Friday, July 22, 2011

ತಮ್ಮ ಕೆಲಸ ಸರಿಯಾಗಿ ಮಾಡದ ಲೋಕಾಯುಕ್ತರು ಊರಿಗೆಲ್ಲಾ ಉಪದೇಶ ಮಾಡುವುದು ಯಾಕೆ?


"Live by media, die by media" - ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಟಿ.ವಿ. ತೆರೆಯಲ್ಲಿ ಗಳಗಳ ಅಳುತ್ತಿರುವಾಗ ಅನಿಸಿದ್ದು ಹಾಗೆ.

ಈ ಬ್ಲಾಗಿನಲ್ಲಿ ಸಂತೋಷ್ ಹೆಗ್ಡೆಯವರ ಪ್ರಚಾರಪ್ರಿಯ ಪ್ರವೃತ್ತಿ ಬಗ್ಗೆ ಹಿಂದೊಮ್ಮೆ ನಾನು ಬರೆದಾಗ) ಅದೆಷ್ಟೋ ಮಂದಿ ಹೀಯಾಳಿಸಿ email ಕಳಿಸಿದ್ದರು. ನಿವೃತ್ತಿ ನಂತರವೂ ಯಾವುದೋ ಆಯೋಗಗಳಲ್ಲಿ, ಲೋಕಾಯುಕ್ತ ಹುದ್ದೆಗಳಲ್ಲಿ ತಮ್ಮ ಗತ ದಿನದ ಸೌಕರ್ಯ, ಗತ್ತನ್ನು ಪುನ: ಪಡೆಯುವ ನಿವೃತ್ತ ನ್ಯಾಯಾಧೀಶರ ದೊಡ್ಡ ಗುಂಪೇ ಈ ದೇಶದಲ್ಲಿದೆ. ಅಂತಹವರ ಸಾಲಿಗೆ ಜ| ಸಂತೋಷ ಹೆಗ್ಡೆಯವರೂ ಒಬ್ಬರು ಎಂದು ನಾನು ಆಗ ಬರೆದದ್ದು ಈಗ ನಿಜವಾಗಿದೆ.

ಯಾವುದೇ ಕೆಲಸದಲ್ಲಿ professionalism ಎಂದಿರುತ್ತದೆ. ಈ ಲೋಕಾಯುಕ್ತ ಹುದ್ದೆಯೇ ನೋಡಿ - ತಾನು charge ತೆಗೆದುಕೊಂಡ ದಿನದಿಂದಲೂ ಪತ್ರಿಕಾಗೋಷ್ಠಿ, ಕೆಮರಾ ಮುಂದೆ ಸಂತೋಷ ಹೆಗ್ಡೆಯವರು ಮೆರೆಯವುದರಲ್ಲಿ ಕಾಲ ಕಳೆದರಲ್ಲಬೇ, ಪುಡಿ ೫೦೦ / ೧೦೦೦ ರೂ ಲಂಚ ತೆಗೆದುಕೊಳ್ಳುವವರನ್ನು ಹಿಡಿಯುವಲ್ಲಿ ತೋರಿದ ಪೌರುಷವನ್ನು ದೊಡ್ಡ ಹೆಗ್ಗಣಗಳನ್ನು ಹಿಡಿಯುವುದರಲ್ಲಿ ತೋರಿಸಲೇ ಇಲ್ಲ. ಅದು ಬಯಲು ಮಾಡುತ್ತೇನೆ, ಇದು ಬಯಲು ಮಾಡುತ್ತೇನೆಯೆಂದು ಹೇಳುವುದರಲ್ಲಿ ಕಾಲ ಕಳೆದರೇ ಹೊರತು ಬೇರೇನು ಸಾಧಿಸಿದ್ದಾರೆ ಎಂದು ಪ್ರಶ್ನಿಸಬೇಕಾಗುತ್ತದೆ.

