Showing posts with label Churumuri. Show all posts
Showing posts with label Churumuri. Show all posts

Thursday, November 29, 2012

Irony of Lawbreaker Justice M.F.Saldanha supporting corrupt journalist Naveen Shetty Soorinje

Irony of Lawbreaker Justice M.F.Saldanha supporting corrupt journalist Naveen Shetty Soorinje!



Justice M.F.Saldanha - yes, the one who retired years ago but still clings to his "Justice" title and behaves like one as seen when he was caught red handed by Bangalore Mirror Newspaper.

 

Cutting tape (and breaking traffic rules) - Justice M.F.Saldanha style!


Note the illegal red light on his private car
Law breaking Retired Justice M.F.Saldanha now preaches about following the law in homestay attack case planner Naveen Shetty Soorinje


Illegal use of red light on top of M.F.Saldanha's private car



Note illegal use of red light on Saldanha's private car. Bangalore police confiscated it the next day.
M.F.Saldanha appears to have opinion on everything under the sun including his support of Naxals and corrupt officials. So it is not a surprise to see him supporting corrupt roll call journalist aka Mangalore homestay attack planner Naveen Shetty Soorinje.

As a retired judge one would think Mr.Saldanha is aware that courts have rejected bail pleas of Naveen Soorinje again and again because courts are convinced of Naveen's role in organising the attack and subsequent rape attempt on girls there.

Yet, we have this retired judge justifying the act of roll call journalist Naveen Soorinje! By the time you read this blog, you can be assured that Saldanha has already sent press conference clipping to his foreign NGO masters like Transparency International to claim TA&DA and remuneration for this work.

Even within our own Christian community, Saldanha is known as somewhat of loose case and as a retiree who has found good source of income in eschewing so called "social causes". One also should not forget that many of his decisions as a judge were dubious and were ultimately over ruled by other judges.

As George Belman says in comment:

So Mr.Saldanha is not exactly a shining diamond of honesty and integrity and has no right nor he is qualified to comment on every topic under the sun. Live what you preach, Mr.Saldhanha. One should not forget that many of Saldanha's decisions as judge were dubious and were ultimately overturned.

What hurts me is there was not one journalist worth his salt in Mangalore who asked Saldanha "What rights or moral grounds you have to ask legality of Naveen's arrest when you yourself was caught red handed breaking numerous traffic laws in Bangalore?". Perhaps too much to expect such guts from career journalists of Karnataka?

Wednesday, May 16, 2012

Why raid Yeddy's house now? Raid Siddaganga Mutt!

CBI raids Yeddy's house after all horses and crows have bolted and stashed their loot.

What is the point in CBI raiding Yeddy's houses and offices now?

There is (or should I say "was") a reason Yeddy visits Siddaganga Mutt in Tumkur at 5AM before sunrise.

And there is again a reason why Swamiji of Siddaganga Mutt (who was kind enough to meet Yeddy in jail and hospital during earlier arrests) out of the blue invited Sonia Madam and honored her.

AICC president Sonia Gandhi pays obeisance to Siddalinga Swamy of Siddaganga Mutt at Tumkur, Karnataka on Saturday.— PHOTO: K . Bhagya Prakash
(Photo: From The Hindu April 29 2012)

It was very amusing to see this 105 year old man (Swamiji) acting like a shy school boy near Sonia Gandhi in Tumkur.

Point is Yeddy's loot is safe in Tumkur Siddaganga Mutt. 


Congress and CBI know this.


Shrewd Swamiji knows that CBI knows Yeddy's loot is in his safe custody.


So Swamiji invites "Madam" to his birthday event and honors her and praises her.


Now which CBI officer has guts to raid a temple premises which "Madam" has visited only a few days back?

And here we are dumb public sitting like idiots in front of TV watching breaking news about "Raid on Yeddy's houses" while loot is already in a very safe place.

Every journalist worth his salt in Bangalore knows where Yeddy and Sons loot is stored but no one dares to point this out to public. Is it the fear of Mutt's followers or Yeddy's followers? Or is it blind faith? Or are they also in cahoots in whole scam? You decide.

Now you know rest of the story....

Saturday, September 5, 2009

ರಜೆಯೆಂದರೆ ಮಾಧ್ಯಮ ಮಿತ್ರರಿಗೇಕೆ ಅಲರ್ಜಿ?

ಸಡನ್ನಾಗಿ ಕೆಲ ಕನ್ನಡ ಮಾಧ್ಯಮ ಮಿತ್ರರು YSR ನಿಧನಕ್ಕೆ ಕರ್ನಾಟಕದಲ್ಲಿ ರಜೆ ಯಾಕೆಯೆಂಬ ಚರ್ಚೆ ಶುರು ಮಾಡಿದ್ದಾರೆ.

