Sunday, March 29, 2009

ಮಾಧ್ಯಮ ಮಿತ್ರರ ಕೋಳಿ ಜಗಳ ನೋಡೋ ಬಾರಾ: ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ!

ಮಾಧ್ಯಮ ಮಿತ್ರರ ಕೋಳಿ ಜಗಳ ನೋಡೋ ಬಾರಾ: ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ!


ಊರಿಗೆಲ್ಲಾ ಉಪದೇಶ ಮಾಡುವ ಮಾಧ್ಯಮ ಮಿತ್ರರು ತಮ್ಮೊಳಗೇ ಜಗಳ ಮಾಡಿಕೊಂಡು ಒಳಗಿನ ರಾಡಿಯನ್ನು ಹೊರಹಾಕುವುದನ್ನು ನೋಡುವುದೇ ಚೆಂದ.

ಒಂದೆಡೆ "ವಿಕ್ರಾಂತ ಕರ್ನಾಟಕ"ವೆಂಬ ಅನಿಯಮಿತ ವಾರಪತ್ರಿಕೆ - ಒಂದು ವಾರ ಮಾರುಕಟ್ಟೆಗೆ ಬಂದರೆ ಮತ್ತೆರಡು ವಾರ ನಾಪತ್ತೆ ಈ ಪತ್ರಿಕೆ! - ಸ್ಥಾಪಿಸಿದ ಅದೇ ಹಳಸಲು ಔಟ್ ಡೇಟೆಡ್ ಲಂಕೇಶ್ ಚಿಂತನೆಯ ಕೆಲಸವಿಲ್ಲದ ಟೆಕ್ಕಿ ರವಿಕೃಷ್ಣಾ ರೆಡ್ಡಿ.

ಇನ್ನೊಂದೆಡೆ "ವಿಜಯ ಕರ್ನಾಟಕ"ದ ಸಂಪಾದಕ ವಿಶ್ವೇಶ್ವರ ಭಟ್ಟರು.

ಇಬ್ಬರೂ ತಮ್ಮ ತಮ್ಮ ಪತ್ರಿಕೆಗಳಲ್ಲಿ ಇನ್ನೊಬ್ಬರ ವಿರುದ್ಧ ಬರೆದುಕೊಂಡು ಓದುಗರಿಗೆ ಪುಕ್ಕಟೆ ಮನೋರಂಜನೆ ನೀಡುತ್ತಿದ್ದಾರೆ.

ಮೊದಲ ಫಿರಂಗಿ ಸಿಡಿಸಿದ್ದು ರವಿಕೃಷ್ಣಾ ರೆಡ್ಡಿಗಾರು. ಯಡ್ಡ್ಯೂರಪ್ಪ ವಿರೋಧೀ ಪತ್ರಿಕಾವರದಿಗಳನ್ನು ಪ್ರಕಟಿಸುವುದರ ಮೂಲಕ ಅನಂತಕುಮಾರರ ಭಟ್ಟಂಗಿ ಕೆಲಸವನ್ನು ವಿಶ್ವೇಶ್ವರ ಭಟ್ ಮಾಡುತ್ತಿದ್ದಾರೆಯೆಂಬುದು ಅವರ ಮಾರ್ಚ್ ೨೦ರ ಅಂಕಣದ ತಿರುಳು. "ಅನಂತ ನಿಷ್ಠ ಭಟ್" ಎಂಬ ಹೆಡ್ಡಿಂಗ್ ಮೂಲಕ ಪ್ರಕಟವಾದ ಈ ಲೇಖನವನ್ನು ರವಿಕೃಷ್ಣಾ ರೆಡ್ಡಿಯ ಬ್ಲಾಗಲ್ಲೂ ನೋಡಬಹುದು.

ವಿಶ್ವೇಶ್ವರ ಭಟ್ಟರು ಸುಮ್ಮನೆ ಬಿಡುತ್ತಾರೆಯೇ? ತಮ್ಮದೇ ಶೈಲಿಯಲ್ಲಿ ಅವರ ಭಾನುವಾರದ ಅಂಕಣದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಸರಿಯಾಗಿಯೇ ಜಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅದಾವುದೋ ಮೌಲ್ಯಾಗ್ರಹದ ಹೆಸರಲ್ಲಿ ದೊಡ್ಡದೊಡ್ಡ ಬಡಾಯಿ ಕೊಚ್ಚಿಕೊಂಡು, ಉಪವಾಸ ಮಾಡಿ ಬಿಟ್ಟಿ ಪ್ರಚಾರ ಪಡೆದುಕೊಂಡರೂ ಕೇವಲ ೨೦೦ ಮತಗಳನ್ನು ಪಡೆದ ರವಿಕೃಷ್ಣಾ ರೆಡ್ಡಿ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಈ-ಮೇಲ್ ಮೂಲಕ ಸಂಗ್ರಹಿಸಿದ ೪.೨೦ ಲಕ್ಷ ರೂಪಾಯಿಗೇನಾಯಿತೆಂದು ಕೇಳಿದ್ದಾರೆ.

ಒಂದೆಡೆ ನೋಡಿದಾಗ ಭಟ್ಟರು ಈ ರೆಡ್ಡಿಗೆ ಜಡಿದದ್ದು ಕಮ್ಮಿಯೇ ಆಯಿತೆಂದೆನಿಸುತ್ತದೆ.

ಸ್ವಂತ ಯೋಚನೆಯಿಲ್ಲದೆ ಲಂಕೇಶ್ ಹಳಸಲು ಯೋಚನೆಗಳಿಗಿಂದ ಹೊರಬಾರದೆ, ದೂರದ ಅಮೆರಿಕಾದಲ್ಲಿ ಕುಳಿತು ಇಂಟರನೆಟ್ಟುಗಳಲ್ಲಿ ತನ್ನ ಪೆದ್ದು ಮುಖದ ವೀಡಿಯೋಗಳನ್ನು ತಾನೇ ಮಾಡಿಕೊಂಡು ಆದರ್ಶವಾದಿಯಂತೆ ಪೋಸು ಕೊಡುವ ರವಿಕೃಷ್ಣಾ ರೆಡ್ಡಿಯ ನೋಡಿದರೆ ನಗು ಬರುತ್ತದೆ.


ಅಮೆರಿಕದಲ್ಲಿ ಕೆಲಸವಿಲ್ಲದಾಗ ಭಾರತಕ್ಕೆ ಬಂದು ವಿಚಾರಗೋಷ್ಠಿಯ ಹೆಸರಲ್ಲಿ ತನ್ನಂತೆಯೇ ಲಂಕೇಶ್ ಪ್ರಪಂಚದಿಂದ ಹೊರಬರದ ಸಮಾನಮನಸ್ಕರ ಜೊತೆ ಕೂತು ಎಲ್ಲರನ್ನೂ ಬೋರು ಹೊಡೆಸುವ ಆಸಾಮಿ ಈ ರವಿಕೃಷ್ಣಾ ರೆಡ್ಡಿ.

