Friday, August 19, 2011

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ


First of all "ಪ್ರಜಾವಾಣಿ"ಗೆ ಭೇಷ್ ಅನ್ನಬೇಕಾಗಿದೆ. ಲೋಕಾಯುಕ್ತ ವರದಿ ಎಲ್ಲಾ ಮಾಧ್ಯಮಗಳಿಗೂ ಲಭ್ಯವಾಗಿದ್ದರೂ, "ಪ್ರಜಾವಾಣಿ’ಯೊಂದೇ systematic ಆಗಿ ವರದಿಯನ್ನು ಅವಲೋಕಿಸಿ ಎಳೆ ಎಳೆಯಾಗಿ ಅನಾವರಣ ಮಾಡುತ್ತಿದೆ.

ಹಿಂದೊಮ್ಮೆ ಈ ಬ್ಲಾಗಲ್ಲಿ ಗಣಿ ರೆಡ್ಡಿಗಳ ಎಂಜಲುಂಡಿರುವ ಪತ್ರಕರ್ತರ ಬಗ್ಗೆ ಬರೆದಿದ್ದೆ. ನೋಡಿ "ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು". ಅದೆಲ್ಲಾ ಇಂದು ನಿಜವಾಗಿದೆ.

ಇಂದಿನ "ಪ್ರಜಾವಾಣಿ" ನೋಡಿ:

  • ಆರ್.ಬಿ. (ರವಿ?) - ರೂ ೧೦ ಲಕ್ಷ
  • ವಿ.ಭಟ್ (ವಿಶ್ವೇಶ್ವರ?) - ರೂ ೨೫ ಲಕ್ಷ ಮತ್ತು 50 ಲಕ್ಷ (ಪ್ರಾಯಶ: ಇದರಲ್ಲೇ ಹೊಸ ಮನೆ ಕಟ್ಟಿದರೇನೋ?)
  • ಬೆಂಗಳೂರು ಮಿರರ್ - ರೂ ೫ ಲಕ್ಷ
  • ಡೆಕ್ಕನ್ ಕ್ರೋನಿಕಲ್ - ರೂ ೨೫ ಲಕ್ಷ
  • ಪ್ರೆಸ್ ಕ್ಲಬ್ - ೫ ಲಕ್ಷ
ಹೀಗೆ ಕಳ್ಳೇಪುರಿ ಹಂಚಿದಂತೆ ಪತ್ರಕರ್ತರಿಗೆ ಗಣಿ ರೆಡ್ಡಿಗಳು ಹಣ ಹಂಚಿದ್ದಾರೆ. ಇನ್ನು ಪ್ರೆಸ್ ಕ್ಲಬ್ ಗಳಿಗೂ ಲಕ್ಷಗಟ್ಟಳೆ ಹಂಚಿದ್ದಾರೆ. ಇದನ್ನೆಲ್ಲಾ ನೋಡಿದಾಗ ಗಣಿ ದೊರೆಗಳ ಪರವಾಗಿ direct ಅಥವಾ indirect ಆಗಿ ಬೆಂಬಲಿಸುವ ಪತ್ರಕರ್ತರಿರುವುದು ಆಶ್ಚರ್ಯದ ಸಂಗತಿಯೇ ಅಲ್ಲ.

ಭಾರೀ ಸಜ್ಜನರಂತೆ ಅಣ್ಣಾ ಹಜಾರೆ ಹೋರಾಟಕ್ಕೆ ಏಕ್ ದಂ ಪ್ರಚಾರ ಕೊಡುವ ಇದೇ ಪತ್ರಕರ್ತರು ಅತ್ತ ಗಣಿ ದೊರೆಗಳ ಎಂಜಲನ್ನೂ ಯಾವುದೇ ನಾಚಿಕೆಯಿಲ್ಲದೆ ಬಾಚಿಕೊಂಡದನ್ನು ನೋಡುವಾಗ ಅಸಹ್ಯವಾಗುತ್ತದೆ.

ಈ ದರಿದ್ರ side business ಪತ್ರಕರ್ತರಿಗೂ ಯಡ್ಯೂರಪ್ಪನವರಿಗೂ difference ಏನು?

2 comments:

  1. ಇವತ್ತಿನ ಪ್ರ. ವಾ. ದಲ್ಲಿ ನೋಡಿ ನನಗೂ ಆಶ್ಚರ್ಯವಾಯ್ತು. ಯಾವ ಹುತ್ತದಲ್ಲಿ ಎಂತಹ ಹಾವಿರುತ್ತೋ !!

    ReplyDelete