ಎಂದಿನಂತೆ "ವಿಜಯ ಕರ್ನಾಟಕ" ತನ್ನ ಕಚೇರಿಗೆ ಈ ರಜೆ ಯಾಕೆ ಬೇಕಿತ್ತು ಎಂದು ಕೇಳಿ ಬಹಳ ಕರೆಗಳು ಬಂದವು ಎಂದು ಹೇಳಿಕೊಂಡಿದೆ. ಕರೆ ಮಾಡಿದವರ ಹೆಸರು ಏನು, ಕೆಲಸವೇನು ಮುಂತಾದ details ಕೇಳಬೇಡಿ - ಕರ್ನಾಟಕದ ನಂ.೧ ಪತ್ರಿಕೆ ಪತ್ರಿಕಾಧರ್ಮದ basics ಮರೆತು ತನಗೆ ಬೇಕಾದ ಹಾಗೆ ಅನಾಮಧೇಯ SMS, ಫೋನ್, ಪತ್ರಗಳನ್ನು ಸೃಷ್ಟಿಸುವುದರಲ್ಲೂ ನಂ.೧ ಅಲ್ಲವೇ? ಕೆಲ ಪತ್ರಿಕೆಗಳ ಸಂಪಾದಕರು "ಹೆಸರು ಬೇಡ, ಊರು ಗೊತ್ತಿಲ್ಲ"ವೆಂಬ ವಾಚಕರ ಪತ್ರಗಳನ್ನು ಸೃಷ್ಟಿಸಿದಂತೆ.

Thaskannada.com ನ ಶ್ಯಾಮಸುಂದರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಶುಕ್ರವಾರದ ರಜೆ ನಮ್ಮ ಪ್ರಕಾರ ಅಸಿಂಧು" ಎಂದು ಷರಾ ಬರೆದುಬಿಟ್ಟಿದ್ದಾರೆ.

ರಜೆ ಕೊಡಬೇಕಿತ್ತಾ ಇಲ್ಲವೋ ಚರ್ಚೆ ಈ ಬ್ಲಾಗ್ ಪೋಸ್ಟಿನ ಉದ್ಧೇಶವಲ್ಲ. ಆದರೆ ತಮಗೆ ಬೇಕಾದ ಹಾಗೆ ಹೇಗೆ ಒಂದು sentimentನ್ನು, opinionನ್ನು ಮಾಧ್ಯಮಗಳು out of the air ಹೇಗೆ ಸೃಷ್ಟಿ ಮಾಡುತ್ತವೆಯೆಂದು ತೋರಿಸಲಷ್ಟೇ.

____________________________________________________________

ರಜೆ ಕೊಟ್ಟರೆ ಯಾಕೆ ರಜೆ ಕೊಟ್ರಿ ಎಂಬ ಪ್ರಶ್ನೆ.

