಚಿಗೆ ಕನ್ನಡ ಪ್ರಭ ಕೂಡಾ ತನ್ನ ಕಿರು ಕಾಣಿಕೆ ಸಲ್ಲಿಸಿದೆ. ಹೇಗೂ ಸಂಪಾದಕೀಯ ಮಂಡಳಿ ಸುವರ್ಣಕ್ಕೆ ಗುಳೇ ಹೋಗಿದೆ, ಸರ್ಕ್ಯುಲೇಷನ್ನೂ ಎಕ್ಕಟ್ಟಿ ಹೋಗಿದೆ. ಇಂದೋ ನಾಳೆಯೋ ಎಂಬಂತೆ ದಿನ ದೂಡುತ್ತಿರುವ ಕನ್ನಡ ಪ್ರಭದ ಸಂಪಾದಕೀಯ ಮಂಡಳಿಗೆ ದೇವೇಗೌಡರ "ಕಾಣಿಕೆ" ಎಷ್ಟು ಎಂದು ಕೇಳಬೇಕಾಗಿದೆ.

ಅತ್ತ ಲೇಖನ ಪ್ರಕಟವಾಗುತ್ತಿದ್ದಂತೆ ಇತ್ತ ಹಾಸನ ಶಿವಮೊಗ್ಗಾಕ್ಕೆ ಸಾವಿರಾರು ಜನರನ್ನು ಕಳಿಸಿದ್ದು ಯಾರು? ಕೆಲವೇ ಘಂಟೆಗಳಲ್ಲಿ ಗಲಭೆ ಆಯೋಜಿಸಿದ್ದು ಯಾರು? "ಸಿಂಧು" ಎಂಬ ಹೆಸರಲ್ಲಿ ಪ್ರಕಟವಾದ ಈ ಲೇಖನದ ಮೂಲ ಲೇಖಕ ಯಾರು?

ಪ್ರಾಯಶ: ತಸ್ಲೀಮಾ ನಾರ್ವೆಯೋ ಸ್ವೀಡನಲ್ಲೋ ಇದ್ದರೆ ಇದು ಬಯಲಾಗುತ್ತಿರಲಿಲ್ಲ. ಆದರೆ ಕನ್ನಡ ಪ್ರಭದ ದುರಾದೃಷ್ಟಕ್ಕೆ ಆಯಮ್ಮ ವೀಸಾ ಕೆಲಸಕ್ಕಾಗಿ ಇದೇ ಸಮಯದಲ್ಲಿ ದೆಹಲಿಯಲ್ಲಿದ್ದು ಕೂಡಲೇ ಸ್ಪಷ್ಟೀಕರಣ ನೀಡಿ ಕನ್ನಡ ಪ್ರಭದ ಅಸಲು ಬಯಲಾಗುವಂತಾಗಿದೆ.

ಖಾದ್ರಿ ಶಾಮಣ್ಣ, ವೈಯೆನ್ಕೆಯಂತಹವರ ಸಾರಥ್ಯದಲ್ಲಿ ಮೆರೆದಿದ್ದ, ಒಂದು ಕಾಲದಲ್ಲಿ ಸ್ವತಂತ್ರ ಪತ್ರಿಕೋದ್ಯಮಕ್ಕೆ ಹೆಸರಾಗಿದ್ದ ಕನ್ನಡ ಪ್ರಭಕ್ಕೆ ಗೌಡ-ಭಾರಾಧ್ವಾಜರಂತಹ ರಾಜಕಾರಣಿಗಳ ಅಮೇಧ್ಯ ತಿಂದು ಬದುಕುವಂತಹ ಪರಿಸ್ಥಿತಿ ಬಂದಿರುವುದು ಎಂಥಹಾ ವಿಪರ್ಯಾಸ ನೋಡಿ?

Sunday, February 7, 2010

Villanization - then Shivaraj Patil, now Sharad Pawar - why is media giving free pass to Sonia Gandhi and Manmohan Singh?



I first noticed this trend during Mumbai attacks.

When a hunt for suitable scapegoat started after the attacks, media started focusing on Shivaraj Patil (and his dressing habits)

Now when there appears to be no end to price increase of basic commodities, media has started ganging up on Sharad Pawar.

Can you notice what is common in both cases?

Yes, absolute free pass given to UPA President Sonia Gandhi and Prime Minister Manmohan Singh by the media! It is as if these two people who literally run India today, have no responsibility at all for appointing useless ministers such as Patil and Pawar.

