ಈ ಬ್ಲಾಗ್ ಪೋಸ್ಟಿನ ಹೆಡ್ಡಿಂಗು rhetorical ಅಲ್ಲ. ಎರಡು ದಿನಗಳ ಹಿಂದೆ ಕುಮಟಾದಲ್ಲಿ ನಡೆದ ಘಟನೆಯ ಅವಲೋಕನ.
ಒಂದು ಘಟನೆಯನ್ನು - ಅದರಲ್ಲೂ ಪತ್ರಕರ್ತನೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಾಗ ಅದನ್ನು ತಮಗೆ ಬೇಕಾದಂತೆ ಹೇಗೆ ತಿರುಚಬಹುದೆನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.


ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೊರೆಯುವ ವಿ.ಕ. ಈಗ ಪತ್ರಕರ್ತನ ವಿರುದ್ಧ ದೂರು ನೀಡಿದ ಬಡಪಾಯಿ ಮಹಿಳೆಯನ್ನೇ ವೇಶ್ಯೆಯೆಂದು ಹೀಯಾಳಿಸಿದಷ್ಟೇ ಅಲ್ಲ, ಮಹಿಳೆಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿ ಮಾನಹರಣ ಮಾಡಿದೆ. ಒಂಥರಾ "ಮಹಿಳೆ provocative ಆಗಿ dress ಮಾಡಿಕೊಂಡರೆ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ - ಅವಳದ್ದೇ ತಪ್ಪು" ಎಂಬ ತಾಲಿಬಾನಿಗಳ, ಕೆಲ Male Chauvinist Pigಗಳು ವಾದಿಸಿದಂತೆ. ಮಾಧ್ಯಮ ಸ್ವಾತಂತ್ರ್ಯವೆಂದರೆ ಪತ್ರಕರ್ತರು ಅತ್ಯಾಚಾರ ಮಾಡುವುದು OK ಎಂಬಲ್ಲಿಗೆ ಬಂದಿರುವುದು ನಮ್ಮ ದೌರ್ಭಾಗ್ಯವಷ್ಟೇ.
ಹಿಂದೆ ಯಾರೋ ಪೇದೆ ನೋಟೀಸ್ ಕೊಟ್ಟನೆಂದ ಮಾತ್ರಕ್ಕೆ ಮಾಧ್ಯಮ ಸ್ವಾತಂತ್ರ್ಯಹರಣವಾಯಿತೆಂದು ಗಣ್ಯರ ಹೆಸರಲ್ಲಿ ಏನೇನೋ ಪ್ರಕಟಿಸಿ ಸಿಕ್ಕಿ ಬಿದ್ದ (ಇಲ್ಲಿ ನೋಡಿ DGP ಅಜಯ ಸಿಂಹರ ಪತ್ರ) ವಿಜಯ ಕರ್ನಾಟಕದ Fake SMS, Fake Opinion generators ಇನ್ನೂ ಪಾಠ ಕಲಿತಂತಿಲ್ಲ.
ಅತ್ಯಾಚಾರಿ ಪ್ರಕರಣ ಆರೋಪಿ ವಿ.ಕ.ನ. ಪತ್ರಕರ್ತನ ಪರವಾಗಿ ರಾಜಕೀಯ ನಿರುದ್ಯೋಗಿಗಳಾದ ಆರ್.ವಿ.ದೇಶಪಾಂಡೆ, ಎಂ.ಸಿ.ನಾಣಯ್ಯ ಮತ್ತು ಹೊರಟ್ಟಿಗಳಂತಹವರಿಂದ ಹೇಳಿಕೆ ಕೊಡಿಸಿದೆ. ಶಿಕ್ಷಕರ ವರ್ಗಾವಣೆ ದಂಧೆಗೆ ತಡೆ ಹಾಕಿ ತಮ್ಮ ಖಮಾಯಿಗೆ ಕಲ್ಲು ಹಾಕಿದ ವಿಶ್ವೇಶ್ವರ ಹೆಗಡೆಯವರ ಮೇಲಿರುವ ಸಿಟ್ಟನ್ನು ಹೊರಟ್ಟಿ ಈಗ ಅತ್ಯಾಚಾರಿಯನ್ನು ಬೆಂಬಲಿಸಲು ಬಳಸಿಕೊಂಡದ್ದು ಹೊರಟ್ಟಿಯ ಸದ್ಯದ ಮಾನಸಿಕತೆಯನ್ನು ತೋರಿಸುತ್ತದೆಯೆಷ್ಟೇ.
ಇನ್ನು ಅತ್ಯಾಚಾರಿಯನ್ನು ಬಂಧಿಸಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದರ ಸಾಕ್ಷಿಯೆಂದು ನಾಣಯ್ಯನವರು ಹೇಳಿದನ್ನು ನಂಬಲು ಜನರೇನು ಕಿವಿ ಮೇಲೆ ಹೂವಿಟ್ಟುಕೊಂಡಿದ್ದಾರ ಸ್ವಾಮೀ? ಸಂಜೆ ೭ ಘಂಟೆಯ ಮೇಲೆ ನಾಣಯ್ಯನವರಿಗೆ ಫೋನ್ ಮಾಡಿದರೆ ಹೇಗೆ ಬೇಕಾಂದಂತಹ ಅಭಿಪ್ರಾಯವನ್ನೂ ಪಡೆಯಬಹುದೆಂಬುದನ್ನು ಬೆಂಗಳೂರಿನ ಹಿರಿ ಮರಿ ಪತ್ರಕರ್ತರಿಗೂ ತಿಳಿದಿರುವ ವಿಷಯ - ಇಂತಹ ಕುಡುಕ ಹೇಳಿದನ್ನು box item ಮಾಡಿ ಹಾಕಿ ತನ್ನ ಅತ್ಯಾಚಾರಿ ವರದಿಗಾರನನ್ನು ಬೆಂಬಲಿಸುವ ಪರಿಸ್ಥಿತಿ ವಿ.ಕ. ಸಂಪಾದಕೀಯ ಮಂಡಳಿಗೆ ಬರಬಾರದಿತ್ತು.
ಪತ್ರಕರ್ತನೆಂದ ಮಾತ್ರಕ್ಕೆ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ವಿ.ಕ. ಅಭಿಪ್ರಾಯವೇ? ಅತ್ಯಾಚಾರಕ್ಕೂ ಮಾಧ್ಯಮ ಸ್ವಾತಂತ್ರ್ಯಕ್ಕಿರುವ ಸಂಬಂಧವೇನೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಏನೆನ್ನುತ್ತೀರಿ?
ವಿ.ಕ.ದವರು ಏನು ಮಾಡಿದರೂ ತಪ್ಪಿಲ್ಲ ಎನ್ನುವದು ವಿ.ಕ.ದವರ ಅಭಿಪ್ರಾಯ!
ReplyDelete