ಒಂದು ವೇಳೆ ಕರ್ನಾಟಕ ರಜೆ ಕೊಡದಿದ್ದರೆ ಪ್ರಶ್ನೆಗಳು ಹೀಗಿರುತ್ತಿದ್ದವೇನೋ? ನೀವೂ guess ಮಾಡಿ ಕಮೆಂಟಿನಲ್ಲಿ:
  • ಅತ್ತ ತಮಿಳುನಾಡಿನಲ್ಲಿ ರಜೆ ಕೊಟ್ರು, ಕರ್ನಾಟಕದಲ್ಲೇಕೆ ರಜೆಯಿಲ್ಲ?
  • ವೈ.ಎಸ್.ಆರ್. ಕಾಂಗ್ರೆಸ್, ಅದಕ್ಕೇ ಕರ್ನಾಟಕದ ಬಿಜೆಪಿ ಸರಕಾರ ರಜೆ ಕೊಡಲಿಲ್ಲಯೆಂಬ ಮೂದಲಿಕೆ.
  • ವಿರೋಧ ಪಕ್ಷವಾದ ಕಾಂಗ್ರೆಸ್ಸಿನಿಂದ ರಜೆಗೆ ಒತ್ತಾಯಿಸಿ ಧರಣಿ, ಸತ್ಯಾಗ್ರಹ. ಒಂದೆರಡು ಬಸ್ ಭಸ್ಮ
  • ನಾಯಕರು ಸತ್ತಾಗಲೂ ರಜೆ ಕೊಡದೆ ರಾಜಕೀಯ ಮಾಡುವ ಬಿಜೆಪಿ ಸರಕಾರವೆಂಬ ಆರೋಪ
  • TV9 Breaking News "ಮರಣದಲ್ಲೂ ರಾಜಕೀಯ ಮಾಡುವ ಕರ್ನಾಟಕದ ಬಿಜೆಪಿ ಸರಕಾರ"
  • ಈTV Breaking News "ರಜೆಯಿಲ್ಲದ ಈ YSR ಸಾವು ನ್ಯಾಯವೇ?"
  • Churumuriಯಲ್ಲಿ "Ella OK, Worku Yaake?"
  • ಬಳ್ಳಾರಿ ರೆಡ್ಡಿ ಕೃಪಾಪೋಷಿತ ಪತ್ರಕರ್ತರುಗಳ ವರದಿಗಳು ಹೀಗಿರುತ್ತಿದ್ದವೇನೋ - "YSR ನಿಧನಕ್ಕೆ ರಜೆ ಕೊಡದ ಕರ್ನಾಟಕ ಸರಕಾರದ ವಿರುದ್ಧ ಸಿಡಿದೆದ್ದ ಬಳ್ಳಾರಿ ಬ್ರದರ್ಸ್!"
  • ಬ್ಲಾಗ್ ವಿಧುರ ಜೋಗಿ ಒಂದು ವೇಳೆ ಬ್ಲಾಗು ಬರೆಯುತ್ತಿದ್ದರೆ, ಹೇಗೆ ಇದೆಲ್ಲಾ Christian YSR ವಿರುದ್ಧ ಮಂಗಳೂರಿನ ಸಂಘ ಪರಿವಾರದ conspiracy ಎಂದೆಲ್ಲಾ "ಅವಧಿ"ಯಲ್ಲಿ ಬರೆಯುತ್ತಿದ್ದರೇನೋ.
ಏನ್ ಹೇಳ್ತೀರಾ ನೀವು?

Sunday, March 15, 2009

ಬೈಂದೂರಿನ ಸೋಮೇಶ್ವರ ದೇವಳದೆದುರು ಚಾರ್ಲೀ ಚಾಪ್ಲಿನ್ ವಿಗ್ರಹವೂ, ಜೋಗಿ ಅರಮನೆಯಲ್ಲಿ ಮೈಕೆಲ್ ಜಾಕ್ಸನ್ ಮೂರ್ತಿ ಪ್ರತಿಷ್ಠಾಪನೆಯೂ!

ಚಾಪ್ಲಿನ್ ಚಿತ್ರ: ಹಾಲಿವುಡ್ ಮ್ಯೂಸಿಯಂ
ಜೋಗಿ ಫೊಟೋ ಕೃಪೆ: ಅವಧಿ ಬ್ಲಾಗ್

ಬೈಂದೂರಿನ ಸೋಮೇಶ್ವರ ದೇವಳದೆದುರು ಚಾರ್ಲೀ ಚಾಪ್ಲಿನ್ ವಿಗ್ರಹವೂ
,
ಜೋಗಿ ಅರಮನೆಯಲ್ಲಿ ಮೈಕೆಲ್ ಜಾಕ್ಸನ್ ಮೂರ್ತಿ ಪ್ರತಿಷ್ಠಾಪನೆಯೂ!

ಎಲ್ಲಾ ಮಾಧ್ಯಮ ಗೆಳೆಯರಂತೆ ಕನ್ನಡ ಬ್ಲಾಗ್ ಲೋಕ ಅರಮನೆಯ ಸ್ವಘೋಷಿತ ರಾಜ ಜೋಗಿಯವರೂ ಬೈಂದೂರಿನ ಮರವಂತೆ ಬೀಚಿನ ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪನೆ ವಿವಾದದ ಬಗ್ಗೆ ಬರೆದಿದ್ದಾರೆ (http://avadhi.wordpress.com/2009/03/14/ಜೋಗಿ-ಬರೆದಿದ್ದಾರೆ-ದಯವಿಟ್/), ದೇವಸ್ಥಾನದ ಎದುರು ಕರಾವಳಿ ಕರ್ನಾಟಕಕ್ಕೇ ಸಂಬಂಧವೇ ಇರದ ಯಾರೋ ವಿದೇಶೀ ನಟನ ಪ್ರತಿಮೆಗೆ ವಿರೋಧಿಸಿದವರನ್ನು ಇಂದಿನ ಎಲ್ಲಾ ಮಾಧ್ಯಮದವರಂತೆ "ಹಿಂದುತ್ವವಾದಿಗಳು" ಎಂದು ಲೇಬಲ್ ಹಚ್ಚಿಬಿಟ್ಟಿದ್ದಾರೆ, ಹಾಸ್ಯದ ಹೆಸರಲ್ಲಿ ಕರಾವಳಿ ಕರ್ನಾಟಕದ ಜನರ ಮೇಲೆ ಉಗಿದಿದ್ದಾರೆ, ತಮ್ಮ ಬ್ಲಾಗ್ ಪೋಸ್ಟಿಗೆ ಫ್ಯಾನ್ ಬಾಯ್ಗಳಿಂದ (Fan Bois) ಹೊಗಳಿಕೆಯನ್ನೂ ಪಡೆದಿದ್ದಾರೆ.