ದೇಶ ದ್ರೋಹಿ ನಕ್ಸಲರೊಂದಿಗೆ ಈ-ಮೇಲ್ ಹಂಚಿಕೊಳ್ಳುವ ಈ ರವಿಕೃಷ್ಣಾ ರೆಡ್ಡಿ ಇವತ್ತೂ ಉಡುಪಿಯಲ್ಲಿ ಜನಪರ ವೇದಿಕೆಯೆಂಬ ನಕ್ಸಲ್ ಪ್ರೇಮಿ ಸಂಘಟನೆಯ ಜೊತೆ ಸೇರಿ ಅದಾವುದೋ ವಿಚಾರಗೋಷ್ಠಿ ಆಯೋಜಿಸಿದ್ದಾರೆ.

ಲೋಹಿಯಾವಾದ, ಲಂಕೇಶ್ ಹೆಸರಲ್ಲಿ ಬೋರು ಹೊಡೆಸುವ ರವಿಕೃಷ್ಣಾ "ರೆಡ್ಡಿ", ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕೂಟದ ಅಧ್ಯಕ್ಷನಾಗಿದ್ದಾಗ ಕನ್ನಡ ಬಳಗವನ್ನು ಜಾತಿಯ ಆಧಾರದಲ್ಲಿ ವಿಭಜಿಸಿದನ್ನು ಅಲ್ಲಿಯ ಕನ್ನಡಿಗರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆಯೆಂದು ಅಲ್ಲಿಂದ ಬಂದ ಓರ್ವ ಮಿತ್ರ ಹೇಳುತ್ತಿದ್ದ.

ಅಲ್ಲಾ ಭಟ್ಟರು ಅನಂತಕುಮಾರ್ ಭಟ್ಟಂಗಿ, ಪಕ್ಷಪಾತಿಗಳೆಂದೆಲ್ಲಾ ಹೇಳುವ ರೆಡ್ಡಿ, ತನ್ನ "ವಿಕ್ರಾಂತ ಕರ್ನಾಟಕ"ದ ಡಮ್ಮಿ ಸಂಪಾದಕನಾದ ತನ್ನ ಅಣ್ಣ ಜನತಾದಳದ ಸಕ್ರಿಯ ಕಾರ್ಯಕರ್ತ / ಪದಾಧಿಕಾರಿಯೆಂಬುದನ್ನು ಬಚ್ಚಿಡುವುದರ ರಹಸ್ಯವೇನು?

ಇನ್ನು ಲೋಕಕ್ಕೆಲ್ಲಾ ವಿಚಾರ ಹೇಳುವ ರವಿಕೃಷ್ಣಾ ರೆಡ್ಡಿಯ ಅಸಲು ಏನೆಂಬುದು "ವಿಕ್ರಾಂತ ಕರ್ನಾಟಕ"ವನ್ನು ನೋಡಿದರೆಯೇ ತಿಳಿಯುತ್ತದೆ. ಬೇರೆಯವರಿಗೆ ಉಚಿತ ಉಪದೇಶವನ್ನು ಪುಂಖಾನಪುಂಖವಾಗಿ ನೀಡುವ ಈ ರವಿಕೃಷ್ಣಾ ರೆಡ್ಡಿ ಮೊದಲು ತನ್ನ ಪತ್ರಿಕೆಯವನ್ನು ಪ್ರತಿ ವಾರ ಸರಿಯಾಗಿ ಹೊರತರಲಿ. ಇನ್ನೂ "ವಿಕ್ರಾಂತ ಕರ್ನಾಟಕ"ದ ಬಗ್ಗೆ, ಅದರ "ಗೌರವ ಸಂಪಾದಕ" "ರಾಮಕೃಷ್ಣ ಹೆಗಡೆ ಸರಕಾರ ಬಂದದ್ದೇ ನನ್ನಿಂದ" ರವೀಂದ್ರ ರೇಷ್ಮೆಯೆಂಬ ಇನ್ನೊಂದು ಲಂಕೇಶ್ ಪಳೆಯುಳಿಕೆ ಬಗ್ಗೆ ಬರೆಯುವುದು ಬಹಳಷ್ಟಿದೆ - ಇನ್ನೊಂದು ಬ್ಲಾಗ್ ಪೋಸ್ಟ್ ನಿರೀಕ್ಷಿಸಿ. ಸದ್ಯಕ್ಕೆ ಕಾಫಿ ಕುಡಿಯುತ್ತಾ ಈ ಇಬ್ಬರ ಜಗಳ ಎಂಜಾಯ್ ಮಾಡಿ.

ಅತ್ತ ಚುನಾವಣೆಯಲ್ಲೂ ಠೇವಣಿ ಉಳಿಸಿಕೊಳ್ಳಲಾಗದ ಈ ರೆಡ್ಡಿ ಇತ್ತ ಸರಿಯಾಗಿ ಪ್ರತಿವಾರ ಪತ್ರಿಕೆ ಹೊರತರಲಾರದೆ ಮಾಧ್ಯಮ ಲೋಕದಲ್ಲೂ ಫ್ಲಾಪ್. ಒಟ್ಟಾರೆ ರೆಡ್ಡಿಯಂತಹ ಜೋಕರುಗಳೂ ನಮಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆಂಬುದು ನಿಜ!

ರವಿ ರೆಡ್ಡಿಯ ಕಭೀ ಹಾಂ ಕಭೀ ಹಾಂ ವಾರಪತ್ರಿಕೆಯ ಬೆರಳೆಣಿಕೆಯ ಓದುಗರೆದುರು, ಪ್ರತಿನಿತ್ಯ ಲಕ್ಷಗಟ್ಟಳೆ ಓದುಗರನ್ನು ಹೊಂದಿರುವ ವಿಶ್ವೇಶ್ವರ ಭಟ್ಟರು ಈ ರೌಂಡಿನಲ್ಲಿ "ವಿಜಯ" ಸಾಧಿಸಿದ್ದಾರೆಯೆಂದು ಹೇಳೋಣವೇ?

Thursday, March 19, 2009

ಇಂಟರನೆಟ್ಟಿನಲ್ಲೊಂದು ಕನ್ನಡ ಮಾಧ್ಯಮ ಮಿತ್ರರ ಗರ್ಭಗುಡಿ


ಮಾಧ್ಯಮ ಮಿತ್ರರ ಗರ್ಭ ಗುಡಿ

ಇತ್ತೀಚೆಗೆ ಕನ್ನಡ ಮಾಧ್ಯಮ ಮಿತ್ರರು ಒಂದು ಕಡೆ ಒಟ್ಟಾಗಿ "ಕನ್ನಡ ಜರ್ನಲಿಸ್ಟ್ಸ್ - ಇದು ಮಾಧ್ಯಮ ಮಿತ್ರರ ಸಮೂಹ ಮಾಧ್ಯಮ"ವೆಂಬ ಇ-ಗುಂಪೊಂದನ್ನು ಸ್ಥಾಪಿಸಿಕೊಂಡಿದ್ದಾರೆ.

