Saturday, November 5, 2011

F1 ರೇಸಿಗೆ ಬಿಟ್ಟಿ ಟಿಕೆಟ್ ಕೊಡದ Airtel ವಿರುದ್ಧ ಕನ್ನಡಪ್ರಭದ ರಣ ಕಹಳೆ!







ಕಳೆದ ಕೆಲ ದಿನಗಳಿಂದ ಕನ್ನಡಪ್ರಭದಲ್ಲಿ ಏತಪ್ರೋತವಾಗಿ ಬರುತ್ತಿರುವ Airtel ಕಂಪೆನಿ ವಿರೋಧೀ ವರದಿಗಳ ಹಿಂದೆ ಹೋಗಿ ನೋಡಿದರೆ ಕಂಡು ಬಂದದ್ದು ಅದೇ ಹಳೆ ಮುಖಗಳ "ಬಿಟ್ಟಿ" ಪ್ರೀಯತೆ.
ಮೊದಲೇನೋ "ಕನ್ನಡಪ್ರಭ"ದ ದೊರೆ ರಾಜೀವ ಚಂದ್ರಶೇಖರ್ - ಒಂದು ಕಾಲದಲ್ಲಿ BPL Mobile ಮಾಲಕ - ಅವರ ವೃತ್ತಿ ಮತ್ಸರಕ್ಕೆ ಭಟ್ ಮತ್ತು ಗುಂಪು ಈ ವರದಿಗಳನ್ನು ಸೃಷ್ಟಿ ಮಾಡುತ್ತಿದೆಯೆಂದು ನಂಬಿದ್ದೆ.

ಆದರೆ ಸ್ವಲ್ಪ ಕೇಳಿ ನೋಡಿದಾಗ ಕಂಡು ಬಂದದ್ದು ಸೈಟು, ಪ್ರಶಸ್ತಿ ದೋಚುವಲ್ಲಿ ಕಂಡುಬಂದಂತಹ ಆಸೆಬುರುಕುತನ.

ಇತ್ತೀಚೆಗೆ ನಮ್ಮ ದೇಶದಲ್ಲಿ ಅದ್ದೂರಿಯಾಗಿ ನಡೆದ Formula 1 ರೇಸಿನ ಪ್ರಮುಖ ಪ್ರಾಯೋಜಕ Airtel. ಕನ್ನಡಪ್ರಭದ non-ಮೂಲವಾಸಿಗಳ Facebook, Twitter ಗಳನ್ನು ಓದಿದವರಿಗೆ ಭಟ್, ಪ್ರತಾಪಸಿಂಹ ವಗೈರೆಗಳ F1 ಪ್ರೀತಿ ತಿಳಿದಿರುವಂತದ್ದೆ.
ಸೋ ಈ ಭಟ್, ಸಿಂಹಗಳು F1 ರೇಸಿನ ಬಿಟ್ಟಿ ಟಿಕೆಟುಗಳಿಗೆ Airtel ಬಳಿ ಬೇಡಿಕೆ ಇಟ್ಟಿವೆ. ಆದರೆ Formula 1 ನಂತಹ ಅಂತರಾಷ್ಟ್ರೀಯ ರೇಸುಗಳ ಟಿಕೆಟುಗಳು ಎಂದೋ ಮಾರಾಟ ಆಗಿ ಹೋಗಿರುತ್ತವೆ ಅಥವಾ ಪ್ರಾಯೋಜಕರಿಗೆ ಇಷ್ಟೇ ಎಂಬ ಮಿತಿ ಇರುತ್ತದೆ. ಅಷ್ಟಕ್ಕೂ ಕಳ್ಳೇಪುರಿಯಂತೆ ಹಂಚಲು F1 ಟಿಕೆಟುಗಳು BDA ಅಥವಾ MUDA ಸೈಟುಗಳಲ್ಲವಲ್ಲ? ಭಟ್ಟರು UK, Finland ಹೋಗಲು ಉಪಯೋಗಿಸಿದ ವಿಮಾನ ಕಂಪೆನಿಗಳಿಂದ ಸಿಗುವಂತಹ ಬಿಟ್ಟಿ ಟಿಕೆಟುಗಳಂತೂ ಅಲ್ಲವೇ ಅಲ್ಲ.

Airtel ನವರು ನಿಮಗೆ ಬಿಟ್ಟಿ ಟಿಕೆಟುಗಳನ್ನು ಕೊಡಲು ಆಗಲ್ಲ ಎಂದಿದ್ದಾರೆ.

ನಾವೂ ನೋಡ್ತೀವಿ ಅಂದಿದೆ ಕ.ಪ್ರ. ಗ್ಯಾಂಗು. ಹೇಗೂ ಏನೇನ್ ಮಾಡ್ತೀವೀ ನೋಡ್ತಾ ಇರಿ ಎನ್ನೋವ್ರು ನೋಡಿ!

ನಿಮಗೆ ನಾವು ಈಗಾಗಲೇ ಜಾಹಿರಾತು ಕೊಡುತ್ತಿದ್ದೇವೆ, ಇದಕ್ಕೆಲ್ಲಾ ಯಾಕೆ ಗಲಾಟೆ ಎಂದರೂ ತಣ್ಣಗಾಗದ ಕ.ಪ್ರ. ನಿಮ್ಮ ಜಾಹಿರಾತು ನಿಮ್ಮಲ್ಲೇ ಇರಲಿ, ಮೊದಲು ಟಿಕೆಟ್ ಕೊಡಿ ಎಂದು ಹಠಕ್ಕೆ ಬಿದ್ದರೂ Airtel ಅದಕ್ಕೆ ಸೊಪ್ಪು ಹಾಕಿಲ್ಲ. ಗಾಯಕ್ಕೆ ಉಪ್ಪು ಸವರಿದಂತೆ ಇವರ ದುರಾಶೆ ನೋಡಿ already schedule ಆಗಿದ್ದ ಜಾಹಿರಾತುಗಳನ್ನು ಹಿಂಪಡೆದಿದೆ.