ಆದರೆ ಇಲ್ಲಿ ನಿಜವಾಗಿ ನಡೆದಿದ್ದೇನೆಂದು ನೋಡ ಹೊರಟರೆ ಇದೊಂದು ಪಬ್ಲಿಸಿಟಿ ಸ್ಟಂಟೆಂದು ಎಲ್ಲರಿಗೂ ಗೊತ್ತಾಗುತ್ತದೆ. ಮರವಂತೆಯಲ್ಲಿ ಚಾಪ್ಲಿನ್ ಮೂರುತಿ ಪ್ರತಿಷ್ಠಾಪನೆ ಮಾಡಲು ಹೊರಟಿರುವ ಯಾರೂ ಇದುವರೆಗೆ ಹೆಸರೇ ಕೇಳದಿರುವ "ಸಿನೆಮಾ ನಿರ್ದೇಶಕ" ಹೇಮಂತ ಹೆಗಡೆ ತನ್ನ ಖಾಸಾ ಗೆಳೆಯನೆಂದು ಜೋಗಿಯವರು ಬ್ಲಾಗಿನಲ್ಲೇ ಹೇಳಿಕೊಂಡಿದ್ದಾರೆ. ಈ ಇಡೀ ನಾಟಕ ಪ್ರಚಾರಕ್ಕಾಗಿ ಜೋಗಿ ಮತ್ತವರ ಮಾಧ್ಯಮ ಮಿತ್ರರ ಕಿತಾಪತಿಯೆಂದೂ ಕಂಡು ಬರುತ್ತಿದೆ.

ಇನ್ನು ಚಾಪ್ಲಿನ್ ವಿರೋಧದ ವಿಷಯಕ್ಕೆ ಬಂದರೆ:

೧. ಸ್ಥಳೀಯರು ಚಾಪ್ಲಿನ್ ವಿಗ್ರಹ ವಿರೋಧಿಸುತ್ತಿರುವುದು ಅದು ಸೋಮೇಶ್ವರ ದೇವಸ್ಥಾನದ ಬಳಿ ಇದೆಯೆಂದು. ಇಡೀ ಗ್ರಾಮಸ್ಥರೇ ಒಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ - ಹಿಂದೂಗಳು ಮಾತ್ರವಲ್ಲ, ಕ್ರೈಸ್ತ ಮುಸ್ಲಿಂ ಬಾಂಧವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

೨. ಜಿಲ್ಲಾಡಳಿತ, ಸ್ಥಳೀಯ ಗ್ರಾಮ ಪಂಚಾಯಿತುಗಳಿಗೆ ಇದು ಸಿನೆಮಾ ಶೂಟಿಂಗಿಗೆ ಪ್ರತಿಮೆ ಎಂದು ಮೊದಲು ಹೇಳಿ ನಂತರ ಪರ್ಮನೆಂಟ್ ಪ್ರತಿಮೆ ಸ್ಥಾಪಿಸಲು ಈ ಭೂಪತಿಗಳು ಹೊರಟಿದ್ದರು. ಸಿನೆಮಾ ಶೂಟಿಂಗಿಗೆ ಮಾತ್ರ ಪರ್ಮಿಟ್ ಇದೆ ಇವರಲ್ಲಿ, ಶಾಶ್ವತ ಪ್ರತಿಮೆಗೆ ಅಲ್ಲವೆಂಬುದು ವಾಸ್ತವ.

೩. ಅಷ್ಟಕ್ಕೂ ಪ್ರತಿಮೆ ಸ್ಠಾಪಿಸಲು ಹೊರ್‍ಅಟಿರುವ ಪ್ರದೇಶ "ಸಿ.ಆರ್.ಜ಼ೆಡ್" (CRZ - Coastal Regulatory Zone) ಅಡಿ ಬರುವ ಪ್ರದೇಶ - ಹಾಗಾಗಿ ಜಿಲ್ಲಾಡಳಿತವೂ ಶಾಶ್ವತ ಕಟ್ಟಡ, ಪ್ರತಿಮೆ ಕಟ್ಟಲು ಕೊಡುವ ಸಾಧ್ಯತೆಯೇ ಇಲ್ಲ!