ಉದ್ಧೇಶವೇನೋ ಒಳ್ಳೆಯದೇ, ಆದರೆ ಟಿಪಿಕಲ್ ಪ್ರೆಸ್ ಕ್ಲಬ್ಬುಗಳ ಹಾದಿ ಹಿಡಿಯುವ ಎಲ್ಲಾ ಲಕ್ಷಣಗಳಿವೆ.
ಮಾಧ್ಯಮಗಳ ಬಗ್ಗೆ ಟೀಕೆ ಬಿಡಿ, ಇ-ಗುಂಪನ್ನು ಸೇರುವುದೇ ಒಂದು ಸಾಹಸ. ಬರೀ ಈ ಎಕ್ಸಕ್ಲೂಸಿವ್ ಕ್ಲಬ್ ಒಳಗೆ ಹೋಗುವುದು ಸಾಮಾನ್ಯ ಜನರಿಗೆ ಬಿಡಿ, ಅವರ ಮಿತ್ರರಲ್ಲದವರ ಮಾಧ್ಯಮದವರಿಗೇ ಇಲ್ಲಿ ಎಂಟ್ರಿ ಇಲ್ಲ.

ಕನ್ನಡ ಮಾಧ್ಯಮ ಲೋಕದ ಟ್ರಾಜೆಂಡಿಯಂದರೆ ಇದೇ. ತಮ್ಮದೇ ಲೋಕದಲ್ಲಿದ್ದು ನಾವು ಹೇಳಿದ್ದೇ ಸರಿಯೆಂಬ ವರ್ತನೆ.

ಲೋಕದ ಎಲ್ಲಾ ವಿಷಯಗಳ ಮೇಲೆ ಟೀಕೆ ಕಮೆಂಟು ಮಾಡುತ್ತಾರಿವರು. ಇದ್ದ ಬದ್ದವರ ವಿಷಯದಲ್ಲಿ ಮೂಗು ಹಾಕಿ ಪತ್ರಿಕೋದ್ಯಮದ ಹೆಸರಲ್ಲಿ ಎಲ್ಲರನ್ನೂ ಟೀಕೆ ಮಾಡಿ ಉಪದೇಶ ಮಾಡುವ ಇವರ ಮೇಲೆ ಟೀಕೆ ಮಾಡಿ ನೋಡಿ?

ಪತ್ರಿಕಾ ಸ್ವಾತಂತ್ರದ ಹೆಸರಲ್ಲಿ ಘಂಟೆಗಟ್ಟಳೆ ಭಾಷಣ ಮಾಡುತ್ತಾರಿವರು, ಆದರೆ ಈ ಪತ್ರಕರ್ತರ ಬ್ಲಾಗುಗಳಲ್ಲಿ ಅವರ ಅಭಿಪ್ರಾಯಕ್ಕೆ ಭಿನ್ನವಾದ ಕಮೆಂಟು ಹಾಕಿ ನೋಡಿ? ಊಹೂಂ, ಅಲ್ಲಿ ಭಟ್ಟಂಗಿಗಳಿಗೆ ಮಾತ್ರ ಪ್ರವೇಶ.


ಪರಸ್ಪರ ಬೆನ್ನು ತಟ್ಟಿಕೊಳ್ಳುವ, ಸ್ವಪ್ರಶಂಸೆಯಲ್ಲೇ ಕಳೆದುಹೋಗುವುದಾದರೆ ಪ್ರೆಸ್ ಕ್ಲಬ್ಬಿನಲ್ಲೇ ಅದನ್ನು ಮಾಡಬಹುದಲ್ಲ?
ಈ ಇ-ಕನ್ನಡ ಮಾಧ್ಯಮ ಮಿತ್ರರ ಇ-ಗರ್ಭಗುಡಿಗೆ ಓರ್ವ ಮಾಧ್ಯಮದ ವಿದ್ಯಾರ್ಥಿಯಾಗಿ ಪ್ರವೇಶ ಬಯಸಿ ಎಪ್ಲಿಕೇಶನ್ ಹಾಕಿ ಒಂದು ವಾರವಾದರೂ ಎಂಟ್ರಿ ಸಿಗಲಿಲ್ಲವಾದರಿಂದ ನೊಂದು ಈ ಬ್ಲಾಗ್ ಪೋಸ್ಟ್ ಮಾಡಬೇಕಾಯಿತು.

ಹಾಗಂತಾ ಎಲ್ಲಾ ಬರೀ ಜೋಳು ಅಂತಲ್ಲ. ಚಾರ್ಲಿ ಚಾಪ್ಲಿನ್ ಪ್ರತಿಮೆ ವಿಷಯದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿಯ ಬಗ್ಗೆ ಅವಿನಾಶ್ ಬಿ. ಯವರು "ಇಲ್ಲದ ಚಾರ್ಲಿ ಚಾಪ್ಲಿನ್ ಪ್ರತಿಮೆಗೆ ಧಾಳಿ"ಯೆಂದು ಬ್ಲಾಗಿಸಿ ಈ ವಿಷಯದಲ್ಲಿ ಮಾಧ್ಯಮಗಳು ವರ್ತಿಸಿದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

Tuesday, March 17, 2009

ಕಡೆಗೂ ಜ್ಞಾನೋದಯವಾಯಿತೇ ಮಾಧ್ಯಮಗಳಿಗೆ ಇದು ಪ್ರಚಾರಪ್ರಿಯ ನಿರ್ದೇಶಕನ ಕುತಂತ್ರವೆಂದು? Charlie Chaplin Statue media fiasco Update - Director Hemant Hegde Exposed


ಯಾರೂ ಕೇಳಿರದ ಫ್ಲಾಪ್ ನಿರ್ದೇಶಕನಿಗೆ ಭರ್ಜರಿ ಬಿಟ್ಟಿ ಪ್ರಚಾರ ನೀಡಿದ ನಂತರ ಅಂತೂ ಇಂತೂ ಕಡೆಗೂ ಜ್ಞಾನೋದಯವಾಯಿತು ನಮ್ಮ ಮಾಧ್ಯಮಮಿತ್ರರಿಗೆ!

