Wednesday, August 26, 2009

ಬ್ಲಾಗು ಕಮೆಂಟು ಜಂಜಾಟ - ಹೋಗಿ ಬನ್ನಿಯಲ್ಲ, ಹೋಗಿ ಹೋಗಿ ಜೋಗಿ..

ಕನ್ನಡ ಬ್ಲಾಗೋಸ್ಫೀಯರಲ್ಲಿ ಅನಾಮಿಕ ಬ್ಲಾಗುಗಳ ವಿರುದ್ಧ ಟೀ ಕಪ್ಪಿನಲ್ಲಿ ಚಂಡಮಾರುತದಂತೆ (Storm in a tea cup) ಅಲ್ಲೋಲ ಕಲ್ಲೋಲವುಂಟಾಗಿದೆ. ಬ್ಲಾಗುಗಳ ಹಿಂದಿರುವವರು ಯಾರು, IP Address ಟ್ರಾಕ್ ಮಾಡುವುದು (Proxy Serverಗಳ ಬಗ್ಗೆ ಕೇಳಿದ್ದಾರೋ ಇಲ್ಲವೋ ಈ Modern ಸೈಬರ್ Sherlock Homes ಗಳು) ಇವುಗಳ ಕುರಿತೇ ಇಡೀ ದಿನ ಚಿಂತಿಸುತ್ತಾ ಆಕಾಶವೇ ತಲೆ ಮೇಲೆ ಬಿದ್ದಂತೆ ಕುಳಿತಿದೆ ಕನ್ನಡ ಬ್ಲಾಗಿನ ವರ್ಗವೊಂದು.

ಕನ್ನಡ ಬ್ಲಾಗ್ ಲೋಕದ ಜನಪ್ರಿಯ ಜೋಗಿಯವರು ಬ್ಲಾಗು ಬಂದು ಮಾಡುತ್ತಾರಂತೆ, ಅವರಿಗೆ ಬುದ್ಧಿ ಹೇಳಬೇಕೆಂದೆಲ್ಲಾ ತಮ್ಮ fan boisಗಳಿಂದ ಹೇಳಿಸಿಕೊಳ್ಳುತ್ತಿದ್ದಾರೆ.

ಜೋಗಿಯವರು ಅದ್ಭುತ ಬರಹಗಾರ ಮತ್ತು ಜನಪ್ರಿಯ ಬರಹಗಾರ ಮತ್ತು ಬ್ಲಾಗಿಗನೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಈ permanent victim complex ಗೊಳಗಾಗಿ ಪದೇ ಪದೇ ಬ್ಲಾಗ್ ಬಂದ್ ಮಾಡುವುದು, ಬ್ಲಾಗ್ ಡಿಲೀಟ್ ಮಾಡುವುದು, ಅವರ fan boiಗಳು ಸಾರ್ ಬ್ಲಾಗ್ ಬಂದ್ ಮಾಡಬೇಡಿಯೆಂದು ದಮ್ಮಯ್ಯ ದಕ್ಕಯ್ಯ ಹಾಕುವುದರ ಮರ್ಮ ಅರಿವಾಗುತ್ತಿಲ್ಲ.

ಕೆಲ ಸಮಯದ ಹಿಂದೆ ಬೈಂದೂರಿನಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆಗೆ ವಿರೋಧವುಂಟಾದಾಗ ತಾನು ದಕ್ಷಿಣ ಕನ್ನಡದವನೆಂಬ ಒಂದೇ ಕಾರಣಕ್ಕೆ ತಾನು ಕರಾವಳಿಯವನೆಂದು ಹೇಳಲು ನಾಚಿಕೆಯಾಗುತ್ತದೆಂದು ಗೋಳೋ ಎಂದು ಅತ್ತು, ಏನೇನೋ ಬರೆದು ತನ್ನ fan boisಗಳೆದುರು ಹೀರೋ ಆಗಿ ತನ್ನ ಗೆಳೆಯ ಹೇಮಂತ ಹೆಗಡೆಯ ಚಿತ್ರಕ್ಕೆ ಪುಕ್ಕಟೆ ಪ್ರಚಾರವನ್ನು ಜೋಗಿ ಒದಗಿಸಿದ್ದು ಹೇಗೆ ಮರೆಯಲು ಸಾಧ್ಯ ಹೇಳಿ? ಅದೇ techniqueನ್ನು ಪುನ: ಪುನ: ಉಪಯೋಗಿಸಿ ತನ್ನ ಹೆಸರು ಪ್ರಚಾರದಲ್ಲಿಡಲು ಈಗ ಈ ಬ್ಲಾಗ್ ಲೋಕಕ್ಕೆ ವಿದಾಯವೆಂಬ ನಾಟಕ ಬೇಕಿತ್ತಾ?

ಅಲ್ಲಾ ಅಪ್ಪ ಅಮ್ಮ ಇಲ್ಲದ ಅನಾಮಿಕ ಕಮೆಂಟುಗಳಿಗೆ ಇಷ್ಟು ತಲೆ ಬಿಸಿ ಮಾಡುವ ಇವರು ಈ ಮೇಲ್ ನಲ್ಲಿ ಬರುವ Spamಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೋ? ಗುರ್ತವಿಲ್ಲದವರು ಈ ಮೇಲ್ ಮಾಡಿದರೆಂದು ಹುಚ್ಚು ಹಿಡಿದು ಹೋಗುತ್ತಾರೋ? ಯಾರೋ ನೈಜೀರಿಯಾದವನು ಈ ಮೇಲ್ ಕಳಿಸಿದಾ ಅಂತಾ ಈ-ಮೇಲ್ ಅಕೌಂಟುಗಳನ್ನೇ ಬಂದ್ ಮಾಡುತ್ತಾರಾ ಇವರು? ಒಂದು ಸಿಂಪಲ್ DELETE ಬಟನ್ ಒತ್ತುವುದಕ್ಕೇಕೆ ನಾಚಿಕೆ ಇವರಿಗೆ? ನಿಜಕ್ಕೂ DELETE ಬಟನ್ ಒತ್ತುವುದು ಇಷ್ಟು ಕಷ್ಟವೆಂದು ತಿಳಿದಿರಲಿಲ್ಲಾ.

ಸರಿಯಾಗಿ storm in the tea cup ಇದು. ಕಳೆದ ವಾರದ ಜಿ.ಎನ್.ಮೋಹನರ "ಮೀಡಿಯಾ ಮಿರ್ಚಿ" ಅಂಕಣಕ್ಕೆ ನಾನು ಪ್ರತಿಕ್ರಿಯೆಯಲ್ಲಿ ಹೇಳಿದಂತೆ (ಇಡೀ ಪ್ರತಿಕ್ರಿಯೆ ಕೆಳಗಿದೆ), ಕಮೆಂಟುಗಳ ಬಗ್ಗೆ, ಬ್ಲಾಗುಗಳ ಬಗ್ಗೆ ಇದ್ದಕಿದ್ದಂತೆ ಕಿಡಿಕಾರಲು ಮೂಲಕಾರಣ ಕನ್ನಡ ಮಾಧ್ಯಮ ಲೋಕವನ್ನು ವಿಶ್ಲೇಷಿಸುವ ಕೆಲ ಬ್ಲಾಗುಗಳು ಜನ್ಮ ತೆಳೆದದ್ದು. ಯಾವಾಗಲೂ ಇತರರ ಬಗ್ಗೆ ಕಮೆಂಟು ಮಾಡುವ ಕೆಲ ಸ್ಥಾಪಿತ ಮಾಧ್ಯಮ ಮಿತ್ರರಿಗೆ ಈ ಬ್ಲಾಗುಗಳು ಅಪಥ್ಯವಾದಂತಿದೆ. ಆ ಬ್ಲಾಗುಗಳು ಎತ್ತಿರುವ ವಿಷಯಗಳ ಬಗ್ಗೆ ಚರ್ಚೆ ಮಾಡುವ ಬದಲು ಬ್ಲಾಗ್ ಹಿಂದಿರುವವರು ಯಾರು, ಅವರ ಉದ್ಧೇಶವೇನು ಮುಂತಾದ ಅನಗತ್ಯತ ವಿಷಯಗಳ ಬಗ್ಗೆಯೇ ಚರ್ಚೆಯನ್ನು misdirect ಮಾಡಲು ಕನ್ನಡದ ಕೆಲ ಹಿರಿ ಮಾಧ್ಯಮ ಮಿತ್ರರು ಟೊಂಕ ಕಟ್ಟಿದಂತಿದೆ.

****
ನಾನು ಯಾರು? ನಾನು ನಾನೇ?

ಡಿ.ಪಿ.ಸತೀಶ್ ಎಂಬ CNN-IBNನವರು ನನ್ನ "ರಾಕೇಶ್ ಮಥಾಯಸ್" ಹೆಸರಿನ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ. ನಾನು ನಾನೆಂದು ಹೇಗೆ ತೋರಿಸಲಿ ಇಂಟರನೆಟ್ಟಲ್ಲಿ? ಅಥವಾ ಕೆಲ ಮಿತ್ರರು ಮಾಡುವಂತೆ Shaadi.comನಲ್ಲಿ ನಕಲಿ ಫೊಟೋ ಹಾಕುವಂತೆ ಯಾರದೋ ಫೊಟೋ ನನ್ನದೆಂದು ಹಾಕಿದರೆ satisfy ಆಗುತ್ತಾರೇನೋ? ಇದೆಲ್ಲಾ ಮಾಧ್ಯಮ ಲೋಕದ ಒಂಥರಾ ಗರ್ಭ ಗುಡಿ ಸಂಸ್ಕೃತಿಯಂತೆ ಕಾಣುತ್ತದೆ. ಹಿಂದೆಲ್ಲಾ ಜನಿವಾರವಿದ್ದರೂ ಬ್ರಾಹ್ಮಣರೆಂದು ಪ್ರೂವ್ ಮಾಡಲು ಮಠಗಳಲ್ಲಿ ಶ್ಲೋಕ ಹೇಳಿ ತಮ್ಮ ಸಂಸ್ಕಾರ prove ಮಾಡಬೇಕಿತ್ತಂತೆ - ಈಗ ಬ್ಲಾಗ್ ಲೋಕದಲ್ಲಿ ಇಂತಹದೇ system ಬಂದರೂ ಆಶ್ಚರ್ಯವಿಲ್ಲವೇನೋ?

