Monday, January 26, 2015


ಅಧಿಕಾರ ಮದವೇರಿದ ಜಾತೀವಾದಿ ದಿನೇಶ್ ಅಮೀನ್ ಮಟ್ಟುವಿನ ದರ್ಪ ಈ ಸುಪ್ರೀಂ ಕೋರ್ಟ್ ತೀರ್ಪು ನೋಡಿಯಾದರೂ ಕೆಳಗೆಳದೀತೇ?







ತನ್ನ ಭಾಷಣಗಳಲ್ಲಿ ಗ್ಯಾಬ್ರಿಯೆಲ್ ಮಾರ್ಕ್ವೆಜ್, ಎರ್ನೆಸ್ಟ್ ಹೆಮಿಂಗ್ವೇ ಬಗ್ಗೆ ಮಾತನಾಡುವ ಮಟ್ಟು, ಈಗ ತನ್ನ ಬಾಳಿನ ಸಂಧ್ಯಾ ಕಾಲದಲ್ಲಿ ತನ್ನ ಮೊಮ್ಮಗರ ಪ್ರಾಯದ ಹುಡುಗರ ಮೇಲೆ ಸಿ.ಎಂ. ಕಚೇರಿ ದುರುಪಯೋಗಿಸಿ ಪೋಲಿಸರನ್ನು ಛೂ ಬಿಟ್ಟದ್ದು ನೋಡಿದರೆ ನೆನಪಾಗುವುದು: Has he not heard of Evelyn Beatrice Hall's quote -
"I disapprove of what you say, but I will defend to the death your right to say it"

 

Misuse of power, Karnataka CM Advisor
Casteist Journalist Dinesh Amin Mattu misusing Karnataka Chief Minister's Office to curb freedom of expression and media.

ನಿಲುಮೆ ಎಂಬ ಬ್ಲಾಗಿನ ಯುವಕರ ಮೇಲೆ "ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ" ಎಂಬಂತೆ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರ ದುರುಪಯೋಗಿಸಿ ಪೋಲಿಸ್ ದೂರು ನೀಡಿರುವ ದಿನೇಶ್ ಅಮೀನ್ ಎಂಬ ಜಾತೀವಾದಿ "ಪತ್ರಕರ್ತನ" ಅಸಲುತನ ಬಯಲಾಗಿದೆ.

ಮಂಗಳೂರಿನ "ಮುಂಗಾರು" ಪತ್ರಿಕೆಯ ಕಾಲದಲ್ಲೇ ಸಮಾಜವಾದಿ ಹೆಸರಲ್ಲಿ ಜಾತೀವಾದಿ ಕೆಲಸ ಮಾಡಿದ ಈ ಭೂಪ ಈಗ "ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ"ವೆಂಬ ಕ್ಯಾಬಿನೆಟ್ ದರ್ಜೆ ಗೂಟದ ಕಾರು, ಟಿಎ ಡಿಎ ಎಂದು ಬಡ ಬೋರೇ ಗೌಡನ ತೆರಿಗೆ ಹಣ ಪೋಲು ಮಾಡುತ್ತಿರುವುದು, ತನ್ನ ಸಿದ್ದಾಂತಕ್ಕೆ ವಿರುದ್ದವಿರುವವರು ಪೋಲಿಸ್ ಠಾಣೆ ಮೇಲೇರುವಂತೆ ಮಾಡಿ ಮಾಧ್ಯಮ/ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿರುವುದು ವಿಷಾದನೀಯ. 

ಯಾರೋ ಫೇಸ್ಬುಕ್ಕಿನಲ್ಲಿ ಕಮೆಂಟು ಹಾಕಿದರೆ ಅದಕ್ಕೆ ಬ್ಲಾಗ್ ಎಡ್ಮಿನ್ ಜವಾಬ್ದಾರಿಯಂತೆ! ಮುಖ್ಯಮಂತ್ರಿಗಳನ್ನು ಮುಠ್ಠಾಳನೆಂದು ಕರೆಯಬಾರದಂತೆ! ಬ್ಲಾಗ್ ಸಂಪಾದಕರು ಪತ್ರಿಕೆಯ ಸಂಪಾದಕರಂತೆ ಎಂದೆಲ್ಲಾ ತನ್ನ ಓಬೀರಾಯನ ಕಾಲದ ಔಟ್ ಡೇಟೆಡ್ ಮಾಹಿತಿಯನ್ನು "ಸುವರ್ಣ ವಾಹಿನಿ"ಯಲ್ಲಿ ಓತಪ್ರೋತವಾಗಿ ಬೊಬ್ಬೆ ಹಾಕಿದ ದಿನೇಶ್ ಅಮೀನ್ ಮಟ್ಟುವನ್ನು ನೋಡಿ ಇಡೀ ಕರ್ನಾಟಕವೇ ನಗುತ್ತಿದೆ. ಇಂತಹ ಮೂರ್ಖ ಶಿಖಾಮಣಿಯನ್ನು ಮಾಧ್ಯಮ ಸಲಹೆಗಾರನೆಂದು ಇಟ್ಟುಕೊಂಡಿರುವ ಸಿ.ಎಂ. ಸಿದ್ಧರಾಮಯ್ಯನವರ ಪರಿಸ್ಥಿತಿ ನೋಡಿ ಕರುಣೆ ಬರುತ್ತಿದೆ. 

ತಾನು ಮೋದಿ, ವಿವೇಕಾನಂದರ ಬಗ್ಗೆ ಏನೆಲ್ಲಾ ಬರೆಯಬಹುದು, ಭಾಷಣ ಮಾಡಬಹುದು, ಆದರೆ ತನ್ನ ವಿರುದ್ಧ ಯಾರಾದರು ಬರೆದರೆ ಉಗ್ರನಾಗುವ ಮಟ್ಟುವಿನ ನಿಜ ಸ್ವರೂಪವನ್ನು ಮಂಗಳೂರು/ಉಡುಪಿಯ ಹಳೆ ತಲೆಮಾರಿನ ಪತ್ರಕರ್ತರು ಯಾರಲ್ಲಾದರೂ ಕೇಳಿದರೆ ಅಸಲು ಹೊರಗೆ ಬರುತ್ತದೆ. ವಡ್ಡರ್ಸೆ ಮತ್ತು ಮುಂಗಾರು ಹೆಸರಿನಲ್ಲಿ ಸಾರಾಯಿ, ಬಾರು ಮಾಲಿಕರೊಂದಿಗೆ ಮಾಡಿದ ರೋಲ್ ಕಾಲ್ ಮತ್ತು ಗೋಲ್ ಮಾಲ್, ಮುಂಗಾರನ್ನು ಮುಳುಗಿಸಿ ಪ್ರಜಾವಾಣಿಗೆ ಪಲಾಯನ ಮಾಡಿದ್ದು ಎಲ್ಲಾ ಹೊರಗೆ ಬರುತ್ತದೆ.

ಅಲ್ಲಾ, ಮುಖ್ಯಮಂತ್ರಿಯನ್ನು "ಮುಠ್ಠಾಳ"ನೆಂದು ಕರೆಯಬಾರದು ಎಂದು ಸ್ಟುಡಿಯೋದಲ್ಲಿ ಬೊಬ್ಬೆ ಹಾಕಿದ ಈ ಮಟ್ಟು, ಪ್ರಾಯಷ: ಹಳ್ಳಿ ಕಟ್ಟೆಯಲ್ಲಿ, ಬಾರುಗಳಲ್ಲಿ ಜನ ಮುಖ್ಯಮಂತ್ರಿಯನ್ನು ನಿಂದಿಸಿದರೆ ಅವರನ್ನೂ ಜೈಲಿಗೆ ಕಳೆಸಿ ಹಿಟ್ಲರ್ ಆಗುವ ಅಂದಾಜಿನಲ್ಲಿದ್ದಾರೆಯೋ ಎಂಬ ಅನುಮಾನ ಮೂಡುತ್ತಿದೆ. 

ತನ್ನ ವೃತ್ತಿ ಜೀವನದುದ್ದಕ್ಕೂ ಮತ್ತು ದೆಹಲಿಯಲ್ಲಿ ತನ್ನ ಜಾತಿಬಾಂಧವ corrupt ಕಾಂಗ್ರೆಸಿಗರ ಡ್ರಾಯಿಂಗ್ ರೂಮಿನಲ್ಲೇ ಕಾಲ ಕಳೆದ ಈ ಮಟ್ಟುವಿನ ಬಗ್ಗೆ ಹಿಂದೆಯೇ ಮಂಗಳೂರಿನ ಪೋಲಿ ಪತ್ರಕರ್ತ ನವೀನ್ ಶೆಟ್ಟಿ ಸೂರಿಂಜೆ ಜೈಲುವಾಸದ ಸಮಯದಲ್ಲಿ ಬರೆದಿದ್ದೆ. ಸೋ ಈಗ ಮಟ್ಟುವಿನ ಅಧಿಕಾರ ದುರುಪಯೋಗ ನೋಡಿ ಆಶ್ಚರ್ಯವೇನೂ ಆಗಿಲ್ಲ. 

 

ಫೇಸ್ಬುಕ್ಕಿನ ಕಮೆಂಟುಗಳ ಬಗ್ಗೆ ಕಳೆದ ವಾರ ಸುಪ್ರೀಂ ಕೋರ್ಟ್ ಇವರದ್ದೇ ಸರಕಾರದ ಪೋಲಿಸ ಅಧಿಕಾರಿಯೊಬ್ಬ ಇಬ್ಬರು ನಾಗರೀಕರ ಮೇಲೆ ಹಾಕ್ಕಿದ್ದ ಎಫ್.ಐ.ಆರ್. ರದ್ದು ಗೊಳಿಸಿದ್ದು "ಮಾಧ್ಯಮ ಸಲಹೆ"ಗಾರರಾಗಿ ಈ ಮಟ್ಟು ಎಂಬ "ಮುಠ್ಠಾಳ" ನೋಡಿರಬಹುದೆಂದು ಅಂದುಕೊಂಡಿದ್ದೇನೆ. 

ಹಾo, ಅಂದ ಹಾಗೆ ಈ ಬ್ಲಾಗಿನ ಮೂಲ ಹುಡುಕಹೋಗಬೇಡ "ಮುಠ್ಠಾಳ ಮಟ್ಟು". ಹಿಂಟ್: ಟೋರ್...:)

Saturday, January 5, 2013

Journalist role in Mangalore Home Stay Attack and Guwahati Molestation case

There are many similarities between Guwahati molestation case and Mangalore Home Stay Attack - in both cases "journalists" instigated the mob to attack girls and captured it on video.

While a bunch of ill-informed communist naxal sympathizers sit on a three day protest in Bangalore against arrest of fellow blackmail journalist, hafta collector Naveen Soorinje, it is important we public realise Naveen Shetty Soorinje's role in Mangalore homestay attack.

I am posting this because there are many people outside of Mangalore who are not aware of Naveen Soorije's background, his pivotal role whole planning of Mangalore homestay attack and his so called "journalism"

Naveen planned, executed and filmed whole Mangalore Homestay attack as noted by Hon'ble Karnataka State High Court while dismissing his bail petition on December 26th.

It is also interesting to note how Guwahati molestation case and Mangalore Homestay attacks are identical in that in both cases journalists played a key role in planning, organising the attack.

Gaurav Jyoti Neog, the Newslive channel reporter who is accused of "planning and directing" the ghastly mob attack on a 20-year-old girl in Guwahati
Mangalore Homestay attack planner, instigator (as noted by Karnataka High Court) so called "journalist" Naveen Soorinje

Consider these facts:


In both cases attacks were planned by journalists/media 

  • Guwahati molestation case - Gaurav Jyothi Neog was arrested by police as evidence turned up that he not only planned the whole attack but made sure that it was caught on video. He can be seen and heard encouraging attackers to molest the girl.
  • Mangalore Homestay attack - so called journalist well known blackmailer Naveen Shetty Soorinje planned the attack, was present at Homestay even before goondas arrived and made sure that girls were attacked and molested in front of camera.

 Funny justification of these journalists when caught red handed


  • After arrest Gaurav Jyothi Neog claimed: "..that he had carried out his professional duties as a responsible journalist by asking for a camera unit from his office and filmed the "nightmarish incident to fulfill the social responsibility of identifying the molesters and get them punished." 
  •  After home stay attack Naveen Soorinje parroted along same lines and boasted he called police. But all evidence point the other way - mobile records show that Naveen called police only after his cameraman capture visuals of attack. And to his bad luck a mobile video where Naveen is actively encouraging mob to remove girls' clothes is also said to be in the possession of police.
So all those Internet, Facebook warriors sitting behind their computer monitors should know that Naveen is no "clean Cindrealla" here. Ask around journalists in Mangalore on how Naveen blackmailed industries and SEZ, not to mention indecent SMS he used to send to college girls. Ask how he spent most of the days in pubs with same people who've been arrested for Mangalore Home  Stay attack.

So think before you support this so called journalist and hunger strike in support of Naveen Soorinje!

Thursday, December 27, 2012

ಹೋಮ್ ಸ್ಟೇ ಧಾಳಿ ರೂವಾರಿ ನವೀನ್ ಸೂರಿಂಜೆಗೆ ಹೈಕೋರ್ಟಲ್ಲೂ ಜಾಮೀನಿಲ್ಲ - ರವಿಕೃಷ್ಣಾ ರೆಡ್ಡಿ ಪ್ರಕಾರ ಹೈಕೋಟ್ ನ್ಯಾಯಾಧೀಶರು ಭೃಷ್ಟರಂತೆ!

ಹೋಮ್ ಸ್ಟೇ ಧಾಳಿ ರೂವಾರಿ ನವೀನ್ ಸೂರಿಂಜೆಗೆ ಹೈಕೋರ್ಟಲ್ಲೂ ಜಾಮೀನಿಲ್ಲ - ರವಿಕೃಷ್ಣಾ ರೆಡ್ಡಿ ಪ್ರಕಾರ ಹೈಕೋಟ್ ನ್ಯಾಯಾಧೀಶರು ಭೃಷ್ಟರಂತೆ!


ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಹೋಮ್ ಸ್ಟೇ ಧಾಳಿ ರೂವಾರಿ ಮಂಗಳೂರಿನ ಹಫ್ತಾ ಪೀತ ಪತ್ರಕರ್ತ ನವೀನ್ ಶೆಟ್ಟಿ ಸೂರಿಂಜೆಯ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

ವಜಾ ಮಾಡಿದ ನ್ಯಾಯಾಧೀಶ ಪೀಠದ ಕಮೆಂಟು ಉಲ್ಲೇಖನೀಯ:

While observing that material on record does not project Mr. Soorinje as a “whistle-blower” as claimed by him, the High Court said the material on record “prima facie indicates that he also came to the place along with the group.” 