(ಎಡಕ್ಕೆ: "ವಿಜಯ ಕರ್ನಾಟಕ"ದಲ್ಲಿಂದು ಪ್ರಕಟವಾದ ವರದಿ)

ಕರಾವಳಿ ಜನರಿಗೆ "ಮೂಲಭೂತವಾದಿಗಳು", "ತಾಲಿಬಾನಿಗಳು" ಎಂದೆಲ್ಲಾ ಲೇಬಲ್ ಹಚ್ಚಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಹಾಕಿದ ಈ ಮಾಧ್ಯಮ ವೀರರು ಈಗ ಚಾಕಲೇಟ್ ಕದ್ದು ಸಿಕ್ಕಿ ಬಿದ್ದ ಮಕ್ಕಳಂತೆ ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರುವುದು ಹೇಗೆಯೆಂದು ಸ್ಕೆಚ್ ಹಾಕುತ್ತಿದ್ದಾರೆ!

ಅತ್ತ ಫ್ಲಾಪ್ ನಟ ಹಾಗೂ ನಿರ್ದೇಶಕನೆನಿಕೊಂಡ ಹೇಮಂತ ಹೆಗಡೆ, ಮೀಸೆ ಬಿದ್ದರೂ ಮಣ್ಣಾಗಲಿಲ್ಲವೆಂಬಂತೆ ರಾಷ್ಟ್ರೀಯ ಮಾಧ್ಯಮಗಳಿಗೆ, ಬಿಬಿಸಿ ಬಕ್ರಾಗಳಿಗೆ ಇನ್ನೂ ಸಂದರ್ಶನ ಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ "ಸಮಾನ ಮನಸ್ಕರೊಂದಿಗೆ" ಪ್ರತಿಭಟನೆಯೂ ಮಾಡ್ತಾರಂತೆ. ಪ್ರಾಯಶ: ವಾಸ್ತವ ಮತ್ತು ಸಿನಿಮಾ ನಡುವಿನ ವ್ಯತ್ಯಾಸವೇ ಈ ಭೂಪತಿಗೆ ಮರೆತು ಹೋದಂತಿದೆ. 

ಪ್ರತಿಭಟನೆಯಲ್ಲಿ ಎಂದಿನಂತೆ ನಮ್ಮ ಹೆಮ್ಮೆಯ ಡಬಲ್ "ಪೀಠಿ"ಗಳು (ಅನಂತಮೂರ್ತಿ ಮತ್ತು ಕಾರ್ನಾಡ್), ಜಿ.ಕೆ.ಗೋವಿಂದರಾವಿನಂತಹ ಪ್ರಗತಿಪರ ಚಿಂತಕರು (ಅಂದ ಹಾಗೆ ಪ್ರಗತಿಪರ ಲೇಬಲ್ಲು ಎಲ್ಲಿ ಸಿಗುತ್ತೇ ಸಾರ್?  ತಾವು ಚಿಂತಕರಾದರೆ ಉಳಿದವರೆಲ್ಲಾ ಆಲೋಚನೆ ಮಾಡದವರೇ?) ಭಾಗವಹಿಸುತ್ತಾರಂತೆ. ಹೆಗಡೆಯವರೆ ಅವರಷ್ಟೇ ಯಾಕೆ? ವಾಟಾಳೂ ಹೇಗೂ ಕೆಲಸವಿಲ್ಲದೆ ಇದ್ದಾರೆ - ಅವರನ್ನೂ ಅವರ ಕತ್ತೆಯನ್ನೂ ಕರೆಯಿರಿ ತಮ್ಮ ಪ್ರತಿಭಟನೆಗೆ!

##############

Charlie Chaplin Statue Media Fiasco Update

Finally Kannada media realised that whole issue of Hindus protesting against "Christian" Chaplin issue is nothing but a publicity stunt by a so called Director Hemant Hegde known for his horrible acting and director of few flop films (some did not even come out of the "cans")

LEFT: Flop Kannada Movie Director Hemant Hegde now trying to get free publicity by blaming Hindu organisations on Charlie Chaplin statue fiasco.

Times of India which threw away all journalistic norms in its hurry to blame Coastal Karnataka and Hindu organisations published this small news item today.

"Vijaya Karnataka", Karnataka's highest selling newspaper has raised questions about Hemant Hegde's intentions in blaming Hindu organisations. Rough translation below:

######BEGIN TRANSLATION#######

Charlie Chaplin:A publicity stunt?

Udupi: Did Director Hemant Hegde fool whole world to gain free publicity by claiming imaginary opposition by Hindu organisations to his proposed Charlie Chaplin statue in Ottinane?

Absolutely yes, tell our sources in Kannada filmworld. The chances of this movie coming out is highly unlikely as it is due to current economic conditions prevailing in Kannada film industry. 

Stars have lost value, no one is willing to fund Hemant Hegde and even with funding movie itself has no hopes of making money due to non-existent story line and talent in the movie. In this situation, claiming that he is spending 35 Lakh Rupees for a permanent statue of Charlie Chaplin is far fetched claim of Hemant Hegde and appears to be aimed at gaining cheap publicity (and perhaps more funding) at the cost of blaming Hindu organisations.

Moreover, Hemant Hegde did not receive permission from government authorities for the statue though he claims he has permission - that permission is for shooting a movie and not erecting a permanent statue of Charlie Chaplin. 

Even if everyone agrees for statue, it is highly unlikely or next to impossible that government will give permission as said area falls under CRZ (Coastal Regulatory Zone). Even with this, Hemant Hegde boasts that he will protest in Bangalore with "progressive" activists.

######END TRANSLATION########

Sunday, March 15, 2009

Charlie Chaplin Statue Protest Prank - International, National Media fall for publicity stunt!



MANUFACTURING NEWS - TIMES OF INDIA STYLE : Unethical journalism?

Times Of India's DELHI Edition Headline says "BJP Attacks Christian Chaplin" while BANGALORE Edition carries different headline.

Why the change in Delhi Edition Headline - why blame it on BJP when protest is from locals cutting across party lines and religion? Did TOI Delhi Editor want to please certain Italian Madam to show off their anti-BJP stand?

It is well known in Karnataka that Times Of India has been carrying a campaign against State BJP govt ever since govt started implementing court order to close pubs by 11:30PM. With liquor ads being main source of income, naturally Times Of India had to support their sponsors so has been carrying campaign against police, BJP Govt and its ministers for months now.

Below are some facts about this so called "Protest against Charlie Chaplin Statue" row

******

INTERNATIONAL MEDIA FALL FOR PUBLICITY STUNT / PRANK!

Almost reminiscent of PenPricks blog expose in Goa - where a group of bloggers fooled National International media about a "prize Nazi catch" story, so called protest against Charlie Chaplin statue in Udupi District, Karnataka has now become International news with gullible Associated Press Indian bureau picking it up without knowing that whole issue is a publicity stunt / prank played by an unheard of Kannada Cinema director!