ಇದೇ ಸತೀಶ್ ಯಾವುದೋ ಇನ್ನೊಂದು ಬ್ಲಾಗ್ ಬಗ್ಗೆ ಬಡಬಡಿಸಿದ್ದಾರೆ - ಅವರೂ victim ಅಂತೆ. ನಾನು ಅದನ್ನು Churumuriಯಲ್ಲಿ ಓದಿದ ನೆನಪು - ಲಿಂಕ್ ಇಲ್ಲಿದೆ ನೋಡಿ - ಅಲ್ಲಿನ ಕಮೆಂಟುಗಳನ್ನು ಓದಿದರೆ ತಾನು ಹೆಣೆದ ಬಲೆಯಲ್ಲೇ ಸಿಕ್ಕಿಬಿದ್ದು ಈ D.P.Satish expose ಆಗಿರುವುದನ್ನು ನೋಡಬಹುದು. ಇನ್ನೂ ಸ್ವಲ್ಪ Google ಮಾಡಿ ನೋಡಿದರೆ ಇದೇ D.P.Satish ಇನ್ನೊಂದು ಬ್ಲಾಗಿಗೆ threat ಹಾಕಿದನ್ನೂ ನೋಡಿ - ಆ ಬ್ಲಾಗಿಗ ಮಾಡಿದ ತಪ್ಪು D.P.Satish ವರದಿಯಲ್ಲಿನ ತಪ್ಪು ತೋರಿಸಿದು. ಆ ಬ್ಲಾಗಿಗ ಯಾರೆಂದು ಗೊತ್ತಿಲ್ಲ - ಆದರೆ CNN-IBN, D.P.Satish threat ಗಳಿಗೆ ಹೆದರದೆ ತನ್ನ stanceಗೆ ನಿಂತದ್ದು ಅಭಿನಂದನೀಯ. ವಿವರಗಳಿಗೆ ಇಲ್ಲಿ ನೋಡಿ - CNN-IBN Reporter D.P.Satish threatens blogger for exposing factual error in his report. “Freedom of media” applies only to Main Stream Media and not bloggers?

D.P.Satish ಈಗ ಏನೇ boast ಮಾಡಬಹುದು, ಆದರೆ ಆ ಬ್ಲಾಗಿಗ ಸತೀಶರ ಅಥವಾ CNN-IBN threat ಗೆ ಮಣಿದಂತೆ ಕಾಣಲಿಲ್ಲ.

ಅನಾಮಧೇಯ ಬ್ಲಾಗ್ ವಿರುದ್ದ ಸಮರವಾಯಿತು, ಈಗ ನಾನು ನನ್ನ ನಿಜ ಹೆಸರು ಹಾಕಿ ಬ್ಲಾಗ್ ನಡೆಸುತ್ತಿದ್ದರೂ ಅದೂ ಸಾಲದಂತೆ! ತಮ್ಮ ಖುಷಿ ಪಡೆಸಲು ಬೇರೇನು ಮಾಡಬೇಕು ಸಾರ್? ನನ್ನ ಹೆಸರು ಜೊತೆ Son Of, Brother Of, Home Address, Office Address, Phone Number, Religion, Church, ID card scan, ನಾನು ವಾಸವಿರುವ ಹಾಸ್ಟೆಲ್ ರೂಮ್ ನಂಬರ್ರು ಕೊಡಬೇಕಾ? ತಮ್ಮ ಬ್ಲಾಗಲ್ಲಿ ಅದೆಲ್ಲಾ ಹಾಕಿದ್ದೀರಾ? ಅಥವಾ ನಾನು ತಮ್ಮಂತೆ big name ಕಂಪೆನಿಯಲ್ಲಿ ಕೆಲಸದಲಿಲ್ಲವೆಂದ ಮಾತ್ರಕ್ಕೆ ಈ ಎಲ್ಲಾ requirementಆ? Talk about double standards.

****

ಶ್ರೀ ಜಿ.ಎನ್.ಮೋಹನರ ಕಳೆದ ವಾರದ "ಮೀಡಿಯಾ ಮಿರ್ಚಿ" ಅಂಕಣಕ್ಕೆ ನನ್ನ ಪ್ರತಿಕ್ರಿಯೆ ಕೆಳಗಿದೆ. ಬೇಸರದ ಸಂಗತಿಯೆಂದರೆ ನಾನೆತ್ತಿರುವ ವಿಷಯಗಳ ಬಗ್ಗೆ ಚರ್ಚಿಸುವ ಬದಲು ಮೋಹನರು ನಾನು ಯಾರು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಮತ್ತು ವಿಷಯಕ್ಕೇ ಸಂಬಂಧವೇ ಇಲ್ಲದ D.P.Satish ರ ಕಮೆಂಟನ್ನು replyಯಾಗಿ ಪೋಸ್ಟ್ ಮಾಡಿದ್ದಾರೆ. ಕಳೆದ ವಾರ ತನ್ನ ಕಾಲಮಿನಲ್ಲಿ ನನ್ನ ಹೆಸರನ್ನು ಉಪಯೋಗಿಸುವಾಗ ಅದೇಕೆ ಹೊಳೆಯಲಿಲ್ಲವೋ? ಏನೇ ಇರಲಿ ಈ ದೊಡ್ಡ ಕಂಪೆನಿಗಳ ದೊಡ್ಡ ಜನರ ಕೆಲ ವಿಷಯ ಅರ್ಥವಾಗುತ್ತಿಲ್ಲ - ಪ್ರಾಯಶ: ಕಾಲ ಕಳೆದಂತೆ ಕಲಿಯುತ್ತೇನೇನೋ.

ನಿಜಾ ಹೇಳಬೇಕೆಂದರೆ ತಮ್ಮ ಈ ಅಂಕಣ ಪ್ರಾಯಷ: "ವಿಜಯ ಕರ್ನಾಟಕ"ದ ಸಾವಿರಕ್ಕಿಂತಲೂ ಕಡಿಮೆ ಓದುಗರಿಗೆ ಅರ್ಥವಾಗಿರಬಹುದೇನೋ? ತಟ್ಟಿರಬಹುದೇನೋ? ಒಮ್ಮೆ ತಮ್ಮ ಬ್ಲಾಗ್ ಗೆಳೆಯರ, "ಅವಧಿ"ಯ ಪರಿಮಿತಿಯಿಂದ ಹೊರಬಂದು ತಮ್ಮದೇ ಅಂಕಣವನ್ನು ಇನ್ನೊಮ್ಮೆ ಓದಿ.

ವಿಜಯ ಕರ್ನಾಟಕದ ಓದುಗರಾದ ರಾಯಚೂರಿನ ನಿರುದ್ಯೋಗಿ, ಬಳ್ಳಾರಿಯ ಗಣಿ ಕೊರೆಯುವ ಲಾರಿ ಡ್ರೈವರ್, ವಿಟ್ಲದ ಅಡಿಕೆ ಕೃಷಿಕ, ಬೆಂಗಳೂರಿನ ದರ್ಶಿನಿಯ ಅಡುಗೇ ಭಟ್ಟ, ವಿಧಾನಸೌಧದ ಜವಾನ ತಾವೆಂದು ಭಾವಿಸಿ ಒಮ್ಮೆ ಓದಿ - ಅಂಕಣದ ತಲೆಬುಡ ಅಥವಾಯಿತೇ? ಊಹೂಂ? ಬ್ಲಾಗ್ ಲೋಕವೇ ಸರ್ವಸ್ವವೆಂದು ತಿಳಿದಿರುವ ಜನರಿದ್ದಾರೆ ನಿಜ, ಆದರೆ "ವಿಜಯ ಕರ್ನಾಟಕ" ಒಂದು ಸರ್ವೇ ಮಾಡಿದರೆ ಹೆಚ್ಚೆಂದರೆ ೧೦% ಓದುಗರಿಗೆ ಬ್ಲಾಗ್ ಅಂದರೇನೆಂದು ತಿಳಿದಿರಬಹುದೇನೋ? ಮತ್ತದರಲ್ಲಿ ೧-೫% ಜನರು ರೆಗ್ಯುಲರ್ರಾಗಿ ಕನ್ನಡ ಬ್ಲಾಗುಗಳನ್ನು ಓದಬಹುದೇನೋ?