೪. ಇಂದು ಕರಾವಳಿ ಕರ್ನಾಟಕಕ್ಕೆ ಸಂಬಂಧವಿರದ ಚಾರ್ಲೀ ಚಾಪ್ಲಿನ್, ಇನ್ನು ನಾಳೆ ಮೈಕೆಲ್ ಜಾಕ್ಸನ್ / ಬಾಕ್ಸರ್ ಮೊಹಮ್ಮದ್ ಆಲಿ ಪ್ರತಿಮೆಗಳನ್ನು ವಿಧಾನಸೌಧ ಅಥವಾ ಮೈಸೂರು ಅರಮನೆಯೆದುರು ಸ್ಥಾಪಿಸುತ್ತೇವೆಯೆಂದು ಬಂದರೆ ಜನರು ಸುಮ್ಮನಿರುತ್ತಾರೆಯೇ?

೫. ಅಷ್ಟಕ್ಕೂ ನಮ್ಮ ನಾಡಲ್ಲಿ ಹಾಸ್ಯಗಾರರ ಬರ ಇದೆಯೇ? ಚಾರ್ಲಿ ಚಾಪ್ಲಿನ್ ಬದಲು ತೆನಾಲಿ ರಾಮಕೃಷ್ಣ ಪ್ರತಿಮೆ ಯಾಕೆ ಬೇಡ?

ಹೀಗೆ ವಾಸ್ತವಗಳನ್ನು ನೋಡ ಹೊರಟರೆ, ಇದು ಮತ್ತೇನೂ ಅಲ್ಲ ಚಲನಚಿತ್ರಕ್ಕೆ ಪಬ್ಲಿಸಿಟಿ ಸ್ಟಂಟೆಂಬುದು ಸ್ಪಷ್ಟವಾಗುತ್ತದೆ.

ಈವರೆಗೆ ಯಾರೂ ಕಂಡು ಕೇಳರಿಯದ ಸಿನೆಮಾದವರು ಒಂದು ದಿನ ಮರವಂತೆಗೆ ಬಂದು "ಗಿನೆಸ್ ರೆಕಾರ್ಡ್ ಚಾರ್ಲಿ ಚಾಪ್ಲಿನ್ ಪ್ರತಿಮೆ ಮಾಡುತ್ತೇವೇ"ಯೆಂದು ಹೇಳಿದಾಗಲೀ ಕರಾವಳಿಯ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸಿನೆಮಾದವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಲಂಡನಿನಿಂದ ಗಿನೆಸ್ ದಾಖಲೆ ಪುಸ್ತಕದ ಮೈಕೆಲ್ ಅನ್ನುವವರು ಬರುತ್ತಾರೆ, ವೀಡಿಯೋ ಮಾಡಲಿದ್ದಾರೆಂದೆಲ್ಲಾ ಬುರುಡೆ ಬಿಟ್ಟಾಗ "ಉಂದು ಆಪಿನಿ ಪೋಪಿನಿ ಅತ್ತು ಮಾರ್ರೇ" (ಇದು ಆಗುವುದು ಹೋಗುವುದಲ್ಲ ಮಾರಾಯರೇ) ಎಂದು ನಕ್ಕು ಅಲ್ಲೇ ಅದನ್ನು ಮರೆತು ಬಿಟ್ಟಿದ್ದರು.

ಈ ಚಿತ್ರದವರ ಸಹಾಯಕ್ಕೆ ಟೊಂಕ ಕಟ್ಟಿದ್ದ ಸ್ಥಳೀಯರಲ್ಲಿ ಜನಾರ್ಧನ ಮರವಂತೆಯೆಂಬ ಪತ್ರಕರ್ತ ಇದ್ದರೆಂಬುದು ಉಲ್ಲೇಖನೀಯ. ಕೊಲ್ಲೂರಿಗೆ ದೇವರ ಬಳಿ ಕೆಲಕಾಲ ಕಳೆಯಲು ಭಕ್ತಿಯಿಂದ ಬರುವ ದಕ್ಷಿಣ ಭಾರತದ ಸಿನಿಮಾ ಉದ್ದಿಮೆಯವರನ್ನು ಪಾಫರಾಜಿಯಾಗಿ ಹಿಂಸಿಸಿ ಅವರ ಎರಡು ನುಡಿ ಮುತ್ತುಗಳನ್ನು ಬರೆದುಕೊಂಡು "ಪತ್ರಕರ್ತ"ನೆಂದಾದವರು ಈ ಜನಾರ್ಧನ ಮರವಂತೆ.