FACTS ABOUT SO-CALLED PROTEST AGAINST CHARLIE CHAPLIN STATUE near Maravante / Byndoor in Udupi District:

1. "Director" Hemant Hegde never received permission from government to install a statue in an ecologically sensitive zone which comes under CRZ (Coastal Regulatory Zone)

2. Kannada filmworld has never heard about this so called director "Hemant Hegde" till now. He has acted in minor roles but is not known as a director.

3. Kannada film budget hardly goes above 1 or 2 Crore rupees and director is claiming he wants to spend 35 Lakh rupees (30% of the budget for a statue!?) out of that for a statue simply does not seem realistic. This inflated numbers make it clear that Hemant Hegde never had any intention of constructing a huge statue, but simply wanted publicity for his film. It has become common these days to drop "Guinness Book of World Records" for silliest ventures to get cheap publicity.

4. Locals (belonging to Hindu, Muslim, Christian) leaders did not protest because Chaplin is Christian. They just asked for proof of permission when Hemant Hegde barged in with dozens of workers and started digging ground right near a temple entrance. Temple has been around for hundreds of years and is visited by people of all religions.

5. It was Hemant Hegde who abused protesting locals and showed off his "contacts in media world". It has to be noted that Hemant's local fixer is one Janardhana Maravante, a journalist and known Kannada cine journalist Girish Rao Jogi is a close friend of Hegde - and we all know how things work and word spreads when journalists are involved in a "story"

6. With no permit in hand and locals objecting to his illegal act of constructing a statue in govt land, Hemant Hegde plotted a scheme to pressurize State Govt. "Let us blame it on Hindutva!!". Piggybacking on nationwide witch hunt of "communal","radicals","Hindu talibanis" living in Coastal Karnataka, Hemant Hegde and his journalist friends concocted a story about "Hindus opposing Christian Chaplin"

As we all know to get free publicity now is very simple when you blame Hindutva for every acts.

And hey presto, this has become International News now. Hemant Hegde and his journalist friends are getting their 15 minutes of fame for a movie which has no screenplay, no actors signed up but has already received free publicity at International level!

ಬೈಂದೂರಿನ ಸೋಮೇಶ್ವರ ದೇವಳದೆದುರು ಚಾರ್ಲೀ ಚಾಪ್ಲಿನ್ ವಿಗ್ರಹವೂ, ಜೋಗಿ ಅರಮನೆಯಲ್ಲಿ ಮೈಕೆಲ್ ಜಾಕ್ಸನ್ ಮೂರ್ತಿ ಪ್ರತಿಷ್ಠಾಪನೆಯೂ!

ಚಾಪ್ಲಿನ್ ಚಿತ್ರ: ಹಾಲಿವುಡ್ ಮ್ಯೂಸಿಯಂ
ಜೋಗಿ ಫೊಟೋ ಕೃಪೆ: ಅವಧಿ ಬ್ಲಾಗ್

ಬೈಂದೂರಿನ ಸೋಮೇಶ್ವರ ದೇವಳದೆದುರು ಚಾರ್ಲೀ ಚಾಪ್ಲಿನ್ ವಿಗ್ರಹವೂ
,
ಜೋಗಿ ಅರಮನೆಯಲ್ಲಿ ಮೈಕೆಲ್ ಜಾಕ್ಸನ್ ಮೂರ್ತಿ ಪ್ರತಿಷ್ಠಾಪನೆಯೂ!

ಎಲ್ಲಾ ಮಾಧ್ಯಮ ಗೆಳೆಯರಂತೆ ಕನ್ನಡ ಬ್ಲಾಗ್ ಲೋಕ ಅರಮನೆಯ ಸ್ವಘೋಷಿತ ರಾಜ ಜೋಗಿಯವರೂ ಬೈಂದೂರಿನ ಮರವಂತೆ ಬೀಚಿನ ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪನೆ ವಿವಾದದ ಬಗ್ಗೆ ಬರೆದಿದ್ದಾರೆ (http://avadhi.wordpress.com/2009/03/14/ಜೋಗಿ-ಬರೆದಿದ್ದಾರೆ-ದಯವಿಟ್/), ದೇವಸ್ಥಾನದ ಎದುರು ಕರಾವಳಿ ಕರ್ನಾಟಕಕ್ಕೇ ಸಂಬಂಧವೇ ಇರದ ಯಾರೋ ವಿದೇಶೀ ನಟನ ಪ್ರತಿಮೆಗೆ ವಿರೋಧಿಸಿದವರನ್ನು ಇಂದಿನ ಎಲ್ಲಾ ಮಾಧ್ಯಮದವರಂತೆ "ಹಿಂದುತ್ವವಾದಿಗಳು" ಎಂದು ಲೇಬಲ್ ಹಚ್ಚಿಬಿಟ್ಟಿದ್ದಾರೆ, ಹಾಸ್ಯದ ಹೆಸರಲ್ಲಿ ಕರಾವಳಿ ಕರ್ನಾಟಕದ ಜನರ ಮೇಲೆ ಉಗಿದಿದ್ದಾರೆ, ತಮ್ಮ ಬ್ಲಾಗ್ ಪೋಸ್ಟಿಗೆ ಫ್ಯಾನ್ ಬಾಯ್ಗಳಿಂದ (Fan Bois) ಹೊಗಳಿಕೆಯನ್ನೂ ಪಡೆದಿದ್ದಾರೆ.

ಆದರೆ ಇಲ್ಲಿ ನಿಜವಾಗಿ ನಡೆದಿದ್ದೇನೆಂದು ನೋಡ ಹೊರಟರೆ ಇದೊಂದು ಪಬ್ಲಿಸಿಟಿ ಸ್ಟಂಟೆಂದು ಎಲ್ಲರಿಗೂ ಗೊತ್ತಾಗುತ್ತದೆ. ಮರವಂತೆಯಲ್ಲಿ ಚಾಪ್ಲಿನ್ ಮೂರುತಿ ಪ್ರತಿಷ್ಠಾಪನೆ ಮಾಡಲು ಹೊರಟಿರುವ ಯಾರೂ ಇದುವರೆಗೆ ಹೆಸರೇ ಕೇಳದಿರುವ "ಸಿನೆಮಾ ನಿರ್ದೇಶಕ" ಹೇಮಂತ ಹೆಗಡೆ ತನ್ನ ಖಾಸಾ ಗೆಳೆಯನೆಂದು ಜೋಗಿಯವರು ಬ್ಲಾಗಿನಲ್ಲೇ ಹೇಳಿಕೊಂಡಿದ್ದಾರೆ. ಈ ಇಡೀ ನಾಟಕ ಪ್ರಚಾರಕ್ಕಾಗಿ ಜೋಗಿ ಮತ್ತವರ ಮಾಧ್ಯಮ ಮಿತ್ರರ ಕಿತಾಪತಿಯೆಂದೂ ಕಂಡು ಬರುತ್ತಿದೆ.