ತಾವೆತ್ತಿದ ವಿಷಯಗಳೆಲ್ಲಾ ಗಂಭೀರವಾದವು ಮತ್ತು ಚರ್ಚೆಗೆ ಅರ್ಹವೆಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಾ ಬ್ಲಾಗಿಗರೂ ಕಮೆಂಟುಗಳ ಕಿರಿಕಿರಿ ಎದುರಿಸಿದವರೇ. ಆದರೆ ಇಡೀ ಮಾಧ್ಯಮ ಪ್ರಪಂಚದಲ್ಲಿ ಬ್ಲಾಗುಗಳ penetration ಅದರಲ್ಲೂ ಕರ್ನಾಟಕದಲ್ಲಿ negligible. "ಕನ್ನಡ ಬ್ಲಾಗಿಗರ" ಕೂಟವನ್ನೇ ತೆಗೆದುಕೊಳ್ಳಿ - ಎಷ್ಟು chain mail ಕಳಿಸಿದರೂ, ರವಿ ಹೆಗಡೆಯಂತವರು ಮತ್ತಿತರು ಪತ್ರಿಕೆಗಳಲ್ಲಿ ಬರೆದು ಪ್ರಚಾರ ಮಾಡಿದರೂ membership ಪುಟುಗೋಸಿ ೧೭೦೦ ದಾಟಿಲ್ಲ. ಇದು ಐ.ಟಿ. ಕ್ಯಾಪಿಟಲಿರುವ ಕರ್ನಾಟಕದ ಕತೆ. ಬ್ಲಾಗುಗಳಿಂದ ಕ್ರಾಂತಿ ಸಾಧಿಸುತ್ತೇವೆಯೆಂಬುದು ನಮ್ಮ ಮಟ್ಟಿಗೆ ಭ್ರಮೆಯಷ್ಟೇ. (ರವಿ ಕೃಷ್ಣಾ ರೆಡ್ಡಿಯ ಇಲೆಕ್ಶನ್ campaign ನೆನಪಿಸಿಕೊಳ್ಳಿ)

ಹೀಗಿರುವಾಗ ಬ್ಲಾಗುಗಳು, ಕಮೆಂಟುಗಳ ಬಗ್ಗೆಯೇ ಎರಡೆರಡು ಅಂಕಣಗಳ ಅಗತ್ಯವಿತ್ತೇ? ಮಾಧ್ಯಮಲೋಕದಲ್ಲಿದ್ದವರು ಮೊದಲಿನಿಂದಲೂ ಅನಾಮಧೇಯರ ಕಿರಿಕಿರಿ ಎದುರಿಸಿದ್ದಾರೆ - ಪತ್ರಿಕೆಗಳಿಗೆ ಪ್ರತಿನಿತ್ಯ ಹೆಸರು, ಊರಿಲ್ಲದ ಅಂಚೆ ಬರುತ್ತವೆ, ಸೀದಾ ಕಸದ ಬುಟ್ಟಿಗೆ ಹೋಗುತ್ತವೆ. ಇದೇ attitude ನಮ್ಮ ಬ್ಲಾಗರುಗಳಿಗೇಕಿಲ್ಲ? ಯಾಕೋ ಕಮೆಂಟಿಗರ ಬಗ್ಗೆ care ತೋರಿಸುವುದು ಜಾಸ್ತಿಯಾಯಿತೇನೋ ಎಣಿಸುತ್ತದೆ ಅಥವಾ ಕನ್ನಡ ಬ್ಲಾಗಿಗರು extra sensitive ಆಗಿಬಿಟ್ಟಿದ್ದಾರೇನೋ?

ಎಲ್ಲಾ ಬದಿಗಿಟ್ಟು ನೋಡಿದರೆ ತಮ್ಮ ಅಂಕಣಗಳ ಮತ್ತು ಕೆಲ ಕನ್ನಡ ಬ್ಲಾಗಿಗರ ಈ ಸಡನ್ನಾಗಿ ಕಮೆಂಟುಗಳ ಬಗೆಗಿನ concernನ target ಯಾರೆಂಬುದು ಸ್ಪಷ್ಟ. ಮಾಧ್ಯಮಗಳನ್ನು ವಿಷ್ಲೇಶಿಸುವ, ತಪ್ಪುಗಳನ್ನು ಎತ್ತಿ ತೋರಿಸುವ ಎರಡು ಮೂರು ಬ್ಲಾಗುಗಳು ಶುರುವಾದದ್ದೇ ಕೆಲ mainstream mediaದವರಿಗೆ ಕಿರಿಕಿರಿಯಾದಂತಿದೆ. ಮಾಧ್ಯಮದಲ್ಲಿರುವವರು ರಾಜಕಾರಣಿಗಳಂತೆ public eyeಯಲ್ಲಿರುವವರೇ. ಇದುವರೆಗೆ ಅದನ್ನು ಮರೆತು ಯಾವುದೇ ಜವಾಬ್ದಾರಿಯಿಲ್ಲದೆ, accountability ಇಲ್ಲದೆ ಕೆಲ ಕನ್ನಡ ಮಾಧ್ಯಮ ಮಿತ್ರರು ಈ ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಿಸಿರುವುದನ್ನು ಈಗ ಬ್ಲಾಗುಗಳು ಅವನ್ನು ಎತ್ತಿ ತೋರಿಸುತ್ತಿರುವುದು ಕೆಲವರಿಗೆ ಅಪಥ್ಯವಾದಂತಿದೆ.

ಅದೇನೋ ಇಂಗ್ಲಿಷಿನಲ್ಲಿದೆಯಲ್ಲ - If you can't take the heat, get out of the kitchen - ಕಮೆಂಟಿಗರ ಕಿರಿಕಿರಿ ಬೇಡವೆಂದರೆ Invite Only ಬ್ಲಾಗ್ ಮಾಡಿ, ಆದರೆ ಅದು ಇಡೀ ಇಂಟರ್ನೆಟ್ಟು ಮಾಧ್ಯಮದ openness, information sharing conceptಗೆ ವಿರುದ್ಧವೆಂಬುದೂ ತಿಳಿದಿರಲಿ.

"ಮೀಡಿಯಾ ಮಿರ್ಚಿ" ಅಂಕಣವನ್ನು ವಿಶ್ವೇಶ್ವರ ಭಟ್ಟರು introduce ಮಾಡುವಾಗ ಹೇಳಿರುವುದೇನೋ, ತಾವೀಗ ಬರೆಯುತ್ತಿರುವುದೇನೋ! ನಿಜ, ಪತ್ರಿಕಾ ಅಂಕಣದ word count ನಂತಹ ಕಟ್ಟು ಪಾಡುಗಳಿವೆ. ಆದರೆ ಎಲ್ಲೋ ತಮ್ಮ ಅಂಕಣ ಸೀಮಿತ ಪ್ರಪಂಚದಿಂದ ಹೊರಬಂದಂತಿಲ್ಲ. ತಮ್ಮ ಈ ಎರಡು ಅಂಕಣಗಳು ತಮ್ಮ ಅಂತರಂಗ ಕೆಲ ಮಿತ್ರರಿಗೆ, ಜೈ ಹೋ ಎನ್ನುವವರಿಗೆ ಮತ್ತು ೧೭೦೦ ಕನ್ನಡ ಬ್ಲಾಗಿಗರಿಗೆ ಅರ್ಥವಾಗಬಹುದೇ ಹೊರತು ಕರ್ನಾಟಕದ ನಂ.೧ ಪತ್ರಿಕೆಯ ಲಕ್ಷಾಂತರ ಓದುಗರಿಗೆ ತಾವು ಬರೆದಿರುವುದೇನೆಂದು ತಿಳಿಯದಿರುವ ಸಾಧ್ಯತೆಗಳೇ ಜಾಸ್ತಿ.

ನನ್ನ ಈ honest opinionನಿಂದ ಯಾರಿಗಾದರೂ ಬೇಜಾರಾದರೆ ದಯವಿಟ್ಟು ಕ್ಷಮೆಯಿರಲಿ.

****

Sunday, August 16, 2009

ನರೇಂದ್ರ ಮೋದಿಗೆ ವೀಸಾ ಕೊಡಲ್ಲ ಎಂದು ಅಮೆರಿಕಾ ಹೇಳಿದಾಗ ಕುಣಿದ ಮಾಧ್ಯಮಗಳು ಶಾರೂಖ್ ಖಾನ್ ಎಂದಾಗ ಬೊಬ್ಬೆ ಹಾಕುವರೇಕಯ್ಯಾ?Shahrukh Khan - publicity stunt?


ಎಂಥಹಾ ವಿಪರ್ಯಾಸ ನೋಡಿ. ಇಡೀ ದೇಶವೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವಾಗ ಎಲ್ಲಾ ಮಾಧ್ಯಮಗಳಲ್ಲಿ ಮಾತ್ರ ಶಾರೂಖ್ ಖಾನ್ ಅಮೆರಿಕ ವಿಮಾನ ನಿಲ್ದಾಣ ತಾಪತ್ರಯದ್ದೇ ಸುದ್ದಿ.

ದಾಸ್ಯದ ಸಂಕೋಲೆ ಕಿತ್ತೆಗೆದ ದಿನವನ್ನು ಸಂಭ್ರಮಿಸುವ ಬದಲು ಮಾಧ್ಯಮಗಳಲ್ಲಿ ಶಾರುಖ್ ಖಾನ್ "ಅಯ್ಯೊ ಮಯ್ಯೊ ಅಮೆರಿಕಾದವರು ನನ್ನನ್ನು ಕಡೆಯಾಗಿ ನೋಡಿಕೊಂಡ"ರೆಂಬುದೇ Breaking News. ಇದೇ ಮಾಧ್ಯಮಗಳು ನರೇಂದ್ರ ಮೋದಿಗೆ ಅಮೆರಿಕಾ ಸರಕಾರ ವೀಸಾ ಕೊಡದಿದ್ದಾಗ ಅಮೆರಿಕಾವೇ ನಮ್ಮ ಆಪತ್ಬಾಂಧವನೆಂದು ವರ್ಣಿಸಿದ್ದು ನೆನಪಿಸಿಕೊಳ್ಳಿ. ಸ್ವತ: ಭಾರತ ಸರಕಾರವೇ (ಕಾಂಗ್ರೆಸ್ ಸರಕಾರವಾಗಿದ್ದರೂ) ಮೋದಿಗೆ ಬೆಂಬಲವಾಗಿ ನಿಂತಿತ್ತು ಅಂದು. ಆದರೆ ಮಾಧ್ಯಮಗಳಿಗೆ ಮೋದಿಗೆ ವೀಸಾ ಕೊಡದಿದ್ದದ್ದು ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮೂಲಕ ಆರಿಸಿ ಬಂದ ಮೋದಿಯನ್ನು ಬೆಂಬಲಿಸಿದ ಜನರಿಗೆ ಮಾಡಿದ ಅಪಮಾನವೆಂದು ಕಂಡು ಬರಲಿಲ್ಲ.

