Showing posts with label Vishweshwara Bhat. Show all posts
Showing posts with label Vishweshwara Bhat. Show all posts

Thursday, June 28, 2012

ನಿತ್ಯನಿಗೊಂದು ವಿಶ್ವನಿಗೊಂದು ಸರಿಯೇ / Why is Suvarna News after Nityananda?

ನಿತ್ಯನಿಗೊಂದು ವಿಶ್ವನಿಗೊಂದು ಸರಿಯೇ?

ಕೆಲ ವಾರಗಳ ಹಿಂದೆ ನಿತ್ಯಾನಂದನ ಆಶ್ರಮದೊಳಗೆ ಯಾವುದೋ ಅಮೆರಿಕದ ಕೋರ್ಟಿನ ಸಮನ್ಸ್ ಹಿಡಿದು ಯಕ:ಸ್ಚಿತ್ ಕೋರ್ಟ್ ಕಾರಕೂನನಂತೆ ಪತ್ರಿಕಾಗೋಷ್ಟಿಯಲ್ಲೇ ಬಿಸಾಡಲು ನೋಡಿ ಮಹಿಳೆಯರಿಂದ ವಿಶ್ವೇಶ್ವರ ಭಟ್ಟರ ಶಿಷ್ಯ ಹಿಗ್ಗಾಮುಗ್ಗಾ ಗೂಸಾ ಪಡೆದಿದ್ದು, ಬಳಿಕ ಕ.ರ.ವೇ. ಬಾಡಿಗೆ ಪುಂಡರ ಮೂಲಕ ಗಲಭೆ ಎಬ್ಬಿಸಿ ಮುಖ್ಯಮಂತ್ರಿಗಳೇ ಮಧ್ಯ ಪ್ರವೇಶಿಸಿ ನ್ಯಾಯ ವಿರೋಧಿ ಆದೇಶಿಸಿದ್ದು  ಹಳೆ ಸುದ್ದಿ.

ವರ್ಷಗಟ್ಟಳೆ ಬರೋಬ್ಬರಿ ೭ ಸಮನ್ಸುಗಳನ್ನು ಪಡೆಯದೆ ("ಪ್ರಧಾನಿ ವಿಮಾನದಲ್ಲಿದ್ದೆ ಸಾರ್" ) ಅಂತೂ ನಿನ್ನೆ ಬೆಳಿಗ್ಗೆಯಿಂದ ರಾತ್ರಿ ತನಕ ಪೋಲಿಸ್ ಜತೆ "ಕರಾವಳಿ ಅಲೆ"ಯ ಸೀತಾರಾಮನಂತೆ ನ್ಯಾಯಾಲಯದಲ್ಲಿ ಅಬ್ಬೇಪಾರಿಯಂತೆ ನಿಂತುಕೊಂಡಿದದ್ದು "ಥಾಟ್ಸ್ ಕನ್ನಡ"ದ ಶಾಮಿ ಬಿಟ್ಟರೆ ಬೇರೆ ಯಾರಿಗೂ "ಬ್ರೇಕಿಂಗ್ ನ್ಯೂಸ್" ಆಗಲೇ ಇಲ್ಲ. ಪ್ರಾಯಶ: ಅವರ ಒಂದು ಕಾಲದ ಗೆಳೆಯ ಬೆಳಗೆರೆಯಂತೆ, ಊರಿಗೆಲ್ಲಾ ಉಪದೇಶ ಮಾಡುವವರು ಸಮನ್ಸ್ ತಪ್ಪಿಸಿಕೊಂಡು ಓಡಾಡುವುದನ್ನು ಪ್ರತಿಷ್ಠೆಯೆಂದು ತಿಳಿದುಕೊಂಡಿದ್ದಾರೇನೋ? Home Minister ಅಶೋಕ್ ಜೊತೆ ಡೀಲ್ ಮಾಡಿಕೊಂಡು ರಾಜ್ಯ ಪೊಲೀಸರ ಬೆಂಗಾವಲು ಪಡೆದು ನಮ್ಮಂತಹ ತೆರಿಗೆದಾರರ ಹಣದಲ್ಲಿ ಎಸ್ಕಾರ್ಟು ಇಟ್ಟುಕೊಂಡು ಓಡಾಡುವ ವಿಶ್ವೇಶ್ವರ ಭಟ್ಗೆ ಇದೇ ಪೊಲೀಸರು ೨೦೦೭ರಿಂದ ಸಮನ್ಸ್ ಕೊಡಲು ಆಗಿಲ್ಲವೆಂಬುದು ಎಂತಹ ವಿಪರ್ಯಾಸವಲ್ಲವೇ?


*****************

Suvarna TV - Vishweshwara Bhat and Nityananda: Did V.Bhat "create" this news on behalf of his "guru" Chandrashekhara?