“Instead of preventing such an incident, prima facie he [Mr. Soorinje] appears to have encouraged the happening of the incident and assisted in videography of the event, and thereafter facilitated its telecast in television channels, which has caused greater damage to the dignity and reputation of the victims,” said Justice K.N. Keshavanarayana, while dismissing the petition filed by Mr. Soorinje, who has been arraigned as accused number 44.

It also contended that the entire incident was videographed with the help of mediapersons, who had accompanied the group.

ಇಷ್ಟೆಲ್ಲಾ ಮಂಗಳಾರತಿ ಮಾಡಿಸಿಕೊಂಡರೂ ನಿರುದ್ಯೋಗಿ ಟೆಕ್ಕಿ ಆಲಿಯಾಸ್ ನಕ್ಸಲ್ ಹಿತಚಿಂತಕ ರವಿ ಕೃಷ್ಣಾ ರೆಡ್ಡಿಗೆ ಹೈಕೋರ್ಟ್ ನ್ಯಾಯಾಧೀಶರೇ ಭೃಷ್ಟರಂತೆ ಕಾಣುತ್ತಾರೆ!

ಹಾಗೆಂದು ತನ್ನ ವರ್ತಮಾನ ಬ್ಲಾಗಿನಲ್ಲಿ ಮೈ ತುಂಬಾ ಪರಚಿಕೊಂಡಿದ್ದಾರೆ ರೆಡ್ಡಿಗಾರು! ಮಂಗಳೂರಿನ ಪೊಲೀಸರು, ನ್ಯಾಯಾಧೀಶರೆಲ್ಲಾ ಕೋಮುವಾದಿಗಳಂತೆ. ಈಗ ಹೈಕೋರ್ಟಿನ ನ್ಯಾಯಾಧೀಶರೂ ಭೃಷ್ಟರಂತೆ! ಅದೇನೋ "ಕುಣಿಯಲು ಬಾರದವನಿಗೆ ನೆಲವೇ ಡೊಂಕು" ಕಂಡಂತೆ ತನ್ನ ಚಿಂತನೆ ಲಹರಿಗೆ ವಿರೋಧವಾಗಿರುವವರೆಲ್ಲಾ ಕೋಮುವಾದಿಗಳು, ಭೃಷ್ಟರಂತೆ ಕಾಣಿಸುತ್ತಿದ್ದಾರೆ ಈ "ಪ್ರಗತಿ ಪರ" ನಕ್ಸಲಪ್ರೇಮಿಗೆ.

No doubt a casteist journalist like Dinesh Amin Mattu will keep on justifying corrupt journalist like Naveen Shetty Soorinje in the name of press freedom.

ಪ್ರಾಯಷ: ಮುಂದೆ ಸುಪ್ರೀಂ ಕೋರ್ಟಲ್ಲೂ ಮಂಗಳಾರತಿ ಮಾಡಿಸಿಕೊಂಡರೂ ಇದೇ ಹೇಳಲಿದ್ದಾರೆ ಈ ಪ್ರಗತಿಪರ ನಕ್ಸಲ್ ಪ್ರೇಮಿಗಳು. "ಎಲ್ಲಾ ಸಿಸ್ಟಮ್ಮೇ ಹಾಳಾಗಿದೆ ಸಾರ್. ನಕ್ಸಲರಂತೆ ಕೋವಿ ಹಿಡಿಯುವುದೇ ಇದಕ್ಕೆ ಪರಿಹಾರ" ಎಂದು ಹೇಳಲು ಪೀಠಿಕೆ ರೆಡಿ ಮಾಡುತ್ತಿರುವುದು ಸ್ಪಷ್ಟ.

ನವೀನ ಶೆಟ್ಟಿಯಂತಹ ಹಫ್ತಾ ಪತ್ರಕರ್ತನ "ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಧೀಶರು ಭ್ರಷ್ಟರು" ಎನ್ನುವ ರವಿಕೃಷ್ಣಾ ರೆಡ್ಡಿಯ ಬ್ಲಾಗಿನ ಲಿಂಕನ್ನು ನ್ಯಾಯಾಧೀಶರ ಗಮನಕ್ಕೆ ತರಬೇಕಾಗಿದೆ. ನ್ಯಾಯಲಯ ನಿಂದನೆಯ ಕ್ಲಾಸಿಕ್ ಕೇಸಿದು.

Thursday, November 29, 2012

Irony of Lawbreaker Justice M.F.Saldanha supporting corrupt journalist Naveen Shetty Soorinje

Irony of Lawbreaker Justice M.F.Saldanha supporting corrupt journalist Naveen Shetty Soorinje!



Justice M.F.Saldanha - yes, the one who retired years ago but still clings to his "Justice" title and behaves like one as seen when he was caught red handed by Bangalore Mirror Newspaper.

 

Cutting tape (and breaking traffic rules) - Justice M.F.Saldanha style!


Note the illegal red light on his private car
Law breaking Retired Justice M.F.Saldanha now preaches about following the law in homestay attack case planner Naveen Shetty Soorinje


Illegal use of red light on top of M.F.Saldanha's private car



Note illegal use of red light on Saldanha's private car. Bangalore police confiscated it the next day.
M.F.Saldanha appears to have opinion on everything under the sun including his support of Naxals and corrupt officials. So it is not a surprise to see him supporting corrupt roll call journalist aka Mangalore homestay attack planner Naveen Shetty Soorinje.

As a retired judge one would think Mr.Saldanha is aware that courts have rejected bail pleas of Naveen Soorinje again and again because courts are convinced of Naveen's role in organising the attack and subsequent rape attempt on girls there.

Yet, we have this retired judge justifying the act of roll call journalist Naveen Soorinje! By the time you read this blog, you can be assured that Saldanha has already sent press conference clipping to his foreign NGO masters like Transparency International to claim TA&DA and remuneration for this work.

Even within our own Christian community, Saldanha is known as somewhat of loose case and as a retiree who has found good source of income in eschewing so called "social causes". One also should not forget that many of his decisions as a judge were dubious and were ultimately over ruled by other judges.

As George Belman says in comment:

So Mr.Saldanha is not exactly a shining diamond of honesty and integrity and has no right nor he is qualified to comment on every topic under the sun. Live what you preach, Mr.Saldhanha. One should not forget that many of Saldanha's decisions as judge were dubious and were ultimately overturned.

What hurts me is there was not one journalist worth his salt in Mangalore who asked Saldanha "What rights or moral grounds you have to ask legality of Naveen's arrest when you yourself was caught red handed breaking numerous traffic laws in Bangalore?". Perhaps too much to expect such guts from career journalists of Karnataka?

Wednesday, November 28, 2012

Court again denies bail to Mangalore Homestay attack planner "journalist" Naveen Shetty Soorinje

Mangalore Court has yet again rejected bail petition of Mangalore Homestay attack planner/director Naveen Shetty Soorinje.

This despite attempts by Naxal sympathisers who had approached Governor to release Naveen Shetty which begs a question - why is Karnataka Governor granting audience to Naxal sympathisers and hosting them in Raj Bhavan?


Court denies bail in spite of "Congress Aasthana Journalist" like Dinesh Ameen Mattu who went overboard comparing a yellow black mail journalist like Naveen Shetty to Pulitzer Prize winner! This attempt by Dinesh Amin Mattu shows to the depth this so called senior journalist has fallen and is out of touch with reality.

I have no doubt that likes of Ravikrishna Reddy, Dinesh Amin Mattu will spin this as "saffronization of Mangalore judicial system" so expect more  noise by these Naxal sympathizers for a rollcall blackmailer like Naveen Shetty Soorinje.

Sunday, November 18, 2012

ನಿನ್ನೆ ನವೀನ ಶೆಟ್ಟಿ ಸೂರಿಂಜೆಯ ಜಾಮೀನನ್ನು ನ್ಯಾಯಾಲಯ ರಿಜೆಕ್ಟ್ ಮಾಡಿದಾಗ ಅನಿಸಿದ್ದು ಇಷ್ಟು....

Court rejects bail plea of fake journalist, Mangalore home stay attack kingpin Naveen Shetty Soorinje


ನವೀನ್ ಶೆಟ್ಟಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿನ್ನೆ ವಜಾ ಮಾಡುವುದರೊಂದಿಗೆ  ಮಂಗಳೂರಿನ ಹೋಮ ಸ್ಟೇ ಧಾಳಿಯ ಸೂತ್ರಧಾರಿ ನಕಲಿ ಪತ್ರಕರ್ತ ನವೀನ್ ಶೆಟ್ಟಿ ಸೂರಿಂಜೆಯೆಂಬುದು ಸಾಬೀತಾಗಿದೆ.

ಮಾಧ್ಯಮ ಲೋಕದಲ್ಲಿ ಹೀರೋ ಆಗಬೇಕೆಂದು ಪಬ್ ಧಾಳಿಯ ರೀತಿಯಲ್ಲೇ ತನ್ನ ಗೂಂಡಾ ಮಿತ್ರರೊಂದಿಗೆ ಸೇರಿ ಹೋಮ್ ಸ್ಟೇ ಸ್ಕೆಚ್ ಹಾಕಿ ನಂತರ ಹಿಂದು ಸಂಘಟನೆಗಳ ತಲೆಗೆ ಕಟ್ಟುವ ನವೀನ್ "ಶೆಟ್ಟಿ"ಯ ಪ್ಲಾನುಗಳೆಲ್ಲಾ ಉಲ್ಟಾಪುಲ್ಟಿಯಾಗಿ ಜೈಲಲ್ಲಿ ಮುದ್ದೆ ತಿನ್ನುವ ಪರಿಸ್ಥಿತಿ ಬಂದಿರುವುದು ಸಾಮಾಜಿಕ ನ್ಯಾಯವೆನ್ನೋಣವೇ?

"ಕರಾವಳಿ ಅಲೆ"ಯಲ್ಲಿದ್ದಾಗಲೇ ಎಸ್.ಈ.ಜಡ್. ವಿಚಾರದಲ್ಲಿ ಅತ್ತ ಸಂತ್ರಸ್ತರೊಂದಿಗೆ, ಇತ್ತ ಎಸ್.ಇ.ಜಡ್/ ಕೆ.ಐ.ಎ.ಡಿ.ಬಿ. ಯವರೊಂದಿಗೆ ಡೀಲ್ ಮಾಡಿಕೊಂಡು ತನ್ನ ಚೋರ ಗುರು ಬಿ.ವಿ.ಸೀತಾರಾಮನಿಗೇ ಟೊಪ್ಪಿ ಹಾಕಿದ ಈ ನವೀನ ಶೆಟ್ಟಿಯನ್ನು ಕಡೆಗೆ ಬಿ.ವಿ.ಸೀತಾರಾಮನೇ  ಅಶ್ಲೀಲ ಎಸ್.ಎಂ.ಎಸ್. ವಿಚಾರದಲ್ಲಿ ನವೀನನನ್ನು "ಅಲೆ"ಯಿಂದ ಹೊರದಬ್ಬಿದ್ದು ಬೈಕಂಪಾಡಿಯಲ್ಲಿ ದೊಡ್ಡ ಸುದ್ದಿಯಾಗಿತ್ತು. (ತಮ್ಮೊಳಗಿನ ಬ್ಲಾಕ್ ಮೇಲ್ ಡೀಲುಗಳನ್ನು ಗುಪ್ತವಾಗಿರಿಸಬೇಕಾದುದರಿಂದ ಹೊರ ಜಗತ್ತಿಗೆ ತಾವಿನ್ನೂ ಜೊತೆಗಾರರೆಂಬ ಪೋಸನ್ನು ಸೀತಾರಾಮ ಮತ್ತು ನವೀನ ಶೆಟ್ಟಿ ಕೊಡುತ್ತಿದ್ದಾರೆಂಬುದು ಬೇರೆ ವಿಷಯ.)

Naveen Shetty Soorinje provoking fight between villagers, swamijis and SEZ contractors in 2008
ಇನ್ನು ಬಜ್ಪೆ ಕುಡುಬಿ ಪದವಿಗೆ ಎಸ್.ಇ.ಜಡ್. ವಿರೋಧಿ ಆಂದೋಲನದ ಸಮಯದಲ್ಲಿ ಪೇಜಾವರ ಶ್ರೀಗಳೂ ಸೇರಿದಂತೆ ಇತರ ಸ್ವಾಮಿಗಳನ್ನು ಕರೆಸಿ ಎಸ್.ಎ.ಜಡ್. ಗೋಡಾಗಳಿಂದ ಹಲ್ಲೆ ಮಾಡಲು ಪ್ರಚೋದಿಸಿದ್ದೂ ನವೀನ್ ಶೆಟ್ಟಿಯೆಂದು ಮಂಗಳೂರಿನ ಕೆಲ ಪತ್ರಕರ್ತರೇ ಹೇಳುತ್ತಾರೆ.

ಹೊರಗಿನಿಂದ ಎಸ್.ಇ.ಜಡ್. ವಿರೋಧೀ ಹೋರಾಟಗಾರ ಅದರೆ ಸಂಜೆ ನಂತರ ಅದೇ ಎಸ್.ಇ.ಜಡ್. ಕಂಟ್ರಾಕ್ಟರುಗಳೊಂದಿಗೆ ಇದೇ ನವೀನ ಬಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಈ 2008ರ ಫೋಟೋ ನೋಡಿ - ಗೂಂಡಾಗಳನ್ನು ಸ್ವಾಮಿಯವರ ಮೇಲೆ ಛೂ ಬಿಡುತ್ತಿರುವ ನವೀನ ಶೆಟ್ಟಿ ಸೂರಿಂಜೆ.   

ಅತ್ತ ಡಿ.ವೈ.ಎಫ್.ಐ. ಮತ್ತು ನಕ್ಸಲರು, ಇತ್ತ ಹಿಂದು ಸಂಘಟನೆಯೆಂದು ಹೇಳಿಕೊಳ್ಳುವ ಕೆಲ ಪುಡಿ ಗೂಂಡಾಗಳೊಂದಿಗೂ ಕಂಠಸ್ಯ ಗಳಸ್ಯವಿರುವ ನವೀನನ ಈ ಓತೀಕೇತನ ನಾಟಕ ಮೆಚ್ಚುವಂತದ್ದೇ. ಆದರೆ ಹೋಮ್ ಸ್ಟೇ ವಿಚಾರದಲ್ಲಿ ಹೀರೋ ಆಗಲು ಹೋಗಿ ಮರು ಪುಢಾರಿಯ ಫೋನ್ ವೀಡಿಯೋದಲ್ಲಿ ನವೀನ "ಹುಡುಗಿಯ ಮುಖ ಕೆಮರಾಕ್ಕೆ ತೋರಿಸು" ಎಂದು ನಿರ್ದೆಶನ ಮಾಡುವುದು ದಾಖಲಾಗಿದೆ.