ಇದೇ ಮಾಧ್ಯಮಗಳಿಂದು ಅಮೆರಿಕಾಕ್ಕೆ ಪದೇ ಪದೇ "ಶೋ" ನೆಪದಲ್ಲಿ ಭೇಟಿ ನೀಡಿ ಕೋಟ್ಯಾಂತರ ರೂಪಾಯಿ ಕಮಾಯಿಸುವ ಶಾರುಖನ್ನು ಅಮೆರಿಕಾ ವಲಸೆ ಅಧಿಕಾರಿಗಳು ಪ್ರಶ್ನಿಸಿದ್ದನ್ನೇ ಇಡೀ ಭಾರತದ ಜನತೆಗೆ ಆದ ಅವಮಾನವೆಂದು ಬೊಬ್ಬೆ ಹಾಕುತ್ತಿವೆ.

ಅಮೆರಿಕಾಕ್ಕೆ ಹೋಗಿ ಬರುವ ನನ್ನ ಸಾಫ್ಟವೇರ್ ಮಿತ್ರರ ಪ್ರಕಾರ ಈ ೨ ಘಂಟೆ ಪ್ರಶ್ನೆ ಕೇಳಿರುವುದು ಪ್ರಾಯಷ: ಸರಿಯಾದ ವೀಸಾ ಇದೆಯೋವೆಂದು ತಿಳಿಯಲು - ಅಂದರೆ ವಿಸಿಟರ್ ವೀಸಾ ಅಥವಾ ಬಿಸಿನೆಸ್ ವೀಸಾ ಅಥವಾ models actors ಗಳಿಗಿರುವ ವೀಸಾ ಕೆಟಗೆರಿಯೋವೆಂದು ತಿಳಿಯಲು. ಉದಾಹರಣೆಗೆ ವಿಸಿಟರ್ ವೀಸಾದಲ್ಲಿ ಹೋದರೆ ಶಾರುಖ್ ಹಣಗಳಿಸುವಂತಿಲ್ಲ. ಸೋ ಅವರ ಪ್ರಕಾರ ಏನೋ bureaucratic / paperwork problem ಆಗಿರಬಹುದೇ ವಿನ: ಬೇರೇನೂ ಅಲ್ಲ. ಶಾರುಖ್ ಹೇಳಿರುವ ಪ್ರಕಾರ ವಲಸೆ ಅಧಿಕಾರಿಗಳು ಅವರು ಉಳಿಯುವ ಹೋಟೆಲ್ ಎಲ್ಲಿ, ಫೋನ್ ನಂಬರ್ ಕೇಳಿದ್ದಾರೆ - ಇದು ಯಾವುದೇ ದೇಶದ ವಲಸೆ ಅಧಿಕಾರಿಗಳು ಕೇಳುವ ಸ್ಟ್ಯಾಂಡರ‍್ಡ್ ಪ್ರಶ್ನೆಗಳು. ನಾನು ಬಹ್ರೇನ್ ಹೋಗಿದ್ದಾಗ ನಾನು ಯಾರ ಜೊತೆ ಉಳಿಯುತಿದ್ದೇನೆ, ಅವರ ಇತಿಹಾಸವೆಲ್ಲಾ ಕೇಳಿದ್ದರು.

ನನಗೇನೋ ಇದು ಸದ್ಯದಲ್ಲೇ ಹೊರಬರಲಿರುವ My name is Khan ಚಿತ್ರದ ಪಬ್ಲಿಸಿಟಿ ಸ್ಟಂಟೋವೆಂಬ ಗುಮಾನಿಯಾಗುತ್ತಿದೆ. ಈ ಸುದ್ದಿ ಹರಡಿದ ವೇಗ, timing ಎಲ್ಲಾ ಕುತೂಹಲಕರವಾಗಿದೆ. ಶಾರುಖ್ ಸ್ವತ: ಹೇಳಿದ ಪ್ರಕಾರ ಈ ಚಿತ್ರಕ್ಕೆ ಓಸ್ಕರ್ ಪ್ರಶಸ್ತಿ ಸಿಗಲು ಎಲ್ಲಾ ಪ್ರಯತ್ನ ಮಾಡುತ್ತಾರಂತೆ, ಸೋ ಅದಕ್ಕೇ ಎಲ್ಲಾ build-up ಮಾಡುತ್ತಿರುವಂತೆ ಕಂಡು ಬರುತ್ತಿದೆ.

ಏನೇ ಹೇಳಿ ಅಂದು ಒಬ್ಬ ಜನಪ್ರತಿನಿಧಿಯಾದ ನರೇಂದ್ರ ಮೋದಿಗೆ ವೀಸಾ ಕೊಡದಿದ್ದಾಗ ಸಂಭ್ರಮಿಸಿದ್ದವರು ಇಂದು ಒಬ್ಬ ಯಕ:ಶ್ಚಿತ್ ನಟನನ್ನು ವಲಸೆ ಅಧಿಕಾರಿಗಳು ಪ್ರಶ್ನಿಸಿದ್ದನ್ನೇ ದೇಶಕ್ಕಾದ ಅವಮಾನವೆಂದು ಹೇಳುವುದು ಹಾಸ್ಯಾಸ್ಪದ ಸಂಗತಿ.

ENGLISH SUMMARY:

When Narendra Modi was denied US visa India media celebrated the incident and hailed USA as world saviour. But same media is now making hue and cry about Shahrukh Khan incident in Newark Airport where he was questioned by immigration officials for more than 2 hours.

When a democratically elected leader like Narendra Modi was denied visa, even then Central Government led by Congress filed a diplomatic protest. But Indian media celebrated the incident. Now when a Bollywood showman was interrogated for reasons we don't know yet - but most likely related to whether Sharukh had proper visa or such paperwork - whole Indian media is creating a ruckus saying India has been insulted by USA as if interrogation by some lowly immigration clerk is threat to Indian sovereignity.

According to some of my software friends who visit USA regularly most likely explanation is that immigration authorities wanted to make sure Shahrukh has correct visa/paperwork. Afterall per his own admission Shahrukh visits USA many times in a year. There are business visa, visitor visa, showman visa and so on. If one is a visitor visa legally he can't work in US. And we all know why Bollywood actors frequent USA for shows where they make crores of rupees just showing their face to desi diaspora.

Personally I feel whole incident can be a publicity stunt to his new movie "My name is Khan" which has same theme as this incident. The timing, massive media "breaking news" on a national holiday, soundbytes by Karan Johar, Farah Khan within minutes of the so called incident and fact that Shahrukh himself has said this movie has been made keeping Oscar award in mind makes me think whole thing is a well oiled publicity stunt. It does not take much to upset immigration officers afterall - especially our stars and politicians used to VVIP treatment in airports behave arrogantly when questioned in foreign airports.