ನಿತ್ಯಾನಂದನ ಮೇಲೆ ಒಂದೇ ಸಮನೆ ಸುವರ್ಣ ಧಾಳಿ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಬಹಳ ಉತ್ತರಗಳು ಹರಿದಾಡುತ್ತಿವೆ. ರಿಯಲ್ ಎಸ್ಟೇಟ್ ಮಾಫಿಯಾ, ಕರವೇ ಪುಂಡರು, ಮುತ್ತಪ್ಪ ರೈ ಇತ್ಯಾದಿ. ಆದರೆ ನನ್ನ ಖಚಿತ ಮೂಲಗಳ ಪ್ರಕಾರ ಇದೊಂದು ಸ್ವಾಮಿಗಳ ನಡುವಿನ ವೃತ್ತಿ ಮತ್ಸರವಷ್ಟೆ - ಆದರೆ ದುರುಪಯೋಗವಾದದ್ದು ಮಾಧ್ಯಮ!

ಇಡೀ ನಿತ್ಯಾನಂದನ ಪ್ರಕರಣವನ್ನು "ಸೃಷ್ಟಿಸಿದ್ದು" ತನ್ನ ಗುರು "ಅಂತರಾಷ್ಟ್ರೀಯ ವಾಸ್ತು ತಜ್ನ"  ಚಂದ್ರಶೇಖರ ಸ್ವಾಮೀಜಿಗೋಸ್ಕರವೆಂಬುದು ಎಲ್ಲಾ ಸುದ್ದಿ ಮನೆಗಳಲ್ಲಿ ಗೊತ್ತಿದೆ. ಕೆಲ ತಿಂಗಳ ಹಿಂದೆ ಮುಲ್ಕಿಯಲ್ಲಿ ಚಂದ್ರಶೇಖರ ಸ್ವಾಮಿಯ ಯಾಗದಲ್ಲಿ ಪಾಲ್ಗೊಂಡ ಚಿತ್ರ ಇಲ್ಲಿದೆ.


 Photo credit: www.daijiworld.com under fair credit use.

ಈ ಸ್ವಾಮಿಯ ಬಗ್ಗೆ ಗೊತ್ತಿರುವವರಿಗೆ ಗೊತ್ತು - ವ್ಹೀಲಿಂಗ್ ಡೀಲಿಂಗ್ ಸ್ವಾಮಿಯ ಹೂರಣ. ನ್ಯೂಯಾರ್ಕಿನಲ್ಲಿ ವರ್ಲ್ಡ್ ಟ್ರೇಡ್ ಸೆಂಟರಿಗೆ ನನ್ನದೇ ವಾಸ್ತು ಎಂದು ಹೇಳುವ ಈ ಸ್ವಾಮಿಯ ಅಸಲತ್ತು ಅರಿಯುವುದು ನಿಮಗೇ ಬಿಟ್ಟದ್ದು.

ರಾಜಕುಮಾರ್ - ಬಂಗಾರಪ್ಪ, ಐಶ್ವರ್ಯ ರೈ - ಬಚ್ಚನ್ ಬೀಗರಾದದ್ದು ತನ್ನಿಂದಲೇ ಎಂದು ಮಾಧ್ಯಮಗಳಿಗೆ ಲೀಕ್ ಮಾಡಿ ಫೇಮಸ್ ಆಗುವ ಚಟ ಈ ಸ್ವಾಮಿಗೆ. 

ಆದರೆ ಈ ಸ್ವಾಮಿಗೆ ನಿತ್ಯಾನಂದನಂತಹ ಯುವಕನತ್ತ ಜನರ ಚಿತ್ತ, ಅದರಲ್ಲೂ ಸಿನೆಮಾ ಮಂದಿ ನಿತ್ಯನಿಗೆ ಉಘೇ ಉಘೇ ಎನ್ನುವುದು ಒಂದೇ ಸಮನೆ ಹೊಟ್ಟೆ ಕಾಯಿಸಿ ಬಿಟ್ಟಿದೆ. ಯಾಕೆಂದರೆ ಈ ಚಂದ್ರಶೇಖರ ಸ್ವಾಮಿ ಒಂದು ಕಾಲದಲ್ಲಿ ಇದೇ ರೀತಿ ಚಿತ್ರರಂಗದ ಸಹವಾಸದಿಂದಲೇ "ಫೇಮಸ್" ಆದದ್ದು.

ನನ್ನ ಒಂದು ಮೂಲದ ಪ್ರಕಾರ ನಿತ್ಯನ ವಿರೋಧ ಆರೋಪ ಮಾಡುತ್ತಿರುವ ಯುವತಿಯ ತಂದೆ ಸೇತುಮಾಧವ ರಾವ್ ಈ ಚಂದ್ರಶೇಖರ ಗುರುವಿನ ದೋಸ್ತ್. ಒಟ್ಟಾರೆ ಪ್ರಭಾವಿ ಗುರು/ಸ್ವಾಮೀಜಿಗಳ ವೃತ್ತಿ ಮತ್ಸರದಲ್ಲಿ ಮಾಧ್ಯಮ ಬಳಕೆಯಾದದ್ದು ಇಲ್ಲಿ ಸ್ಪಷ್ಟ.