ಅಲ್ಲಿಗೆ ಶುರುವಾಯ್ತು ನೋಡಿ "ಕನ್ನಡಪ್ರಭ"ದಲ್ಲಿ Airtel ಬಗ್ಗೆ ಪುಂಖಾನುಪುಂಖವಾಗಿ ಸರಣಿಯಂತೆ ಅಪ್ಪ ಅಮ್ಮ ಇಲ್ಲದ "ವಿಶೇಷ ವರದಿ"ಗಳು!

So now you know!

******************
English summary:

Kannada daily "Kannada Prabha" has been publishing series of so called "Special Reports" against Airtel for past few days.

On investigating what caused this rag to suddenly go after Airtel, I found usual hypocrisy of journalists in India - asking for freebies. In this instance Kannada Prabha Editorial Team demanded free passes to F1 Race held recently in India of which Airtel was the main sponsor. When that was denied Kannada Prabha team started this series against Airtel.

It has to be noted that Kannada Prabha is owned by Rajeev Chandrashekhar - Rajya Sabha MP - and former owner of BPL Mobile so there is probably some business jealousy in play here as well. It is a pity that journalists have fallen so low to demand freebies as if it is their birth right.

********

Saturday, August 20, 2011

ಪತ್ರಕರ್ತರಿಗೆ ಗಣಿ ಕಪ್ಪ: thatskannada.comನಲ್ಲಿ ಕೆಲವೇ ಘಂಟೆಗಳಲ್ಲಿ ಮಾಯವಾಯಿತೇಕೆ?

ಪತ್ರಕರ್ತರಿಗೆ ಗಣಿ ಕಪ್ಪ: thatskannada.comನಲ್ಲಿ ಕೆಲವೇ ಘಂಟೆಗಳಲ್ಲಿ ಮಾಯವಾಯಿತೇಕೆ?

ಪತ್ರಕರ್ತರಿಗೆ ಗಣಿ ಕಪ್ಪದ ಸುದ್ದಿ ನಿನ್ನೆ ಅಂತರ್ಜಾಲದಲ್ಲಿ ಚೆನ್ನಾಗಿಯೇ ಹರಿದಾಡಿತು.

thatskannada.com ಪೋರ‍್ಟಲಿನಲ್ಲೂ ಈ ಸುದ್ದಿ publish ಆಗಿತ್ತು.

ಆದರೆ ಪ್ರಾಯಷ: ಎರಡೇ ಘಂಟೆ ಅವಧಿಯಲ್ಲಿ ಆ ಲಿಂಕ್ ಕ್ಲಿಕ್ ಮಾಡಿದಾಗ ಓದುಗರಿಗೆ ಸಿಕ್ಕಿದ್ದು "ಪುಟ ಸಿಗುತ್ತಿಲ್ಲ"ವೆಂಬ ಮೆಸೇಜ್. ಮತ್ತೊಂದು ಘಂಟೆಯಲ್ಲಿ ಆ ಲಿಂಕೇ ಪೂರ್ತಿ ಮಾಯವಾಗಿ ಬಿಟ್ಟಿತು.

thatskannadaದ ಶಾಮಿಯೂ ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ಸಂಪಾದಕರೂ ಕ್ಲೋಸ್ ಫ್ರೆಂಡುಗಳಿರಬಹುದು. ಆದರೆ ಪತ್ರಿಕಾ ಧರ್ಮವನ್ನು ಮರೆತು ಮಿತ್ರರಿಗಾಗಿ ಅಥವಾ ಯಾವುದೋ ಒತ್ತಡಗೊಳಕ್ಕಾಗಿ ಶಾಮಿ ಹೀಗೆ ತನ್ನ ಎಡಿಟೋರಿಯಲ್ ಕತ್ತರಿ ಪ್ರಯೋಗ ಮಾಡಬಾರದಿತ್ತು.

ಏನಂತೀರಿ?

Friday, August 19, 2011

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ


First of all "ಪ್ರಜಾವಾಣಿ"ಗೆ ಭೇಷ್ ಅನ್ನಬೇಕಾಗಿದೆ. ಲೋಕಾಯುಕ್ತ ವರದಿ ಎಲ್ಲಾ ಮಾಧ್ಯಮಗಳಿಗೂ ಲಭ್ಯವಾಗಿದ್ದರೂ, "ಪ್ರಜಾವಾಣಿ’ಯೊಂದೇ systematic ಆಗಿ ವರದಿಯನ್ನು ಅವಲೋಕಿಸಿ ಎಳೆ ಎಳೆಯಾಗಿ ಅನಾವರಣ ಮಾಡುತ್ತಿದೆ.

ಹಿಂದೊಮ್ಮೆ ಈ ಬ್ಲಾಗಲ್ಲಿ ಗಣಿ ರೆಡ್ಡಿಗಳ ಎಂಜಲುಂಡಿರುವ ಪತ್ರಕರ್ತರ ಬಗ್ಗೆ ಬರೆದಿದ್ದೆ. ನೋಡಿ "ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು". ಅದೆಲ್ಲಾ ಇಂದು ನಿಜವಾಗಿದೆ.

ಇಂದಿನ "ಪ್ರಜಾವಾಣಿ" ನೋಡಿ:

  • ಆರ್.ಬಿ. (ರವಿ?) - ರೂ ೧೦ ಲಕ್ಷ
  • ವಿ.ಭಟ್ (ವಿಶ್ವೇಶ್ವರ?) - ರೂ ೨೫ ಲಕ್ಷ ಮತ್ತು 50 ಲಕ್ಷ (ಪ್ರಾಯಶ: ಇದರಲ್ಲೇ ಹೊಸ ಮನೆ ಕಟ್ಟಿದರೇನೋ?)
  • ಬೆಂಗಳೂರು ಮಿರರ್ - ರೂ ೫ ಲಕ್ಷ
  • ಡೆಕ್ಕನ್ ಕ್ರೋನಿಕಲ್ - ರೂ ೨೫ ಲಕ್ಷ
  • ಪ್ರೆಸ್ ಕ್ಲಬ್ - ೫ ಲಕ್ಷ
ಹೀಗೆ ಕಳ್ಳೇಪುರಿ ಹಂಚಿದಂತೆ ಪತ್ರಕರ್ತರಿಗೆ ಗಣಿ ರೆಡ್ಡಿಗಳು ಹಣ ಹಂಚಿದ್ದಾರೆ. ಇನ್ನು ಪ್ರೆಸ್ ಕ್ಲಬ್ ಗಳಿಗೂ ಲಕ್ಷಗಟ್ಟಳೆ ಹಂಚಿದ್ದಾರೆ. ಇದನ್ನೆಲ್ಲಾ ನೋಡಿದಾಗ ಗಣಿ ದೊರೆಗಳ ಪರವಾಗಿ direct ಅಥವಾ indirect ಆಗಿ ಬೆಂಬಲಿಸುವ ಪತ್ರಕರ್ತರಿರುವುದು ಆಶ್ಚರ್ಯದ ಸಂಗತಿಯೇ ಅಲ್ಲ.

ಭಾರೀ ಸಜ್ಜನರಂತೆ ಅಣ್ಣಾ ಹಜಾರೆ ಹೋರಾಟಕ್ಕೆ ಏಕ್ ದಂ ಪ್ರಚಾರ ಕೊಡುವ ಇದೇ ಪತ್ರಕರ್ತರು ಅತ್ತ ಗಣಿ ದೊರೆಗಳ ಎಂಜಲನ್ನೂ ಯಾವುದೇ ನಾಚಿಕೆಯಿಲ್ಲದೆ ಬಾಚಿಕೊಂಡದನ್ನು ನೋಡುವಾಗ ಅಸಹ್ಯವಾಗುತ್ತದೆ.

ಈ ದರಿದ್ರ side business ಪತ್ರಕರ್ತರಿಗೂ ಯಡ್ಯೂರಪ್ಪನವರಿಗೂ difference ಏನು?

Friday, August 5, 2011

ಎಸ್.ಎಂ.ಕೃಷ್ಣರ ಅಚಾತುರ್ಯಗಳ ಸುದ್ದಿ ಕನ್ನಡ ಮಾಧ್ಯಮದಲ್ಲೇಕಿಲ್ಲ?


ವಿಶ್ವಸಂಸ್ಥೆಯಲ್ಲಿ ಪೋರ್ಚುಗಲ್ಲಿನ ಸಚಿವರ ಭಾಷಣವನ್ನು ಹಲವು ನಿಮಿಷಗಳ ಕಾಲ ಶಾಲಾ ಬಾಲಕನಂತೆ ಎಸ್.ಎಂ.ಕೃಷ್ಣರವರು ಓದಿ ಪೇಚಿಗೀಡಾಗಿದ್ದು ಹಳೆ ಸುದ್ದಿ.

ನಿನ್ನೆ ಲೋಕಸಭೆಯಲ್ಲೂ ಹೀಗೇ ಆಯಿತು. ಲೋಕಸಭಾ ಸದಸ್ಯರು ಕೇಳಿದ ಪ್ರಶ್ನೆಗೆ ಎಸ್.ಎಂ.ಕೃಷ್ಣ ತಡಕಾಡಿ ಉತ್ತರ ಹುಡುಕಲು ಒದ್ದಾಡಿದ್ದು ಬರೋಬ್ಬರಿ ಕೆಲ ನಿಮಿಷಗಳು. [Read: "S.M.Krishna caught in sticky situation in Lok Sabha"]

ಲೋಕಸಭಾ ಅಧ್ಯಕ್ಷರೇ ಕಡೆಗೆ ’ಬಿಟ್ಬುಡಿ ಸ್ವಾಮೀ. Answer has been tabled ಅಂಥ ಹೇಳ್ಬುಡಿ" ಎಂದು ಹೇಳಬೇಕಾಯಿತು. ಈ ಘಟನೆಯನ್ನು PTI "Foreign minister appeared absent minded" ಎಂದು ವರದಿ ಮಾಡಿತು.

ಈಗ ಬಂದಿರುವ ಸುದ್ದಿ ಪ್ರಕಾರ ಕೃಷ್ಣ ಅವರು PTIಗೆ ತನ್ನನ್ನು Absent minded ಎಂದು ಕರೆದಿದ್ದಕ್ಕೆ ಲಾಯರ್ ನೋಟಿಸ್ ಕಳಿಸಿದ್ದಾರೆ. [Read: "S.M.Krishna serves legal notice to PTI for calling him absent minded"]

ಇನ್ನು ರಾಜ್ಯಸಭೆಯಲ್ಲೂ ಕೃಷ್ಣರ ದಿನ ಸರಿಯಾಗಿದ್ದಂತಿಲ್ಲ. The Telegraph ವರದಿ ಪ್ರಕಾರ ಕೃಷ್ಣರವರು ಪದೇ ಪದೇ lost ಆದಾಗ ಮುಜುಗರ ತಪ್ಪಿಸಿದ್ಧು ಸ್ವತ: ಮನಮೋಹನ ಸಿಂಗ್ ಮತ್ತು ಚಿದಂಬರಂ. [Read: Manmohan and Team bails Krishna]

ಕೃಷ್ಣರವರಿಗೀಗ ೮೦ ವರ್ಷ. ಲೋಕಸಭೆ, ರಾಜ್ಯಸಭೆಯಲ್ಲಿ ಗುಮಾಸ್ತರು ಬರೆದು ಕೊಟ್ಟದ್ದನ್ನೇ ಓದಲು ಸಾಧ್ಯವಾಗದ ಕೃಷ್ಣರು ವಿದೇಶೀ ನಾಯಕರೊಂದಿಗೆ ಅಣು ಒಪ್ಪಂದ ಮತ್ತಿತರ ಮಹತ್ವಪೂರ್ಣ ವಿಷಯಗಳಲ್ಲಿ ಹೇಗೆ ಮತ್ತು ಯಾವ ರೀತಿ ವ್ಯವರಿಸುತ್ತಾರೆಂದು ಎಣಿಸಿದರೇ ಭಯವಾಗುತ್ತದೆ. ಇನ್ನು ಕೃಷ್ಣರವರ ಸೆಕೆರೆಟರಿ ರಾಘವೇಂದ್ರ ಶಾಸ್ತ್ರಿ ಮಾಡುತ್ತಿರುವ ಗೋಲ್ ಮಾಲುಗಳನ್ನು ಈಗಾಗಲೇ english ಮಾಧ್ಯಮಗಳು ವರದಿ ಮಾಡಿವೆ.