Back to the topic - it is laughable that our whole national pride is so shaky that some lowly immigration clerk interviewing Sharukh Khan can cause a breaking news whole day on Independence Day - espeically when same media celebrated denial of US visa to publically elected leader like Narendra Modi.

~~~~~

Wednesday, August 12, 2009

ಹುಡುಕಿಕೊಡಿ: ಎಲ್ಲಿ ಕಾಣೆಯಾಗಿದ್ದಾರೆ ಕರ್ನಾಟಕ ರಕ್ಕಸವೇದಿಕೆಯ ೪೦ ಲಕ್ಷ ಕಾರ್ಯಕರ್ತರು?



ಆಗಸ್ಟ್ ೯ರಂದು ತಿರುವಳ್ಳುವಾರ್ ಪ್ರತಿಮೆ ಸ್ಥಾಪನೆ ವಿರೋಧಿಸಿ ಬೆಂಗಳೂರಲ್ಲಿ ಬಂದ್, ಗಲಭೆ ನಡೆಯುವುದು ಖಚಿತವೆಂದು ರಾಷ್ಟ್ರ‍ೀಯ ಮತ್ತು ರಾಜ್ಯ ಮಾಧ್ಯಮಗಳು ಬೆಳಗಿನಿಂದಲೂ ಕಾದು ಕೂತದ್ದೇ ಬಂತು.

ಊಹೂಂ..ಎಲ್ಲೋ ೨೦ ರಕ್ಕಸ ವೇದಿಕೆಯ ಕಾರ್ಯಕರ್ತರು ಕ್ರಿಕೆಟ್ ಆಡುವ ನೆಪದಲ್ಲಿ ಒಟ್ಟಾಗಿ ಅರೆಮನಸ್ಸಿನಿಂದ ರಸ್ತೆ ತಡೆ ಮಾಡಲು ತೊಡಗಿದ ನಿಮಿಷಗಳಲ್ಲೆ ಪೊಲೀಸರಿಂದ ಬಂಧನಕ್ಕೊಳಗಾದರು.

ನಾರಾಯಣ ಗೌಡರು ಮತ್ತವರ ಚೇಲಾಗಳು (ಕೆಲ ಮಾಧ್ಯಮ ಮಂದಿ ಕೂಡಾ) ಆಗಾಗ ಹೇಳುತ್ತಿರುತ್ತಾರೆ - ಕ.ರ.ವೇ.೪೦ ಲಕ್ಷ ಕಾರ್ಯಕರ್ತರ ಪಡೆ, ರಾಜ್ಯದೆಲ್ಲೆಡೆ ೪೦೦೦ ಕರವೇ ಶಾಖೆಗಳಿವೆ. ಗೌಡರು ಒಂದು ಮಾತು ಹೇಳಿದರೆ ಬೆಂಗಳೂರು ಹೊತ್ತಿ ಉರಿಯುತ್ತದೆ, ಸಾವಿರಾರು ಲಕ್ಷಾಂತರ ಮಂದಿ ಸಾಗರೋಪಾದಿಯಲ್ಲಿ ಕನ್ನಡಕ್ಕಾಗಿ ನುಗ್ಗಿ ಬರುತ್ತಾರೆ ಇತ್ಯಾದಿ ಇತ್ಯಾದಿ.

ಆಗಸ್ಟ್ ೯ರಂದು ಎಲ್ಲಿ ಹೋದರಯ್ಯಾ ಈ ಕಾರ್ಯಕರ್ತರು?

ಶಾಸಕರ ಭವನದಲ್ಲಿ, ಕಾರವಾರದಲ್ಲಿ ವೃದ್ಧ ಮುದುಕರ ಮುಖಕ್ಕೆ ಮಸಿ ಬೆಳೆದ ಕರವೇಯ ಪೌರುಷವೆಲ್ಲಿ ಕಳೆದು ಹೋಯಿತು?

ವಾರಾಂತ್ಯದಲ್ಲಿ ಖಾಸಗೀ ಪ್ರದೇಶದಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದ ಯುವಕ ಯುವತಿಯರ ಮೇಲೆ ಕೈ ಮಾಡಿ ಅವರ ಲ್ಯಾಪ್ ಟಾಪ್, ಮೊಬೈಲ್ ಕದ್ದುಕೊಂಡ ಕರವೇ ಹೀರೋಗಳೆಲ್ಲಿದ್ದರು ಆಗಸ್ಟ್ ೯ರಂದು???

ಬೆಳಗಾವಿಯಲ್ಲಿ ಶಕ್ತಿಕಳೆದುಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಮೀಸಲಾತಿಯಿಂದಾಗಿ ಕನ್ನಡಿಗರು ಮೇಯರ್ ಆದರೆ ರಾಜ್ಯದೆಲ್ಲೆಡೆ ಗೌಡರ ಉದ್ದಿನ ವಡೆಯಂತಹ ಮುಖದ ಫ್ಲೆಕ್ಸ್ ಹಾಕಿ ಕ್ರ‍ೆಡಿಟ್ ತೆಗೆದುಕೊಂಡ ರಕ್ಕಸವೇದಿಕೆಯವರು ಈಗೆಲ್ಲಿದ್ದಾರೆ!???

ಒಂದಂತೂ ಸ್ಪಷ್ಟ - ಹಿಂದಿನ ಸರಕಾರಗಳಲ್ಲಿ ಮುಖ್ಯಮಂತ್ರಿಗಳನ್ನೇ ಬೆದರಿಸುವ, ಮಾಧ್ಯಮಗಳನ್ನು "ಸಾಕಿಕೊಂಡು" ಇದ್ದು, ಪೊಲೀಸರನ್ನು ಬಗ್ಗಿಸಿಡುವಷ್ಟು ಬೆಳೆದಿದ್ದ ರಕ್ಕಸ ವೇದಿಕೆಯ ಜೀರೋಗಳ ನಿಜವಾದ ತಾಕತ್ತು ಎಷ್ಟುವೆಂಬುದು ಅವರ ಯಾವುದೇ ಒತ್ತಡಕ್ಕೆ ಮಣಿಯದ ಯಡ್ಯೂರಪ್ಪ ಮತ್ತು ಪೊಲೀಸರು ತೋರಿಸಿದ್ದಾರೆ. ಸರಕಾರ ಮನಸ್ಸು ಮಾಡಿದರೆ ಇಂತಹ ಸಮಾಜದ್ರೋಹಿ ಸಂಘಟನೆಗಳನ್ನು ಬಗ್ಗು ಬಡಿಯಬಹುದು ಎಂಬುದೂ ಸ್ಪಷ್ಟವಾಗುತ್ತದೆ.

ನಿನ್ನೆ ಯಾವುದೋ ಪತ್ರಿಕೆಯಲ್ಲಿ ಓದಿದೆ - ಯಾವಾಗಲೂ ಬೆಳಿಗ್ಗೆ ಓಪನ್ ಜೈಲಿಗೆ ಹೋಗಿ ಬಿಟ್ಟಿ ಊಟ ತಿಂದು ತೇಗಿ ಸಂಜೆ ಹೊರಗೆ ಹೋಗುತ್ತಿದ್ದ ಈ ಉಟ್ಟು ಓರಾಟಗಾರರು ಜೈಲಿನಲ್ಲೆರಡು ದಿನ ಕಳೆದ ಕೂಡಲೇ ಇಲಿಯಂತಾಗಿದ್ದಾರೆ. ಒಬ್ಬ ಓರಾಟಗಾರರಂತೂ ಎಟ್ಯಾಚ್ಡ್ ಬಾತ್ ರೂಮ್ ಬೇಕು, ಬೆಳಿಗ್ಗೆ ಕೊಡುವ ಬ್ರೆಡ್ ಸರಿಯಿಲ್ಲ, ಜೈಲಿನಲ್ಲಿ ಸೊಳ್ಳೆ ಕಾಟ ವಿಪರೀತವೆಂದೆಲ್ಲಾ ಬಡಬಡಿಸಿದ್ದಾರೆ.

ಓಪನ್ ಜೈಲಿನಲ್ಲಿ ಸೆಲ್ ಫೋನಿಟ್ಟುಕೊಂಡು ಮಾಧ್ಯಮಗಳೊಂದಿಗೆ ಸಲೀಸಾಗಿ ಬೈಟ್ ಕೊಡುತ್ತಿದ್ದ ನಾರಾಯಣ ಗೌಡರಂತೂ ಈ ಬಾರಿ ಪರಪ್ಪನ ಅಗ್ರಹಾರದಲ್ಲಿ ಸೊಳ್ಳ ಕಡಿತ ತಿನ್ನುತ್ತಾ ತಾನು ಜೈಲಿನಲ್ಲಿದ್ದರೂ ಹೊರಗೆ ಲೋಕ ಎಂದಿನಂತೆ ನಡೆಯುತ್ತಿದೆಯೆಂದು ತಿಳಿದು ಉಗ್ರರಾಗಿ ಬಿಟ್ಟಿದ್ದಾರೆ. ಉಪಚುನಾವಣೆಯಲ್ಲಿ ವಿವಿಧ ಅಭ್ಯರ್ಥಿಗಳಿಂದ ತಿನ್ನಬಹುದಾಗಿದ್ದ opportunity ಮಿಸ್ ಆದಂತೆಯೇ ಎಂದು ಕೈ ಕೈ ಹಿಸಿಕಿಕೊಂಡಿದ್ದಾರಂತೆ.

ಈಗಿನ ಸುದ್ದಿಯ ಪ್ರಕಾರ ೧೩ರಂದು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ತನಕವೂ ಈ ಉಟ್ಟು ಓರಾಟಗಾರರು ಸೊಳ್ಳ ಕಡಿತ ತಿನ್ನುತ್ತಾ ಪರಪ್ಪನ ಅಗ್ರಹಾರದಲ್ಲೇ ಇರಬಹುದಂತೆ. ಪ್ರಾಯಶ: ಈ ಕೆಲ ದಿನಗಳಾದರೂ ಕರ್ನಾಟಕದ ಜನತೆ, MNCಗಳು ರಕ್ಕಸ ವೇದಿಕೆಯವರ ಕಾಟವಿಲ್ಲದೆ ಕಳೆಯಬಹುದೇನೋ.

ಇಡೀ ರಾಜ್ಯದ ಅಭಿಪ್ರಾಯದ ವಿರುದ್ಧ ಕೇವಲ ಪ್ರಚಾರಕ್ಕಾಗಿ ಹೋರಾಡಲು ಹೋಗಿ ಈಗ ಪರಪ್ಪನ ಅಗ್ರಹಾರದಲ್ಲಿ ಸೊಳ್ಳೆ ಕಡಿತ ತಿಂದುಕೊಂಡಿರುವ ರಕ್ಕಸ ವೇದಿಕೆ ಮತ್ತು ಗೌಡರ ಕಂಡು ಒಂದೆಡೆ ಕನಿಕರವೂ ಆಗುತ್ತದೆ. ಆದರೂ ಆಗುವುದೆಲ್ಲಾ ಒಳ್ಳೆಯದಕ್ಕಾಗಿ - ಈ ನೆಪದಿಂದಾದರೂ ಈ ಮದ್ದೂರು ವಡೆ ಸ್ವಲ್ಪ ಸ್ಲಿಂ ಆಗಬಹುದೇನೋ? ಏನಂತೀರಿ?
****
ಕೊನೆಯ ಗುಟುಕು: ಹಿಂದಿನ ಬ್ಲಾಗ್ ಪೋಸ್ಟಿಗೆ ಅಭಿಪ್ರಾಯ ಹಾಕಿದ ಎಲ್ಲರಿಗೂ ಧನ್ಯವಾದಗಳು. ಹಾಗೆಯೇ ಈ ಮೈಲ್ ಮುಖಾಂತರ "ಭೇಷ್" ಎಂದು ಬೆನ್ನು ತಟ್ಟಿದವರಿಗೂ ಥ್ಯಾಂಕ್ಸ್.

ಇನ್ನು ಇಮೈಲ್ ಮುಖಾಂತರ ಬೆದರಿಕೆ ಹಾಕಿದವರೂ, ವೈರಸ್ ಕಳಿಸಿದವರೂ, ಟ್ರ್ಯಾಕಿಂಗ್ ವೈರಸ್ ಕಳಿಸಿದವರೂ ಇದ್ದಾರೆ - ಆದರೆ ಆಶ್ಚರ್ಯವೇನೂ ಆಗಿಲ್ಲ. ನಾರಾಯಣ ಗೌಡರ ಬಳಿ ಅವರ ದೊಡ್ಡ ದೊಡ್ಡ ಐಷಾರಾಮಿ ಕಾರುಗಳ ಬಗ್ಗೆ ಕೇಳಿದಾಗ ಅವರ readymade ಉತ್ತರ ಯಾವಾಗಲೂ "ಪ್ರಪಂಚದೆಲ್ಲೆಡೆಯಿರುವ ಕನ್ನಡಿಗರು ನನಗ ಹಣ ಕಳಿಸುತ್ತಾರೆ" ಯೆಂದು. ಅಮೆರಿಕದಲ್ಲಿ, ಬ್ರಿಟನಿನಲ್ಲಿ ಕುಳಿತುಕೊಂಡು ತಾವೇ ಅನಿವಾಸಿಗಳಾಗಿದ್ದರೂ ಕರ್ನಾಟಕದಲ್ಲಿ ಹೊರಗಿನವರ ವಿರುದ್ಧ ಕೆಂಡ ಕಾರುವವರನ್ನು ಬೆಂಬಲಿಸುತ್ತಾರೆ ಈ ಅನಿವಾಸಿ ರಕ್ಕಸವೇದಿಕೆಯ ಬೆಂಬಲಿಗರು. ತಾವೇ ಇತರ ದೇಶದಲ್ಲಿ ಅನಿವಾಸಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ ಅದೇನೋ ಅವ್ಯಕ್ತ long distance ಕನ್ನಡ ಪ್ರೇಮ ಈ ವರ್ಷಕ್ಕೊಂದು ಬಾರಿ ಝೂಮೆಂದು ಹಾರಿ ಬಂದು ಹೋಗುವ ಕಂಪ್ಯೂಟರ್ ಹೀರೋಗಳಿಗೆ. ಅಮೆರಿಕದಲ್ಲಿ ಆರ್ಥಿಕ ತಾಪತ್ರಯಗಳಿಂದಾಗಿ ಪ್ರಾಯಷ: ಕೆಲಸವಿಲ್ಲದೆ ಇಡೀ ದಿನ ಇಂಟರ್ನೆಟ್ಟಿನಲ್ಲಿ ಕನ್ನಡ ಹೀರೋಗಳಾಗುವ ದೊಡ್ಡ ಗುಂಪೇ ಇದ್ದಂತಿದೆ.

ಒಮ್ಮೆ ಈ ಪ್ರತಿಮೆ ಗಲಾಟೆ ಮುಗಿದ ನಂತರ ಮಾನ್ಯ ಯಡ್ಯೂರಪ್ಪನವರು ಈ ರಕ್ಕಸವೇದಿಕೆಯವರಿಗೆ ಹಣ ಕಳಿಸುವ ಅನಿವಾಸಿ ಕನ್ನಡಿಗರಾರು ಎಂದು ಗುರುತಿಸಿ "ಗೂಂಡಾಗಳ ಅನಿವಾಸಿ ಬೆಂಬಲಿಗರ" ಪಟ್ಟಿ ಪ್ರಕಟಿಸಿದರೆ ಪ್ರಾಯಷ: ಈ long distance NRIs (Non Reliable Indians) ಗಳ ಇಂಟರ್ನೆಟ್ ಆಟೋಟಾಪಕ್ಕೆ ಕಡಿವಾಣ ಬೀಳಬಹುದೇನೋ!