For those who were wondering "Why is Suvarna News suddenly after Nityananda Swami" - now you know the rest of the story.

Friday, August 19, 2011

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ


First of all "ಪ್ರಜಾವಾಣಿ"ಗೆ ಭೇಷ್ ಅನ್ನಬೇಕಾಗಿದೆ. ಲೋಕಾಯುಕ್ತ ವರದಿ ಎಲ್ಲಾ ಮಾಧ್ಯಮಗಳಿಗೂ ಲಭ್ಯವಾಗಿದ್ದರೂ, "ಪ್ರಜಾವಾಣಿ’ಯೊಂದೇ systematic ಆಗಿ ವರದಿಯನ್ನು ಅವಲೋಕಿಸಿ ಎಳೆ ಎಳೆಯಾಗಿ ಅನಾವರಣ ಮಾಡುತ್ತಿದೆ.

ಹಿಂದೊಮ್ಮೆ ಈ ಬ್ಲಾಗಲ್ಲಿ ಗಣಿ ರೆಡ್ಡಿಗಳ ಎಂಜಲುಂಡಿರುವ ಪತ್ರಕರ್ತರ ಬಗ್ಗೆ ಬರೆದಿದ್ದೆ. ನೋಡಿ "ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು". ಅದೆಲ್ಲಾ ಇಂದು ನಿಜವಾಗಿದೆ.

ಇಂದಿನ "ಪ್ರಜಾವಾಣಿ" ನೋಡಿ:

  • ಆರ್.ಬಿ. (ರವಿ?) - ರೂ ೧೦ ಲಕ್ಷ
  • ವಿ.ಭಟ್ (ವಿಶ್ವೇಶ್ವರ?) - ರೂ ೨೫ ಲಕ್ಷ ಮತ್ತು 50 ಲಕ್ಷ (ಪ್ರಾಯಶ: ಇದರಲ್ಲೇ ಹೊಸ ಮನೆ ಕಟ್ಟಿದರೇನೋ?)
  • ಬೆಂಗಳೂರು ಮಿರರ್ - ರೂ ೫ ಲಕ್ಷ
  • ಡೆಕ್ಕನ್ ಕ್ರೋನಿಕಲ್ - ರೂ ೨೫ ಲಕ್ಷ
  • ಪ್ರೆಸ್ ಕ್ಲಬ್ - ೫ ಲಕ್ಷ
ಹೀಗೆ ಕಳ್ಳೇಪುರಿ ಹಂಚಿದಂತೆ ಪತ್ರಕರ್ತರಿಗೆ ಗಣಿ ರೆಡ್ಡಿಗಳು ಹಣ ಹಂಚಿದ್ದಾರೆ. ಇನ್ನು ಪ್ರೆಸ್ ಕ್ಲಬ್ ಗಳಿಗೂ ಲಕ್ಷಗಟ್ಟಳೆ ಹಂಚಿದ್ದಾರೆ. ಇದನ್ನೆಲ್ಲಾ ನೋಡಿದಾಗ ಗಣಿ ದೊರೆಗಳ ಪರವಾಗಿ direct ಅಥವಾ indirect ಆಗಿ ಬೆಂಬಲಿಸುವ ಪತ್ರಕರ್ತರಿರುವುದು ಆಶ್ಚರ್ಯದ ಸಂಗತಿಯೇ ಅಲ್ಲ.

ಭಾರೀ ಸಜ್ಜನರಂತೆ ಅಣ್ಣಾ ಹಜಾರೆ ಹೋರಾಟಕ್ಕೆ ಏಕ್ ದಂ ಪ್ರಚಾರ ಕೊಡುವ ಇದೇ ಪತ್ರಕರ್ತರು ಅತ್ತ ಗಣಿ ದೊರೆಗಳ ಎಂಜಲನ್ನೂ ಯಾವುದೇ ನಾಚಿಕೆಯಿಲ್ಲದೆ ಬಾಚಿಕೊಂಡದನ್ನು ನೋಡುವಾಗ ಅಸಹ್ಯವಾಗುತ್ತದೆ.

ಈ ದರಿದ್ರ side business ಪತ್ರಕರ್ತರಿಗೂ ಯಡ್ಯೂರಪ್ಪನವರಿಗೂ difference ಏನು?

Wednesday, January 13, 2010

1 Crore Rs to Bahrain Kannada Sangha - why should poor tax payers of Karnataka fund rich NRI association?

As I suspected in my earlier blog post, BJP Government in Karnataka has again surrendered to a powerful Kannada newspaper Editor.

1 Crore Rupees has been released to Bahrain Kannada Sangha by Karnataka Government (subject to RBI) after above mentioned Editor returned to Bangalore from a fresh "sanmana" and lambasted CM for not keeping his words to Bahrain Kannada Association on 1 Crore Rupees.