ದೇಶದ ಎಲ್ಲಾ ಪತ್ರಿಕೆಗಳಲ್ಲಿ ಬಂದ ಈ ವರದಿಗಳನ್ನು ನೋಡಿದ ನನಗೆ ಆಶ್ಚರ್ಯವಾದದೆಂದರೆ ಕನ್ನಡ ಮಾಧ್ಯಮಗಳಲ್ಲಿ ಅಥವಾ ಬ್ಲಾಗುಗಳಲ್ಲಿ ಮೇಲಾವುದೇ ಸುದ್ದಿ ವರದಿಯಾಗಲೇ ಇಲ್ಲ. ಕನ್ನಡಿಗ ಸಚಿವ ಎಂಬ ಮಮತೆಯೇ? ಅಥವಾ ಅವರ ಕಾಲದಲ್ಲಿ BDA site gift ಪಡೆದುಕೊಂಡ ಬೆಂಗಳೂರಿನ ಪತ್ರಕರ್ತರು, ಸಂಪಾದಕರು ಇನ್ನೂ ಅದರ ಋಣ ತೀರಿಸುತ್ತಿದ್ದಾರೆಯೇ?

ಕನ್ನಡಿಗರ ಮಾನಮರ್ಯಾದೆಯನ್ನು ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಕಳೆಯುತ್ತಿರುವ ಕೃಷ್ಣ "ರಾಜ್ಯ ರಾಜಕೀಯವನ್ನು ಬಚಾಚ್ ಮಾಡಲು ಕೃಷ್ಣರಿಂದ ಮಾತ್ರ ಸಾಧ್ಯ", "ರಾಜ್ಯ ರಾಜಕೀಯಕ್ಕೆ ವಾಪಾಸಾಗಬೇಕು", ’ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಬೇಕು" ಎಂದು ಇನ್ನೂ ಬರೆಯುತ್ತಿರುವ ದೊಡ್ಡ ಪತ್ರಕರ್ತರ ಗುಂಪೇ ಇನ್ನೂ ಕನ್ನಡ ಮಾಧ್ಯಮ ಲೋಕದಲ್ಲಿರುವುದು ಕನ್ನಡ ಮಾಧ್ಯಮ ಲೋಕ ಎಷ್ಟು ದಿವಾಳಿಯೆದ್ದು ಹೋಗಿದೆಯೆಂಬುದರ ಸಂಕೇತವಲ್ಲದೆ ಮತ್ತೇನು?

Friday, July 22, 2011

ತಮ್ಮ ಕೆಲಸ ಸರಿಯಾಗಿ ಮಾಡದ ಲೋಕಾಯುಕ್ತರು ಊರಿಗೆಲ್ಲಾ ಉಪದೇಶ ಮಾಡುವುದು ಯಾಕೆ?


"Live by media, die by media" - ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಟಿ.ವಿ. ತೆರೆಯಲ್ಲಿ ಗಳಗಳ ಅಳುತ್ತಿರುವಾಗ ಅನಿಸಿದ್ದು ಹಾಗೆ.

ಈ ಬ್ಲಾಗಿನಲ್ಲಿ ಸಂತೋಷ್ ಹೆಗ್ಡೆಯವರ ಪ್ರಚಾರಪ್ರಿಯ ಪ್ರವೃತ್ತಿ ಬಗ್ಗೆ ಹಿಂದೊಮ್ಮೆ ನಾನು ಬರೆದಾಗ) ಅದೆಷ್ಟೋ ಮಂದಿ ಹೀಯಾಳಿಸಿ email ಕಳಿಸಿದ್ದರು. ನಿವೃತ್ತಿ ನಂತರವೂ ಯಾವುದೋ ಆಯೋಗಗಳಲ್ಲಿ, ಲೋಕಾಯುಕ್ತ ಹುದ್ದೆಗಳಲ್ಲಿ ತಮ್ಮ ಗತ ದಿನದ ಸೌಕರ್ಯ, ಗತ್ತನ್ನು ಪುನ: ಪಡೆಯುವ ನಿವೃತ್ತ ನ್ಯಾಯಾಧೀಶರ ದೊಡ್ಡ ಗುಂಪೇ ಈ ದೇಶದಲ್ಲಿದೆ. ಅಂತಹವರ ಸಾಲಿಗೆ ಜ| ಸಂತೋಷ ಹೆಗ್ಡೆಯವರೂ ಒಬ್ಬರು ಎಂದು ನಾನು ಆಗ ಬರೆದದ್ದು ಈಗ ನಿಜವಾಗಿದೆ.

ಯಾವುದೇ ಕೆಲಸದಲ್ಲಿ professionalism ಎಂದಿರುತ್ತದೆ. ಈ ಲೋಕಾಯುಕ್ತ ಹುದ್ದೆಯೇ ನೋಡಿ - ತಾನು charge ತೆಗೆದುಕೊಂಡ ದಿನದಿಂದಲೂ ಪತ್ರಿಕಾಗೋಷ್ಠಿ, ಕೆಮರಾ ಮುಂದೆ ಸಂತೋಷ ಹೆಗ್ಡೆಯವರು ಮೆರೆಯವುದರಲ್ಲಿ ಕಾಲ ಕಳೆದರಲ್ಲಬೇ, ಪುಡಿ ೫೦೦ / ೧೦೦೦ ರೂ ಲಂಚ ತೆಗೆದುಕೊಳ್ಳುವವರನ್ನು ಹಿಡಿಯುವಲ್ಲಿ ತೋರಿದ ಪೌರುಷವನ್ನು ದೊಡ್ಡ ಹೆಗ್ಗಣಗಳನ್ನು ಹಿಡಿಯುವುದರಲ್ಲಿ ತೋರಿಸಲೇ ಇಲ್ಲ. ಅದು ಬಯಲು ಮಾಡುತ್ತೇನೆ, ಇದು ಬಯಲು ಮಾಡುತ್ತೇನೆಯೆಂದು ಹೇಳುವುದರಲ್ಲಿ ಕಾಲ ಕಳೆದರೇ ಹೊರತು ಬೇರೇನು ಸಾಧಿಸಿದ್ದಾರೆ ಎಂದು ಪ್ರಶ್ನಿಸಬೇಕಾಗುತ್ತದೆ.