*****

Saturday, August 8, 2009

Karnataka Rakshana Vedike KRV - mob of jobless hoodlums . Unholy nexus between Bangalore media and KRV


Karnataka Rakshana Vedike (KRV) is in the news all over again by protesting against installation of Tiruvalluvar statue in Bangalore.

Intention of this post is to clarify that not all Kannadigas are fanatics like Karnataka Rakshana Vedike - KRV hoodlums.

Also to expose the unholy nexus between Karnataka Rakshana Vedike and media in Bangalore.

Facts on the statue are:


  • All political parties met and decided to support installation of statue. Just like TN, it is very rare in Karnataka that all parties meet and agree on something, but on this issue they did.

  • Well known Kannada leaders like Patil Puttappa attended the meeting and supported statue.

  • Many Kannada writers, literary figures including Jnanapeetha Award winner U.R.Ananathamurthy have given public statements supporting statue installation.

  • Almost all Kannada newspapers have writtern Editorials and published articles supporting Thiruvalluvar statue in Bangalore.

  • Even Karanataka Highcourt came down heavily on anti-statue protesters and basically asked them to mind their own business and warned that they will be responsible for any untoward incidents on August 9th.
So why Karnataka Rakshana Vedike KRV and other fringe groups are up in arms?

Karnataka Rakshana Vedike is a fringe violent group in Bangalore. By claiming to be fighting for Kannada there are many accusastions against this organisation for involving in blackmail, hafta collection - in general what locals call as "Roll Call" business.

These fringe groups like to be in news all the time as that is how they build their image as ruthless extortionists. So statue issue has come as a boon to these useless jobless goons.

KRV's business must be booming - because there are lot of infighting within organisation and there are groups like "Narayana Gowda faction KRV", "Praveen Shetty faction KRV", "Shivarame Gowda faction KRV" each trying to get foothold and mark their territories in the name of "fighting for Kannada".




Many of Karnataka Rakshana Vedike's office bearers are ex-criminals now donning the roll of Kannada fighters.

Yellow and red shawl of these goons has become a symbol in Bangalore for roll call business and extort money from business in the name of Kannada.


Interestingly during general elections time these factions don't contest elections but go with any political parties or candidates who can bid for them! If these thugs are truly interested in development of Karnataka and Kannada why are they not contesting in elections?

Narayana Gowda President of Karnataka Rakshana Vedike


All times of the year Bangalore is plastered with chubby smiling face of Narayana Gowda and Karnataka Rakshana Vedike is a brain child of Narayana Gowda.

Narayana Gowda, President of Karnataka Rakshana Vedike is a returnee from Mumbai (where he supposedly worked in Dance Bars) so one would think he appreciates how Mumbai offered him food at the end of the day despite him being an outsider in Mumbai. But no, he poses as a crusader against outsiders in Bangalore.





Narayana Gowda has no known means of income now. But he can be seen driving around in large posh SUVs with dozens of hanger ons and goons posing as body guards. If this person is truly fighting for Kannada one has to wonder why does he require goons as his body guards.

Narayana Gowda and his band of followers don't have a normal job like you and me. They just go around Bangalore meeting businessmen and business owners including MNCs and BPOs and harass them for not having Kannada board, for example and leave the place after collecting you know what. No wonder Karnataka Rakshana Vedike has now become another name for Roll Call.


In January 2009, Narayana Gowda organised a huge conference in Bangalore. Of course, stage is imcomplete without chubby smiling face of Narayana Gowda in center. Crores of rupees were collected in the name of conference by all and sundry in the name of KRV, but no one has been account books even after so many months.