In other words, poor tax payers of Karnataka will be subsidizing weekend kitty parties of NRIs in one of the world's richest country. Bahrain's per capita income is almost $18,000 compared to approx $500 per capita income of Karnataka. Can there be bigger irony than this?

Our CM is known to announce 1-2 crore rupees to every religious or cultural place he visits. While in principle I oppose government grants to any religious institutions, I understand how these donation may help social service done by temples. At least one can assume money is spent within India.

But donating 1 Crore to an NRI association in one of the world's richest countries?

Especially when Karnataka is still to recover from one of the worst floods in centuries?

Why send 1 crore to Bahrain when various "Academies" established by Karnataka govt are in coma because other than announcing Presidents to the academies, Chief Minister (who also holds Kannada & Cultural portfolio) has done nothing to rejuvenate them?

As I explained in my earlier post, I've been to Bahrain and don't doubt sincerity of Kannada Sangha there. But Kannadigas in Bahrain are no exception to what we see in Karnataka or for that matter Indian diaspora.

Anyone who has been to NRI events knows what takes place there - weekend parties, kitty parties, usual Bharatanatyam and Carnatic music with bored second generation enduring those torture sessions. NRIs of course think that by attending these events (and making bored teenagers sit through the boring concerts), they are keeping Kannada culture "alive".

Even though Kannadigas form a tiny portion of Bahrain's population, there are already so many associations along caste and community lines - Billavas Association, Bunts Association, Konkani Association, Gowdas Bahrain, Mangalore Catholics, Karnataka Muslims Association among others.

Today it is 1 Crore for Kannada Sangha. Tomorrow if some other association invites CM and presents tacky 10 Dinar souvenir and honours him, will he announced 1 Crore rupees to them as well?

Lastly, what mechanism does Karnataka govt have to monitor fund utilization outside the country? Even inside the country in front of citizens we know how govt funds are spent - that being the case how can one make sure this 1 Crore is not misused once it leaves India?

Thursday, April 9, 2009

ಮಾಧ್ಯಮ ಮಿತ್ರರ ಕೋಳಿ ಜಗಳ ಭಾಗ ೨: ರವೀಂದ್ರ ರೇಷ್ಮೆ vs ವಿಶ್ವೇಶ್ವರ ಭಟ್


ವಿ.ಕ.ಭಟ್ಟರ ಮೇಲೆ ರವೀಂದ್ರ ರೇಷ್ಮೆ ಹೆಗಲ ಮೇಲಿಂದ ರವಿಕೃಷ್ಣಾ ರೆಡ್ಡಿಯ ಗುಂಡು!


ಕಳೆದ ವಾರ "ಮಾಧ್ಯಮ ಮಿತ್ರರ ಕೋಳಿ ಜಗಳ ನೋಡು ಬಾರಾ:ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ" ಕದನದ ಭಾಗ ೨ ಎಂದೇ ಹೇಳಿ ಬೇಕಾದರೆ, ಈ ವಾರ ವಿಕ್ರಾಂತ ಕರ್ನಾಟಕದ "ಗೌರವ ಸಂಪಾದಕ" ರವೀಂದ್ರ ರೇಷ್ಮೆಯವರು ನೇರವಾಗಿ ವಿಜಯ ಕರ್ನಾಟಕದ ಭಟ್ಟರ ಮೇಲೆ ಹರಿಹಾಯ್ದಿದ್ದಾರೆ. ಅಂತೂ ಸುದ್ದಿ ರಿಪೋರ್ಟ್ ಮಾಡಬೇಕಾದ ಪತ್ರಕರ್ತರೇ ತಮ್ಮೊಳಗೆ ಜಗಳ ಮಾಡಿಕೊಂಡು ತಾವೇ ಸುದ್ದಿಯಾಗುತ್ತಿದ್ದಾರೆ.

ಇದೆಲ್ಲಾ ಶುರುವಾದದ್ದು ರವಿಕೃಷ್ಣಾ ರೆಡ್ಡಿ, ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರನ್ನು "ಅನಂತ ಕುಮಾರ ನಿಷ್ಠ ಭಟ್" ಎಂದು ಬಣ್ಣಿಸುವುದರಿಂದ. ಭಟ್ಟರು ಸುಮ್ಮನೆ ಬಿಡುತ್ತಾರೆಯೇ? ಸುದ್ದಿ ಮನೆಯ ಪ್ರೈವೆಸಿಗೆ ಮಣ್ಣು ಹಾಕಿ, ಹಿಂದಿನ ಚುನಾವಣೆಯಲ್ಲಿ ರವಿಕೃಷ್ಣಾ ರೆಡ್ಡಿ ತಮ್ಮ ಕಚೇರಿಗೆ ಬಂದದ್ದು, ಸಪೋರ್ಟ್ ಕೇಳಿದ್ದು, ತಾನು ಉಪದೇಶ ಮಾಡಿ ಹಿಂದೆ ನಕ್ಕಿದ್ದು ಎಲ್ಲವನ್ನೂ ಬಣ್ಣಿಸಿ, ರವಿಕೃಷ್ಣಾ ರೆಡ್ಡಿ "ಲೂಸು ಕೇಸ್" ಅಂತಾ ತಮ್ಮ ಭಾನುವಾರದ ಅಂಕಣದಲ್ಲಿ ಬರೆದುಬಿಟ್ಟರು.