ಆರ್ಥಿಕ ತಾಪತ್ರಯದಿಂದಲೋ ಅಥವಾ ಪ್ರತಿಮೆಗೆ ಪರ್ಮಿಶನ್ ಸಿಗುವುದು ಅಸಾಧ್ಯವೆಂದು ತಿಳಿದ ಮೇಲೆ ಕೆಲಸ ಕೈಬಿಟ್ಟ ಈ ಸಿನೆಮಾದವರು ಮುಖ ಉಳಿಸಿಕೊಳ್ಳಲು ಮೊರೆ ಹೊಕ್ಕಿದ್ದು ಇದೇ ಜನಾರ್ಧನ ಮರವಂತೆ ಮತ್ತು ಜೋಗಿಯವರನ್ನು!

ಹೇಗೂ ಕರಾವಳಿ ಕರ್ನಾಟಕದ ಜನರನ್ನು ಅನಾಗರಿಕರು, ಮೂಲಭೂತವಾದಿಗಳು, ಅಭಿವೃದ್ಧಿ ವಿರೋಧಿಗಳು, ಹಿಂದುತ್ವವಾದಿಗಳು ಎಂದೆಲ್ಲಾ ಎಲ್ಲಾ ಮಾಧ್ಯಮಗಳು ಹೀಗಳಿಸಿಯಾಗಿರುವಾಗ ಇದನ್ನೂ "ಹಿಂದುತ್ವವಾದಿಗಳ" ಮುಖಕ್ಕೆ ಹಚ್ಚಿದರೆ ಚಿತ್ರಕ್ಕೆ ಬಿಟ್ಟಿ ಪಬ್ಲಿಸಿಟಿಯೂ ದೊರಕುತ್ತದೆ, ತಮ್ಮ ಮುಖವೂ ಉಳಿಯುತ್ತದೆ, ಅತ್ತ ಸ್ಥಳೀಯರನ್ನು ಅನಾಗರಿಕರೆಂದು, ಹಿಂದುತ್ವವಾದಿಗಳೆಂದು ಹೀಗಳಿಸಲೂ ಆಗುತ್ತದೆಯೆಂದು ಸ್ಕೆಚ್ ಹಾಕಿತು ಜನಾರ್ಧನ ಮತ್ತು ಜೋಗಿಯ ಮಾಧ್ಯಮ ಪಡೆ! ತಾವೇ ಕೆಲ ಬಾಡಿಗೆ ವಿರೋಧಿಗಳನ್ನು ಕರೆಸಿ, ಅವರು ಬರುವ ಸಮಯಕ್ಕೆ ತಕ್ಕಾಗಿ ಟಿವಿ೯ ಮತ್ತಿತರ ಟಿವಿ/ಪತ್ರಕರ್ತರ ದಂಡು ಇರುವಂತೆಯೂ ನೋಡಿಕೊಂಡು ಪಬ್ಲಿಸಿಟಿಗಾಗಿ ಪ್ರತಿಭಟನೆಯೂ ನಡೆಯಿತು.

ಅಲ್ಲಾ ಸ್ವಾಮೀ, ಒಂದು ಎರಡು ಕೋಟಿ ಬಜೆಟ್ ಮೀರದ, ದಿನಬೆಳಗಾದರೆ ತೋಪೆದ್ದು ಹೋಗುವ ಕನ್ನಡ ಚಿತ್ರರಂಗದಲ್ಲಿ - ಅದೂ ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ - ಯಕ:ಶ್ಚಿತ್ ಒಂದು ಚಾರ್ಲಿ ಚಾಪ್ಲಿನ್ ಪ್ರತಿಮೆಗಾಗಿ ೩೫ ಲಕ್ಷ ಖರ್ಚು ಮಾಡಲು ಹೊರಟಿದ್ದರೆಂದರೆ ಯಾರು ನಂಬುತ್ತಾರೆ?