Agreed, there is issue of coalition partners and keeping region/caste balance in the ministry. But as leaders who appointed these persons in the first place why media is not asking any accountability on part of Sonia Gandhi and Manmohan Singh?

Why is media being soft on Sonia and Manmohan? Why is no one asking Sonia or MM "Why did you appoint these useless people to these posts"? In any company those who hire bad employees are taken to task, why not with Govt? Or is this an example of excellent media management by Congress?

Any government which allowed attacks like 26/11 - where someone could use a boat to beat our bluewater Navy and Coast Guard and land undetected on our shores - would have been shown the door in any democracy. But Congress with media's help, nicely diverted all attacks towards Shivaraj Patil painting him as a villain. Job well done because Congress won both Loksabha and then state elections in Maharastra.

Congress party's handling of media then and today when common man is upset against price rise is excellent example of how media can be manipulated by those in power.

Rakesh Mathias
6 February 2010
rakesh.mathias AT gmail.com

Wednesday, January 13, 2010

1 Crore Rs to Bahrain Kannada Sangha - why should poor tax payers of Karnataka fund rich NRI association?

As I suspected in my earlier blog post, BJP Government in Karnataka has again surrendered to a powerful Kannada newspaper Editor.

1 Crore Rupees has been released to Bahrain Kannada Sangha by Karnataka Government (subject to RBI) after above mentioned Editor returned to Bangalore from a fresh "sanmana" and lambasted CM for not keeping his words to Bahrain Kannada Association on 1 Crore Rupees.

In other words, poor tax payers of Karnataka will be subsidizing weekend kitty parties of NRIs in one of the world's richest country. Bahrain's per capita income is almost $18,000 compared to approx $500 per capita income of Karnataka. Can there be bigger irony than this?

Our CM is known to announce 1-2 crore rupees to every religious or cultural place he visits. While in principle I oppose government grants to any religious institutions, I understand how these donation may help social service done by temples. At least one can assume money is spent within India.

But donating 1 Crore to an NRI association in one of the world's richest countries?

Especially when Karnataka is still to recover from one of the worst floods in centuries?

Why send 1 crore to Bahrain when various "Academies" established by Karnataka govt are in coma because other than announcing Presidents to the academies, Chief Minister (who also holds Kannada & Cultural portfolio) has done nothing to rejuvenate them?

As I explained in my earlier post, I've been to Bahrain and don't doubt sincerity of Kannada Sangha there. But Kannadigas in Bahrain are no exception to what we see in Karnataka or for that matter Indian diaspora.

Anyone who has been to NRI events knows what takes place there - weekend parties, kitty parties, usual Bharatanatyam and Carnatic music with bored second generation enduring those torture sessions. NRIs of course think that by attending these events (and making bored teenagers sit through the boring concerts), they are keeping Kannada culture "alive".

Even though Kannadigas form a tiny portion of Bahrain's population, there are already so many associations along caste and community lines - Billavas Association, Bunts Association, Konkani Association, Gowdas Bahrain, Mangalore Catholics, Karnataka Muslims Association among others.

Today it is 1 Crore for Kannada Sangha. Tomorrow if some other association invites CM and presents tacky 10 Dinar souvenir and honours him, will he announced 1 Crore rupees to them as well?

Lastly, what mechanism does Karnataka govt have to monitor fund utilization outside the country? Even inside the country in front of citizens we know how govt funds are spent - that being the case how can one make sure this 1 Crore is not misused once it leaves India?

Monday, January 11, 2010

ವಿ.ಕ.ಭಟ್ಟರ ನಿಗೂಢ ನಡೆಗಳು - ಎರಡು ಸ್ಯಾಂಪಲ್

ಕಳೆದೆರಡು ವಾರದಿಂದ ನೋಡುತ್ತಿದ್ದೇನೆ. "ವಿಜಯ ಕರ್ನಾಟಕ"ದ ವಿಶ್ವೇಶ್ವರ ಭಟ್ಟರು ಓದುಗರ ಬುದ್ಧಿಮತ್ತೆಯನ್ನು ಸ್ವಲ್ಪ underestimate ಮಾಡಿದಂತಿದೆ. ಇಲ್ಲವಾದರೆ ಓದುಗರ ಕಿವಿ ಮೇಲೆ ಹೂವಿಡಲು ಯಾಕೆ ಯತ್ನಿಸುತ್ತಿದ್ದಾರೆ ಇವರು?

