Friday, August 5, 2011

ಎಸ್.ಎಂ.ಕೃಷ್ಣರ ಅಚಾತುರ್ಯಗಳ ಸುದ್ದಿ ಕನ್ನಡ ಮಾಧ್ಯಮದಲ್ಲೇಕಿಲ್ಲ?


ವಿಶ್ವಸಂಸ್ಥೆಯಲ್ಲಿ ಪೋರ್ಚುಗಲ್ಲಿನ ಸಚಿವರ ಭಾಷಣವನ್ನು ಹಲವು ನಿಮಿಷಗಳ ಕಾಲ ಶಾಲಾ ಬಾಲಕನಂತೆ ಎಸ್.ಎಂ.ಕೃಷ್ಣರವರು ಓದಿ ಪೇಚಿಗೀಡಾಗಿದ್ದು ಹಳೆ ಸುದ್ದಿ.

ನಿನ್ನೆ ಲೋಕಸಭೆಯಲ್ಲೂ ಹೀಗೇ ಆಯಿತು. ಲೋಕಸಭಾ ಸದಸ್ಯರು ಕೇಳಿದ ಪ್ರಶ್ನೆಗೆ ಎಸ್.ಎಂ.ಕೃಷ್ಣ ತಡಕಾಡಿ ಉತ್ತರ ಹುಡುಕಲು ಒದ್ದಾಡಿದ್ದು ಬರೋಬ್ಬರಿ ಕೆಲ ನಿಮಿಷಗಳು. [Read: "S.M.Krishna caught in sticky situation in Lok Sabha"]

ಲೋಕಸಭಾ ಅಧ್ಯಕ್ಷರೇ ಕಡೆಗೆ ’ಬಿಟ್ಬುಡಿ ಸ್ವಾಮೀ. Answer has been tabled ಅಂಥ ಹೇಳ್ಬುಡಿ" ಎಂದು ಹೇಳಬೇಕಾಯಿತು. ಈ ಘಟನೆಯನ್ನು PTI "Foreign minister appeared absent minded" ಎಂದು ವರದಿ ಮಾಡಿತು.

ಈಗ ಬಂದಿರುವ ಸುದ್ದಿ ಪ್ರಕಾರ ಕೃಷ್ಣ ಅವರು PTIಗೆ ತನ್ನನ್ನು Absent minded ಎಂದು ಕರೆದಿದ್ದಕ್ಕೆ ಲಾಯರ್ ನೋಟಿಸ್ ಕಳಿಸಿದ್ದಾರೆ. [Read: "S.M.Krishna serves legal notice to PTI for calling him absent minded"]

ಇನ್ನು ರಾಜ್ಯಸಭೆಯಲ್ಲೂ ಕೃಷ್ಣರ ದಿನ ಸರಿಯಾಗಿದ್ದಂತಿಲ್ಲ. The Telegraph ವರದಿ ಪ್ರಕಾರ ಕೃಷ್ಣರವರು ಪದೇ ಪದೇ lost ಆದಾಗ ಮುಜುಗರ ತಪ್ಪಿಸಿದ್ಧು ಸ್ವತ: ಮನಮೋಹನ ಸಿಂಗ್ ಮತ್ತು ಚಿದಂಬರಂ. [Read: Manmohan and Team bails Krishna]