ಇನ್ನು ಚಾಪ್ಲಿನ್ ವಿರೋಧದ ವಿಷಯಕ್ಕೆ ಬಂದರೆ:

೧. ಸ್ಥಳೀಯರು ಚಾಪ್ಲಿನ್ ವಿಗ್ರಹ ವಿರೋಧಿಸುತ್ತಿರುವುದು ಅದು ಸೋಮೇಶ್ವರ ದೇವಸ್ಥಾನದ ಬಳಿ ಇದೆಯೆಂದು. ಇಡೀ ಗ್ರಾಮಸ್ಥರೇ ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ - ಹಿಂದೂಗಳು ಮಾತ್ರವಲ್ಲ, ಕ್ರೈಸ್ತ ಮುಸ್ಲಿಂ ಬಾಂಧವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

೨. ಜಿಲ್ಲಾಡಳಿತ, ಸ್ಥಳೀಯ ಗ್ರಾಮ ಪಂಚಾಯಿತುಗಳಿಗೆ ಇದು ಸಿನೆಮಾ ಶೂಟಿಂಗಿಗೆ ಪ್ರತಿಮೆ ಎಂದು ಮೊದಲು ಹೇಳಿ ನಂತರ ಪರ್ಮನೆಂಟ್ ಪ್ರತಿಮೆ ಸ್ಥಾಪಿಸಲು ಈ ಭೂಪತಿಗಳು ಹೊರಟಿದ್ದರು. ಸಿನೆಮಾ ಶೂಟಿಂಗಿಗೆ ಮಾತ್ರ ಪರ್ಮಿಟ್ ಇದೆ ಇವರಲ್ಲಿ, ಶಾಶ್ವತ ಪ್ರತಿಮೆಗೆ ಅಲ್ಲವೆಂಬುದು ವಾಸ್ತವ.

೩. ಅಷ್ಟಕ್ಕೂ ಪ್ರತಿಮೆ ಸ್ಠಾಪಿಸಲು ಹೊರ್‍ಅಟಿರುವ ಪ್ರದೇಶ "ಸಿ.ಆರ್.ಜ಼ೆಡ್" (CRZ - Coastal Regulatory Zone) ಅಡಿ ಬರುವ ಪ್ರದೇಶ - ಹಾಗಾಗಿ ಜಿಲ್ಲಾಡಳಿತವೂ ಶಾಶ್ವತ ಕಟ್ಟಡ, ಪ್ರತಿಮೆ ಕಟ್ಟಲು ಕೊಡುವ ಸಾಧ್ಯತೆಯೇ ಇಲ್ಲ!

೪. ಇಂದು ಕರಾವಳಿ ಕರ್ನಾಟಕಕ್ಕೆ ಸಂಬಂಧವಿರದ ಚಾರ್ಲೀ ಚಾಪ್ಲಿನ್, ಇನ್ನು ನಾಳೆ ಮೈಕೆಲ್ ಜಾಕ್ಸನ್ / ಬಾಕ್ಸರ್ ಮೊಹಮ್ಮದ್ ಆಲಿ ಪ್ರತಿಮೆಗಳನ್ನು ವಿಧಾನಸೌಧ ಅಥವಾ ಮೈಸೂರು ಅರಮನೆಯೆದುರು ಸ್ಥಾಪಿಸುತ್ತೇವೆಯೆಂದು ಬಂದರೆ ಜನರು ಸುಮ್ಮನಿರುತ್ತಾರೆಯೇ?

೫. ಅಷ್ಟಕ್ಕೂ ನಮ್ಮ ನಾಡಲ್ಲಿ ಹಾಸ್ಯಗಾರರ ಬರ ಇದೆಯೇ? ಚಾರ್ಲಿ ಚಾಪ್ಲಿನ್ ಬದಲು ತೆನಾಲಿ ರಾಮಕೃಷ್ಣ ಪ್ರತಿಮೆ ಯಾಕೆ ಬೇಡ?

ಹೀಗೆ ವಾಸ್ತವಗಳನ್ನು ನೋಡ ಹೊರಟರೆ, ಇದು ಮತ್ತೇನೂ ಅಲ್ಲ ಚಲನಚಿತ್ರಕ್ಕೆ ಪಬ್ಲಿಸಿಟಿ ಸ್ಟಂಟೆಂಬುದು ಸ್ಪಷ್ಟವಾಗುತ್ತದೆ.

ಈವರೆಗೆ ಯಾರೂ ಕಂಡು ಕೇಳರಿಯದ ಸಿನೆಮಾದವರು ಒಂದು ದಿನ ಮರವಂತೆಗೆ ಬಂದು "ಗಿನೆಸ್ ರೆಕಾರ್ಡ್ ಚಾರ್ಲಿ ಚಾಪ್ಲಿನ್ ಪ್ರತಿಮೆ ಮಾಡುತ್ತೇವೇ"ಯೆಂದು ಹೇಳಿದಾಗಲೀ ಕರಾವಳಿಯ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸಿನೆಮಾದವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಲಂಡನಿನಿಂದ ಗಿನೆಸ್ ದಾಖಲೆ ಪುಸ್ತಕದ ಮೈಕೆಲ್ ಅನ್ನುವವರು ಬರುತ್ತಾರೆ, ವೀಡಿಯೋ ಮಾಡಲಿದ್ದಾರೆಂದೆಲ್ಲಾ ಬುರುಡೆ ಬಿಟ್ಟಾಗ "ಉಂದು ಆಪಿನಿ ಪೋಪಿನಿ ಅತ್ತು ಮಾರ್ರೇ" (ಇದು ಆಗುವುದು ಹೋಗುವುದಲ್ಲ ಮಾರಾಯರೇ) ಎಂದು ನಕ್ಕು ಅಲ್ಲೇ ಅದನ್ನು ಮರೆತು ಬಿಟ್ಟಿದ್ದರು.

ಈ ಚಿತ್ರದವರ ಸಹಾಯಕ್ಕೆ ಟೊಂಕ ಕಟ್ಟಿದ್ದ ಸ್ಥಳೀಯರಲ್ಲಿ ಜನಾರ್ಧನ ಮರವಂತೆಯೆಂಬ ಪತ್ರಕರ್ತ ಇದ್ದರೆಂಬುದು ಉಲ್ಲೇಖನೀಯ. ಕೊಲ್ಲೂರಿಗೆ ದೇವರ ಬಳಿ ಕೆಲಕಾಲ ಕಳೆಯಲು ಭಕ್ತಿಯಿಂದ ಬರುವ ದಕ್ಷಿಣ ಭಾರತದ ಸಿನಿಮಾ ಉದ್ದಿಮೆಯವರನ್ನು ಪಾಫರಾಜಿಯಾಗಿ ಹಿಂಸಿಸಿ ಅವರ ಎರಡು ನುಡಿ ಮುತ್ತುಗಳನ್ನು ಬರೆದುಕೊಂಡು "ಪತ್ರಕರ್ತ"ನೆಂದಾದವರು ಈ ಜನಾರ್ಧನ ಮರವಂತೆ.