ಲೋಕಾಯುಕ್ತರಾಗಿರುವಾಗಲೇ ಅತ್ತ ದೆಹಲಿಯಲ್ಲಿ civic societyಯೆಂಬ ಕೈಲಾಗದ media savvy retireeಗಳ ಜೊತೆ ಮೆರೆದು ಇವರು ಸಾಧಿಸಿದ್ದೇನು? ತಮಗೆ ಎಲ್ಲಾ power, ಸರಕಾರೀ ಸೌಲಭ್ಯ, ಜನರ goodwill ಇದ್ದರೂ ಒಂದು ಸರಿಯಾಗಿ confidential ವರದಿ ತಯಾರು ಮಾಡಲು ಸಾಧ್ಯವಾಗದ ಇವರಿಗೆ ರಾಜಕಾರಣಿಗಳ ವಿರುದ್ಧ ಕಾರಲು ನೈತಿಕ ಅರ್ಹತೆ ಇದೆಯೇ? ರಾಜಕಾರಣಿಗಳಿಗಾದರೋ ಜನರ ಮುಂದೆ ಹೋಗಲು ಚಲಾವಣೆಯಲ್ಲಿರಬೇಕಾಗುತ್ತದೆ - ಆದರೆ ಸಂವಿಧಾನ ಬದ್ಧ ಸಂಸ್ಥೆಯ ಮುಖ್ಯಸ್ಥರೋರ್ವರು ಯಕ:ಶ್ಚಿತ್ ರಾಜಕಾರಣಿಯಂತೆ mediaದಲ್ಲಿ hero ಆಗಲು ಹೋಗಿ ಸೋತಿದ್ದಾರೆ.

ಸಂತೋಷ್ ಹೆಗ್ಡೆಯವರು ಟಿ.ವಿ. ಕೆಮರಾಗಳ ಮುಂದೆ ಪೋಸ್ ಕೊಟ್ಟು ಹಾಳು ಮಾಡಿದ ೧೦% ಸಮಯವನ್ನು ತಮ್ಮ ವರದಿಯನ್ನು ಗೌಪ್ಯವಾಗಿ ತಯಾರಿಸಲು ವ್ಯಯ ಮಾಡಿದರೆ ಸಾಕಿತ್ತು. ಅದು ಬಿಟ್ಟು ಪ್ರತೀ ದಿನ ಟಿವಿ ಕೆಮರಾಗಳ ಮುಂದೆ, ದೆಹಲಿ civic society ಯೆಂಬ ಜೋಕರುಗಳ ಜೊತೆ time waste ಮಾಡಿದ ಇವರು (ದೆಹಲಿಯಲ್ಲೂ ಇವರು ಸಾಧಿಸಿದ್ದೇನೂ ಇಲ್ಲ) ಈಗ ಅದೇ ಟಿವಿ ಚಾನೆಲ್ಲುಗಳಲ್ಲಿ ತಮ್ಮ ವರದಿ ಲೀಕಾದದನ್ನು ನೋಡಿ ಕಣ್ಣೀರು ಹಾಕುತ್ತಿರುವುದು ವಿಪರ್ಯಾಸ!

ಸರಕಾರಗಳ ವಿರುದ್ಧ, ರಾಜಕಾರಣಿಗಳ ವಿರುದ್ಧ ಪ್ರತಿದಿನವೆಂಬಂತೆ ಹೋದಲ್ಲಿ ಬಂದಲ್ಲಿ ಭಾಷಣ ಮಾಡಿದ ಸಂತೋಷ ಹೆಗ್ಡೆಯವರು ಎಲ್ಲಾ ಸರಕಾರಗಳು, ರಾಜಕಾರಣಿಗಳು ಅಪ್ರಯೋಜಕರು ಎಂಬ ಭಾವನೆ ಯುವಜನರಲ್ಲಿ ಮೂಡುವಲ್ಲಿ ಯಶಸ್ವಿಯಾಗಿದ್ದರು - ಆದರೆ ಈಗ? ಒಂದು ಯಕ:ಶ್ಚಿತ್ ವರದಿಯ confidentiality maintain ಮಾಡಲೂ ಇವರ ಕೈಲಾಗಲಿಲ್ಲ ಯಾಕೆ? ದೇಶದ ಎಲ್ಲಾ ಸಮಸ್ಯೆಗಳಿಗೆ ರಾಜಕಾರಣಿಗಳು ಕಾರಣ ಎಂದು ಒಂಥರಾ ಜನಪ್ರಿಯ populism ಅಥವಾ playing to the gallery ಅಂಥಾರಲ್ಲ - ಅದನ್ನು ಮಾಡಲು ಹೋಗಿ ತನ್ನ ಕೆಲಸ ಸರಿ ಮಾಡದೆ ಈಗ ಅತ್ತರೆ ಏನು ಪ್ರಯೋಜನ?