So question is why no one in Karnataka Media challenge this goon Narayana Gowda who is running roll call business in the name of protecting Kannada? Answer is simple - many in the media world are in the pockets of Rakshana Vedike.

Relation between Bangalore media and Rakshana Vedike is so close that many a times Rakshana Vedike goons inform journalists well in advance of any so called "raid", "attack" on business, property and people.

See disgusting vidoe below where Rakshana Vedike goons attack party goers and girls in Bangalore. KRV claimed this was a "drug""rave" party but only tablets they show are used for common cold, fever!! Karnataka Rakshana Vedike goons also stole laptops, cell phones of these poor party goers and allegedly molested girls (in video you can see them tearing top of a lady who screams in horror). One has to note that police ultimately dropped all charges against these party goers, but this incident truly established KRV as an extortion organisation who now rule all business establishement in outskirts of Bangalore.





It's time people of Karnataka raise their voice against undemocratic ways of Karnataka Rakshana Vedike and demand that Karnataka Govt ban this organisation and declare it a terrorist organisation. So far we are afraid that Govt won't act on KRV, but in the case of statue it is clear that Govt, Courts have seen real intention of KRV.

KRV now stands exposed. Govt should immediately put its leaders in jail under goonda act and ban KRV and its blackmail business. Govt should also need to take a look and seize bank accounts of Narayana Gowda, Shetty and other sundry blackmail leaders.

On a side note, it is unfortunate that there are many non-resident Kannadigas who support these thugs of Karnataka Rakshana Vedike. Typical long distance NRI patriotism syndrome. Karnataka Rakshana Vedike's web presence is maintained by these NRI Kannadigas who themselves are outsiders in countries they live but preach that Bangalore should be closed for outsiders.

*****Kannada Blog Post below / Cross Posted to Kannada Journalists*****



ಪ್ರತಿಮೆ ವಿವಾದ - ಜನಪ್ರತಿನಿಧಿಗಳಲ್ಲದ ಉಟ್ಟು ಓರಾಟಗಾರರಿಗೆ ಮಾಧ್ಯಮಗಳಲ್ಲೇಕಿಷ್ಟು ಪ್ರಚಾರ?

ಕರ್ನಾಟಕದ ಜನತೆಯ ಪ್ರತಿನಿಧಿಗಳಾದ ಕರ್ನಾಟಕದ ಸಮಸ್ತ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಎಂದಿನ ಗಲಾಟೆ ಬದಿಗಿಟ್ಟು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿರುವಳ್ಳವಾರ್ ಪ್ರತಿಮೆ ಸ್ಥಾಪನೆಗೆ ಒಪ್ಪಿರುವುದು ಶ್ಲಾಘನೀಯ ಸಂಗತಿ. ಏನೇ ಹೇಳಿ ಈ ವಿಷಯದಲ್ಲಂತೂ ಮಾನ್ಯ ಯಡ್ಯ್ರಪ್ಪನವರು ತಮ್ಮ ನಾಯಕತ್ವ ಮರೆದಿದ್ದಾರೆ.

ಅಂತೆಯೇ ಕನ್ನಡ ಸಂಸ್ಕೃತಿಯ ನಿಜವಾದ ಹರಿಕಾರರಾದ ಸಾಹಿತಿಗಳು, ಚಿಂತಕರು, ಪಾಟೀಲ್ ಪುಟ್ಟಪ್ಪರಂತಹ ಅಸಲೀ ಹೋರಾಟಗಾರರೂ ಒಮ್ಮತದಿಂದ ಸರಕಾರವನ್ನು ಬೆಂಬಲಿಸಿದ್ದಾರೆ. ಎಲ್ಲಾ ಮಾಧ್ಯಮ ಮತ್ತು ಪತ್ರಿಕೆ ಸಂಪಾದಕೀಯಗಳೂ ಇದನ್ನು ಸ್ವಾಗತಿಸಿವೆ.

ಆದರೆ ಬಹಳ ಸಮಯದಿಂದ ತಣ್ಣಗೆ ಕೆಲಸವಿಲ್ಲದೆ ಕುಳಿತಿದ್ದ ಕೆಲ "ಉಟ್ಟು ಓರಾಟಗಾರ"ರಿಗೆ ಬಹಳ ಸಿಟ್ಟು ಬಂದು ಬಿಟ್ಟಿದೆ. ಜನವರಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಮ್ಮೇಳನ ಮಾಡಿದ್ದ ಕ.ರಾ.ವೆ.ಯ ಗೌಡರೂ, ರೋಲ್ ಕಾಲ್ ಉದ್ದಿಮೆಯಲ್ಲಿ ತನ್ನದೇ ಅಸ್ತಿತ್ವ ಸ್ಥಾಪಿಸಲು ಒದ್ದಾಡುತ್ತಿರುವ ಇನ್ನೊಂದು "ಬಣ"ವೂ, ಸತತವಾಗಿ ಚುನಾವಣೆಯಲ್ಲಿ ಸೋತರೂ ಬುದ್ಧಿ ಬರದ ವಾಟಾಳರೂ ಸಡನ್ನಾಗಿ ಎದ್ದು ಬಿಟ್ಟಿದ್ದಾರೆ, ಕನ್ನಡ ಉಳಿಸುವ ಹೆಸರಲ್ಲಿ ಪ್ರತಿಮೆ ಸ್ಥಾಪನೆ ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಹಿರಿಯರೆದುರು ಸಭಾ ಮರ್ಯಾದೆಯನ್ನೂ ಮರೆತು ಯಕ:ಶ್ಚಿತ್ ಸ್ಟ್ರೀಟ್ ರೌಡಿಗಳಂತೆ ತಮ್ಮ ರೋಲ್ ಕಾಲ್ ಸ್ಟೈಲ್ ತೋರಿಸಿದ್ದು ತಾವು ಟಿ.ವಿ.ಯಲ್ಲಿ ನೋಡಿರಬಹುದು.

ನಾನು ಕೇಳಿದಂತೆ ಗೌಡರೂ, ಶೆಟ್ಟರೂ ಪ್ರತಿಭಟನೆಯ ಹೆಸರಲ್ಲಿ, ಪ್ರತಿಭಟನೆಗಾಗುವ ಖರ್ಚಿನ ಹೆಸರಲ್ಲಿ ಎಂದಿನಂತೆ ಈಗಾಗಲೇ ಎರಡೆರಡು ಬಾರಿ ದೊಡ್ಡ ಕುಳಗಳ ಹತ್ತಿರ ಚಂದಾ ವಸೂಲಿ ಮಾಡಿಯಾಗಿದೆ. ಜನವರಿಯ ಸಮ್ಮೇಳನಕ್ಕೆ ಕ.ರಾ.ವೇ.ಯಿಂದ ಬಲಾತ್ಕಾರವಾಗಿ ಚಂದಾ ವಸೂಲಿ ಮಾಡಿಕೊಡಲ್ಪಟ್ಟಿದ್ದ ಗಾಂಧೀನಗರದ ಮಿತ್ರರೊಬ್ಬರು ಆರು ತಿಂಗಳಾಗುವುದರೊಳಗೆ ಕ.ರಾ.ವೇ.ಯ ಇನ್ನೊಂದು ಡಿಮಾಂಡ್ ಬಂದದ್ದು ನೋಡಿ ಹೌಹಾರಿದ್ದಾರೆ. ನವೆಂಬರ್ ೧ ನ್ನೂ ದೂರವಿಲ್ಲ ನೋಡಿ.

ನನ್ನ ಪ್ರಶ್ನೆ ಸಿಂಪಲ್ - ರಾಜ್ಯದ ಎಲ್ಲಾ ಪಕ್ಷಗಳು ಒಪ್ಪಿರುವಾಗ ಕ್ಷುಲ್ಲುಕ ಕಾರಣಗಳಿಗೆ, ಪ್ರಚಾರಕ್ಕಾಗಿ ವಿರೋಧಿಸುತ್ತಿರುವ ಈ ಉಟ್ಟು ಓರಾಟಗಾರರಿಗೆ ನಾವೇಕೆ ಕ್ಯಾರ್ ಮಾಡಬೇಕು? ವಿರೋಧಿಸುವ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆದುಕೊಂಡು ರೋಲ್ ಕಾಲ್ ಸಾಮ್ರಾಜ್ಯ ವಿಸ್ತರಿಸುತ್ತಿರುವ ಇವರಿಗೆ ಧಿಕ್ಕಾರ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಡದ ಈ ರೋಲ್ ಕಾಲ್ ಉದ್ದಿಮೆದಾರರು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ಮಾತನಾಡಲಿ.