ಸ್ಯಾಂಪಲ್ ನಂ.೧: ವಿ.ಕೆ.ಮತ್ತು ರೇಣುಕಾ ನಡುವೆ ಡೀಲ್?

ಅತ್ತ ರೋಮಿಯೋ ರೇಣುಕಾಚಾರ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮೊದಲ ಪುಟದ ಸಂಪಾದಕೀಯದಲ್ಲೇ ಶೇಮ್ ಎಂದು ವಿಶ್ವೇಶ್ವರ ಭಟ್ಟರು ಷರಾ ಬರೆದರು. ಅದೂ ಸಾಲದಂತೆ ಸತತ ಎರಡು ಮೂರು ದಿನ ರೇಣುಕಾಚರ್ಯ ಬಗ್ಗೆ usual SMS ಮೆಸೇಜುಗಳನ್ನು ಸಂಗ್ರಹಿಸಿ (ಅಥವಾ "ಸೃಷ್ಟಿಸಿ") ಪೇಜುಗಟ್ಟಳೆ ಬರೆದರು. ಆದರೆ ನಾಲ್ಕನೇ ದಿನ ಇದ್ದಕ್ಕಿದ್ದಂತೆ ಇದೆಲ್ಲಾ ಬಂದ್ - ರೇಣುಕಾಚಾರ್ಯ ವಿರೋಧೀ ಕಮೆಂಟು ಬಿಡಿ, ರೇಣುಕಾಚಾರ್ಯರು ತಮ್ಮ ಇಲಾಖೆಗೆ ಸಂಬಂಧಿಸಿದ ಹೇಳಿಕೆಗಳನ್ನೇ prime ಜಾಗದಲ್ಲಿ position ಮಾಡಿ ಓದುಗರಿಗೆ ಅಚ್ಚರಿ ಮೂಡಿಸಿದರು.
ಎಲ್ಲವೂ ಉಲ್ಟಾ ಪಲ್ಟಾ! ದಿನಗಟ್ಟಳೆ ರೇಣುಕಾಚಾರ್ಯ ವಿರುದ್ಧ ಬರೆದು ಇದ್ದಕ್ಕಿದ್ದಂತೆ ರೇಣುಕಾಚಾರ್ಯರ ಹಳಸಿದ ಹೇಳಿಕೆಗಳಿಗೆ prime spot ಕೊಟ್ಟಿರುವುದರ ರಹಸ್ಯವೇನಿರಬಹುದು? ಇದೇ trend ಮುಂದುವರೆದಿದೆ. ಪ್ರತಿನಿತ್ಯವೆಂಬಂತೆ ರೇಣುಕಾಚಾರ್ಯ ಏನೋ ಹೇಳಿದ್ದನ್ನೇ ಪರಮಾನ್ನವೆಂದು ವಿ.ಕೆ.ಪ್ರಕಟಿಸುತ್ತಿದೆ. ಮುಖ್ಯಮಂತ್ರಿಯ ಬಳಿಕ ಮಂತ್ರಿಗಳಲ್ಲಿ ವಿ.ಕೆ.ಯಲ್ಲಿ ಪ್ರಾಯಷ: ರೇಣುಕಾಚಾರ್ಯರ ಹೇಳಿಕೆಗಳದ್ದೇ ಭರಾಟೆ. ಹೀಗೆ ಸಡನ್ನಾಗಿ ತನ್ನ position ಬದಲಿಸಲು ಕಾರಣವೇನಿರಬಹುದು? ವಿ.ಕೆ.ಮತ್ತು ರೇಣುಕಾಚಾರ್ಯ ನಡುವೆ ಡೀಲ್ ಕುದುರಿತೇ? ಹೀಗೆಂದು ಓದುಗರು ಭಾವಿಸಿದರೆ ತಪ್ಪೇನಿಲ್ಲ.