ನಾಗರಿಕ ಜಗತ್ತು ಕೇಳುವ ಪ್ರಶ್ನೆಗಳಿಷ್ಟೇ:


೧. ಮಂಗಳೂರಿನಲ್ಲಿ ಏನಿಲ್ಲವೇಂದರೂ ನೂರಕ್ಕಿಂತಲೂ ಹೆಚ್ಚು ವರದಿಗಾರರಿದ್ದಾರೆ. ಆದರೆ ಗೂಂಡಾಗಳು ನವೀನನಿಗೆ ಮಾತ್ರ ಫೋನ್ ಮಾಡಿ ಕರೆಸಿಕೊಂಡದ್ದು ಯಾಕೆ?

೨. ಮರಿ ಪುಢಾರಿಯ ಪೋನ್ ಕೆಮರಾದಲ್ಲಿ (ಈಗ ಪೊಲೀಸರ ಬಳಿ ಇದೆಯೆನ್ನಲಾದ) ನವೀನನ ಧ್ವನಿ ಹುಡುಗಿಯರ ಮುಖ ತೋರಿಸಲು ಹೇಳುವುದು ಮತ್ತು ಬಟ್ಟೆ ಹರಿಯಲು ಹೇಳುವುದು ಪತ್ರಕರ್ತನೊಬ್ಬನ ಕೆಲಸವೇ? ಯಾವ ಪತ್ರಿಕೋದ್ಯಮದಲ್ಲಿ ರೇಪ್ ಮಾಡಲು ಪ್ರಚೋದಿಸುವುದನ್ನು ಹೇಳಿ ಕೋಡುತ್ತಾರೆ?

೩. ಧಾಳಿಯ ಬಳಿಕ ಟಿ.ವಿ. ಸ್ಟುಡಿಯೋದಲ್ಲಿ ತಾನು ಮಹಿಳೆಯರನ್ನು ಗೌರವಿಸುತ್ತೇನೆಯೆಂದೆಲ್ಲಾ ಒದರಿದ ಈ ನವೀನ ಶೆಟ್ಟಿ ಇದ್ದ ಬದ್ದ ಹುಡಿಗಿಯರಿಗೆ, ಗೃಹಿಣಿಯರಿಗೆ ಅಶ್ಲೀಲ ಎಸ್.ಎಂ.ಎಸ್. ಕಳಿಸಿ "ಕರಾವಳಿ ಅಲೆ"ಯಿಂದ ಹೋರದಬ್ಬಿಕೊಂಡದ್ದನ್ನು ಬಚ್ಚಿಡುವುದೇಕೆ?

೪. ಹೋಮ್ ಸ್ಟೇ ವಿಚಾರದಲ್ಲಿ ನವೀನನ ಬಂಧನವಾದಾಗ ನಾಮ್ ಕ ವಾಸ್ತೆಗೆಯಾದರೂ ಮಂಗಳೂರಿನ ಪತ್ರಕರ್ತ ಸಂಘ ಪ್ರತಿಭಟನೆ ಮಾಡಿದಾಗ ಕೇವಲ ೫-೬ ಪತ್ರಕರ್ತರು ಭಾಗವಹಿಸಿದ್ದು ಏನು ಹೇಳುತ್ತದೆ? ಪ್ರಾಯಶ: ಮಂಗಳೂರಿನ ಪತ್ರಕರ್ತರಿಗೆ ನವೀನನ ಒಳಹೂರಣವೆಲ್ಲಾ ಗೊತ್ತು.

ರವಿ ಕೃಷ್ಣಾ ರೆಡ್ಡಿಯೆಂಬ failed ನಕ್ಸಲ್/ ಕ್ರಾಂತಿಕಾರೀ wannabe

ಇನ್ನು ನವೀನನನ್ನು ಬೆಂಬಲಿಸಿ ಓತಪ್ರೋತವಾಗಿ "ವರ್ತಮಾನ.ಕಾಂ" ಬ್ಲಾಗಿನಲ್ಲಿ ಬ್ಲಾಗ್ ಪೋಸ್ಟ್ ಮಾಡಿ ಅದಕ್ಕೆ ತಾನೇ ಕಮೆಂಟು ಬರೆಯುವ ರವಿ ಕೃಷ್ಣಾ ರೆಡ್ಡಿಯೆಂಬ ನಕ್ಸಲನ ಜಾತಕ ಪೄಜ್ನಾವಂತರಿಗೆಲ್ಲಾ ತಿಳಿದಿರುವಂತದ್ದೇ.

ರವಿಕೃಷ್ಣಾ ರೆಡ್ಡಿಯೆಂಬ ಎನ್.ಆರ್.ಐ., ಅಮೆರಿಕದಿಂದ ಹೊರಹಾಕಿಸಿಕೊಂಡು (ಡಿಪೋರ್ಟೆಡ್?) ಬೆಂಗಳೂರಿಗೆ ಬಂದು ಇಲೆಕ್ಷನ್ನಿಗೆ ನಿಂತು ಠೇವಣಿ ಉಳಿಸಿಕೊಳ್ಳಲೂ ಆಗದ ಕ್ರಾಂತಿಕಾರಿ. ಕೊಪ್ಪ, ಶಿವಮೊಗ್ಗ, ಆಗುಂಬೆಯಲ್ಲಿ ನಕ್ಸಲರನ್ನು ಭೇಟಿಯಾಗುವುದನ್ನು, ಯುಟ್ಯೂಬಿನಲ್ಲಿ ತನ್ನ ಪೆದ್ದು ಮುಖ ತೋರಿಸಿ ಬಡಬಡಿಸುವುದನ್ನೇ "ಕ್ರಾಂತಿ"ಯೆಂದು ಭಾವಿಸುವ ಅವಿವೇಕಿ. "ಲಂಕೇಶ್ ಪತ್ರಿಕೆ" ಓದಿದ ಕೂಡಲೇ ತಾನೇ ಸ್ಮಾರ್ಟ್ ಎಂದು ಭಾವಿಸುತ್ತಿದ್ದ ಹಿಂದಿನ "ಕ್ರಾಂತಿಕಾರಿ"ಗಳಂತೆ! ಜಾತಿ ವ್ಯವಸ್ಥೆ ಬಗ್ಗಿ ಕೊರೆಯುವ ಈ ರವಿಕೃಷ್ಣಾ ರೆಡ್ಡಿ ತಾನು ಅಮೆರಿಕ ಕನ್ನಡ ಸಂಘದ ಅಧ್ಯಕ್ಷನಾಗಿದ್ದಾಗ ಮಾಡಿದ ಜಾತೀಯ ಕೆಲಸ ಅದುವರೆಗೆ ಅಮೆರಿಗನ್ನಡರಲ್ಲಿ ಯಾರೂ ಮಾಡಿರಲಿಲ್ಲವೆಂದು ಮಿತ್ರನೊಬ್ಬ ಹೇಳಿದ್ದು ನೆನಪು.

ಇಂತಹ "ಅರ್ಹತೆ" ಹೊಂದಿದ ರೆಡ್ಡಿ ಈಗ ನವೀನ್ ಶೆಟ್ಟಿಗೆ ಬೆಂಬಲಿಸುವುದರ ಹಿಂದೆ ಸಿದ್ದಾಂತಕ್ಕಿಂತ ತನ್ನ ಪ್ರಸ್ತುತತೆ, ಕರೆನ್ಸಿ ಚಲಾವಣೆಯಲ್ಲಿರಬೇಕೆಂಬ ಹಪಹಪಿಯೇ ಕಾಣಬರುತ್ತದೆ.

ಹೋಮ್ ಸ್ಟೇ ಧಾಳಿ ರೂವಾರಿ ನವೀನ್ ಶೆಟ್ಟಿ ಸೂರಿಂಜೆಗೆ ದಿನೇಶ್ ಅಮೀನ್ ಮಟ್ಟುವೆಂಬ ಜಾತೀವಾದಿ ಪತ್ರಕರ್ತನ ಬೆಂಬಲ!


ಇನ್ನು ದಿನೇಶ್ ಅಮೀನ್ ಮಟ್ಟು ಬಗ್ಗೆ ಕರ್ನಾಟಕದ ಪತ್ರಕರ್ತರೆಲ್ಲರಿಗೂ ಗೊತ್ತಿರುವಂತ್ತದ್ದೆ. ಹಿಂದುಳಿದ ಜಾತಿಯವರನ್ನು ಸಮರ್ಥಿಸುವ ಬರದಲ್ಲಿ, ಎಲ್ಲಾ ಮೇಲ್ಜಾತಿಯವರನ್ನು ಹೀಯಾಳಿಸುವುದನ್ನೇ ಪತ್ರಿಕೋದ್ಯಮವೆಂದು ನಂಬಿರುವ ದಿನೇಶ್ ಅಮೀನ್ ಮಟ್ಟು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲಾ ಸುಖ ಬಳಸಿ ಅದೆಷ್ಟೋ ಬಾರಿ ಬಿಟ್ಟಿ ವಿದೇಶೀ ಪ್ರಯಾಣವನ್ನು ಬಡ ಬೋರೆ ಗೌಡನ ತೆರಿಗೆ ಹಣದಲ್ಲಿ ಮಾಡಿ ಇತ್ತ ಕಾಂಗ್ರೇಸೇತರ ಪಕ್ಷಗಳು ಅಧಿಕಾರ ಹಿಡಿದ ಕೂಡಲೇ ಪ್ರತಿಪಕ್ಷ ಕಾಂಗ್ರೆಸ್ಸಿಗಿಂತಲೂ ಜೋರಾಗಿ ಗೋಳೋ ಎಂದು ಕಮೆಂಟು ಮಾಡುವುದು ನೋಡಿದರೆ ನಗು ಬರುತ್ತದೆ.
Dinesh Amin Mattu - a casteist journalist supporting fake journalist like Naveen Shetty Soorinje is not really surprising.

ಇದೇ ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ದೆಹಲಿ ವರದಿಗಾರನಿದ್ದಾಗ ಹರಿಪ್ರಸಾದ್, ಆಸ್ಕರ್, ಮೊಯ್ಲಿ ಮತ್ತಿತರರ ಮನೆ ಕಾಯುವುದನ್ನೇ, ವಿದೇಶೀ ಪ್ರಯಾಣಕ್ಕೆ, ಪ್ರಶಸ್ತಿಗಾಗಿ, ಸೈಟಿಗಾಗಿ, ಟ್ರಾನ್ಸಫರ್, ದಲ್ಲಾಳಿ ಕೆಲಸ ಮಾಡುವುದನ್ನೇ, ಮಸ್ಕಾ ಹಾಕುವುದನ್ನೇ ಪತ್ರಿಕೋದ್ಯಮವೆಂದು ತಿಳಿದ ಭೂಪ! ತನ್ನ ಜಾತಿ ಬಾಂಧವೆರೆಂಬ ಏಕೈಕ ಕಾರಣಕ್ಕೆ ಹರಿಪ್ರಸಾದ್, ಬಂಗಾರಪ್ಪನಂತಹವರು ಕೋಟಿಗಟ್ಟಳೆ ಉಂಡದ್ದು ಈ ದಿನೇಶ್ ಅಮೀನ್ ಮಟ್ಟುವಿಗೆ ಕಾಣಿಸಲೇ ಇಲ್ಲ. ಕಾಣಿಸಿದರೂ ಅದು "ಸಾಮಾಜಿಕ ನ್ಯಾಯ"ವೆಂದು ಪ್ರತಿಪಾದಿಸಿದ ಈ ದಿನೇಶ್ ಅಮೀನ್ ಮಟ್ಟು ಈಗ ನವೀನ್ ಶೆಟ್ಟಿ ಸೂರಿಂಜೆಯಂತಹವರನ್ನು ಬೆಂಬಲಿಸುವುದು ಕಂಡಾಗ ಆಶ್ಚರ್ಯ ಪಡಬೇಕಾಗಿಲ್ಲ.

ದಿನೇಶ್ ಅಮೀನ್ ಮಟ್ಟು ಸವಕಲು ನಾಣ್ಯವೆಂಬುದು ಪ್ರಜಾವಾಣಿ ಮ್ಯಾನೇಜ್ಮೆಂಟೇ ಎಂದೋ ನಿರ್ಧರಿಸಿಯಾಗಿದೆ. ಸರಕಾರಿ ಪ್ರಾಯೋಜಿತ ದೇವರಾಜ ಅರಸು ಪ್ರಶಸ್ತಿಯಂತಹ ಬಿರುದು ಬಾವಲಿ, ವಿಶ್ವವಿದ್ಯಾಲಯಗಳಲ್ಲಿ ಲೆಕ್ಚರ್ ಟಿಎ,ಡಿಎಗಳಿಗೆ ಸೀಮಿತವಾಗಿರುವ ದಿನೇಶ್ ಅಮೀನ್ ಮಟ್ಟು ನೈಜ ಪತ್ರಿಕೋದ್ಯಮದ ಟಚ್ಚನ್ನು ಎಂದೋ ಕಳೆದುಕೊಂಡಾಗಿದೆ. ಆದರೂ ಹಿರಿಯವರು. ಇಂತಹವರಿಗೆ ನವೀನ್ ಶೆಟ್ಟಿ ಸೂರಿಂಜೆಯಂತಹ ನಕಲಿ ಪತ್ರಕರ್ತರ ಬೆಂಬಲಕ್ಕೆ ಪತ್ರಿಕೋದ್ಯಮ, ಪತ್ರಿಕಾ ಸ್ವಾತಂತ್ರ್ಯದ ಹೆಸರಲ್ಲಿ ನಿಲ್ಲುವಂತಹ ಪರಿಸ್ಥಿತಿ ಬಂದಿರುವುದು ಶೋಚನೀಯ.
*********************

ನನ್ನ ಪಾಯಿಂಟ್ ಇಷ್ಟೇ / Mangaloreans need to unite and fight against likes of Naveen Shetty Soorinje, B.V.Seetharam.


ಹೋಮ್ ಸ್ಟೇ ಧಾಳಿ ತಪ್ಪೆಂಬುದನ್ನು ಯಾರೂ ಅಲ್ಲೆಗೆಳೆಯುವುದಿಲ್ಲ. ಆದರೆ ಒಬ್ಬ ಪತ್ರಕರ್ತನೇ ಮುಂದೆ ನಿಲ್ಲಿಸಿ ಮಾಡಿಸಿದ ಈ ಹೇಸಿಗೆ ಕೆಲಸವನ್ನು "ಪತ್ರಿಕಾ ಸ್ವಾತಂತ್ರ್ಯ"ದ ಹೆಸರಲ್ಲಿ ಸಮರ್ಥಿಸುವುದು ಸರಿಯೇ?

ಮಂಗಳೂರಿನ ಜನರನ್ನು ಕೋಮುವಾದಿಗಳೆಂದು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಮಾಧ್ಯಮಗಳು ಬಣ್ಣಿಸಿಯಾಗಿದೆ. ಮಂಗಳೂರು ಪೊಲೀಸರು ಕೋಮುವಾದಿಗಳು, ಮಂಗಳೂರಿನ ಜಿಲ್ಲಾಡಳಿತ, ಪತ್ರಕರ್ತರು ಸಂಘ ಪರಿವಾರದ ಬಂಟರು ಎಂದೂ ಅವರನ್ನು ಮೂದಲಿಸಲಾಗಿದೆ.