ಆರ್ಥಿಕ ತಾಪತ್ರಯದಿಂದಲೋ ಅಥವಾ ಪ್ರತಿಮೆಗೆ ಪರ್ಮಿಶನ್ ಸಿಗುವುದು ಅಸಾಧ್ಯವೆಂದು ತಿಳಿದ ಮೇಲೆ ಕೆಲಸ ಕೈಬಿಟ್ಟ ಈ ಸಿನೆಮಾದವರು ಮುಖ ಉಳಿಸಿಕೊಳ್ಳಲು ಮೊರೆ ಹೊಕ್ಕಿದ್ದು ಇದೇ ಜನಾರ್ಧನ ಮರವಂತೆ ಮತ್ತು ಜೋಗಿಯವರನ್ನು!

ಹೇಗೂ ಕರಾವಳಿ ಕರ್ನಾಟಕದ ಜನರನ್ನು ಅನಾಗರಿಕರು, ಮೂಲಭೂತವಾದಿಗಳು, ಅಭಿವೃದ್ಧಿ ವಿರೋಧಿಗಳು, ಹಿಂದುತ್ವವಾದಿಗಳು ಎಂದೆಲ್ಲಾ ಎಲ್ಲಾ ಮಾಧ್ಯಮಗಳು ಹೀಗಳಿಸಿಯಾಗಿರುವಾಗ ಇದನ್ನೂ "ಹಿಂದುತ್ವವಾದಿಗಳ" ಮುಖಕ್ಕೆ ಹಚ್ಚಿದರೆ ಚಿತ್ರಕ್ಕೆ ಬಿಟ್ಟಿ ಪಬ್ಲಿಸಿಟಿಯೂ ದೊರಕುತ್ತದೆ, ತಮ್ಮ ಮುಖವೂ ಉಳಿಯುತ್ತದೆ, ಅತ್ತ ಸ್ಥಳೀಯರನ್ನು ಅನಾಗರಿಕರೆಂದು, ಹಿಂದುತ್ವವಾದಿಗಳೆಂದು ಹೀಗಳಿಸಲೂ ಆಗುತ್ತದೆಯೆಂದು ಸ್ಕೆಚ್ ಹಾಕಿತು ಜನಾರ್ಧನ ಮತ್ತು ಜೋಗಿಯ ಮಾಧ್ಯಮ ಪಡೆ! ತಾವೇ ಕೆಲ ಬಾಡಿಗೆ ವಿರೋಧಿಗಳನ್ನು ಕರೆಸಿ, ಅವರು ಬರುವ ಸಮಯಕ್ಕೆ ತಕ್ಕಾಗಿ ಟಿವಿ೯ ಮತ್ತಿತರ ಟಿವಿ/ಪತ್ರಕರ್ತರ ದಂಡು ಇರುವಂತೆಯೂ ನೋಡಿಕೊಂಡು ಪಬ್ಲಿಸಿಟಿಗಾಗಿ ಪ್ರತಿಭಟನೆಯೂ ನಡೆಯಿತು.

ಅಲ್ಲಾ ಸ್ವಾಮೀ, ಒಂದು ಎರಡು ಕೋಟಿ ಬಜೆಟ್ ಮೀರದ, ದಿನಬೆಳಗಾದರೆ ತೋಪೆದ್ದು ಹೋಗುವ ಕನ್ನಡ ಚಿತ್ರರಂಗದಲ್ಲಿ - ಅದೂ ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ - ಯಕ:ಶ್ಚಿತ್ ಒಂದು ಚಾರ್ಲಿ ಚಾಪ್ಲಿನ್ ಪ್ರತಿಮೆಗಾಗಿ ೩೫ ಲಕ್ಷ ಖರ್ಚು ಮಾಡಲು ಹೊರಟಿದ್ದರೆಂದರೆ ಯಾರು ನಂಬುತ್ತಾರೆ?

ಆ ಪ್ರಶ್ನೆಯನ್ನು ಬದಿಗಿಟ್ಟು, ಸರಕಾರಿ ಜಾಗದಲ್ಲಿ ಅದರಲ್ಲೂ ದೇವಸ್ಥಾನದ ಎದುರು ಒಬ್ಬ ವಿದೂಷಕನ ಪ್ರತಿಮೆ ಮಾಡಲು ಹೊರಟಿದ್ದವರು ಬಿಜಾಪುರದ ಗೋಳಗುಂಬಜಿನೆದುರು ನಮ್ಮದೇ ದ್ವಾರಕೀಶ್ ಅಥವಾ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚಿನೆದುರು ಕರ್ನಾಟಕದ ಹಾಸ್ಯಗಾರ ನರಸಿಂಹ ರಾಜು ಪ್ರತಿಮೆ ಸ್ಥಾಪಿಸಲು ಧೈರ್ಯಮಾಡಲಿ ನೋಡೋಣ?

ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರನ್ನು ಮೇಲೆ ಹೇಳಿದಂತೆ ಅನಾಗರಿಕರು, ಹಿಂದೂ ಮೂಲಭೂತವಾದಿಗಳೆಂದು ಹೀಯಳಿಸಲು ವ್ಯವಸ್ಥಿತ ಸಂಚೇ ನಡೆದಂತೆ ಕಾಣುತ್ತದೆ. ಕರಾವಳಿ ಕರ್ನಾಟಕ ಹಿಂದೆದಿಗಿಂತಲೂ ಇಂದು ಬೃಹತ್ ಉದ್ದಿಮೆಗಳನ್ನು, ವಿಶೇಷ ಆರ್ಥಿಕ ವಲಯ, ಉತ್ತಮ ದರ್ಜೆಯ ವಿದ್ಯಾಸಂಸ್ಥೆಗಳಿಂದಾಗಿ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನೂ ಕೈ ಬೀಸಿ ಕರೆಯುತ್ತಿದೆ. ಪ್ರಾಯಷ: ಈ ಆರ್ಥಿಕ ಬೆಳವಣಿಗೆ ಬಯಸದವರು ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಈ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಒಂದೇ ಸಮಧಾನದ ಸಂಗತಿಯೆಂದರೆ ಸ್ಥಳೀಯ ಮಾಧ್ಯಮಗಳು ಈ ಜಾಲಕ್ಕೆ ಬಿದ್ದಂತಿಲ್ಲ - ಇದು ಅಭಿವೃದ್ಧಿ ವಿರೋಧಿಗಳಿಗೆ ತಲೆ ಚಿಟ್ಟು ಹಿಡಿಯುವಂತೆ ಮಾಡಿದೆ - "ಕರಾವಳಿ ಕರ್ನಾಟಕದ ಮಾಧ್ಯಮಗಳೂ ಮೂಲಭೂತ ಸಂಘಟನೆಗಳ ಹಿಡಿತಕ್ಕೆ ಸಿಲುಕಿವೆ" ಯೆಂದೆಲ್ಲಾ ಮೈ ಪರಚಿಕೊಳ್ಳುತ್ತಿದ್ದಾರೆ!