ಕರ್ನಾಟದ ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣರೂ ಇದನ್ನೇ ಕಳೆದ ವಾರ ಹೇಳಿದ್ದಾರೆ ("ರೇಣುಕಾಚಾರ್ಯ ಮಂತ್ರಿಯಾಗಿದ್ದು "ಶೇಮ್" ಎಂದು ಮುಖಪುಟದಲ್ಲಿ ಸಂಪಾದಕೀಯ ಬರೆದು ಅನಂತರ ಒಂದೆರಡು ದಿನ ಈ ಪ್ರಕರಣಕ್ಕೆ ಭರ್ಜರಿ ಪ್ರಚಾರ ನೀಡಿದ್ದ "ವಿ"ಖ್ಯಾತ ಪತ್ರಿಕೆಯೊಂದು ಆಮೇಲೆ ತಣ್ಣಗಾಗಿದೆ! ಈ ಮಧ್ಯೆ ಅದೇನು "ಡೀಲ್" ನಡೆಯಿತೋ ಗೊತ್ತಿಲ್ಲ!" - ಹೊಸದಿಗಂತ ಜನವರಿ ೪ ೨೦೧೦) ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವ ಭೃಷ್ಟಾಚಾರದ ಬಗ್ಗೆ ಬರೆಯುತ್ತಾ ರೇಣುಕಾಚಾರ್ಯ ಪ್ರಕರಣದಲ್ಲಿ ವಿ.ಕೆ. ಡೀಲ್ ಮಾಡಿಕೊಂಡಿದೆಯೆಂದು ನೇರವಾಗಿ ಹೇಳಿದ್ದಾರೆ.

ಸ್ಯಾಂಪಲ್ ನಂ.೨: ಕೋಟ್ಯಾಧಿಪತಿ ಬಹರೇನಿನ ಅನಿವಾಸಿ ಭಾರತೀಯರಿಗೇಕೆ ಖಜಾನೆ ಖಾಲಿಯಾಗಿರುವ ಕರ್ನಾಟಕ ಸರಕಾರದ ಭಿಕ್ಷೆ?

ಜನವರಿ ಹತ್ತರ ಅಂಕಣದಲ್ಲಿ ಬಹರೇನ್ ಕನ್ನಡ ಸಂಘಕ್ಕೆ ಕರ್ನಾಟಕ ಸರಕಾರ ಒಂದು ಕೋಟಿ ಅನುದಾನ ಕೊಟ್ಟಿಲ್ಲವೆಂದು ಕೊರೆದಿದ್ದಾರೆ. ಅಲ್ಲಾ ಸ್ವಾಮಿ, ಇಡೀ ಉತ್ತರ ಕರ್ನಾಟಕ ನೆರೆಯಲ್ಲಿ ಕೊಚ್ಚಿ ಹೋಗಿದೆ, ಅತ್ತ ಸರಕಾರದ ಖಜಾನೆ ಖಾಲಿಯಾಗಿದೆ. ಹೀಗಿರುವಾಗ ಬಹರೇನ್ ಎಂಬ ಸಂಪತ್ಭರಿದ ದೇಶಕ್ಕೆ ಒಂದು ಕೋಟಿ ರೂಪಾಯಿಯನ್ನೇಕೆ ನಾವು ತೆರಿಗೆದಾರರು ಕೊಡಬೇಕು?
ನಾನೂ ಬಹರೇನ್ ಹೋಗಿದ್ದೇನೆ (ಎರಡು ವರುಷಗಳ ಹಿಂದೆ ಅಕ್ಕನ ಮನೆಗೆ). ಅಲ್ಲಿ ಕರ್ನಾಟಕ ಸಂಘ ಬಹಳ active ಇದೆ ಎಂಬುದು ಸತ್ಯ - ಆದರೆ ಪ್ರ‍ಾಯಷ ಎಲ್ಲಾ NRI ಗಳಂತೆ weekend ನಲ್ಲಿ ಮಾತ್ರ ಎಲ್ಲಾ activity. ಅಲ್ಲೂ ಈಗ ಹಿಂದೂ-ಮುಸ್ಲಿಂ-ಕ್ಯೆಥೋಲಿಕ್-ಕರಾವಳಿ ಕನ್ನಡಿಗರು-ಗೌಡರು-ಶೆಟ್ಟರು-ಬಿಲ್ಲವರು ಎಂದೆಲ್ಲಾ ಗುಂಪುಗಳಿವೆ. ಕೆಲ ಲಿಂಕುಗಳನ್ನು ನೋಡಿ ಮೊಗವೀರ ಬಹರೇನ್, ಬಿಲ್ಲವಾಸ್ ಬಹರೇನ್, ಬಂಟ್ಸ್ ಬಹರೇನ್, ಕೊಂಕಣ ಅಸೋಸಿಯೇಶನ್, ಮುಸ್ಲಿಂ ಅಸೋಸಿಯೇಶನ್. ಇವತ್ತು ಒಬ್ಬರಿಗೆ ಕೊಟ್ಟರೆ ನಾಳೆ ಇನ್ನೊಬ್ಬರು ಸನ್ಮಾನ ಮಾಡಿ ಒಂದು ಕೋಟಿಗೆ ಡಿಮಾಂಡ್ ಇಡುವುದಿಲ್ಲವಲ್ಲವೇ?