ಲೋಕಾಯುಕ್ತರಾಗಿರುವಾಗಲೇ ಅತ್ತ ದೆಹಲಿಯಲ್ಲಿ civic societyಯೆಂಬ ಕೈಲಾಗದ media savvy retireeಗಳ ಜೊತೆ ಮೆರೆದು ಇವರು ಸಾಧಿಸಿದ್ದೇನು? ತಮಗೆ ಎಲ್ಲಾ power, ಸರಕಾರೀ ಸೌಲಭ್ಯ, ಜನರ goodwill ಇದ್ದರೂ ಒಂದು ಸರಿಯಾಗಿ confidential ವರದಿ ತಯಾರು ಮಾಡಲು ಸಾಧ್ಯವಾಗದ ಇವರಿಗೆ ರಾಜಕಾರಣಿಗಳ ವಿರುದ್ಧ ಕಾರಲು ನೈತಿಕ ಅರ್ಹತೆ ಇದೆಯೇ? ರಾಜಕಾರಣಿಗಳಿಗಾದರೋ ಜನರ ಮುಂದೆ ಹೋಗಲು ಚಲಾವಣೆಯಲ್ಲಿರಬೇಕಾಗುತ್ತದೆ - ಆದರೆ ಸಂವಿಧಾನ ಬದ್ಧ ಸಂಸ್ಥೆಯ ಮುಖ್ಯಸ್ಥರೋರ್ವರು ಯಕ:ಶ್ಚಿತ್ ರಾಜಕಾರಣಿಯಂತೆ mediaದಲ್ಲಿ hero ಆಗಲು ಹೋಗಿ ಸೋತಿದ್ದಾರೆ.

ಸಂತೋಷ್ ಹೆಗ್ಡೆಯವರು ಟಿ.ವಿ. ಕೆಮರಾಗಳ ಮುಂದೆ ಪೋಸ್ ಕೊಟ್ಟು ಹಾಳು ಮಾಡಿದ ೧೦% ಸಮಯವನ್ನು ತಮ್ಮ ವರದಿಯನ್ನು ಗೌಪ್ಯವಾಗಿ ತಯಾರಿಸಲು ವ್ಯಯ ಮಾಡಿದರೆ ಸಾಕಿತ್ತು. ಅದು ಬಿಟ್ಟು ಪ್ರತೀ ದಿನ ಟಿವಿ ಕೆಮರಾಗಳ ಮುಂದೆ, ದೆಹಲಿ civic society ಯೆಂಬ ಜೋಕರುಗಳ ಜೊತೆ time waste ಮಾಡಿದ ಇವರು (ದೆಹಲಿಯಲ್ಲೂ ಇವರು ಸಾಧಿಸಿದ್ದೇನೂ ಇಲ್ಲ) ಈಗ ಅದೇ ಟಿವಿ ಚಾನೆಲ್ಲುಗಳಲ್ಲಿ ತಮ್ಮ ವರದಿ ಲೀಕಾದದನ್ನು ನೋಡಿ ಕಣ್ಣೀರು ಹಾಕುತ್ತಿರುವುದು ವಿಪರ್ಯಾಸ!

ಸರಕಾರಗಳ ವಿರುದ್ಧ, ರಾಜಕಾರಣಿಗಳ ವಿರುದ್ಧ ಪ್ರತಿದಿನವೆಂಬಂತೆ ಹೋದಲ್ಲಿ ಬಂದಲ್ಲಿ ಭಾಷಣ ಮಾಡಿದ ಸಂತೋಷ ಹೆಗ್ಡೆಯವರು ಎಲ್ಲಾ ಸರಕಾರಗಳು, ರಾಜಕಾರಣಿಗಳು ಅಪ್ರಯೋಜಕರು ಎಂಬ ಭಾವನೆ ಯುವಜನರಲ್ಲಿ ಮೂಡುವಲ್ಲಿ ಯಶಸ್ವಿಯಾಗಿದ್ದರು - ಆದರೆ ಈಗ? ಒಂದು ಯಕ:ಶ್ಚಿತ್ ವರದಿಯ confidentiality maintain ಮಾಡಲೂ ಇವರ ಕೈಲಾಗಲಿಲ್ಲ ಯಾಕೆ? ದೇಶದ ಎಲ್ಲಾ ಸಮಸ್ಯೆಗಳಿಗೆ ರಾಜಕಾರಣಿಗಳು ಕಾರಣ ಎಂದು ಒಂಥರಾ ಜನಪ್ರಿಯ populism ಅಥವಾ playing to the gallery ಅಂಥಾರಲ್ಲ - ಅದನ್ನು ಮಾಡಲು ಹೋಗಿ ತನ್ನ ಕೆಲಸ ಸರಿ ಮಾಡದೆ ಈಗ ಅತ್ತರೆ ಏನು ಪ್ರಯೋಜನ?

1 comment:

  1. ಒಟ್ನಲ್ಲಿ ನಮ್ಮ ಟೈಂ ಚೆನಾಗಿಲ್ಲ ಅನ್ಕೋಬೇಕು ಅಷ್ಟೆ. ಯಾರನ್ನ್ ನಂಬಬೇಕು ಯಾರನ್ನ್ ಬಿಡಬೇಕು ಒಂದೂ ಗೊತ್ತಾಗ್ತಿಲ್ಲ !

    ReplyDelete