ಈಗ ನ್ಯಾಯಾಲಯ ನವೀನ ಶೆಟ್ಟಿಯ ಜಾಮೀನು ತಿರಸ್ಕರಿಸಿದೆ. ಈಗ ಮಂಗಳೂರಿನ ನ್ಯಾಯಾಧೀಶರೂ ಕೋಮುವಾದಿಗಳು ಎಂದು ರವಿಕೃಷ್ಣಾ ರೆಡ್ಡಿಯಂತಹವ ಬ್ಲಾಗಿಗರು, ದಿನೇಶ್ ಅಮೀನಿನಂತಹ ಜಾತಿವಾದಿ ಪತ್ರಕರ್ತರು ಬರೆದರೂ ಆಶ್ಚರ್ಯ ಪಡಬೇಕಿಲ್ಲ. ಏನಿದ್ದರೂ ಕ್ರಾಂತಿಕಾರಿಗಳು ನೋಡಿ - ಸಿಸ್ಟಮ್ಮೇ ಸರಿಯಿಲ್ಲ - ನಕ್ಸಲ್ ಹೋರಾಟದಂತಹುದೇ ಇದಕ್ಕೆಲ್ಲ ಪರಿಹಾರ ಎಂದು ನಂಬಿದವರು ಅವರು.

ಆದರೆ ಒಂದು ಘಟನೆ ಹಿಡಿದು - ಅದೂ ಓರ್ವ ಪತ್ರಕರ್ತ ಪ್ರಾಯೋಜಿತ -  ಒಂದು ಊರನ್ನೇ, ಸಮಾಜವನ್ನೇ ಹೀಯಾಳಿಸುವುದು ಸರಿಯೇ? ಮಂಗಳೂರಿಗರು ಈಗಾದರೂ ಸ್ವಲ್ಪ ಯೋಚಿಸಿ, ಮಂಗಳೂರು ಬ್ರಾಂಡ್ ನೇಮ್ ರಿಪೇರಿ ಮಾಡಬೇಕಾಗಿದೆ. ನವೀನ ಶೆಟ್ಟಿ, ಬಿ.ವಿ.ಸೀತಾರಾಮನಂತಹ ಢೋಂಗೀ ಪತ್ರಕರ್ತರಿಗೆ ಪಾಠ ಕಲಿಸುವ, ಗಡೀಪಾರು ಮಾಡಿಸುವ ಸಮಯ ಬಂದಿದೆ.

Thursday, June 28, 2012

ನಿತ್ಯನಿಗೊಂದು ವಿಶ್ವನಿಗೊಂದು ಸರಿಯೇ / Why is Suvarna News after Nityananda?

ನಿತ್ಯನಿಗೊಂದು ವಿಶ್ವನಿಗೊಂದು ಸರಿಯೇ?

ಕೆಲ ವಾರಗಳ ಹಿಂದೆ ನಿತ್ಯಾನಂದನ ಆಶ್ರಮದೊಳಗೆ ಯಾವುದೋ ಅಮೆರಿಕದ ಕೋರ್ಟಿನ ಸಮನ್ಸ್ ಹಿಡಿದು ಯಕ:ಸ್ಚಿತ್ ಕೋರ್ಟ್ ಕಾರಕೂನನಂತೆ ಪತ್ರಿಕಾಗೋಷ್ಟಿಯಲ್ಲೇ ಬಿಸಾಡಲು ನೋಡಿ ಮಹಿಳೆಯರಿಂದ ವಿಶ್ವೇಶ್ವರ ಭಟ್ಟರ ಶಿಷ್ಯ ಹಿಗ್ಗಾಮುಗ್ಗಾ ಗೂಸಾ ಪಡೆದಿದ್ದು, ಬಳಿಕ ಕ.ರ.ವೇ. ಬಾಡಿಗೆ ಪುಂಡರ ಮೂಲಕ ಗಲಭೆ ಎಬ್ಬಿಸಿ ಮುಖ್ಯಮಂತ್ರಿಗಳೇ ಮಧ್ಯ ಪ್ರವೇಶಿಸಿ ನ್ಯಾಯ ವಿರೋಧಿ ಆದೇಶಿಸಿದ್ದು  ಹಳೆ ಸುದ್ದಿ.

ವರ್ಷಗಟ್ಟಳೆ ಬರೋಬ್ಬರಿ ೭ ಸಮನ್ಸುಗಳನ್ನು ಪಡೆಯದೆ ("ಪ್ರಧಾನಿ ವಿಮಾನದಲ್ಲಿದ್ದೆ ಸಾರ್" ) ಅಂತೂ ನಿನ್ನೆ ಬೆಳಿಗ್ಗೆಯಿಂದ ರಾತ್ರಿ ತನಕ ಪೋಲಿಸ್ ಜತೆ "ಕರಾವಳಿ ಅಲೆ"ಯ ಸೀತಾರಾಮನಂತೆ ನ್ಯಾಯಾಲಯದಲ್ಲಿ ಅಬ್ಬೇಪಾರಿಯಂತೆ ನಿಂತುಕೊಂಡಿದದ್ದು "ಥಾಟ್ಸ್ ಕನ್ನಡ"ದ ಶಾಮಿ ಬಿಟ್ಟರೆ ಬೇರೆ ಯಾರಿಗೂ "ಬ್ರೇಕಿಂಗ್ ನ್ಯೂಸ್" ಆಗಲೇ ಇಲ್ಲ. ಪ್ರಾಯಶ: ಅವರ ಒಂದು ಕಾಲದ ಗೆಳೆಯ ಬೆಳಗೆರೆಯಂತೆ, ಊರಿಗೆಲ್ಲಾ ಉಪದೇಶ ಮಾಡುವವರು ಸಮನ್ಸ್ ತಪ್ಪಿಸಿಕೊಂಡು ಓಡಾಡುವುದನ್ನು ಪ್ರತಿಷ್ಠೆಯೆಂದು ತಿಳಿದುಕೊಂಡಿದ್ದಾರೇನೋ? Home Minister ಅಶೋಕ್ ಜೊತೆ ಡೀಲ್ ಮಾಡಿಕೊಂಡು ರಾಜ್ಯ ಪೊಲೀಸರ ಬೆಂಗಾವಲು ಪಡೆದು ನಮ್ಮಂತಹ ತೆರಿಗೆದಾರರ ಹಣದಲ್ಲಿ ಎಸ್ಕಾರ್ಟು ಇಟ್ಟುಕೊಂಡು ಓಡಾಡುವ ವಿಶ್ವೇಶ್ವರ ಭಟ್ಗೆ ಇದೇ ಪೊಲೀಸರು ೨೦೦೭ರಿಂದ ಸಮನ್ಸ್ ಕೊಡಲು ಆಗಿಲ್ಲವೆಂಬುದು ಎಂತಹ ವಿಪರ್ಯಾಸವಲ್ಲವೇ?


*****************

Suvarna TV - Vishweshwara Bhat and Nityananda: Did V.Bhat "create" this news on behalf of his "guru" Chandrashekhara?



ನಿತ್ಯಾನಂದನ ಮೇಲೆ ಒಂದೇ ಸಮನೆ ಸುವರ್ಣ ಧಾಳಿ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಬಹಳ ಉತ್ತರಗಳು ಹರಿದಾಡುತ್ತಿವೆ. ರಿಯಲ್ ಎಸ್ಟೇಟ್ ಮಾಫಿಯಾ, ಕರವೇ ಪುಂಡರು, ಮುತ್ತಪ್ಪ ರೈ ಇತ್ಯಾದಿ. ಆದರೆ ನನ್ನ ಖಚಿತ ಮೂಲಗಳ ಪ್ರಕಾರ ಇದೊಂದು ಸ್ವಾಮಿಗಳ ನಡುವಿನ ವೃತ್ತಿ ಮತ್ಸರವಷ್ಟೆ - ಆದರೆ ದುರುಪಯೋಗವಾದದ್ದು ಮಾಧ್ಯಮ!

ಇಡೀ ನಿತ್ಯಾನಂದನ ಪ್ರಕರಣವನ್ನು "ಸೃಷ್ಟಿಸಿದ್ದು" ತನ್ನ ಗುರು "ಅಂತರಾಷ್ಟ್ರೀಯ ವಾಸ್ತು ತಜ್ನ"  ಚಂದ್ರಶೇಖರ ಸ್ವಾಮೀಜಿಗೋಸ್ಕರವೆಂಬುದು ಎಲ್ಲಾ ಸುದ್ದಿ ಮನೆಗಳಲ್ಲಿ ಗೊತ್ತಿದೆ. ಕೆಲ ತಿಂಗಳ ಹಿಂದೆ ಮುಲ್ಕಿಯಲ್ಲಿ ಚಂದ್ರಶೇಖರ ಸ್ವಾಮಿಯ ಯಾಗದಲ್ಲಿ ಪಾಲ್ಗೊಂಡ ಚಿತ್ರ ಇಲ್ಲಿದೆ.


 Photo credit: www.daijiworld.com under fair credit use.

ಈ ಸ್ವಾಮಿಯ ಬಗ್ಗೆ ಗೊತ್ತಿರುವವರಿಗೆ ಗೊತ್ತು - ವ್ಹೀಲಿಂಗ್ ಡೀಲಿಂಗ್ ಸ್ವಾಮಿಯ ಹೂರಣ. ನ್ಯೂಯಾರ್ಕಿನಲ್ಲಿ ವರ್ಲ್ಡ್ ಟ್ರೇಡ್ ಸೆಂಟರಿಗೆ ನನ್ನದೇ ವಾಸ್ತು ಎಂದು ಹೇಳುವ ಈ ಸ್ವಾಮಿಯ ಅಸಲತ್ತು ಅರಿಯುವುದು ನಿಮಗೇ ಬಿಟ್ಟದ್ದು.

ರಾಜಕುಮಾರ್ - ಬಂಗಾರಪ್ಪ, ಐಶ್ವರ್ಯ ರೈ - ಬಚ್ಚನ್ ಬೀಗರಾದದ್ದು ತನ್ನಿಂದಲೇ ಎಂದು ಮಾಧ್ಯಮಗಳಿಗೆ ಲೀಕ್ ಮಾಡಿ ಫೇಮಸ್ ಆಗುವ ಚಟ ಈ ಸ್ವಾಮಿಗೆ. 

ಆದರೆ ಈ ಸ್ವಾಮಿಗೆ ನಿತ್ಯಾನಂದನಂತಹ ಯುವಕನತ್ತ ಜನರ ಚಿತ್ತ, ಅದರಲ್ಲೂ ಸಿನೆಮಾ ಮಂದಿ ನಿತ್ಯನಿಗೆ ಉಘೇ ಉಘೇ ಎನ್ನುವುದು ಒಂದೇ ಸಮನೆ ಹೊಟ್ಟೆ ಕಾಯಿಸಿ ಬಿಟ್ಟಿದೆ. ಯಾಕೆಂದರೆ ಈ ಚಂದ್ರಶೇಖರ ಸ್ವಾಮಿ ಒಂದು ಕಾಲದಲ್ಲಿ ಇದೇ ರೀತಿ ಚಿತ್ರರಂಗದ ಸಹವಾಸದಿಂದಲೇ "ಫೇಮಸ್" ಆದದ್ದು.

ನನ್ನ ಒಂದು ಮೂಲದ ಪ್ರಕಾರ ನಿತ್ಯನ ವಿರೋಧ ಆರೋಪ ಮಾಡುತ್ತಿರುವ ಯುವತಿಯ ತಂದೆ ಸೇತುಮಾಧವ ರಾವ್ ಈ ಚಂದ್ರಶೇಖರ ಗುರುವಿನ ದೋಸ್ತ್. ಒಟ್ಟಾರೆ ಪ್ರಭಾವಿ ಗುರು/ಸ್ವಾಮೀಜಿಗಳ ವೃತ್ತಿ ಮತ್ಸರದಲ್ಲಿ ಮಾಧ್ಯಮ ಬಳಕೆಯಾದದ್ದು ಇಲ್ಲಿ ಸ್ಪಷ್ಟ.

For those who were wondering "Why is Suvarna News suddenly after Nityananda Swami" - now you know the rest of the story.

Wednesday, May 16, 2012

Why raid Yeddy's house now? Raid Siddaganga Mutt!

CBI raids Yeddy's house after all horses and crows have bolted and stashed their loot.

What is the point in CBI raiding Yeddy's houses and offices now?

There is (or should I say "was") a reason Yeddy visits Siddaganga Mutt in Tumkur at 5AM before sunrise.

And there is again a reason why Swamiji of Siddaganga Mutt (who was kind enough to meet Yeddy in jail and hospital during earlier arrests) out of the blue invited Sonia Madam and honored her.

AICC president Sonia Gandhi pays obeisance to Siddalinga Swamy of Siddaganga Mutt at Tumkur, Karnataka on Saturday.— PHOTO: K . Bhagya Prakash
(Photo: From The Hindu April 29 2012)

It was very amusing to see this 105 year old man (Swamiji) acting like a shy school boy near Sonia Gandhi in Tumkur.

Point is Yeddy's loot is safe in Tumkur Siddaganga Mutt. 


Congress and CBI know this.


Shrewd Swamiji knows that CBI knows Yeddy's loot is in his safe custody.


So Swamiji invites "Madam" to his birthday event and honors her and praises her.


Now which CBI officer has guts to raid a temple premises which "Madam" has visited only a few days back?

And here we are dumb public sitting like idiots in front of TV watching breaking news about "Raid on Yeddy's houses" while loot is already in a very safe place.

Every journalist worth his salt in Bangalore knows where Yeddy and Sons loot is stored but no one dares to point this out to public. Is it the fear of Mutt's followers or Yeddy's followers? Or is it blind faith? Or are they also in cahoots in whole scam? You decide.

Now you know rest of the story....

Saturday, November 5, 2011

F1 ರೇಸಿಗೆ ಬಿಟ್ಟಿ ಟಿಕೆಟ್ ಕೊಡದ Airtel ವಿರುದ್ಧ ಕನ್ನಡಪ್ರಭದ ರಣ ಕಹಳೆ!