ಮರುಭೂಮಿಯಲ್ಲಿ tax free ಹಣ ಕಮಾಯಿಸಲು ಹೋಗಿರುವ ಈ ಅನಿವಾಸಿಗಳಿಗೆ time pass ಮಾಡಲು ಮಾಲುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಅದಕ್ಕೇ ಕರ್ನಾಟಕದಿಂದ ರಾಜಕಾರಣಿಗಳನ್ನು, ಕಲಾವಿದರನ್ನು ಕರೆಯಿಸಿ ಪ್ರತಿವಾರವೆಂಬಂತೆ ಕಾರ್ಯಕ್ರಮವಿಟ್ಟುಕೊಂಡಿರುತ್ತಾರೆ. ಇಂತಹ long distance ಕನ್ನಡಿಗರಿಂದ, picnic typeನ boredom busterಇಂದ ಕರ್ನಾಟಕದ ಉದ್ದಾರವಾಗುತ್ತದೆಯೆಂಬುದು ಭ್ರಮೆಯಷ್ಟೇ! ಇಂಗ್ಲಿಷ್ ಬೋರ‍್ಡಿಗೆ ಕಲ್ಲು ಹೊಡೆಯುವುದರಿಂದ ಕನ್ನಡ ಉಳಿಯುತ್ತದೆ ಎಂಬ ಕರ್ನಾಟಕ ರಕ್ಕಸ ವೇದಿಕೆಯ ಪಡ್ಡೆಗಳ ಭ್ರಮೆಯಂತೆ.

ಬಹರೇನ್ ಕನ್ನಡಿಗರು ಮನಸು ಮಾಡಿದರೆ ಒಂದು ಕೋಟಿಯನ್ನು ಒಂದು weekend party ಅಥವಾ kitty partyಯಲ್ಲೇ ಒಟ್ಟು ಮಾಡಬಹುದು. ಕನ್ನಡಿಗರಲ್ಲೇ ಬಹರೇನಿನಲ್ಲಿ ನೂರಾರು ಕೋಟ್ಯಾಧಿಪತಿಗಳಿದ್ದಾರೆ - ಹೀಗಿರುವಾಗ ತನ್ನನ್ನು ಕರೆದು ಸನ್ಮಾನಿಸಿದರು ಎಂದ ಮಾತ್ರಕ್ಕೆ ಅದರ ಋಣ ತೀರಿಸಲು ವಿಶ್ವೇಶ್ವರ ಭಟ್ಟರು ಕರ್ನಾಟಕ ಸರಕಾರವನ್ನು, ಮುಖ್ಯಮಂತ್ರಿಗಳನ್ನು, NRI Cellನ ಗಣೇಶ್ ಕಾರ್ಣಿಕರನ್ನು ಹೀಗೆಳೆದದ್ದು ಸರಿ ಕಾಣಲಿಲ್ಲ. ಕರ್ನಾಟಕದ ಎಷ್ಟೋ ಹಳ್ಳಿಗಳು ನೀರು ವಿದ್ಯುತ್ ಶಾಲೆಗಳಿಲ್ಲದೆ ಜನರು ಒದ್ದಾಡುತ್ತಿರುವಾಗ ಬಹರೇನಿನಂತಹ ಶ್ರೀಮಂತ ರಾಷ್ಟ್ರದ ಶ್ರೀಮಂತ ಕನ್ನಡಿಗರ weekend party ಗಳಿಗೆ ಬಡ ಬೋರೇ ಗೌಡನ ತೆರಿಗೆ ಕಳಿಸಬೇಕಾದ ಪ್ರಾರಬ್ಧವೇನಿದೆ?