Sunday, June 19, 2011

ಇಂಟರನೆಟ್ಟಿನ ಕನ್ನಡ ತಾಲಿಬಾನಿಗಳು


ಕಳೆದ ವಾರ ಯಾರೋ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯ ತನ್ನ ಫೇಸ್ ಬುಕ್ಕಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು ಅವರ "ಕನ್ನಡೇತರರು ಕನ್ನಡ ಕಲಿಯಲೇಬೇಕು" ಎಂಬ ಹೇಳಿಕೆಯನ್ನು ತೆಗಳಿದ್ದನ್ನೇ ಆಕಾಶ ಬೀಳುತ್ತಿದೆಯೆಂದು ಪ್ರತಿಕ್ರಿಯಿಸಿದ ಕೆಲ ಕೆಲಸವಿಲ್ಲದ ಬ್ಲಾಗರುಗಳು ಈಗ ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕುವಷ್ಟು ಮುಂದುವರಿದಿರುವುದು ಪ್ರಜ್ಣಾವಂತ ಕನ್ನಡಿಗರಿಗೆಲ್ಲಾ ಕಳಂಕ ತರುವಂತಹ ಸುದ್ದಿ.

ಕೆಲಸವಿಲ್ಲದೆ ಕಚೇರಿಯಲ್ಲಿ ಬೆಂಚಿನಲ್ಲಿರುವ ಕನ್ನಡ ಸಾಪ್ಟವೇರ್ ಇಂಜಿನಿಯರುಗಳು, ಕೊಲ್ಲಿ ರಾಷ್ಟ್ರಗಳಲ್ಲಿ ವೇಳೆ ಕಳೆಯುವುದು ಹೇಗೆ ಎಂದು ಗೊತ್ತಿಲ್ಲದ ಆಯಿಲ್ ಕಂಪೆನಿ ಕೆಲಸಗಾರರು ಇಂಟರನೆಟ್ಟು browse ಮಾಡುತ್ತಾ ಯಾರು ಕನ್ನಡದ ವಿರುದ್ದ ಸೊಲ್ಲೆತ್ತುತ್ತಾರೆಯೆಂಬುದನ್ನೇ ಕಾಯುತ್ತಾ ಕುಳಿತಿರುವಂತಿದೆ. ಅತ್ತ ಬೀದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪುಂಡರು ಕನ್ನಡದ ಹೆಸರಲ್ಲಿ ರೋಲ್ ಕಾಲ್ ಉದ್ದಿಮೆ ನಡೆಸುತ್ತಿರುವಂತೆ, ಇತ್ತ ಇಂಟರನೆಟ್ಟಿನಲ್ಲಿ ಅಬ್ಬೇಪಾರಿಗಳಂತೆ ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುವ ಐಟಿ ಬಿಟಿಗಳು, wannabe ಪತ್ರಕರ್ತ ನಿರುದ್ಯೋಗಿಗಳು ಕನ್ನಡೇತರರ ವಿರುದ್ದ ಅಂತರ್ಜಾಲದಲ್ಲಿ ಮತ್ತೀಗ ದೂರವಾಣಿಯಲ್ಲಿ ಬೆದರಿಕೆ ಹಾಕುವಷ್ಟು ಮುಂದಿರುವುದು ಯಾವ ಕನ್ನಡ ಪ್ರೇಮವೆಂಬುದು ಅರ್ಥವಾಗುತ್ತಿಲ್ಲ.

ಈ ಇಂಟರನೆಟ್ಟು ಹೀರೋಗಳ "ಬೆಂಗಳೂರಲ್ಲಿ ಬದುಕಬೇಕಾದರೆ ಕನ್ನಡ ಕಲಿಯಲೇಬೇಕು" ಎಂಬ ವಾದವಾದರೂ logical ಅಥವಾ ಸಂವಿಧಾನ ಬದ್ಧವಾಗಿದೆಯೇ?

ಉತ್ತರ ಭಾರತೀಯನ ವಿರುದ್ದ ಅಂತರ್ಜಾಲದಲ್ಲಿ ಹಿಗ್ಗಾಮುಗ್ಗ ಬರೆದ ಅರಬ್ ರಾಷ್ಟ್ರದ ದೋಹಾ ಕತಾರಿನಲ್ಲಿ ಕುಳಿತಿರುವ ಪ.ರಾಮಚಂದ್ರ (ಖ್ಯಾತ ಪತ್ರಕರ್ತ ಪ.ಗೋಪಾಲಕೃಷ್ಣ ಅವರ ಸುಪುತ್ರ) "ಸಂಪಾದಕೀಯ" ಎಂಬ ಬ್ಲಾಗಿನಲ್ಲಿ ಹೇಗೆ ತಾನು ರಾಬಿನ್ ಚುಗ್ಗಿಗೆ ಫೋನ್ ಇಮೇಲ್ ಮಾಡಿದೆಯೆಂದು ಭಾರೀ ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ತಾನು ಸ್ವತ: ಅರಬ್ ದೇಶದಲ್ಲಿ ಹಲವಾರು ವರ್ಷಗಳಿಂದ ಬದುಕುತ್ತಿರುವ ಇವರು ಅಲ್ಲಿನ ಸ್ಥಳೀಯ ಭಾಷೆ ಅರೇಬಿಕ್ ಕಲಿತಿದ್ದಾರೆಯೇ? ಮಕ್ಕಳಿಗೆ ಅರೇಬಿಕ್ ಕಲಿಸುತ್ತಿದ್ದಾರೆಯೇ (ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರೆಲ್ಲರು ತಮ್ಮ ಮಕ್ಕಳನ್ನು ಕಳಿಸುವುದು CBSE syllabus "ಇಂಡಿಯನ್ ಸ್ಕೂಲುಗಳಿಗೆ ಅಥವಾ ಅಮೆರಿಕನ್ ಸ್ಕೂಲುಗಳಿಗೆ - ಎಲ್ಲೂ ಅರೇಬಿಕ್ ಕಲಿಸುವುದಿಲ್ಲ) ಎಂದು ಪ್ರಶ್ನಿಸಬೇಕಾಗುತ್ತದೆ.