ಅದಕ್ಕೆ ಉತ್ತರವಾಗಿ ರವಿಕೃಷ್ಣಾ ರೆಡ್ಡಿ ತನ್ನ ಪತ್ರಿಕೆಯ "ಗೌರವ ಸಂಪಾದಕ" (ಅಂದರೆ ಬಾಡಿಗೆ ಸಂಪಾದಕ ಅಥವಾ ಹೊರಗುತ್ತಿಗೆಯ ಸಂಪಾದಕವೆನ್ನೋಣವೇ?) ರವೀಂದ್ರ ರೇಷ್ಮೆಯ ಹೆಗಲ ಮೇಲೆ ಕುಳಿತು ಪ್ರತ್ಯುತ್ತರ ನೀಡಿದ್ದಾರೆ.

ರೇಷ್ಮೆಯವರೂ ಪತ್ರಿಕೋದ್ಯಮದ ಎಲ್ಲಾ ಕಟ್ಟುಪಾಡುಗಳನ್ನು ಅತ್ತ ಬದಿಗಿಟ್ಟು (ಹೇಗೂ "ಗೌರವ ಸಂಪಾದಕ"ರಲ್ಲಾ!), ತಮ್ಮ ಮತ್ತು ವಿಶ್ವೇಶ್ವರ ಭಟ್ಟರ ನಡುವೆ ನಡೆದ ಖಾಸಗಿ ದೂರವಾಣಿ ಸಂಭಾಷಣೆಯನ್ನೇ ಈ ವಾರದ ಸಂಪಾದಕೀಯ ಮಾಡಿ ಬಿಟ್ಟಿದ್ದಾರೆ. ತನ್ಮೂಲಕ ತನ್ನ ಮಾಲಿಕ ರವಿಕೃಷ್ಣಾ ರೆಡ್ಡಿ ವಿರುದ್ಧ ಬರೆದ ವಿಶ್ವೇಶ್ವರ ಭಟ್ಟರ ವಿರುದ್ಧ ಕಿಡಿಕಾರಿ ರವಿಕೃಷ್ಣಾ ರೆಡ್ಡಿಯ ಋಣ ತೀರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಭರ್ಜರಿ ೨೦೦ ಮತ ಗಳಿಸಿ ಠೇವಣಿ ಕಳೆದುಕೊಂಡ ರವಿಕೃಷ್ಣಾ ರೆಡ್ಡಿಯನ್ನು "ಯುವ ಕನಸುಗಾರ", "ಪ್ರಾಮಾಣಿಕ ಹೋರಾಟಗಾರ"ಯೆಂದೆಲ್ಲಾ ತನ್ನ ಧಣಿಯನ್ನು ಸ್ವಲ್ಪ ಅತಿಯಾಗಿಯೇ ಹೊಗಳಿದ್ದಾರೆ.

ಒಟ್ಟಾರೆ ಹೇಳುವುದಾದರೆ, ಕರ್ನಾಟಕ ಪತ್ರಿಕೋದ್ಯಮದ ಘಟಾನುಘಟಿಗಳು ಈ ಪರಿ "ಇಗೋ" ಪ್ರದರ್ಶನ ಮಾಡುವುದನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಅಂತೂ ಇಬ್ಬರ ಜಗಳದಲ್ಲಿ ಕರ್ನಾಟಕದ ಸುದ್ದಿ ಮನೆಗಳಲ್ಲಿ ಏನು ನಡೆಯುತ್ತದೆ, ಜಾತೀಯತೆ, ಲಾಬಿಗಳು ಹೇಗೆ ಬೀಡು ಬಿಟ್ಟಿವೆ ಎಂಬುದೆಲ್ಲಾ ಹೊರಬರುತ್ತಿದೆ.

ಎಲ್ಲಾ ಬದಿಗಿಟ್ಟು ನೋಡಿದರೆ ಈ ಘಟಾನುಘಟಿಗಳ ನಡುವೆ ವ್ಯತ್ಯಾಸವೇನೂ ಇಲ್ಲ. ತತ್ವ ನಿಷ್ಠೆ, ಎಡ ಬಲ ಸಿದ್ಧಾಂತಗಳೆಲ್ಲಾ ಕೇವಲ ತೋರಿಕೆಗಾಗಿ ಮಾತ್ರ.