ಕಳೆದ ಕೆಲ ದಿನಗಳಿಂದ ಕನ್ನಡಪ್ರಭದಲ್ಲಿ ಏತಪ್ರೋತವಾಗಿ ಬರುತ್ತಿರುವ Airtel ಕಂಪೆನಿ ವಿರೋಧೀ ವರದಿಗಳ ಹಿಂದೆ ಹೋಗಿ ನೋಡಿದರೆ ಕಂಡು ಬಂದದ್ದು ಅದೇ ಹಳೆ ಮುಖಗಳ "ಬಿಟ್ಟಿ" ಪ್ರೀಯತೆ.
ಮೊದಲೇನೋ "ಕನ್ನಡಪ್ರಭ"ದ ದೊರೆ ರಾಜೀವ ಚಂದ್ರಶೇಖರ್ - ಒಂದು ಕಾಲದಲ್ಲಿ BPL Mobile ಮಾಲಕ - ಅವರ ವೃತ್ತಿ ಮತ್ಸರಕ್ಕೆ ಭಟ್ ಮತ್ತು ಗುಂಪು ಈ ವರದಿಗಳನ್ನು ಸೃಷ್ಟಿ ಮಾಡುತ್ತಿದೆಯೆಂದು ನಂಬಿದ್ದೆ.

ಆದರೆ ಸ್ವಲ್ಪ ಕೇಳಿ ನೋಡಿದಾಗ ಕಂಡು ಬಂದದ್ದು ಸೈಟು, ಪ್ರಶಸ್ತಿ ದೋಚುವಲ್ಲಿ ಕಂಡುಬಂದಂತಹ ಆಸೆಬುರುಕುತನ.

ಇತ್ತೀಚೆಗೆ ನಮ್ಮ ದೇಶದಲ್ಲಿ ಅದ್ದೂರಿಯಾಗಿ ನಡೆದ Formula 1 ರೇಸಿನ ಪ್ರಮುಖ ಪ್ರಾಯೋಜಕ Airtel. ಕನ್ನಡಪ್ರಭದ non-ಮೂಲವಾಸಿಗಳ Facebook, Twitter ಗಳನ್ನು ಓದಿದವರಿಗೆ ಭಟ್, ಪ್ರತಾಪಸಿಂಹ ವಗೈರೆಗಳ F1 ಪ್ರೀತಿ ತಿಳಿದಿರುವಂತದ್ದೆ.
ಸೋ ಈ ಭಟ್, ಸಿಂಹಗಳು F1 ರೇಸಿನ ಬಿಟ್ಟಿ ಟಿಕೆಟುಗಳಿಗೆ Airtel ಬಳಿ ಬೇಡಿಕೆ ಇಟ್ಟಿವೆ. ಆದರೆ Formula 1 ನಂತಹ ಅಂತರಾಷ್ಟ್ರೀಯ ರೇಸುಗಳ ಟಿಕೆಟುಗಳು ಎಂದೋ ಮಾರಾಟ ಆಗಿ ಹೋಗಿರುತ್ತವೆ ಅಥವಾ ಪ್ರಾಯೋಜಕರಿಗೆ ಇಷ್ಟೇ ಎಂಬ ಮಿತಿ ಇರುತ್ತದೆ. ಅಷ್ಟಕ್ಕೂ ಕಳ್ಳೇಪುರಿಯಂತೆ ಹಂಚಲು F1 ಟಿಕೆಟುಗಳು BDA ಅಥವಾ MUDA ಸೈಟುಗಳಲ್ಲವಲ್ಲ? ಭಟ್ಟರು UK, Finland ಹೋಗಲು ಉಪಯೋಗಿಸಿದ ವಿಮಾನ ಕಂಪೆನಿಗಳಿಂದ ಸಿಗುವಂತಹ ಬಿಟ್ಟಿ ಟಿಕೆಟುಗಳಂತೂ ಅಲ್ಲವೇ ಅಲ್ಲ.

Airtel ನವರು ನಿಮಗೆ ಬಿಟ್ಟಿ ಟಿಕೆಟುಗಳನ್ನು ಕೊಡಲು ಆಗಲ್ಲ ಎಂದಿದ್ದಾರೆ.

ನಾವೂ ನೋಡ್ತೀವಿ ಅಂದಿದೆ ಕ.ಪ್ರ. ಗ್ಯಾಂಗು. ಹೇಗೂ ಏನೇನ್ ಮಾಡ್ತೀವೀ ನೋಡ್ತಾ ಇರಿ ಎನ್ನೋವ್ರು ನೋಡಿ!

ನಿಮಗೆ ನಾವು ಈಗಾಗಲೇ ಜಾಹಿರಾತು ಕೊಡುತ್ತಿದ್ದೇವೆ, ಇದಕ್ಕೆಲ್ಲಾ ಯಾಕೆ ಗಲಾಟೆ ಎಂದರೂ ತಣ್ಣಗಾಗದ ಕ.ಪ್ರ. ನಿಮ್ಮ ಜಾಹಿರಾತು ನಿಮ್ಮಲ್ಲೇ ಇರಲಿ, ಮೊದಲು ಟಿಕೆಟ್ ಕೊಡಿ ಎಂದು ಹಠಕ್ಕೆ ಬಿದ್ದರೂ Airtel ಅದಕ್ಕೆ ಸೊಪ್ಪು ಹಾಕಿಲ್ಲ. ಗಾಯಕ್ಕೆ ಉಪ್ಪು ಸವರಿದಂತೆ ಇವರ ದುರಾಶೆ ನೋಡಿ already schedule ಆಗಿದ್ದ ಜಾಹಿರಾತುಗಳನ್ನು ಹಿಂಪಡೆದಿದೆ.

ಅಲ್ಲಿಗೆ ಶುರುವಾಯ್ತು ನೋಡಿ "ಕನ್ನಡಪ್ರಭ"ದಲ್ಲಿ Airtel ಬಗ್ಗೆ ಪುಂಖಾನುಪುಂಖವಾಗಿ ಸರಣಿಯಂತೆ ಅಪ್ಪ ಅಮ್ಮ ಇಲ್ಲದ "ವಿಶೇಷ ವರದಿ"ಗಳು!

So now you know!

******************
English summary:

Kannada daily "Kannada Prabha" has been publishing series of so called "Special Reports" against Airtel for past few days.

On investigating what caused this rag to suddenly go after Airtel, I found usual hypocrisy of journalists in India - asking for freebies. In this instance Kannada Prabha Editorial Team demanded free passes to F1 Race held recently in India of which Airtel was the main sponsor. When that was denied Kannada Prabha team started this series against Airtel.

It has to be noted that Kannada Prabha is owned by Rajeev Chandrashekhar - Rajya Sabha MP - and former owner of BPL Mobile so there is probably some business jealousy in play here as well. It is a pity that journalists have fallen so low to demand freebies as if it is their birth right.

********

Saturday, August 20, 2011

ಪತ್ರಕರ್ತರಿಗೆ ಗಣಿ ಕಪ್ಪ: thatskannada.comನಲ್ಲಿ ಕೆಲವೇ ಘಂಟೆಗಳಲ್ಲಿ ಮಾಯವಾಯಿತೇಕೆ?

ಪತ್ರಕರ್ತರಿಗೆ ಗಣಿ ಕಪ್ಪ: thatskannada.comನಲ್ಲಿ ಕೆಲವೇ ಘಂಟೆಗಳಲ್ಲಿ ಮಾಯವಾಯಿತೇಕೆ?

ಪತ್ರಕರ್ತರಿಗೆ ಗಣಿ ಕಪ್ಪದ ಸುದ್ದಿ ನಿನ್ನೆ ಅಂತರ್ಜಾಲದಲ್ಲಿ ಚೆನ್ನಾಗಿಯೇ ಹರಿದಾಡಿತು.

thatskannada.com ಪೋರ‍್ಟಲಿನಲ್ಲೂ ಈ ಸುದ್ದಿ publish ಆಗಿತ್ತು.

ಆದರೆ ಪ್ರಾಯಷ: ಎರಡೇ ಘಂಟೆ ಅವಧಿಯಲ್ಲಿ ಆ ಲಿಂಕ್ ಕ್ಲಿಕ್ ಮಾಡಿದಾಗ ಓದುಗರಿಗೆ ಸಿಕ್ಕಿದ್ದು "ಪುಟ ಸಿಗುತ್ತಿಲ್ಲ"ವೆಂಬ ಮೆಸೇಜ್. ಮತ್ತೊಂದು ಘಂಟೆಯಲ್ಲಿ ಆ ಲಿಂಕೇ ಪೂರ್ತಿ ಮಾಯವಾಗಿ ಬಿಟ್ಟಿತು.

thatskannadaದ ಶಾಮಿಯೂ ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ಸಂಪಾದಕರೂ ಕ್ಲೋಸ್ ಫ್ರೆಂಡುಗಳಿರಬಹುದು. ಆದರೆ ಪತ್ರಿಕಾ ಧರ್ಮವನ್ನು ಮರೆತು ಮಿತ್ರರಿಗಾಗಿ ಅಥವಾ ಯಾವುದೋ ಒತ್ತಡಗೊಳಕ್ಕಾಗಿ ಶಾಮಿ ಹೀಗೆ ತನ್ನ ಎಡಿಟೋರಿಯಲ್ ಕತ್ತರಿ ಪ್ರಯೋಗ ಮಾಡಬಾರದಿತ್ತು.

ಏನಂತೀರಿ?

Friday, August 19, 2011

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ


First of all "ಪ್ರಜಾವಾಣಿ"ಗೆ ಭೇಷ್ ಅನ್ನಬೇಕಾಗಿದೆ. ಲೋಕಾಯುಕ್ತ ವರದಿ ಎಲ್ಲಾ ಮಾಧ್ಯಮಗಳಿಗೂ ಲಭ್ಯವಾಗಿದ್ದರೂ, "ಪ್ರಜಾವಾಣಿ’ಯೊಂದೇ systematic ಆಗಿ ವರದಿಯನ್ನು ಅವಲೋಕಿಸಿ ಎಳೆ ಎಳೆಯಾಗಿ ಅನಾವರಣ ಮಾಡುತ್ತಿದೆ.

ಹಿಂದೊಮ್ಮೆ ಈ ಬ್ಲಾಗಲ್ಲಿ ಗಣಿ ರೆಡ್ಡಿಗಳ ಎಂಜಲುಂಡಿರುವ ಪತ್ರಕರ್ತರ ಬಗ್ಗೆ ಬರೆದಿದ್ದೆ. ನೋಡಿ "ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು". ಅದೆಲ್ಲಾ ಇಂದು ನಿಜವಾಗಿದೆ.

ಇಂದಿನ "ಪ್ರಜಾವಾಣಿ" ನೋಡಿ:

  • ಆರ್.ಬಿ. (ರವಿ?) - ರೂ ೧೦ ಲಕ್ಷ
  • ವಿ.ಭಟ್ (ವಿಶ್ವೇಶ್ವರ?) - ರೂ ೨೫ ಲಕ್ಷ ಮತ್ತು 50 ಲಕ್ಷ (ಪ್ರಾಯಶ: ಇದರಲ್ಲೇ ಹೊಸ ಮನೆ ಕಟ್ಟಿದರೇನೋ?)
  • ಬೆಂಗಳೂರು ಮಿರರ್ - ರೂ ೫ ಲಕ್ಷ
  • ಡೆಕ್ಕನ್ ಕ್ರೋನಿಕಲ್ - ರೂ ೨೫ ಲಕ್ಷ
  • ಪ್ರೆಸ್ ಕ್ಲಬ್ - ೫ ಲಕ್ಷ
ಹೀಗೆ ಕಳ್ಳೇಪುರಿ ಹಂಚಿದಂತೆ ಪತ್ರಕರ್ತರಿಗೆ ಗಣಿ ರೆಡ್ಡಿಗಳು ಹಣ ಹಂಚಿದ್ದಾರೆ. ಇನ್ನು ಪ್ರೆಸ್ ಕ್ಲಬ್ ಗಳಿಗೂ ಲಕ್ಷಗಟ್ಟಳೆ ಹಂಚಿದ್ದಾರೆ. ಇದನ್ನೆಲ್ಲಾ ನೋಡಿದಾಗ ಗಣಿ ದೊರೆಗಳ ಪರವಾಗಿ direct ಅಥವಾ indirect ಆಗಿ ಬೆಂಬಲಿಸುವ ಪತ್ರಕರ್ತರಿರುವುದು ಆಶ್ಚರ್ಯದ ಸಂಗತಿಯೇ ಅಲ್ಲ.

ಭಾರೀ ಸಜ್ಜನರಂತೆ ಅಣ್ಣಾ ಹಜಾರೆ ಹೋರಾಟಕ್ಕೆ ಏಕ್ ದಂ ಪ್ರಚಾರ ಕೊಡುವ ಇದೇ ಪತ್ರಕರ್ತರು ಅತ್ತ ಗಣಿ ದೊರೆಗಳ ಎಂಜಲನ್ನೂ ಯಾವುದೇ ನಾಚಿಕೆಯಿಲ್ಲದೆ ಬಾಚಿಕೊಂಡದನ್ನು ನೋಡುವಾಗ ಅಸಹ್ಯವಾಗುತ್ತದೆ.

ಈ ದರಿದ್ರ side business ಪತ್ರಕರ್ತರಿಗೂ ಯಡ್ಯೂರಪ್ಪನವರಿಗೂ difference ಏನು?

Friday, August 5, 2011

ಎಸ್.ಎಂ.ಕೃಷ್ಣರ ಅಚಾತುರ್ಯಗಳ ಸುದ್ದಿ ಕನ್ನಡ ಮಾಧ್ಯಮದಲ್ಲೇಕಿಲ್ಲ?


ವಿಶ್ವಸಂಸ್ಥೆಯಲ್ಲಿ ಪೋರ್ಚುಗಲ್ಲಿನ ಸಚಿವರ ಭಾಷಣವನ್ನು ಹಲವು ನಿಮಿಷಗಳ ಕಾಲ ಶಾಲಾ ಬಾಲಕನಂತೆ ಎಸ್.ಎಂ.ಕೃಷ್ಣರವರು ಓದಿ ಪೇಚಿಗೀಡಾಗಿದ್ದು ಹಳೆ ಸುದ್ದಿ.

ನಿನ್ನೆ ಲೋಕಸಭೆಯಲ್ಲೂ ಹೀಗೇ ಆಯಿತು. ಲೋಕಸಭಾ ಸದಸ್ಯರು ಕೇಳಿದ ಪ್ರಶ್ನೆಗೆ ಎಸ್.ಎಂ.ಕೃಷ್ಣ ತಡಕಾಡಿ ಉತ್ತರ ಹುಡುಕಲು ಒದ್ದಾಡಿದ್ದು ಬರೋಬ್ಬರಿ ಕೆಲ ನಿಮಿಷಗಳು. [Read: "S.M.Krishna caught in sticky situation in Lok Sabha"]

ಲೋಕಸಭಾ ಅಧ್ಯಕ್ಷರೇ ಕಡೆಗೆ ’ಬಿಟ್ಬುಡಿ ಸ್ವಾಮೀ. Answer has been tabled ಅಂಥ ಹೇಳ್ಬುಡಿ" ಎಂದು ಹೇಳಬೇಕಾಯಿತು. ಈ ಘಟನೆಯನ್ನು PTI "Foreign minister appeared absent minded" ಎಂದು ವರದಿ ಮಾಡಿತು.