ಇತ್ತ ಇಂಟರನೆಟ್ಟಿನಲ್ಲಿ ಕನ್ನಡ ಪರ ಬೊಬ್ಬೆ ಹಾಕುವ ಐಟಿ ಬಿಟಿ ಅಥವಾ ಕನ್ನಡ ಪತ್ರಕರ್ತರು ಎಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ? ತಾವೇ ಎಲ್ಲೋ ಪರ ರಾಷ್ಟ್ರಗಳಲ್ಲಿ ಸ್ಠಳೀಯ ಭಾಷೆ ಕಲಿಯದೆ ಜೀತದಾಳುಗಳಾಗಿ ಬದುಕುತ್ತಿರುವ ಈ NRIಗಳಿಗೆ ಕನ್ನಡೇತರರು ಕನ್ನಡ ಕಲಿಯಲೇಬೇಕೆಂಬ ಹಠವಾದರೂ ಏಕೆ?

ಹೀಗೆ ಗಾಜಿನ ಮನೆಯಲ್ಲಿ ಕುಳಿತಿರುವವರು ಯಾವನೋ ರಾಬಿನ್ ಚುಗ್ ನ ಕಂಪೆನಿ ಹೆಸರನ್ನು ಬ್ಲಾಗುಗಳಲ್ಲಿ ಹಾಕುವುದು, ಅವನಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುವುದು, ಅವನ ಕಂಪೆನಿ HRಗೆ ಫೋನ್ ಮಾಡಿ ಅವನನ್ನು ಕೆಲಸದಿಂದ ತೆಗೆಯುವಂತೆ ಒತ್ತಾಯ ಮಾಡುವುದು - ಇದು ಯಾವ ಕನ್ನಡ ಪ್ರೇಮ ಸ್ವಾಮೀ?

ನಾಳೆ ಮಂಗಳೂರು, ಉಡುಪಿಯವರು "ಹೊರಗಿನವರು ಇಲ್ಲಿ ಬದುಕಬೇಕಾದರೆ ತುಳು/ಕೊಂಕಣಿಯನ್ನು ಒಂದು ವರ್ಷದೊಳಗೆ ಕಲಿಯುವುದು ಕಡ್ಡಾಯ" ಎಂದು ಚಳುವಳಿ ಮಾಡಿದರೆ ಉಗ್ರ ಕನ್ನಡ ಓರಾಟಗಾರರು ಏನ್ನೆನ್ನುತ್ತಾರೋ?

ಹೇಳೀ ಕೇಳೀ ಮುಖ್ಯಮಂತ್ರಿ ಚಂದ್ರು ಒಬ್ಬ ರಾಜಕಾರಣಿ - populist ಹೇಳಿಕೆಗಳನ್ನು ನೀಡುವ ಸಂವಿಧಾನಬದ್ಧವಲ್ಲದ "ಕನ್ನಡ ಅಭಿವೃದ್ದಿ ಪ್ರಾಧಿಕಾರ"ವೆಂಬ ಹಲ್ಲಿಲ್ಲದ ಸಂಸ್ಠೆಯ ಅಧ್ಯಕ್ಷ. ಸದಾ ಸುದ್ದಿಯಲ್ಲಿರಲು ಇಂತಹ ಹೇಳಿಕೆಗಳನ್ನು (ಒಂಥರಾ ಹೇಳಿಕೆಗಳಲ್ಲೇ ಹೀರೋ ಆಗುತ್ತಿರುವ ಲೋಕಾಯುಕ್ತ ಸಂತೋಷ ಹೆಗ್ಡೆಯವರಂತೆ!) ನೀಡುತ್ತಿರುವುದು ಅನಿವಾರ್ಯ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂತಹ ತುಘಲಕ್ ಯೋಜನೆಗಳನ್ನು ಸರಕಾರಕ್ಕೆ recommend ಮಾಡಬಹುದಷ್ಟೇ. ಯಾವುದೇ ಶಾಸನ ಸಭೆ ಯಾ ಸರಕಾರ ಚಂದ್ರು ಅವರ ಸಂವಿಧಾನದ ಮೂಲಭೂತ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿರುವ recommendation ಒಪ್ಪುವುದು ಸಾಧ್ಯವೇ ಇಲ್ಲ - ಒಪ್ಪಿದರೂ ನ್ಯಾಯಾಲಯಗಳು ಅವನ್ನು ಒಪ್ಪುವುದು ಕಷ್ಟ.

ಅದು technicalityಯಾದರೆ, ಇನ್ನು economic impact ಬಗ್ಗೆ ಯೋಚಿಸಿದ್ದಾರೆಯೇ? ಈ ಎಲ್ಲಾ ಕಂಪೆನಿಗಳು ಬಾಗಿಲು ಮುಚ್ಚಿ ಹೋದರೆ ಅದರ ಹೊಡೆತ ಬೀಳುವುದು ಬಡ ಕನ್ನಡಿಗರಷ್ಟೇ. ಯಾಕೆಂದರೆ ಈ ಐಟಿ ಬಿಟಿಗಳು ಜರ್ಮನಿ, ಅಮೆರಿಕಾ ಎಂದು ಬುರ್ರೆಂದು ಹಾರಿಹೋಗುತ್ತಾರೆ. ಪ.ರಾಮಚಂದ್ರರಂತವರು ಕೊಲ್ಲಿ ರಾಷ್ಟ್ರಗಳಲ್ಲಿ ಹಾಯಾಗಿ ತಮ್ಮ ಜೀತದ ಕೆಲಸದಲ್ಲಿ ಮಗ್ನರಾಗುತ್ತಾರೆ. ಆದರೆ ಮುಚ್ಚಿದ ಕಂಪೆನಿಯ ಬಡ ಸೆಕ್ಯೂರಿಟಿ ಗಾರ್ಡುಗಳು, ಡ್ರೈವರುಗಳು, ಕ್ಯಾಂಟೀನ್ ಹುಡುಗರು ತಮ್ಮ "ಕನ್ನಡ ಹೊಟ್ಟೆ" ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಳ್ಳಬೇಕಷ್ಟೇ.