ಅತ್ತ ರವೀಂದ್ರ ರೇಷ್ಮೆ ಲಂಕೇಶರ ಹೆಸರಲ್ಲಿ, ತನಿಖಾ ಪತ್ರಿಕೋದ್ಯಮದ ಹೆಸರಲ್ಲಿ ಏನೆಲ್ಲಾ ಮಾಡಿದ್ದಾರೆ, ತಮಗೆ ಎಷ್ಟು ಮಾಡಿಕೊಂಡಿದ್ದಾರೆಯೆಂದು ತಿಳಿಯಬೇಕಾದರೆ ಹಿಂದಿನ "ಲಂಕೇಶ್ ಪತ್ರಿಕೆ"ಯ ಮಾಜಿ ಕೆಲಸಗಾರರನ್ನು ಕೇಳಿ ನೋಡಿ. ವಿಧಾನಸೌಧದ ಒಂದು ಕಚೇರಿಯಿಂದ ದಾಖಲೆ ಪತ್ರ ತರಿಸಿಕೊಳ್ಳುವುದು, ಅದರ ಪ್ರತಿಯನ್ನು ಮಂತ್ರಿಗಳಿಗೋ, ಇತರ ಅಧಿಕಾರಿಗಳಿಗೋ ಕಳಿಸಿ ಬ್ಲ್ಯಾಕ್ ಮೇಲ್ ಮಾಡುವುದು, ಪತ್ರಿಕಾ ವರದಿ ಪ್ರಕಟಿಸದಿರಲು ಎರಡೂ ಕಡೆಯಿಂದ ಇಕ್ಕಿಕೊಳ್ಳುವುದು ರೇಷ್ಮೆಯವರ "ತನಿಖಾ ಪತ್ರಿಕೋದ್ಯಮ"ದ ಸ್ಟೈಲ್! ಲಂಕೇಶರ ಹೋದ ಮೇಲಂತೂ ಜಿಲ್ಲಾ ಮಟ್ಟ, ತಾಲೂಕು ಹೋಬಳಿ ಮಟ್ಟದಲ್ಲೂ ರೇಷ್ಮೆಯವರ "ತನಿಖಾ ಪತ್ರಿಕೋದ್ಯಮ" ನಡೆದದ್ದೇ ನಡೆದದ್ದು. ಸಾಮಾಜಿಕ ನ್ಯಾಯವೆಂದೆಲ್ಲಾ ಬೋರು ಹೊಡೆಸುವ ರೇಷ್ಮೆ ಅದನ್ನೂ ಒಂಥರಾ ಮಾಡಿದ್ದಾರೆ - ತಮ್ಮ ಪತ್ರಿಕಾವರದಿಗಾರರೆಲ್ಲಾ ಅಡ್ಡೆ ಪಡ್ಡೆಯಂತಿದ್ದವರು ರೇಷ್ಮೆಯವರ "ತನಿಖಾ ಪತ್ರಿಕೋದ್ಯಮದ" ತರಬೇತಿಯಿಂದಾಗಿ ಪ್ರೊಫೆಷನಲ್ ಹಫ್ತಾ ಕಲೆಕ್ಟರುಗಳೂ ನಾಚುವಂತೆ ಬಂಗಲೆ ಕಾರುಗಳನ್ನು ಕೊಂಡಿದ್ದಾರೆ.

ಕಾಲೇಜಿನಲ್ಲಿ ಪ್ರೊಫೆಸರ ಆದರೂ ಸರಿಯಾಗಿ ಪಾಠ ಮಾಡುವ ಬದಲು ದಿನವಿಡೀ ಡೀಲ್ ಕುದರಿಸುವ ರವೀಂದ್ರ ರೇಷ್ಮೆ,, ಕಳೆದ ಕೆಲ ದಶಕಗಳಿಂದ "ಹವ್ಯಾಸೀ ಪತ್ರಕರ್ತ", "ಗೌರವ ಸಂಪಾದಕ", "ತನಿಖಾ ಪತ್ರಕರ್ತ"ನೆಂಬ ಸ್ವಘೋಷಿತ ಬಿರುದುಗಳಿಂದ ಹೊರಬಂದಂತಿಲ್ಲ. ಬಿರುದು ಬಾವಲಿ ಹಾಕಿಕೊಳ್ಳಲಿ, ಆದರೆ ಪ್ರತಿವಾರ ಪತ್ರಿಕೆ ಹೊರತರಲು ಯಾಕೆ ಒದ್ದಾಡುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ - ಊರಿಗೆಲ್ಲಾ ಉಪದೇಶ ಮಾಡುವ ಮೊದಲು ತಮ್ಮ ಪತ್ರಿಕೆ ಸರಿಯಾಗಿ ಪ್ರತಿವಾರ ಹೊರತನ್ನಿ ಸ್ವಾಮೀ!