ಆ ಪ್ರಶ್ನೆಯನ್ನು ಬದಿಗಿಟ್ಟು, ಸರಕಾರಿ ಜಾಗದಲ್ಲಿ ಅದರಲ್ಲೂ ದೇವಸ್ಥಾನದ ಎದುರು ಒಬ್ಬ ವಿದೂಷಕನ ಪ್ರತಿಮೆ ಮಾಡಲು ಹೊರಟಿದ್ದವರು ಬಿಜಾಪುರದ ಗೋಳಗುಂಬಜಿನೆದುರು ನಮ್ಮದೇ ದ್ವಾರಕೀಶ್ ಅಥವಾ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚಿನೆದುರು ಕರ್ನಾಟಕದ ಹಾಸ್ಯಗಾರ ನರಸಿಂಹ ರಾಜು ಪ್ರತಿಮೆ ಸ್ಥಾಪಿಸಲು ಧೈರ್ಯಮಾಡಲಿ ನೋಡೋಣ?

ದಕ್ಷಿಣ ಕನ್ನಡ ಮತ್ತು ಉಡುಪಿಯ ಜನರನ್ನು ಮೇಲೆ ಹೇಳಿದಂತೆ ಅನಾಗರಿಕರು, ಹಿಂದೂ ಮೂಲಭೂತವಾದಿಗಳೆಂದು ಹೀಯಳಿಸಲು ವ್ಯವಸ್ಥಿತ ಸಂಚೇ ನಡೆದಂತೆ ಕಾಣುತ್ತದೆ. ಕರಾವಳಿ ಕರ್ನಾಟಕ ಹಿಂದೆದಿಗಿಂತಲೂ ಇಂದು ಬೃಹತ್ ಉದ್ದಿಮೆಗಳನ್ನು, ವಿಶೇಷ ಆರ್ಥಿಕ ವಲಯ, ಉತ್ತಮ ದರ್ಜೆಯ ವಿದ್ಯಾಸಂಸ್ಥೆಗಳಿಂದಾಗಿ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನೂ ಕೈ ಬೀಸಿ ಕರೆಯುತ್ತಿದೆ. ಪ್ರಾಯಷ: ಈ ಆರ್ಥಿಕ ಬೆಳವಣಿಗೆ ಬಯಸದವರು ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಈ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಒಂದೇ ಸಮಧಾನದ ಸಂಗತಿಯೆಂದರೆ ಸ್ಥಳೀಯ ಮಾಧ್ಯಮಗಳು ಈ ಜಾಲಕ್ಕೆ ಬಿದ್ದಂತಿಲ್ಲ - ಇದು ಅಭಿವೃದ್ಧಿ ವಿರೋಧಿಗಳಿಗೆ ತಲೆ ಚಿಟ್ಟು ಹಿಡಿಯುವಂತೆ ಮಾಡಿದೆ - "ಕರಾವಳಿ ಕರ್ನಾಟಕದ ಮಾಧ್ಯಮಗಳೂ ಮೂಲಭೂತ ಸಂಘಟನೆಗಳ ಹಿಡಿತಕ್ಕೆ ಸಿಲುಕಿವೆ" ಯೆಂದೆಲ್ಲಾ ಮೈ ಪರಚಿಕೊಳ್ಳುತ್ತಿದ್ದಾರೆ!

ಪಬ್ಬು ಧಾಳಿ, ತೆಹೆಲ್ಕಾದ ಸೂಸನ್ ಪ್ರಾಯೋಜಿತ "ಪಿಂಕ್ ಚೆಡ್ಡಿ" ಅಭಿಯಾನ, ಕೇರಳದ ಕಮ್ಯೂನಿಸ್ಟ ಎಂ.ಎಲ್.ಎ., ತನ್ನ ಮಗಳು ಮುಸ್ಲಿಂ ಹುಡುಗನೊಂದಿಗೆ ತಿರುಗಾಡುವುದನ್ನು ನಿಲ್ಲಿಸಲು ತನ್ನ ಭಂಟರಿಗೇ ಆತನ ಮೇಲೆ ಹಲ್ಲೆ ಮಾಡಲು ಹೇಳಿ ಕಡೆಗೆ ಅದನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿದ್ದು, ೨೭ ವರ್ಷದ ಬಸ್ ಕ್ಲೀನರ್ ಸಲೀಂನಿಂದಾಗಿ ಹದಿಹೆರೆಯದ ಅಶ್ವಿನಿಯ ಆತ್ಮಹತ್ಯೆಯನ್ನೂ ಹಿಂದು ಸಂಘಟನೆಗಳ ಮೇಲೆ ಹೇರಿದ್ದ ಘಟನೆಗಳ ಸಾಲಿಗೇ "ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ಹಿಂದೂ ಸಂಘಟನೆಗಳ ಅಡ್ಡಿ"ಯೆಂಬ ಪ್ರಕರಣವೂ ದಾಖಲಾಗಿದೆ.