ಭಾರತದ ಸಂವಿಧಾನ ಭಾರತೀಯ ಪ್ರಜೆಗಳೆಲ್ಲರಿಗೂ ದೇಶದೊಳಗೆ ಎಲ್ಲಿ ಬೇಕಾದರೂ ಹೋಗಿ ನೆಲೆಸುವ, ತಮ್ಮ ಭಾಷೆ ಸಂಸ್ಕೃತಿ ಆಚರಿಸುವ ಮೂಲಭೂತ ಹಕ್ಕು ನೀಡಿದೆ. ಇದನ್ನು ತಿಳಿದೂ ಅಥವಾ ತಿಳಿಯದೆಯೋ ಈ ಇಂಟರನೆಟ್ಟಿನ NRI, ಕನ್ನಡ ತಾಲಿಬಾನಿಗಳು ತಮ್ಮ ಮನೆಯಲ್ಲಿ, ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಧೈರ್ಯ ತೋರಿಸಲಿ. ಪ್ರತಿ ವರ್ಷ ಡಜನುಗಟ್ಟಳ್ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ - ಮುಂದಿನ ಪೀಳಿಗೆಯೇ ಕನ್ನಡ ಎಂದರೆ ಏನು ಎಂದು ಪ್ರಶ್ನಿಸುವ ಪರಿಸ್ಥಿತಿ ಇಂದಿದೆ.

ಇಂತಹ ಮುಖ್ಯವಾದ ವಿಷಯಗಳನ್ನು ಚರ್ಚಿಸುವ ಬದಲು ಯಾರೋ ತನ್ನ ಖಾಸಗಿ ಫೇಸ್ ಬುಕ್ಕಿನಲ್ಲಿ ಏನೋ ಕಮೆಂಟು ಮಾಡಿದ ಎಂದು ಅವನಿಗೆ ಜೀವ ಬೆದರಿಕೆ, ಅವನ ಕಂಪೆನಿಯ HR ವಿಭಾಗಕ್ಕೆ ದೂರು ಕೊಟ್ಟು ಅವನನ್ನು ಕೆಲಸದಿಂದ ತೆಗೆದು ಹಾಕುವಂತೆ ಬೆದರಿಕೆ ಹಾಕುವ ತನಕ ಈ ವಿಷಯವನ್ನು ಎಳೆದಿರುವುದು ತಾಲಿಬಾನಿತನವಲ್ಲದೆ ಮತ್ತೇನು?

ಈ ಇಂಟರನೆಟ್ಟು ಗೂಂಡಾಗಿರಿ ನಾಯಕತ್ವ ವಹಿಸಿದ ಹೊಳೇನರಸೀಪುರ ಮಂಜುನಾಥ ತಿಮ್ಮಯ್ಯ - ಈ ವ್ಯಕ್ತಿಯೂ ಅರಬ್ ರಾಷ್ಟ್ರಗಳಲ್ಲಿ ಎಷ್ಟೋ ವರ್ಷ ದುಡಿದರೂ ಅರೇಬಿಕ್ ಕಲಿತ್ತಿದ್ದಾರೆಯೇ ಎಂದು ಕೇಳಬೇಕಾಗಿದೆ.

ಪೇಜ್ ಹಿಟ್ ದುರಾಶೆಯಲ್ಲಿ ಉದ್ರೇಕಕಾರಿ ಬರಹಗಳನ್ನು ಪ್ರಕಟಿಸಿ ಅಂತರ್ಜಾಲದ Mobಗಳನ್ನು ಛೂ ಬಿಡುವ "ಸಂಪಾದಕೀಯ" ಬ್ಲಾಗ್ ಮತ್ತಿತರ motive ಓಕೆ ಎನ್ನೋಣ - ಆದರೆ ಪ.ರಾಮಚಂದ್ರ, ಹೊಳೇನರಸೀಪುರ ಮಂಜುನಾಥರಂತಹ otherwise perfectly reasonable ಜನ, ತಾವು ಗಾಜಿನ ಮನೆಯಲ್ಲಿ ಕುಳಿತ್ತಿದ್ದರೂ ಇಂಟರನೆಟ್ಟಿನಲ್ಲಿ ಭಾಷಾಂಧರಾಗಿ ತಾಲಿಬಾನಿಗಳ ತರಹ ವರ್ತಿಸುವುದು ಕಂಡಾಗ ಬೇಸರವಾಗುತ್ತದೆ.

*************
ಅಂದ ಹಾಗೆ ಕ.ರಾ.ವೇ.ಯ ನಾರಾಯಣ "ರೋಲ್ ಕಾಲ್" ಗೌಡರು ಏಕ್ ದಂ ತಣ್ಣಗಾಗಿ ಹೋಗಿರುವುದನ್ನು ಗಮನಿಸಿದ್ದೀರೆಯೇ? ತನ್ನ ಸ್ವಜಾತಿ ಬಾಂಧವ ಅಶೋಕ ಗೃಹ ಮಂತ್ರಿಯಾದ ಕೂಡಲೇ ನಾರಾಯಣ ಗೌಡರು ಗಪ್ ಚುಪ್! ಒಂದು ಮೂಲದ ಪ್ರಕಾರ ಕರಾವೇಯ ಪುಂಡರ ಮೇಲಿರುವ ಕೇಸುಗಳನ್ನು ತೆಗೆಯುವ ಭರವಸೆ ಅಶೋಕರಿಂದ ದೊರೆತಿದೆಯಂತೆ. ಇನ್ನೊಂದು ಮೂಲದ ಪ್ರಕಾರ ತನ್ನ ಆಡಳಿತದಲ್ಲಿ ಕರಾವೇ ಯಾವುದೇ ಗೂಂಡಾಗಿರಿ ಮಾಡದೇ ಇರಲು ಅಶೋಕರಿಂದ ಗೌಡರಿಗೆ ಅದೆಷ್ಟೋ ಕಪ್ಪ ಕಾಣಿಕೆ ಸಂದಾಯವಾಗಿದೆಯಂತೆ. ಏನೇ ಇರಲಿ ಕರಾವೇ ಪುಂಡರ ದಾದಾಗಿರಿ, ಪುಂಡಾಟ ತಣ್ಣಗೆ ಆಗಿರುವುದಂತೂ ನಿಜ!