ಈಗ ಬಂದಿರುವ ಸುದ್ದಿ ಪ್ರಕಾರ ಕೃಷ್ಣ ಅವರು PTIಗೆ ತನ್ನನ್ನು Absent minded ಎಂದು ಕರೆದಿದ್ದಕ್ಕೆ ಲಾಯರ್ ನೋಟಿಸ್ ಕಳಿಸಿದ್ದಾರೆ. [Read: "S.M.Krishna serves legal notice to PTI for calling him absent minded"]

ಇನ್ನು ರಾಜ್ಯಸಭೆಯಲ್ಲೂ ಕೃಷ್ಣರ ದಿನ ಸರಿಯಾಗಿದ್ದಂತಿಲ್ಲ. The Telegraph ವರದಿ ಪ್ರಕಾರ ಕೃಷ್ಣರವರು ಪದೇ ಪದೇ lost ಆದಾಗ ಮುಜುಗರ ತಪ್ಪಿಸಿದ್ಧು ಸ್ವತ: ಮನಮೋಹನ ಸಿಂಗ್ ಮತ್ತು ಚಿದಂಬರಂ. [Read: Manmohan and Team bails Krishna]

ಕೃಷ್ಣರವರಿಗೀಗ ೮೦ ವರ್ಷ. ಲೋಕಸಭೆ, ರಾಜ್ಯಸಭೆಯಲ್ಲಿ ಗುಮಾಸ್ತರು ಬರೆದು ಕೊಟ್ಟದ್ದನ್ನೇ ಓದಲು ಸಾಧ್ಯವಾಗದ ಕೃಷ್ಣರು ವಿದೇಶೀ ನಾಯಕರೊಂದಿಗೆ ಅಣು ಒಪ್ಪಂದ ಮತ್ತಿತರ ಮಹತ್ವಪೂರ್ಣ ವಿಷಯಗಳಲ್ಲಿ ಹೇಗೆ ಮತ್ತು ಯಾವ ರೀತಿ ವ್ಯವರಿಸುತ್ತಾರೆಂದು ಎಣಿಸಿದರೇ ಭಯವಾಗುತ್ತದೆ. ಇನ್ನು ಕೃಷ್ಣರವರ ಸೆಕೆರೆಟರಿ ರಾಘವೇಂದ್ರ ಶಾಸ್ತ್ರಿ ಮಾಡುತ್ತಿರುವ ಗೋಲ್ ಮಾಲುಗಳನ್ನು ಈಗಾಗಲೇ english ಮಾಧ್ಯಮಗಳು ವರದಿ ಮಾಡಿವೆ.

ದೇಶದ ಎಲ್ಲಾ ಪತ್ರಿಕೆಗಳಲ್ಲಿ ಬಂದ ಈ ವರದಿಗಳನ್ನು ನೋಡಿದ ನನಗೆ ಆಶ್ಚರ್ಯವಾದದೆಂದರೆ ಕನ್ನಡ ಮಾಧ್ಯಮಗಳಲ್ಲಿ ಅಥವಾ ಬ್ಲಾಗುಗಳಲ್ಲಿ ಮೇಲಾವುದೇ ಸುದ್ದಿ ವರದಿಯಾಗಲೇ ಇಲ್ಲ. ಕನ್ನಡಿಗ ಸಚಿವ ಎಂಬ ಮಮತೆಯೇ? ಅಥವಾ ಅವರ ಕಾಲದಲ್ಲಿ BDA site gift ಪಡೆದುಕೊಂಡ ಬೆಂಗಳೂರಿನ ಪತ್ರಕರ್ತರು, ಸಂಪಾದಕರು ಇನ್ನೂ ಅದರ ಋಣ ತೀರಿಸುತ್ತಿದ್ದಾರೆಯೇ?

ಕನ್ನಡಿಗರ ಮಾನಮರ್ಯಾದೆಯನ್ನು ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಕಳೆಯುತ್ತಿರುವ ಕೃಷ್ಣ "ರಾಜ್ಯ ರಾಜಕೀಯವನ್ನು ಬಚಾಚ್ ಮಾಡಲು ಕೃಷ್ಣರಿಂದ ಮಾತ್ರ ಸಾಧ್ಯ", "ರಾಜ್ಯ ರಾಜಕೀಯಕ್ಕೆ ವಾಪಾಸಾಗಬೇಕು", ’ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಬೇಕು" ಎಂದು ಇನ್ನೂ ಬರೆಯುತ್ತಿರುವ ದೊಡ್ಡ ಪತ್ರಕರ್ತರ ಗುಂಪೇ ಇನ್ನೂ ಕನ್ನಡ ಮಾಧ್ಯಮ ಲೋಕದಲ್ಲಿರುವುದು ಕನ್ನಡ ಮಾಧ್ಯಮ ಲೋಕ ಎಷ್ಟು ದಿವಾಳಿಯೆದ್ದು ಹೋಗಿದೆಯೆಂಬುದರ ಸಂಕೇತವಲ್ಲದೆ ಮತ್ತೇನು?

Friday, July 22, 2011

ತಮ್ಮ ಕೆಲಸ ಸರಿಯಾಗಿ ಮಾಡದ ಲೋಕಾಯುಕ್ತರು ಊರಿಗೆಲ್ಲಾ ಉಪದೇಶ ಮಾಡುವುದು ಯಾಕೆ?


"Live by media, die by media" - ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಟಿ.ವಿ. ತೆರೆಯಲ್ಲಿ ಗಳಗಳ ಅಳುತ್ತಿರುವಾಗ ಅನಿಸಿದ್ದು ಹಾಗೆ.

ಈ ಬ್ಲಾಗಿನಲ್ಲಿ ಸಂತೋಷ್ ಹೆಗ್ಡೆಯವರ ಪ್ರಚಾರಪ್ರಿಯ ಪ್ರವೃತ್ತಿ ಬಗ್ಗೆ ಹಿಂದೊಮ್ಮೆ ನಾನು ಬರೆದಾಗ) ಅದೆಷ್ಟೋ ಮಂದಿ ಹೀಯಾಳಿಸಿ email ಕಳಿಸಿದ್ದರು. ನಿವೃತ್ತಿ ನಂತರವೂ ಯಾವುದೋ ಆಯೋಗಗಳಲ್ಲಿ, ಲೋಕಾಯುಕ್ತ ಹುದ್ದೆಗಳಲ್ಲಿ ತಮ್ಮ ಗತ ದಿನದ ಸೌಕರ್ಯ, ಗತ್ತನ್ನು ಪುನ: ಪಡೆಯುವ ನಿವೃತ್ತ ನ್ಯಾಯಾಧೀಶರ ದೊಡ್ಡ ಗುಂಪೇ ಈ ದೇಶದಲ್ಲಿದೆ. ಅಂತಹವರ ಸಾಲಿಗೆ ಜ| ಸಂತೋಷ ಹೆಗ್ಡೆಯವರೂ ಒಬ್ಬರು ಎಂದು ನಾನು ಆಗ ಬರೆದದ್ದು ಈಗ ನಿಜವಾಗಿದೆ.

ಯಾವುದೇ ಕೆಲಸದಲ್ಲಿ professionalism ಎಂದಿರುತ್ತದೆ. ಈ ಲೋಕಾಯುಕ್ತ ಹುದ್ದೆಯೇ ನೋಡಿ - ತಾನು charge ತೆಗೆದುಕೊಂಡ ದಿನದಿಂದಲೂ ಪತ್ರಿಕಾಗೋಷ್ಠಿ, ಕೆಮರಾ ಮುಂದೆ ಸಂತೋಷ ಹೆಗ್ಡೆಯವರು ಮೆರೆಯವುದರಲ್ಲಿ ಕಾಲ ಕಳೆದರಲ್ಲಬೇ, ಪುಡಿ ೫೦೦ / ೧೦೦೦ ರೂ ಲಂಚ ತೆಗೆದುಕೊಳ್ಳುವವರನ್ನು ಹಿಡಿಯುವಲ್ಲಿ ತೋರಿದ ಪೌರುಷವನ್ನು ದೊಡ್ಡ ಹೆಗ್ಗಣಗಳನ್ನು ಹಿಡಿಯುವುದರಲ್ಲಿ ತೋರಿಸಲೇ ಇಲ್ಲ. ಅದು ಬಯಲು ಮಾಡುತ್ತೇನೆ, ಇದು ಬಯಲು ಮಾಡುತ್ತೇನೆಯೆಂದು ಹೇಳುವುದರಲ್ಲಿ ಕಾಲ ಕಳೆದರೇ ಹೊರತು ಬೇರೇನು ಸಾಧಿಸಿದ್ದಾರೆ ಎಂದು ಪ್ರಶ್ನಿಸಬೇಕಾಗುತ್ತದೆ.

ಲೋಕಾಯುಕ್ತರಾಗಿರುವಾಗಲೇ ಅತ್ತ ದೆಹಲಿಯಲ್ಲಿ civic societyಯೆಂಬ ಕೈಲಾಗದ media savvy retireeಗಳ ಜೊತೆ ಮೆರೆದು ಇವರು ಸಾಧಿಸಿದ್ದೇನು? ತಮಗೆ ಎಲ್ಲಾ power, ಸರಕಾರೀ ಸೌಲಭ್ಯ, ಜನರ goodwill ಇದ್ದರೂ ಒಂದು ಸರಿಯಾಗಿ confidential ವರದಿ ತಯಾರು ಮಾಡಲು ಸಾಧ್ಯವಾಗದ ಇವರಿಗೆ ರಾಜಕಾರಣಿಗಳ ವಿರುದ್ಧ ಕಾರಲು ನೈತಿಕ ಅರ್ಹತೆ ಇದೆಯೇ? ರಾಜಕಾರಣಿಗಳಿಗಾದರೋ ಜನರ ಮುಂದೆ ಹೋಗಲು ಚಲಾವಣೆಯಲ್ಲಿರಬೇಕಾಗುತ್ತದೆ - ಆದರೆ ಸಂವಿಧಾನ ಬದ್ಧ ಸಂಸ್ಥೆಯ ಮುಖ್ಯಸ್ಥರೋರ್ವರು ಯಕ:ಶ್ಚಿತ್ ರಾಜಕಾರಣಿಯಂತೆ mediaದಲ್ಲಿ hero ಆಗಲು ಹೋಗಿ ಸೋತಿದ್ದಾರೆ.

ಸಂತೋಷ್ ಹೆಗ್ಡೆಯವರು ಟಿ.ವಿ. ಕೆಮರಾಗಳ ಮುಂದೆ ಪೋಸ್ ಕೊಟ್ಟು ಹಾಳು ಮಾಡಿದ ೧೦% ಸಮಯವನ್ನು ತಮ್ಮ ವರದಿಯನ್ನು ಗೌಪ್ಯವಾಗಿ ತಯಾರಿಸಲು ವ್ಯಯ ಮಾಡಿದರೆ ಸಾಕಿತ್ತು. ಅದು ಬಿಟ್ಟು ಪ್ರತೀ ದಿನ ಟಿವಿ ಕೆಮರಾಗಳ ಮುಂದೆ, ದೆಹಲಿ civic society ಯೆಂಬ ಜೋಕರುಗಳ ಜೊತೆ time waste ಮಾಡಿದ ಇವರು (ದೆಹಲಿಯಲ್ಲೂ ಇವರು ಸಾಧಿಸಿದ್ದೇನೂ ಇಲ್ಲ) ಈಗ ಅದೇ ಟಿವಿ ಚಾನೆಲ್ಲುಗಳಲ್ಲಿ ತಮ್ಮ ವರದಿ ಲೀಕಾದದನ್ನು ನೋಡಿ ಕಣ್ಣೀರು ಹಾಕುತ್ತಿರುವುದು ವಿಪರ್ಯಾಸ!

ಸರಕಾರಗಳ ವಿರುದ್ಧ, ರಾಜಕಾರಣಿಗಳ ವಿರುದ್ಧ ಪ್ರತಿದಿನವೆಂಬಂತೆ ಹೋದಲ್ಲಿ ಬಂದಲ್ಲಿ ಭಾಷಣ ಮಾಡಿದ ಸಂತೋಷ ಹೆಗ್ಡೆಯವರು ಎಲ್ಲಾ ಸರಕಾರಗಳು, ರಾಜಕಾರಣಿಗಳು ಅಪ್ರಯೋಜಕರು ಎಂಬ ಭಾವನೆ ಯುವಜನರಲ್ಲಿ ಮೂಡುವಲ್ಲಿ ಯಶಸ್ವಿಯಾಗಿದ್ದರು - ಆದರೆ ಈಗ? ಒಂದು ಯಕ:ಶ್ಚಿತ್ ವರದಿಯ confidentiality maintain ಮಾಡಲೂ ಇವರ ಕೈಲಾಗಲಿಲ್ಲ ಯಾಕೆ? ದೇಶದ ಎಲ್ಲಾ ಸಮಸ್ಯೆಗಳಿಗೆ ರಾಜಕಾರಣಿಗಳು ಕಾರಣ ಎಂದು ಒಂಥರಾ ಜನಪ್ರಿಯ populism ಅಥವಾ playing to the gallery ಅಂಥಾರಲ್ಲ - ಅದನ್ನು ಮಾಡಲು ಹೋಗಿ ತನ್ನ ಕೆಲಸ ಸರಿ ಮಾಡದೆ ಈಗ ಅತ್ತರೆ ಏನು ಪ್ರಯೋಜನ?

Sunday, June 19, 2011

ಇಂಟರನೆಟ್ಟಿನ ಕನ್ನಡ ತಾಲಿಬಾನಿಗಳು


ಕಳೆದ ವಾರ ಯಾರೋ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯ ತನ್ನ ಫೇಸ್ ಬುಕ್ಕಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು ಅವರ "ಕನ್ನಡೇತರರು ಕನ್ನಡ ಕಲಿಯಲೇಬೇಕು" ಎಂಬ ಹೇಳಿಕೆಯನ್ನು ತೆಗಳಿದ್ದನ್ನೇ ಆಕಾಶ ಬೀಳುತ್ತಿದೆಯೆಂದು ಪ್ರತಿಕ್ರಿಯಿಸಿದ ಕೆಲ ಕೆಲಸವಿಲ್ಲದ ಬ್ಲಾಗರುಗಳು ಈಗ ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕುವಷ್ಟು ಮುಂದುವರಿದಿರುವುದು ಪ್ರಜ್ಣಾವಂತ ಕನ್ನಡಿಗರಿಗೆಲ್ಲಾ ಕಳಂಕ ತರುವಂತಹ ಸುದ್ದಿ.