ವಿ.ಭಟ್ಟರ ನಿಜವಾದ ಟಾರ್ಗೆಟಿಲ್ಲಿ ಗಣೇಶ್ ಕಾರ್ಣಿಕ್! ಕೆಲ ವಾರಗಳ ಹಿಂದೆ ಇದೇ ಗಣೇಶ್ ಕಾರ್ಣಿಕ್ ಮೇಲೆ ವಿ.ಕ. ಹಿಗ್ಗಾ ಮುಗ್ಗ ಬರೆದಿತ್ತು. ನನ್ನ ಮೂಲಗಳ ಪ್ರಕಾರ, ಭಟ್ಟರಿಗೆ ಯಡ್ಯೂರಪ್ಪನವರು ತಾನು ಹೇಳಿದ ಕ್ಯಾಂಡಿಡೇಟ್ ವಿ.ಕ. ಅಂಕಣಕಾರ ಅಮೆರಿಕದ ಶ್ರೀವತ್ಸ ಜೋಶಿಯನ್ನು NRI Cellನ coordinator ಮಾಡಿಲ್ಲವೆಂಬ ಆಕ್ರೋಶವಿದೆ. Wikipediaದಿಂದ ಲೇಖನಗಳನ್ನು ಭಟ್ಟಿ ಇಳಿಸಿದ್ದನ್ನೇ "ಪರಾಗ ಸ್ಪರ್ಶ"ವೆಂದು ಬಡಿಸುವ ಶ್ರೀವತ್ಸ ಜೋಶಿಯನ್ನು NRI Cell Coordinator ಮಾಡಬೇಕೆಂದು ಭಟ್ಟರು ಬಹಳ ಪ್ರಯತ್ನಿಸಿದ್ದರೆಂದು ಹೇಳಲಾಗಿದೆ.

ಚಿತ್ರದುರ್ಗದ ಎಂ.ಪಿ. ಅಭ್ಯರ್ಥಿಯಾಗಿ NRI ಜನಾರ್ಧನ ಸ್ವಾಮಿಯನ್ನು ಭಟ್ಟರು ಅದೇ ಅಂಕಣದಲ್ಲಿ ಜನಾರ್ಧನ ಸ್ವಾಮಿ ಅಮೆರಿಕ ಬಿಟ್ಟು ದೇಶ ಸೇವೆಗೆ ಬರುತ್ತಿದ್ದಾರೆ, ಆದರ್ಶವಾದಿ ಎಂದೆಲ್ಲಾ ಪ್ರಮೋಟ್ ಮಾಡಿದ್ದನ್ನು ನೆನೆಪಿಸಿಕೊಳ್ಳಬೇಕಾಗಿದೆ. ಈ NRI ಆಸಾಮಿ "ಆದರ್ಶವಾದಿ" ಜನಾರ್ಧನ ಸ್ವಾಮಿ, ಎಂ.ಪಿ.ಯಾದ ಕೂಡಲೇ ಮಾಡಿದ ಮೊದಲ ಕೆಲಸ ಮುಖ್ಯಮಂತ್ರಿಯ ಖೋಟಾದಡಿ BDA site sanction ಮಾಡಿಸಿಕೊಂಡದ್ದು. ಅಲ್ಲಾ ಈ NRI ಗಳು ಎಲ್ಲೆಲ್ಲೋ ಹೋಗಿ ಕೋಟಿಗಟ್ಟಳೆ ಕಮಾಯಿಸಿದರೂ ಭಾರತದ ಬಡ ಜನರ, ಭಾರತದ ತೆರಿಗೆದಾರರ ಜೀವ ಹಿಂಡಲು ಪುನ: ಮರಳಿ ಬಂದು ಯಾಕೆ ಒಕ್ಕರಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಏನೇ ಇರಲಿ ಕರ್ನಾಟಕದ ಜನತೆ ಈ NRIಗಳ ಬಗ್ಗೆ, NRIಗಳ ಸನ್ಮಾನ ಸ್ವೀಕರಿಸಿ ಅವರ ಪರ ವಾದಿಸುವ ಭಟ್ಟರಂಥವರಾ ಬಗ್ಗೆ ಜಾಗ್ರತೆಯಿಂದಿರಬೇಕಾಗಿದೆ.


ಏನೇ ಇರಲಿ ಕರ್ನಾಟಕದ ಜನತೆ ಈ NRIಗಳ ಬಗ್ಗೆ, NRIಗಳ ಸನ್ಮಾನ ಸ್ವೀಕರಿಸಿ ಅವರ ಪರ ವಾದಿಸುವ ಭಟ್ಟರಂಥವರಾ ಬಗ್ಗೆ ಜಾಗ್ರತೆಯಿಂದಿರಬೇಕಾಗಿದೆ.