ಅಲ್ಲಾ, ವಿಶ್ವೇಶ್ವರ ಭಟ್ಟರು ಅನಂತಕುಮಾರ್ ಪಿ.ಎ. ಆಗಿದ್ದರೆಂಬುದನ್ನೇ ದೊಡ್ಡ ಅಪರಾಧವೆಂಬಂತೆ ರೇಷ್ಮೆಯವರು ಬಿಂಬಿಸುತ್ತಾರಲ್ಲಾ, ೧೯೮೩ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದದ್ದೇ ತನ್ನಿಂದಾಗಿ, ನಜೀರ್ ಸಾಹೇಬರು ಗ್ರಾಮೀಣಾಭಿವೃದ್ಧಿ ಸಚಿವರಾಗಲು ಹೇಳಿದ್ದು ನಾನೇ, ದೇವೇಗೌಡರ ಅಪ್ಪ ಮಕ್ಕಳ ಪಕ್ಷದ ಪ್ರಣಾಳಿಕೆ ಬರೆದದ್ದು ನಾನೇ ಎಂದೆಲ್ಲಾ ಕೊಚ್ಚಿಕೊಳ್ಳುತ್ತಾರೆ. ಪ್ರಾಯಶ: ತಾನು ಮಾತ್ರ ರಾಜಕೀಯ ಮಾಡಬಹುದು (ಹೇಗೂ "ಗೌರವ ಸಂಪಾದಕ"ರಲ್ಲಾ!), ಅದನ್ನೇ ಇನ್ನೊಬ್ಬ ಸಂಪಾದಕ ಭಟ್ಟರು ಮಾಡಿದರೆ ತಪ್ಪೆಂಬುದು ಅವರ ಅಭಿಪ್ರಾಯವೇನೋ.

ಇನ್ನು ವಿಶ್ವೇಶ್ವರ ಭಟ್ಟರ ವಿಷಯಕ್ಕೆ ಬರುವುದಾದರೆ, ತಮ್ಮ ಹಿಂದಿನ ದಿನಗಳಲ್ಲಿ ಒಂದು ಸರಿಯಾದ ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಅನಂತಕುಮಾರ್ ಸಚಿವನಾದ ಕೂಡಲೇ ಅವರ ಕೃಪೆಯಿಂದ ಡಜನುಗಟ್ಟಳೆ ದೇಶ ವಿದೇಶಗಳನ್ನು ಸರಕಾರಿ ಖರ್ಚಿನಲ್ಲಿ, ತೆರಿಗೆದಾರರ ಖರ್ಚಲ್ಲಿ ಸುತ್ತಿದ್ದಾರೆ. ಹೊಟೇಲ್ ಅಶೋಕಾ ಮಾರಾಟ ಹಗರಣದಲ್ಲಿ ಭಟ್ಟರ ಹೆಸರು ಕೇಳಿ ಬಂದದ್ದು ಸುಳ್ಳೇನಲ್ಲ. ಮತ್ತೆ "ಹುಡ್ಕೋ ಹಗರಣ"ದಲ್ಲೂ ವಿಶ್ವೇಶ್ವರ ಭಟ್ಟರ ಹೆಸರು ಕೇಳಿ ಬಂದಿತ್ತು - ಹುಡ್ಕೋ ಹೆಸರಿನಲ್ಲಿ ಬಾಡಿಗೆ ಪಡೆದುಕೊಂಡಿದ್ದ ಕಾರು ಬಂಗಲೆಗಳು ವಿಶ್ವೇಶ್ವರ ಭಟ್ಟರು ಉಪಯೋಗಿಸುತ್ತಿದ್ದರೆಂದೆಲ್ಲಾ ಬೆಂಗಳೂರಿನ ಕೆಲ ಹಿರಿ ಪತ್ರಕರ್ತರು ಹೇಳುತ್ತಿರುತ್ತಾರೆ. "ಅಕ್ಕ" ಸಮ್ಮೇಳನದ ಹೆಸರಲ್ಲಿ ಪ್ರತಿವರ್ಷ ಅಮೆರಿಕಾ ಸುತ್ತುವ ಭಟ್ಟರು, ರಾಜ್ಯದಲ್ಲೇ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೋ ಜೂನಿಯರ್ ರಿಪೋರ್ಟರುಗಳನ್ನು ಕಳೆಸಿ ತಮ್ಮ ಸಾಹಿತ್ಯ ಪ್ರೇಮ ಮೆರೆಯುತ್ತಾರೆ.