ಕೆಲಸವಿಲ್ಲದೆ ಕಚೇರಿಯಲ್ಲಿ ಬೆಂಚಿನಲ್ಲಿರುವ ಕನ್ನಡ ಸಾಪ್ಟವೇರ್ ಇಂಜಿನಿಯರುಗಳು, ಕೊಲ್ಲಿ ರಾಷ್ಟ್ರಗಳಲ್ಲಿ ವೇಳೆ ಕಳೆಯುವುದು ಹೇಗೆ ಎಂದು ಗೊತ್ತಿಲ್ಲದ ಆಯಿಲ್ ಕಂಪೆನಿ ಕೆಲಸಗಾರರು ಇಂಟರನೆಟ್ಟು browse ಮಾಡುತ್ತಾ ಯಾರು ಕನ್ನಡದ ವಿರುದ್ದ ಸೊಲ್ಲೆತ್ತುತ್ತಾರೆಯೆಂಬುದನ್ನೇ ಕಾಯುತ್ತಾ ಕುಳಿತಿರುವಂತಿದೆ. ಅತ್ತ ಬೀದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪುಂಡರು ಕನ್ನಡದ ಹೆಸರಲ್ಲಿ ರೋಲ್ ಕಾಲ್ ಉದ್ದಿಮೆ ನಡೆಸುತ್ತಿರುವಂತೆ, ಇತ್ತ ಇಂಟರನೆಟ್ಟಿನಲ್ಲಿ ಅಬ್ಬೇಪಾರಿಗಳಂತೆ ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುವ ಐಟಿ ಬಿಟಿಗಳು, wannabe ಪತ್ರಕರ್ತ ನಿರುದ್ಯೋಗಿಗಳು ಕನ್ನಡೇತರರ ವಿರುದ್ದ ಅಂತರ್ಜಾಲದಲ್ಲಿ ಮತ್ತೀಗ ದೂರವಾಣಿಯಲ್ಲಿ ಬೆದರಿಕೆ ಹಾಕುವಷ್ಟು ಮುಂದಿರುವುದು ಯಾವ ಕನ್ನಡ ಪ್ರೇಮವೆಂಬುದು ಅರ್ಥವಾಗುತ್ತಿಲ್ಲ.

ಈ ಇಂಟರನೆಟ್ಟು ಹೀರೋಗಳ "ಬೆಂಗಳೂರಲ್ಲಿ ಬದುಕಬೇಕಾದರೆ ಕನ್ನಡ ಕಲಿಯಲೇಬೇಕು" ಎಂಬ ವಾದವಾದರೂ logical ಅಥವಾ ಸಂವಿಧಾನ ಬದ್ಧವಾಗಿದೆಯೇ?

ಉತ್ತರ ಭಾರತೀಯನ ವಿರುದ್ದ ಅಂತರ್ಜಾಲದಲ್ಲಿ ಹಿಗ್ಗಾಮುಗ್ಗ ಬರೆದ ಅರಬ್ ರಾಷ್ಟ್ರದ ದೋಹಾ ಕತಾರಿನಲ್ಲಿ ಕುಳಿತಿರುವ ಪ.ರಾಮಚಂದ್ರ (ಖ್ಯಾತ ಪತ್ರಕರ್ತ ಪ.ಗೋಪಾಲಕೃಷ್ಣ ಅವರ ಸುಪುತ್ರ) "ಸಂಪಾದಕೀಯ" ಎಂಬ ಬ್ಲಾಗಿನಲ್ಲಿ ಹೇಗೆ ತಾನು ರಾಬಿನ್ ಚುಗ್ಗಿಗೆ ಫೋನ್ ಇಮೇಲ್ ಮಾಡಿದೆಯೆಂದು ಭಾರೀ ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ತಾನು ಸ್ವತ: ಅರಬ್ ದೇಶದಲ್ಲಿ ಹಲವಾರು ವರ್ಷಗಳಿಂದ ಬದುಕುತ್ತಿರುವ ಇವರು ಅಲ್ಲಿನ ಸ್ಥಳೀಯ ಭಾಷೆ ಅರೇಬಿಕ್ ಕಲಿತಿದ್ದಾರೆಯೇ? ಮಕ್ಕಳಿಗೆ ಅರೇಬಿಕ್ ಕಲಿಸುತ್ತಿದ್ದಾರೆಯೇ (ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರೆಲ್ಲರು ತಮ್ಮ ಮಕ್ಕಳನ್ನು ಕಳಿಸುವುದು CBSE syllabus "ಇಂಡಿಯನ್ ಸ್ಕೂಲುಗಳಿಗೆ ಅಥವಾ ಅಮೆರಿಕನ್ ಸ್ಕೂಲುಗಳಿಗೆ - ಎಲ್ಲೂ ಅರೇಬಿಕ್ ಕಲಿಸುವುದಿಲ್ಲ) ಎಂದು ಪ್ರಶ್ನಿಸಬೇಕಾಗುತ್ತದೆ.

ಇತ್ತ ಇಂಟರನೆಟ್ಟಿನಲ್ಲಿ ಕನ್ನಡ ಪರ ಬೊಬ್ಬೆ ಹಾಕುವ ಐಟಿ ಬಿಟಿ ಅಥವಾ ಕನ್ನಡ ಪತ್ರಕರ್ತರು ಎಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ? ತಾವೇ ಎಲ್ಲೋ ಪರ ರಾಷ್ಟ್ರಗಳಲ್ಲಿ ಸ್ಠಳೀಯ ಭಾಷೆ ಕಲಿಯದೆ ಜೀತದಾಳುಗಳಾಗಿ ಬದುಕುತ್ತಿರುವ ಈ NRIಗಳಿಗೆ ಕನ್ನಡೇತರರು ಕನ್ನಡ ಕಲಿಯಲೇಬೇಕೆಂಬ ಹಠವಾದರೂ ಏಕೆ?

ಹೀಗೆ ಗಾಜಿನ ಮನೆಯಲ್ಲಿ ಕುಳಿತಿರುವವರು ಯಾವನೋ ರಾಬಿನ್ ಚುಗ್ ನ ಕಂಪೆನಿ ಹೆಸರನ್ನು ಬ್ಲಾಗುಗಳಲ್ಲಿ ಹಾಕುವುದು, ಅವನಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುವುದು, ಅವನ ಕಂಪೆನಿ HRಗೆ ಫೋನ್ ಮಾಡಿ ಅವನನ್ನು ಕೆಲಸದಿಂದ ತೆಗೆಯುವಂತೆ ಒತ್ತಾಯ ಮಾಡುವುದು - ಇದು ಯಾವ ಕನ್ನಡ ಪ್ರೇಮ ಸ್ವಾಮೀ?

ನಾಳೆ ಮಂಗಳೂರು, ಉಡುಪಿಯವರು "ಹೊರಗಿನವರು ಇಲ್ಲಿ ಬದುಕಬೇಕಾದರೆ ತುಳು/ಕೊಂಕಣಿಯನ್ನು ಒಂದು ವರ್ಷದೊಳಗೆ ಕಲಿಯುವುದು ಕಡ್ಡಾಯ" ಎಂದು ಚಳುವಳಿ ಮಾಡಿದರೆ ಉಗ್ರ ಕನ್ನಡ ಓರಾಟಗಾರರು ಏನ್ನೆನ್ನುತ್ತಾರೋ?

ಹೇಳೀ ಕೇಳೀ ಮುಖ್ಯಮಂತ್ರಿ ಚಂದ್ರು ಒಬ್ಬ ರಾಜಕಾರಣಿ - populist ಹೇಳಿಕೆಗಳನ್ನು ನೀಡುವ ಸಂವಿಧಾನಬದ್ಧವಲ್ಲದ "ಕನ್ನಡ ಅಭಿವೃದ್ದಿ ಪ್ರಾಧಿಕಾರ"ವೆಂಬ ಹಲ್ಲಿಲ್ಲದ ಸಂಸ್ಠೆಯ ಅಧ್ಯಕ್ಷ. ಸದಾ ಸುದ್ದಿಯಲ್ಲಿರಲು ಇಂತಹ ಹೇಳಿಕೆಗಳನ್ನು (ಒಂಥರಾ ಹೇಳಿಕೆಗಳಲ್ಲೇ ಹೀರೋ ಆಗುತ್ತಿರುವ ಲೋಕಾಯುಕ್ತ ಸಂತೋಷ ಹೆಗ್ಡೆಯವರಂತೆ!) ನೀಡುತ್ತಿರುವುದು ಅನಿವಾರ್ಯ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂತಹ ತುಘಲಕ್ ಯೋಜನೆಗಳನ್ನು ಸರಕಾರಕ್ಕೆ recommend ಮಾಡಬಹುದಷ್ಟೇ. ಯಾವುದೇ ಶಾಸನ ಸಭೆ ಯಾ ಸರಕಾರ ಚಂದ್ರು ಅವರ ಸಂವಿಧಾನದ ಮೂಲಭೂತ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿರುವ recommendation ಒಪ್ಪುವುದು ಸಾಧ್ಯವೇ ಇಲ್ಲ - ಒಪ್ಪಿದರೂ ನ್ಯಾಯಾಲಯಗಳು ಅವನ್ನು ಒಪ್ಪುವುದು ಕಷ್ಟ.

ಅದು technicalityಯಾದರೆ, ಇನ್ನು economic impact ಬಗ್ಗೆ ಯೋಚಿಸಿದ್ದಾರೆಯೇ? ಈ ಎಲ್ಲಾ ಕಂಪೆನಿಗಳು ಬಾಗಿಲು ಮುಚ್ಚಿ ಹೋದರೆ ಅದರ ಹೊಡೆತ ಬೀಳುವುದು ಬಡ ಕನ್ನಡಿಗರಷ್ಟೇ. ಯಾಕೆಂದರೆ ಈ ಐಟಿ ಬಿಟಿಗಳು ಜರ್ಮನಿ, ಅಮೆರಿಕಾ ಎಂದು ಬುರ್ರೆಂದು ಹಾರಿಹೋಗುತ್ತಾರೆ. ಪ.ರಾಮಚಂದ್ರರಂತವರು ಕೊಲ್ಲಿ ರಾಷ್ಟ್ರಗಳಲ್ಲಿ ಹಾಯಾಗಿ ತಮ್ಮ ಜೀತದ ಕೆಲಸದಲ್ಲಿ ಮಗ್ನರಾಗುತ್ತಾರೆ. ಆದರೆ ಮುಚ್ಚಿದ ಕಂಪೆನಿಯ ಬಡ ಸೆಕ್ಯೂರಿಟಿ ಗಾರ್ಡುಗಳು, ಡ್ರೈವರುಗಳು, ಕ್ಯಾಂಟೀನ್ ಹುಡುಗರು ತಮ್ಮ "ಕನ್ನಡ ಹೊಟ್ಟೆ" ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಳ್ಳಬೇಕಷ್ಟೇ.

ಭಾರತದ ಸಂವಿಧಾನ ಭಾರತೀಯ ಪ್ರಜೆಗಳೆಲ್ಲರಿಗೂ ದೇಶದೊಳಗೆ ಎಲ್ಲಿ ಬೇಕಾದರೂ ಹೋಗಿ ನೆಲೆಸುವ, ತಮ್ಮ ಭಾಷೆ ಸಂಸ್ಕೃತಿ ಆಚರಿಸುವ ಮೂಲಭೂತ ಹಕ್ಕು ನೀಡಿದೆ. ಇದನ್ನು ತಿಳಿದೂ ಅಥವಾ ತಿಳಿಯದೆಯೋ ಈ ಇಂಟರನೆಟ್ಟಿನ NRI, ಕನ್ನಡ ತಾಲಿಬಾನಿಗಳು ತಮ್ಮ ಮನೆಯಲ್ಲಿ, ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಧೈರ್ಯ ತೋರಿಸಲಿ. ಪ್ರತಿ ವರ್ಷ ಡಜನುಗಟ್ಟಳ್ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ - ಮುಂದಿನ ಪೀಳಿಗೆಯೇ ಕನ್ನಡ ಎಂದರೆ ಏನು ಎಂದು ಪ್ರಶ್ನಿಸುವ ಪರಿಸ್ಥಿತಿ ಇಂದಿದೆ.

ಇಂತಹ ಮುಖ್ಯವಾದ ವಿಷಯಗಳನ್ನು ಚರ್ಚಿಸುವ ಬದಲು ಯಾರೋ ತನ್ನ ಖಾಸಗಿ ಫೇಸ್ ಬುಕ್ಕಿನಲ್ಲಿ ಏನೋ ಕಮೆಂಟು ಮಾಡಿದ ಎಂದು ಅವನಿಗೆ ಜೀವ ಬೆದರಿಕೆ, ಅವನ ಕಂಪೆನಿಯ HR ವಿಭಾಗಕ್ಕೆ ದೂರು ಕೊಟ್ಟು ಅವನನ್ನು ಕೆಲಸದಿಂದ ತೆಗೆದು ಹಾಕುವಂತೆ ಬೆದರಿಕೆ ಹಾಕುವ ತನಕ ಈ ವಿಷಯವನ್ನು ಎಳೆದಿರುವುದು ತಾಲಿಬಾನಿತನವಲ್ಲದೆ ಮತ್ತೇನು?

ಈ ಇಂಟರನೆಟ್ಟು ಗೂಂಡಾಗಿರಿ ನಾಯಕತ್ವ ವಹಿಸಿದ ಹೊಳೇನರಸೀಪುರ ಮಂಜುನಾಥ ತಿಮ್ಮಯ್ಯ - ಈ ವ್ಯಕ್ತಿಯೂ ಅರಬ್ ರಾಷ್ಟ್ರಗಳಲ್ಲಿ ಎಷ್ಟೋ ವರ್ಷ ದುಡಿದರೂ ಅರೇಬಿಕ್ ಕಲಿತ್ತಿದ್ದಾರೆಯೇ ಎಂದು ಕೇಳಬೇಕಾಗಿದೆ.

ಪೇಜ್ ಹಿಟ್ ದುರಾಶೆಯಲ್ಲಿ ಉದ್ರೇಕಕಾರಿ ಬರಹಗಳನ್ನು ಪ್ರಕಟಿಸಿ ಅಂತರ್ಜಾಲದ Mobಗಳನ್ನು ಛೂ ಬಿಡುವ "ಸಂಪಾದಕೀಯ" ಬ್ಲಾಗ್ ಮತ್ತಿತರ motive ಓಕೆ ಎನ್ನೋಣ - ಆದರೆ ಪ.ರಾಮಚಂದ್ರ, ಹೊಳೇನರಸೀಪುರ ಮಂಜುನಾಥರಂತಹ otherwise perfectly reasonable ಜನ, ತಾವು ಗಾಜಿನ ಮನೆಯಲ್ಲಿ ಕುಳಿತ್ತಿದ್ದರೂ ಇಂಟರನೆಟ್ಟಿನಲ್ಲಿ ಭಾಷಾಂಧರಾಗಿ ತಾಲಿಬಾನಿಗಳ ತರಹ ವರ್ತಿಸುವುದು ಕಂಡಾಗ ಬೇಸರವಾಗುತ್ತದೆ.