ನಾಡಿದ್ದೂ ನೋಡಿ - ಪ್ರತಿಮೆ ಅನಾವರಣಕ್ಕಿಂತ ಈ ಗೌಡರ-ಶೆಟ್ಟರ-ವಾಟಾಳರ ಬೊಬ್ಬೆಗೇ ಪ್ರಚಾರ ಜಾಸ್ತಿ ಸಿಗಲಿದೆ. ಕೋಟ್ಯಾಂತರ ಕನ್ನಡಿಗರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗಿಂತ ನಮ್ಮ ಮಾಧ್ಯಮಗಳಿಗೆ ಈ ಬೆರಳೆಣಿಕೆಯ "ಓರಾಟ"ಗಾರರು ಮುಖ್ಯವೆನಿಸಲಿದ್ದಾರೆ.

ರಾಜಕಾರಣಿಗಳಂತೆ ವೇದಿಕೆಯವರೂ ಮಾಧ್ಯಮದವರನ್ನು ಸಾಕಿಕೊಂಡಿದ್ದಾರಾ? ರಾಜಕಾರಣಿಗಳಿಗೆ, ಚಿತ್ರ ನಟ ನಟಿಯರಿಗೆ ಏನೆಲ್ಲಾ pointed question ಕೇಳುವ ನಮಗೆ ಜನವರಿಯಲ್ಲಿ ನಡೆದ ಕ.ರಾ.ವೇ.ಯ ಭರ್ಜರಿ ಸಮ್ಮೇಳನದ ಲೆಕ್ಕವನ್ನು ಗೌಡರ ಬಳಿ ಕೇಳುವಷ್ಟು ಧೈರ್ಯವಿದೆಯೇ? There is a big story out there - if you are interested!
*******

Monday, August 3, 2009

ಛೇ! ಉದಯವಾಣಿ ಈ ಮಟ್ಟಕ್ಕೆ ಇಳಿಯಬಾರದಿತ್ತು!





೭೭೦ ಕೋಟಿಗಳು ಮಾತನಾಡುತ್ತಿವೆಯೇ?
ಛೇ! ಉದಯವಾಣಿ ಈ ಮಟ್ಟಕ್ಕೆ ಇಳಿಯಬಾರದಿತ್ತು!


[UPDATE] Yet another nausceating report today in Udayavani.





ಕಳೆದ ಮೂರು ದಿನಗಳಿಂದ "ಉದಯವಾಣಿ" (ಬೆಂಗಳೂರು ಆವೃತ್ತಿ) ಯಲ್ಲಿ ಗೋವಿಂದರಾಜ ನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣಾರನ್ನು ಹಿಗ್ಗಾಮುಗ್ಗಾ ಹಾಡು ಹೊಗಳಿ ಯಾವುದೇ ಇನ್ಫೋಮರ್ಷಿಯಲ್ಲಿಗೆ ಕಮ್ಮಿಯಿರದಂತೆ ಇರುವ ಸುದ್ದಿಗಳು ಪ್ರಕಟವಾಗುತ್ತಿವೆ.

ಪ್ರಿಯಕೃಷ್ಣಾರನ್ನು ಹೊಗಳುವ ಭರದಲ್ಲಿ ಉದಯವಾಣಿ ಉಪಯೋಗಿಸಿದ ಪದ ಪುಂಜಗಳನ್ನು ನೋಡಿದಾಗ ಈ ಸುದ್ದಿಗಳು ಪ್ರಾಯಷ: ಜಾಹಿರಾತುಗಳಿರಬೇಕೆಂದು ಭಾವಿಸಿದ್ದೆ - ಆದರೆ ಎಲ್ಲೂ ಜಾಹೀರಾತುವೆಂಬ ಡಿಸ್ಕ್ಲೇಮರುಗಳಾಗಲಿ, ಚಿಕ್ಕ ಅಕ್ಷರಗಳಲ್ಲಿ "ಜಾಹೀರಾತು" ಎಂಬ ಅಕ್ಷರಗಳನ್ನು ಕಾಣೆ!



ಈ "ಸುದ್ದಿ"ಗಳು ಎರಡು ದಿನ ಮೊದಲ ಪುಟದಲ್ಲೇ ಬಂದಿವೆಯೆಂಬುದು ಗಮನಾರ್ಹ.



ಚುನಾವಣಾ ದಿನ ಸಮೀಪಿಸಿದಂತೆ ಪತ್ರಿಕೆಗಳು ಕ್ಷೇತ್ರದ ಸಮೀಕ್ಷೆ, ಅಭ್ಯರ್ಥಿಗಳ ಸಂದರ್ಶನ, ಮತದಾರರ ಸಂದರ್ಶನ ಮಾಡಿ ಯಾವುದಾದರು ಅಲೆಯಿದೆಯೋ ಅಥವಾ ಟ್ರೆಂಡಿದೆಯೋವೆಂದು ಬರೆಯುವುದು ಸಹಜ. ಆದರೆ ನಾಮಪತ್ರ ಸಲ್ಲಿಸಿದ ಮರುಗಳಿಗೆಯಲ್ಲೇ, ಚುನಾವಣಾ ಪ್ರಚಾರ ಕಾವೇರದ ಸಮಯದಲ್ಲಿ, ಕಳೆದ ಮೂರು ದಿನಗಳಿಂದ ಮೇಲಿಂದ ಮೇಲೆ ಪ್ರಿಯಕೃಷ್ಣರನ್ನು ಹೊಗಳಿ ಅಟ್ಟಕ್ಕೇರಿಸುವ ವರದಿಗಳು ಬರುತ್ತಿರುವುದು ಸೋಜಿಗದ ಸಂಗತಿ.

ವರದಿಗಳಲ್ಲಿನ ಕೆಲವು ವಾಕ್ಯಗಳನ್ನು ಓದಿದಾಗ ಭಲೇ ಭಲೇ ವರದಿಗಾರವೆನ್ನುವಂತಿದೆ - ಗೋವಿಂದರಾಜ ನಗರದಲ್ಲಿ ಸುಮಾರು ೨.೪ ಲಕ್ಷ ಮತದಾರರಿದ್ದಾರೆ - ಅವರನ್ನೆಲ್ಲಾ "ಉದಯವಾಣಿ"ಯ ವರದಿಗಾರರು ಪರ್ಸನಲ್ಲಾಗಿ ಮೀಟಾಗಿ ಅಭಿಪ್ರಾಯ ಸಂಗ್ರಹಿಸಿದಂತಿದೆ!

ಬನ್ನಿ ನೋಡಿ ಉದಯವಾಣಿಯ ಕೆಲ "ಸುದ್ದಿ" ಸ್ಯಾಂಪಲುಗಳನ್ನು:


ಕ್ಷೇತ್ರದ ಎಲ್ಲೆಡೆ ಪ್ರಿಯಕೃಷ್ಣ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದ್ದು ಮತದಾರರು ಸ್ವಯಂ
ಸ್ಫೂರ್ತಿಯಿಂದ ಸ್ವಾಗತಕೋರಿ ಆಶೀರ್ವಾದ ಮಾಡುತ್ತಿದ್ದಾರೆ.



ಗೋವಿಂದರಾಜ ನಗರದಲ್ಲಿ ಪ್ರಿಯಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಕ್ಷಣದಿಂದಲೇ ಸಂಭ್ರಮಿಸಿದ್ದ ಯುವಕರಂತೂ ತಾವೇ ಚುನಾವಣೆಗೆ ಸ್ಪರ್ಧಿಸಿದಂತೆ ಸೈನಿಕರಂತೆ ಹಗಲಿರುಳು ಪ್ರಿಯಕೃಷ್ಣ ಅವರ ಪರವಾಗಿ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಯುವಕ-ಯುವತಿಯರು ಮತದಾರರ ಮನೆಬಾಗಿಲಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.



ಕ್ಷೇತ್ರದ ಅಭಿವೃದ್ದಿಗಾಗಿ ಪಣ ತೊಟ್ಟಿರುವ ವಿದ್ಯಾವಂತ ಯುವ ತರುಣ ಪ್ರಿಯಕೃಷ್ಣ ಅವರ ಜನಪರ ಕಾಳಜಿ ಬಗ್ಗೆ ಮತದಾರರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಸೈನಿಕರ ರೀತಿಯಲ್ಲಿ ತಾವೇ ಚುನಾವಣೆಗೆ ಸ್ಪರ್ದಿಸಿರುವಂತೆ ನಿರಂತರವಾಗಿ ಮತದಾರರ ಮನೆಬಾಗಿಲಿಗೆ ತಲುಪುತ್ತಿದ್ದಾರೆ.



(ಅಂದ ಹಾಗೆ ಹೊಗಳುವ ಭರದಲ್ಲಿ ಪದೇ ಪದೇ ಸೈನಿಕರನ್ನು ಉಲ್ಲೇಖ ಮಾಡಿದ್ದು ನೋಡಿದರೆ ವರದಿಗಾರ ಮಾಜಿ ಸೈನಿಕ ಅಥವಾ ಸೈನ್ಯದ backgroundನವರಿರಬೇಕೇನೋ!?)

ಕಳೆದ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಮಾಧ್ಯಮಗಳು, ಪತ್ರಕರ್ತರು ಸಾರಾಸಗಟಾಗಿ ಪಕ್ಷಗಳಿಗೆ ಮಾರಿಕೊಂಡಿದ್ದರೆಂದು ಕೇಳಿದ್ದೆ, ನಮ್ಮಲ್ಲೂ ಸಂಜೆಪತ್ರಿಕೆಗಳಿಗೆ, ಒಂದು ವಾರ ಹುಟ್ಟಿ ಮರುವಾರ ಅದೃಶ್ಯವಾಗುವ ಪೀತ ಪತ್ರಿಕೆಗಳಿಗೆ ಇಂತಹ pay for news culture ಹೊಸದೇನಲ್ಲ.


ಆದರೆ ಪ್ರಾಯಷ: "ಉದಯವಾಣಿ"ಯಂತಹ Main Stream ಪತ್ರಿಕೆಯೊಂದು ಹೀಗೆ ಮಾಡುತ್ತಿರುವುದು ಕರ್ನಾಟಕ ಪತ್ರಿಕೋದ್ಯಮದಲ್ಲೊಂದು ಪ್ರಥಮವೇನೋ? ಟಿ.ಎ.ಪೈ.ಯವರು ಉಡುಪಿ ಲೋಕಸಭೆ ಚುನಾವಣೆಗೆ ನಿಂತಾಗ "ಉದಯವಾಣಿ" ಅವರ ಚುನಾವಣಾ pamphletನಂತೆ ವರದಿ ಮಾಡಿತ್ತು ಎಂದು ಮನೆ ಹಿರಿಯರು ಹೇಳುತ್ತಿದ್ದರು - ಆದರೆ ಅಲ್ಲಿ ತನ್ನ ಧಣಿಯೇ ಚುನಾವಣೆಗೆ ನಿಂತಾಗ ಅವರ ಬೆಂಬಲಕ್ಕೆ ಪತ್ರಿಕೆ ನಿಂತದ್ದು ಸಹಜವೆಂದು ಕ್ಷಮಿಸಬಹುದು - ಆದರೆ "ಉದಯವಾಣಿ" ಬೆಂಗಳೂರು ಆವೃತ್ತಿಗೆ ಪ್ರಿಯಕೃಷ್ಣಾರನ್ನು ಹೀಗೆ ಯದ್ವಾತದ್ವಾ ಬೆಂಬಲಿಸುವ ಯಾವ ಅನಿವಾರ್ಯತೆಯಿದೆಯೆಂದು ಕೇಳ ಬೇಕಾಗುತ್ತದೆ.

ಲೇಯೌಟ್ ಕೃಷ್ಣಪ್ಪ ಮತ್ತು ಅವರ ಮಗ ನಿಜಕ್ಕೂ ಜನಾನುರಾಗಿಗಳಿರಬಹುದು, ಜನಪ್ರಿಯರಿರಬಹುದು. ಆದರೆ ಅವರು ನೂರಾರು ಕೋಟಿಗಳ ಒಡೆಯರೂ ಎಂಬುದನ್ನು ಅಲ್ಲಗೆಳೆಯುವಂತಿಲ್ಲವಲ್ಲ? ಪ್ರಿಯಕೃಷ್ಣ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಕಾರ ಈ ೨೬ ವರುಷದ ಬ್ರಹ್ಮಾಚಾರಿ ೭೭೦ ಕೋಟಿಯ ಒಡೆಯ.



ಗೋವಿಂದರಾಜ ನಗರದಿಂದ ಸ್ಪರ್ಧಿಸಿರುವ ಮಂತ್ರಿ ಸೋಮಣ್ಣನವರೂ ಕೋಟ್ಯಾಧಿಪತಿಯೇ ಮತ್ತು "ಪತ್ರಕರ್ತರನ್ನು ಸಾಕಿಕೊಂಡವರೇ" - ಏನೇ ರಿಬ್ಬನ್ ಕಟ್ ಮಾಡುವ ಸಂಧರ್ಭವಿರಲಿ ಪತ್ರಕರ್ತ ಫೊಟೋಗ್ರಾಫರ್ ಪಡೆಗಳನ್ನು ಕರೆದುಕೊಂಡು ಹೋಗುವುದು ಸೋಮಣ್ಣನವರ ಸ್ಟೈಲ್. ಆದರೆ ಇತ್ತೀಚೆಗೆ ಬೆಂಗಳೂರು ನಗರ ಪಾಲಿಕೆಯ ಇಂಜಿನಿಯರೊಬ್ಬರಿಗೆ ಆಸ್ಪತ್ರೆ ಸೇರುವಂತೆ ಕಪಾಳ ಮೋಕ್ಷ ಮಾಡಿ ಸುದ್ದಿಯಾದ ನಂತರ ಸುದ್ದಿಮನೆಗಳಲ್ಲಿ ಸೋಮಣ್ಣ persona non grata ಆಗಿದ್ದಾರೆ.



ಆದರೂ ಇಂತಹ ಕೋಟ್ಯಾಧಿಪತಿಗಳ ನಡುವಿನ ಕದನ ವರದಿ ಮಾಡಲು ತಾಮುಂದು ನಾಮುಂದು ಎಂದು ಸುದ್ದಿಮನೆಗಳಲ್ಲಿ ಸ್ಪರ್ಧೆ ನಡೆದಿರಬಹುದೇನೋ?

ಏನೇ ಇರಲಿ, "ಉದಯವಾಣಿ"ಯಂತಹ ಪತ್ರಿಕೆ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಪಳಗಿದ, ಒಳ್ಳೇ ಹೆಸರಿರುವ ಅದರ ಬೆಂಗಳೂರಿನ ಸಂಪಾದಕ ಮಂಡಳಿ ಯಾಕೆ ಪತ್ರಿಕಾ ಧರ್ಮವನ್ನು ಮರೆತು ಇಂತಹ ಕೆಳಮಟ್ಟಕ್ಕಿಳಿಯಿತು ಎಂದು ಕೇಳಲು ವಿಷಾದವಾಗುತ್ತದೆ.