ಪಬ್ಬು ಧಾಳಿ, ತೆಹೆಲ್ಕಾದ ಸೂಸನ್ ಪ್ರಾಯೋಜಿತ "ಪಿಂಕ್ ಚೆಡ್ಡಿ" ಅಭಿಯಾನ, ಕೇರಳದ ಕಮ್ಯೂನಿಸ್ಟ ಎಂ.ಎಲ್.ಎ., ತನ್ನ ಮಗಳು ಮುಸ್ಲಿಂ ಹುಡುಗನೊಂದಿಗೆ ತಿರುಗಾಡುವುದನ್ನು ನಿಲ್ಲಿಸಲು ತನ್ನ ಭಂಟರಿಗೇ ಆತನ ಮೇಲೆ ಹಲ್ಲೆ ಮಾಡಲು ಹೇಳಿ ಕಡೆಗೆ ಅದನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿದ್ದು, ೨೭ ವರ್ಷದ ಬಸ್ ಕ್ಲೀನರ್ ಸಲೀಂನಿಂದಾಗಿ ಹದಿಹೆರೆಯದ ಅಶ್ವಿನಿಯ ಆತ್ಮಹತ್ಯೆಯನ್ನೂ ಹಿಂದು ಸಂಘಟನೆಗಳ ಮೇಲೆ ಹೇರಿದ್ದ ಘಟನೆಗಳ ಸಾಲಿಗೇ "ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ಹಿಂದೂ ಸಂಘಟನೆಗಳ ಅಡ್ಡಿ"ಯೆಂಬ ಪ್ರಕರಣವೂ ದಾಖಲಾಗಿದೆ.

ಪುಂಖಾನುಪುಂಖವಾಗಿ ಬ್ಲಾಗುಗಳು (ಇಲ್ಲಿದೆ ನೋಡಿ ಇನ್ನೊಬ್ಬ ಪತ್ರಕರ್ತನ ಬ್ಲಾಗು - ಚುರುಮುರಿ ಇಂಗ್ಲಿಷ್ ಬ್ಲಾಗ್ ಪ್ರಕಾರ ದೇವಸ್ಥಾನದ ಎದುರು ಚಾಪ್ಲಿನ್ ಪ್ರತಿಮೆ ವಿರೋಧಿಸುವವರು ಹಿಂದೂ ಜೋಕರುಗಳಂತೆ, ಹಿಂದೂ ಡಿಕ್ಟೇಟರುಗಳಂತೆ), ಪತ್ರಿಕೆಗಳು, ಟಿವಿ ಮಾಧ್ಯಮಗಳು ಕರಾವಳಿ ಕರ್ನಾಟಕದ ಜನರು ಅನಾಗರೀಕರೆಂದು ಈ ಚಾಪ್ಲಿನ್ ಘಟನೆಯ ಮೂಲಕ ಹೀಯಳಿಸಲು, ವಾಸ್ತವ ಬಚ್ಚಿಡಲು ಜೋಗಿ ಮತ್ತು ಜನಾರ್ಧನ ಸಿನಿ ಪತ್ರಕರ್ತ ಜೋಡಿ ಸದ್ಯಕ್ಕೆ ಯಶಸ್ವಿಯಾಗಿದೆ.

ಜೋಗಿ ಮತ್ತವರ ಸಿನಿಮಾ ಮಿತ್ರರು ತಮ್ಮ ಮನೆಯಲ್ಲಿ ಅಥವಾ ಸ್ವಂತ ಜಾಗದಲ್ಲಿ ಚಾಪ್ಲಿನ್ ಅಥವಾ ಮೈಕೆಲ್ ಜಾಕ್ಸನ್ ಮೂರ್ತಿ ಸ್ಥಾಪಿಸಲಿ, ಯಾರೂ ಬೇಡವೆನ್ನುವುದಿಲ್ಲ. ಆದರ ಸರಕಾರೀ ಜಾಗದಲ್ಲಿ, ಅದರಲ್ಲೂ ರಮಣೀಯ ಕಡಲತಡಿಯಲ್ಲಿ ಸಂಬಂಧವೇ ಇಲ್ಲದ ನಟನ ಪ್ರತಿಮೆ ಸ್ಥಾಪನೆ ಆಗಬೇಕು, ಅದನ್ನು ವಿರೋಧಿಸುವವರು ಮೂಲಭೂತವಾದಿಗಳು, ತಾಲಿಬಾನಿಗಳೆಂದೆಲ್ಲಾ ಆರೋಪ ಮಾಡುವ ಪ್ರವೃತ್ತಿಯನ್ನು ಖಂಡಿಸಬೇಕಾಗಿದೆ.

Note: ಗಮನಿಸಬೇಕಾದ ಸಂಗತಿಯೆಂದರೆ ಮಾಧ್ಯಮ ಸ್ವಾತಂತ್ರದ ಬಗ್ಗೆ ಘಂಟೆಗಟ್ಟಳೆ ಕೊರೆಯುವ ಪತ್ರಕರ್ತರ ಬ್ಲಾಗುಗಳಲ್ಲಿ ಅವರ ಅಭಿಪ್ರಾಯಕ್ಕೆ ಭಿನ್ನವಾದ ಕಮೆಂಟ್ ಹಾಕಿ ನೋಡಿ? ನಾನು ಜೋಗಿಯವರ ಬ್ಲಾಗಿಗೆ ಮೇಲಿನ ಪ್ರಶ್ನೆಗಳನ್ನು ಕೇಳಿ Respectful ಆಗಿಯೇ ಕಮೆಂಟಿಸಿದ್ದೆ - ಊಹೂಂ, ಕಮೆಂಟ್ ಪಬ್ಲಿಶ್ ಮಾಡಿಲ್ಲ ಜೋಗಿ ಮಹಾಶಯರು.

ಪ್ರಾಯಷ: ಜೋಗಿಯವರ ಅರಮನೆಗೆ ಹೊಗಳು ಭಟರಿಗೆ ಮಾತ್ರ ಪ್ರವೇಶ - ಹಿಂದಿನ ರಾಜರ ಕಾಲದಂತೆ!