ಭಟ್ಟರ ಮೇಲಿರುವ ಇನ್ನೊಂದು ದೊಡ್ಡ ಅಪವಾದವೆಂದರೆ, ತಮ್ಮ ಹೆಸರಿನಲ್ಲಿ ಬರುವ ಅಂಕಣಗಳನ್ನು, ಪುಸ್ತಕಗಳನ್ನು ಬೇರೆಯವರ ಕೈಯಲ್ಲಿ ಬರೆಸುತ್ತಾರೆಂದು. ದಿನವಿಡೀ ಬೆಂಗಳೂರಿನಲ್ಲಿ ಅದಾವುದೋ ಉದ್ಘಾಟನೆ, ಬಿಡುಗಡೆ, ಸನ್ಮಾನ, ಸಮಾರಂಭಗಳಲ್ಲೇ ಕಂಡುಬರುವ ವಿಶ್ವೇಶ್ವರ ಭಟ್ಟರಿಗೆ ಓದಲು, ಬರೆಯಲು ಸಮಯವೆಲ್ಲಿ ಸಿಗುತ್ತದೆಯೆಂಬ ಪ್ರಶ್ನೆ ಸಹಜ ತಾನೇ? ಕಾಲೇಜಿನಲ್ಲಿ ಫುಲ್ ಟೈಮ್ ಪ್ರೊಫೆಸರ್ ಆಗಿರುವ ರೇಷ್ಮೆಯವರಿಗೂ "ತನಿಖಾ ಪತ್ರಿಕೋದ್ಯಮ"ಕ್ಕೆ ಪುರುಸೊತ್ತೆಲ್ಲಿಯೆಂದೂ ಕೇಳಬೇಕಾಗುತ್ತದೆ. ದೂರದ ಅಮೆರಿಕದ ಟೆಕ್ಕಿ ರವಿಕೃಷ್ಣಾ ರೆಡ್ಡಿಗೆ ಚುನಾವಣಾ ಸಮಯದಲ್ಲಿ ವಾರಗಟ್ಟಳೆ ಕರ್ನಾಟಕದ ಊರು ಸುತ್ತಲು ಪುರುಸೊತ್ತು ಹೇಗೆ ಸಿಗುತ್ತದೆಯೆಂಬುದೂ ಸೋಜಿಗದ ಸಂಗತಿ.

ಒಳಹೊಕ್ಕು ನೋಡಿದರೆ, ಪತ್ರಕರ್ತರೆಂದೆಲ್ಲಾ ಬೀಗುವ ಈ ರೇಷ್ಮೆ, ರೆಡ್ಡಿ, ಭಟ್ ವಗೈರೆಗಳ ಸೈಡ್ ಬಿಜಿನೆಸ್ಸುಗಳು, "ತನಿಖಾ ವರದಿ" ಹೆಸರಲ್ಲಿ ನಡೆಸುವ ಬ್ಲ್ಯಾಕ್ ಮೈಲ್ ಉದ್ಯಮಗಳು, ಲ್ಯಾಂಡ್ ಮಾಫಿಯಾಗಳ ಪ್ರಾಕ್ಸಿಗಳಂತೆ ವರ್ತಿಸುವ ಪತ್ರಿಕಾ ವರದಿಗಾರರು, ಚುನಾವಣಾ ಸಮಯದಲ್ಲಿ ಎಲ್ಲಿ ಸಿಗುತ್ತದೋ ಅಲ್ಲಿ ಉಂಡುವ ಮಾಧ್ಯಮ ಮಿತ್ರರ ವರ್ತನೆ ನೋಡಿ ವಾಕರಿಕೆ ಬರುತ್ತದೆ. ಅಲ್ಲಾ ಇದ್ದ ಬದ್ದ ರಾಜಕಾರಣಿಗಳ ಬಗ್ಗೆ, ಸಮಾಜದ ಅನಿಷ್ಠಗಳ ಬಗ್ಗೆ ಉಪದೇಶ ಮಾಡುವ ಪತ್ರಕರ್ತರೇ ಹೀಗೆ ಲೇಖನಿಗಳ ಮೂಲಕ ಹೊಡೆದಾಡಿಕೊಂಡರೆ ರಾಜಕಾರಣಿಗಳ ಬಗ್ಗೆ ಉಪದೇಶ ಮಾಡಲು ಇವರಿಗೆ ನೈತಿಕ ಹಕ್ಕೆಲ್ಲಿದೆಯೆಂಬ ಪ್ರಶ್ನೆ ಉದ್ಭವಿಸುತ್ತದೆ.

ಆದರೂ ವಿಶ್ವೇಶ್ವರ ಭಟ್ ಮತ್ತು ರವೀಂದ್ರ ರೇಷ್ಮೆಯಂತಹ ಕನ್ನಡ ಪತ್ರಿಕೋದ್ಯಮದ ಘಟಾನುಘಟಿಗಳು ಶಾಲಾ ಹುಡುಗರಂತೆ ಜಗಳ ಮಾಡುತ್ತಿರುವುದರಿಂದ ಕನ್ನಡ ಪತ್ರಿಕೋದ್ಯಮದ ಒಳಗಿನ ಹುಳುಕಗಳೆಲ್ಲಾ (ಅದೇನೋ ಡಾರ್ಕ್ ಸೀಕ್ರೆಟ್ ಅಂತಾರಲ್ಲಾ) ಹೊರಬರುತ್ತಿರುವುದು ಕನ್ನಡ ಪತ್ರಿಕೋದ್ಯಮದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯೆನ್ನೋಣವೇ?