ಪುಂಖಾನುಪುಂಖವಾಗಿ ಬ್ಲಾಗುಗಳು (ಇಲ್ಲಿದೆ ನೋಡಿ ಇನ್ನೊಬ್ಬ ಪತ್ರಕರ್ತನ ಬ್ಲಾಗು - ಚುರುಮುರಿ ಇಂಗ್ಲಿಷ್ ಬ್ಲಾಗ್ ಪ್ರಕಾರ ದೇವಸ್ಥಾನದ ಎದುರು ಚಾಪ್ಲಿನ್ ಪ್ರತಿಮೆ ವಿರೋಧಿಸುವವರು ಹಿಂದೂ ಜೋಕರುಗಳಂತೆ, ಹಿಂದೂ ಡಿಕ್ಟೇಟರುಗಳಂತೆ), ಪತ್ರಿಕೆಗಳು, ಟಿವಿ ಮಾಧ್ಯಮಗಳು ಕರಾವಳಿ ಕರ್ನಾಟಕದ ಜನರು ಅನಾಗರೀಕರೆಂದು ಈ ಚಾಪ್ಲಿನ್ ಘಟನೆಯ ಮೂಲಕ ಹೀಯಳಿಸಲು, ವಾಸ್ತವ ಬಚ್ಚಿಡಲು ಜೋಗಿ ಮತ್ತು ಜನಾರ್ಧನ ಸಿನಿ ಪತ್ರಕರ್ತ ಜೋಡಿ ಸದ್ಯಕ್ಕೆ ಯಶಸ್ವಿಯಾಗಿದೆ.

ಜೋಗಿ ಮತ್ತವರ ಸಿನಿಮಾ ಮಿತ್ರರು ತಮ್ಮ ಮನೆಯಲ್ಲಿ ಅಥವಾ ಸ್ವಂತ ಜಾಗದಲ್ಲಿ ಚಾಪ್ಲಿನ್ ಅಥವಾ ಮೈಕೆಲ್ ಜಾಕ್ಸನ್ ಮೂರ್ತಿ ಸ್ಥಾಪಿಸಲಿ, ಯಾರೂ ಬೇಡವೆನ್ನುವುದಿಲ್ಲ. ಆದರ ಸರಕಾರೀ ಜಾಗದಲ್ಲಿ, ಅದರಲ್ಲೂ ರಮಣೀಯ ಕಡಲತಡಿಯಲ್ಲಿ ಸಂಬಂಧವೇ ಇಲ್ಲದ ನಟನ ಪ್ರತಿಮೆ ಸ್ಥಾಪನೆ ಆಗಬೇಕು, ಅದನ್ನು ವಿರೋಧಿಸುವವರು ಮೂಲಭೂತವಾದಿಗಳು, ತಾಲಿಬಾನಿಗಳೆಂದೆಲ್ಲಾ ಆರೋಪ ಮಾಡುವ ಪ್ರವೃತ್ತಿಯನ್ನು ಖಂಡಿಸಬೇಕಾಗಿದೆ.

Note: ಗಮನಿಸಬೇಕಾದ ಸಂಗತಿಯೆಂದರೆ ಮಾಧ್ಯಮ ಸ್ವಾತಂತ್ರದ ಬಗ್ಗೆ ಘಂಟೆಗಟ್ಟಳೆ ಕೊರೆಯುವ ಪತ್ರಕರ್ತರ ಬ್ಲಾಗುಗಳಲ್ಲಿ ಅವರ ಅಭಿಪ್ರಾಯಕ್ಕೆ ಭಿನ್ನವಾದ ಕಮೆಂಟ್ ಹಾಕಿ ನೋಡಿ? ನಾನು ಜೋಗಿಯವರ ಬ್ಲಾಗಿಗೆ ಮೇಲಿನ ಪ್ರಶ್ನೆಗಳನ್ನು ಕೇಳಿ Respectful ಆಗಿಯೇ ಕಮೆಂಟಿಸಿದ್ದೆ - ಊಹೂಂ, ಕಮೆಂಟ್ ಪಬ್ಲಿಶ್ ಮಾಡಿಲ್ಲ ಜೋಗಿ ಮಹಾಶಯರು.

ಪ್ರಾಯಷ: ಜೋಗಿಯವರ ಅರಮನೆಗೆ ಹೊಗಳು ಭಟರಿಗೆ ಮಾತ್ರ ಪ್ರವೇಶ - ಹಿಂದಿನ ರಾಜರ ಕಾಲದಂತೆ!