ಕೃಷ್ಣರವರಿಗೀಗ ೮೦ ವರ್ಷ. ಲೋಕಸಭೆ, ರಾಜ್ಯಸಭೆಯಲ್ಲಿ ಗುಮಾಸ್ತರು ಬರೆದು ಕೊಟ್ಟದ್ದನ್ನೇ ಓದಲು ಸಾಧ್ಯವಾಗದ ಕೃಷ್ಣರು ವಿದೇಶೀ ನಾಯಕರೊಂದಿಗೆ ಅಣು ಒಪ್ಪಂದ ಮತ್ತಿತರ ಮಹತ್ವಪೂರ್ಣ ವಿಷಯಗಳಲ್ಲಿ ಹೇಗೆ ಮತ್ತು ಯಾವ ರೀತಿ ವ್ಯವರಿಸುತ್ತಾರೆಂದು ಎಣಿಸಿದರೇ ಭಯವಾಗುತ್ತದೆ. ಇನ್ನು ಕೃಷ್ಣರವರ ಸೆಕೆರೆಟರಿ ರಾಘವೇಂದ್ರ ಶಾಸ್ತ್ರಿ ಮಾಡುತ್ತಿರುವ ಗೋಲ್ ಮಾಲುಗಳನ್ನು ಈಗಾಗಲೇ english ಮಾಧ್ಯಮಗಳು ವರದಿ ಮಾಡಿವೆ.

ದೇಶದ ಎಲ್ಲಾ ಪತ್ರಿಕೆಗಳಲ್ಲಿ ಬಂದ ಈ ವರದಿಗಳನ್ನು ನೋಡಿದ ನನಗೆ ಆಶ್ಚರ್ಯವಾದದೆಂದರೆ ಕನ್ನಡ ಮಾಧ್ಯಮಗಳಲ್ಲಿ ಅಥವಾ ಬ್ಲಾಗುಗಳಲ್ಲಿ ಮೇಲಾವುದೇ ಸುದ್ದಿ ವರದಿಯಾಗಲೇ ಇಲ್ಲ. ಕನ್ನಡಿಗ ಸಚಿವ ಎಂಬ ಮಮತೆಯೇ? ಅಥವಾ ಅವರ ಕಾಲದಲ್ಲಿ BDA site gift ಪಡೆದುಕೊಂಡ ಬೆಂಗಳೂರಿನ ಪತ್ರಕರ್ತರು, ಸಂಪಾದಕರು ಇನ್ನೂ ಅದರ ಋಣ ತೀರಿಸುತ್ತಿದ್ದಾರೆಯೇ?

ಕನ್ನಡಿಗರ ಮಾನಮರ್ಯಾದೆಯನ್ನು ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಕಳೆಯುತ್ತಿರುವ ಕೃಷ್ಣ "ರಾಜ್ಯ ರಾಜಕೀಯವನ್ನು ಬಚಾಚ್ ಮಾಡಲು ಕೃಷ್ಣರಿಂದ ಮಾತ್ರ ಸಾಧ್ಯ", "ರಾಜ್ಯ ರಾಜಕೀಯಕ್ಕೆ ವಾಪಾಸಾಗಬೇಕು", ’ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಬೇಕು" ಎಂದು ಇನ್ನೂ ಬರೆಯುತ್ತಿರುವ ದೊಡ್ಡ ಪತ್ರಕರ್ತರ ಗುಂಪೇ ಇನ್ನೂ ಕನ್ನಡ ಮಾಧ್ಯಮ ಲೋಕದಲ್ಲಿರುವುದು ಕನ್ನಡ ಮಾಧ್ಯಮ ಲೋಕ ಎಷ್ಟು ದಿವಾಳಿಯೆದ್ದು ಹೋಗಿದೆಯೆಂಬುದರ ಸಂಕೇತವಲ್ಲದೆ ಮತ್ತೇನು?

1 comment:

  1. ರಾಕೇಶ,
    ಕೃಷ್ಣರ ಎಡವಟ್ಟುತನ ನಿಮ್ಮ ಲೇಖನ ಓದಿದ ಮೇಲೆ ತಿಳಿಯಿತು. ಕನ್ನಡ ಪತ್ರಿಕೆಗಳು ಈ ವಿಷಯದಲ್ಲಿ ದಿವ್ಯ ಮೌನ ಧರಿಸಿವೆ. ಕೃಷ್ಣರು ಇನ್ನು ಸನ್ಯಾಸ ಸ್ವೀಕರಿಸುವದು ಒಳಿತು.

    ReplyDelete