*************
ಅಂದ ಹಾಗೆ ಕ.ರಾ.ವೇ.ಯ ನಾರಾಯಣ "ರೋಲ್ ಕಾಲ್" ಗೌಡರು ಏಕ್ ದಂ ತಣ್ಣಗಾಗಿ ಹೋಗಿರುವುದನ್ನು ಗಮನಿಸಿದ್ದೀರೆಯೇ? ತನ್ನ ಸ್ವಜಾತಿ ಬಾಂಧವ ಅಶೋಕ ಗೃಹ ಮಂತ್ರಿಯಾದ ಕೂಡಲೇ ನಾರಾಯಣ ಗೌಡರು ಗಪ್ ಚುಪ್! ಒಂದು ಮೂಲದ ಪ್ರಕಾರ ಕರಾವೇಯ ಪುಂಡರ ಮೇಲಿರುವ ಕೇಸುಗಳನ್ನು ತೆಗೆಯುವ ಭರವಸೆ ಅಶೋಕರಿಂದ ದೊರೆತಿದೆಯಂತೆ. ಇನ್ನೊಂದು ಮೂಲದ ಪ್ರಕಾರ ತನ್ನ ಆಡಳಿತದಲ್ಲಿ ಕರಾವೇ ಯಾವುದೇ ಗೂಂಡಾಗಿರಿ ಮಾಡದೇ ಇರಲು ಅಶೋಕರಿಂದ ಗೌಡರಿಗೆ ಅದೆಷ್ಟೋ ಕಪ್ಪ ಕಾಣಿಕೆ ಸಂದಾಯವಾಗಿದೆಯಂತೆ. ಏನೇ ಇರಲಿ ಕರಾವೇ ಪುಂಡರ ದಾದಾಗಿರಿ, ಪುಂಡಾಟ ತಣ್ಣಗೆ ಆಗಿರುವುದಂತೂ ನಿಜ!

Thursday, September 9, 2010

ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?


ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?

ಈ ಬ್ಲಾಗ್ ಪೋಸ್ಟಿನ ಹೆಡ್ಡಿಂಗು rhetorical ಅಲ್ಲ. ಎರಡು ದಿನಗಳ ಹಿಂದೆ ಕುಮಟಾದಲ್ಲಿ ನಡೆದ ಘಟನೆಯ ಅವಲೋಕನ.

ಒಂದು ಘಟನೆಯನ್ನು - ಅದರಲ್ಲೂ ಪತ್ರಕರ್ತನೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಾಗ ಅದನ್ನು ತಮಗೆ ಬೇಕಾದಂತೆ ಹೇಗೆ ತಿರುಚಬಹುದೆನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.



ಕುಮಟಾದ "ವಿಜಯ ಕರ್ನಾಟಕ"ದ ವರದಿಗಾರ ವಿ.ಡಿ.ಭಟ್ಟ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆ ಕಿರುಚಿದಾಗ ಜಮಾಯಿಸಿದ ಜನರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಪೊಲೀಸ್ ಅತಿಥಿಯಾದನೆಂದು ಒಂದು ವರದಿ. ಅದೇ ಪ್ರಕರಣ "ವಿಜಯ ಕರ್ನಾಟಕ"ದಲ್ಲಿ ಪ್ರಕಟವಾದ ಧಾಟಿಯೇ ಬೇರೆ. ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಥಳಿಸಿದರಂತೆ, ಅದು ಮಾಧ್ಯಮ ಸ್ವಾತಂತ್ರ್ಯದ ಹರಣವಂತೆ! ಉ.ಕ.ದ ಉಸ್ತುವಾರಿ ಸಚಿವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೆಂಬ ಒಗ್ಗರಣೆ ಬೇರೆ. ಅಲ್ಲಾ ಸ್ವಾಮೀ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದವರನ್ನೆಲ್ಲಾ ಉಸ್ತುವಾರಿ ಸಚಿವರು ವಿಚಾರಿಸುತ್ತಾ ಕುಳಿತುಕೊಳ್ಳಲು ಅವರಿಗೇನು ತಿಗಣೆ ಕಚ್ಚಿದೆಯಾ ಸ್ವಾಮೀ?

ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೊರೆಯುವ ವಿ.ಕ. ಈಗ ಪತ್ರಕರ್ತನ ವಿರುದ್ಧ ದೂರು ನೀಡಿದ ಬಡಪಾಯಿ ಮಹಿಳೆಯನ್ನೇ ವೇಶ್ಯೆಯೆಂದು ಹೀಯಾಳಿಸಿದಷ್ಟೇ ಅಲ್ಲ, ಮಹಿಳೆಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿ ಮಾನಹರಣ ಮಾಡಿದೆ. ಒಂಥರಾ "ಮಹಿಳೆ provocative ಆಗಿ dress ಮಾಡಿಕೊಂಡರೆ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ - ಅವಳದ್ದೇ ತಪ್ಪು" ಎಂಬ ತಾಲಿಬಾನಿಗಳ, ಕೆಲ Male Chauvinist Pigಗಳು ವಾದಿಸಿದಂತೆ. ಮಾಧ್ಯಮ ಸ್ವಾತಂತ್ರ್ಯವೆಂದರೆ ಪತ್ರಕರ್ತರು ಅತ್ಯಾಚಾರ ಮಾಡುವುದು OK ಎಂಬಲ್ಲಿಗೆ ಬಂದಿರುವುದು ನಮ್ಮ ದೌರ್ಭಾಗ್ಯವಷ್ಟೇ.

ಹಿಂದೆ ಯಾರೋ ಪೇದೆ ನೋಟೀಸ್ ಕೊಟ್ಟನೆಂದ ಮಾತ್ರಕ್ಕೆ ಮಾಧ್ಯಮ ಸ್ವಾತಂತ್ರ್ಯಹರಣವಾಯಿತೆಂದು ಗಣ್ಯರ ಹೆಸರಲ್ಲಿ ಏನೇನೋ ಪ್ರಕಟಿಸಿ ಸಿಕ್ಕಿ ಬಿದ್ದ (ಇಲ್ಲಿ ನೋಡಿ DGP ಅಜಯ ಸಿಂಹರ ಪತ್ರ) ವಿಜಯ ಕರ್ನಾಟಕದ Fake SMS, Fake Opinion generators ಇನ್ನೂ ಪಾಠ ಕಲಿತಂತಿಲ್ಲ.

ಅತ್ಯಾಚಾರಿ ಪ್ರಕರಣ ಆರೋಪಿ ವಿ.ಕ.ನ. ಪತ್ರಕರ್ತನ ಪರವಾಗಿ ರಾಜಕೀಯ ನಿರುದ್ಯೋಗಿಗಳಾದ ಆರ್.ವಿ.ದೇಶಪಾಂಡೆ, ಎಂ.ಸಿ.ನಾಣಯ್ಯ ಮತ್ತು ಹೊರಟ್ಟಿಗಳಂತಹವರಿಂದ ಹೇಳಿಕೆ ಕೊಡಿಸಿದೆ. ಶಿಕ್ಷಕರ ವರ್ಗಾವಣೆ ದಂಧೆಗೆ ತಡೆ ಹಾಕಿ ತಮ್ಮ ಖಮಾಯಿಗೆ ಕಲ್ಲು ಹಾಕಿದ ವಿಶ್ವೇಶ್ವರ ಹೆಗಡೆಯವರ ಮೇಲಿರುವ ಸಿಟ್ಟನ್ನು ಹೊರಟ್ಟಿ ಈಗ ಅತ್ಯಾಚಾರಿಯನ್ನು ಬೆಂಬಲಿಸಲು ಬಳಸಿಕೊಂಡದ್ದು ಹೊರಟ್ಟಿಯ ಸದ್ಯದ ಮಾನಸಿಕತೆಯನ್ನು ತೋರಿಸುತ್ತದೆಯೆಷ್ಟೇ.

ಇನ್ನು ಅತ್ಯಾಚಾರಿಯನ್ನು ಬಂಧಿಸಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದರ ಸಾಕ್ಷಿಯೆಂದು ನಾಣಯ್ಯನವರು ಹೇಳಿದನ್ನು ನಂಬಲು ಜನರೇನು ಕಿವಿ ಮೇಲೆ ಹೂವಿಟ್ಟುಕೊಂಡಿದ್ದಾರ ಸ್ವಾಮೀ? ಸಂಜೆ ೭ ಘಂಟೆಯ ಮೇಲೆ ನಾಣಯ್ಯನವರಿಗೆ ಫೋನ್ ಮಾಡಿದರೆ ಹೇಗೆ ಬೇಕಾಂದಂತಹ ಅಭಿಪ್ರಾಯವನ್ನೂ ಪಡೆಯಬಹುದೆಂಬುದನ್ನು ಬೆಂಗಳೂರಿನ ಹಿರಿ ಮರಿ ಪತ್ರಕರ್ತರಿಗೂ ತಿಳಿದಿರುವ ವಿಷಯ - ಇಂತಹ ಕುಡುಕ ಹೇಳಿದನ್ನು box item ಮಾಡಿ ಹಾಕಿ ತನ್ನ ಅತ್ಯಾಚಾರಿ ವರದಿಗಾರನನ್ನು ಬೆಂಬಲಿಸುವ ಪರಿಸ್ಥಿತಿ ವಿ.ಕ. ಸಂಪಾದಕೀಯ ಮಂಡಳಿಗೆ ಬರಬಾರದಿತ್ತು.

ಪತ್ರಕರ್ತನೆಂದ ಮಾತ್ರಕ್ಕೆ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ವಿ.ಕ. ಅಭಿಪ್ರಾಯವೇ? ಅತ್ಯಾಚಾರಕ್ಕೂ ಮಾಧ್ಯಮ ಸ್ವಾತಂತ್ರ್ಯಕ್ಕಿರುವ ಸಂಬಂಧವೇನೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಏನೆನ್ನುತ್ತೀರಿ?

Saturday, June 26, 2010

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು! Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ-ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು!

Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ ಮಾತ್ರ


ಕಳೆದ ಬ್ಲಾಗ್ ಪೋಸ್ಟಿನಲ್ಲಿ ವಿ.ಕ.ದ "ವರ್ಗಾವಣೆ ದಂಧೆ" fixer ಪತ್ರಕರ್ತರು ಖಡಕ್ ಅಧಿಕಾರಿ ಅಜಯ ಸಿಂಗರ ವಿರುದ್ಧ ಸಾರಿರುವ ಯುದ್ಧದ ಕುರಿತು ಬರೆದಿದ್ದೆ.

ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಯಾರೋ ಕಾರಖೂನ ಮಾಡಿದ ಪ್ರೊಸೀಜರಲ್ ತಪ್ಪಿಗಾಗಿ ಕರ್ನಾಟಕದ ಡಿ.ಜಿ./ಐಜಿಪಿಯ ವಿರುದ್ಧ ಯಕ:ಶ್ಚಿತ್ ಯುದ್ಧ ಸಾರಿ, "ಪತ್ರಿಕಾ ಸ್ವಾತಂತ್ರ್ಯ ಹರಣ" ಎಂದೆಲ್ಲಾ ಬಡಬಡಿಸಿದ ವಿ.ಕ.ದ ಸಂಪಾದಕೀಯ ಮಂಡಳಿಯ ಅಸಲೀತನವನ್ನು ಅಜಯ್ ಸಿಂಗರು ತಮ್ಮ ಪತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಆದರೆ ಮೊದಲ ಪುಟದಲ್ಲಿ ಐಜಿಯನ್ನು ಹಿಗ್ಗಾ ಮುಗ್ಗಾ ಅವಹೇಳನ ಮಾಡಿದ ವಿ.ಕ.ದ ವರ್ಗಾವಣೆ ಪತ್ರಕರ್ತ ಏಜೆಂಟರ ಪೌರುಷ, ಐಜಿ ಅಜಯ ಸಿಂಗರ ಪತ್ರ ಪ್ರಕಟಿಸುವಲ್ಲಿ ಕಂಡು ಬಂದಿಲ್ಲ - ಎಲ್ಲೋ "ಹೆಸರು ಗೊತ್ತಿಲ್ಲ ಊರು ಬೇಡ"ದಂತಹ ಪತ್ರಗಳನ್ನು ಪ್ರಕಟಿಸುವ "ಓದುಗರ ಓಲೆ" ವಿಭಾಗದಲ್ಲಿ ಅಜಯ ಸಿಂಗರ ಪತ್ರವನ್ನು - ಅದೂ ಅರ್ಧ ಕತ್ತರಿಸಿ ಪ್ರಕಟಿಸಿ - ತಾವೆಂತಹ ಹೇಡಿಗಳು ಎಂದು ಭಟ್-ತ್ಯಾಗರಾಜ್-ರಾಘವೇಂದ್ರ ಭಟ್-ವಗೈರೆಗಳು ತೋರಿಸಿವೆ.

ಆದರೆ ಪ್ರಪಂಚ ಬದಲಾಗಿದೆ ಎಂದು ಈ ಕೂಪ ಮಂಡೂಕಗಳು ಅರಿತಂತಿಲ್ಲ! ಇಂಟರನೆಟ್ ಎಂಬ ಮಾಧ್ಯಮ ಎಷ್ಟು ಪ್ರಭಾವಶಾಲಿ ಎಂದು ಪೊಲೀಸರ ವರ್ಗಾವಣೆ ದಂಧೆಯಲ್ಲಿ ಮುಳುಗಿರುತ್ತಿದ್ದ ಈ ಪತ್ರಕರ್ತ ಶಿಖಾಮಣಿಗಳು ಅರಿತಂತಿಲ್ಲ. ಇಲ್ಲದಿದ್ದರೆ ಅಜಯ ಸಿಂಗರಂತಹ tech savvy ಸಜ್ಜನ ಅಧಿಕಾರಿಯ ವಿರುದ್ಧ ಹಿಗ್ಗಾಮುಗ್ಗಾ ಬರೆಯುತ್ತಿದ್ದರೆ?

ವಿ.ಕ. ಸಂಪಾದಕರಿಗೆ ಕಳಿಸಿದ ಪತ್ರದ ಮೂಲ ಪ್ರತಿಯನ್ನು ಕರ್ನಾಟಕ ಪೋಲಿಸ್ ವೆಬ್ ಸೈಟಿನಲ್ಲಿ ಕಾಣ ಬಹುದು (ಇಲ್ಲಿ ನೋಡಿ - http://media.ksp.diqtech.com/files/DO_to_VK.pdf)

ತಮ್ಮ ಪತ್ರವನ್ನು ಕತ್ತರಿಸಿದಲ್ಲದೆ, ಹೇಡಿಗಳಂತೆ ಎಲ್ಲೋ ಒಳಪುಟದಲ್ಲಿ ಪ್ರಕಟಿಸಿರುವ ಬಗ್ಗೆಯೂ ಅಜಯ ಸಿಂಗರು ಆಕ್ರೋಶ ಪಟ್ಟು follow-up ಪತ್ರ ಕಳಿಸಿದ್ದಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದ್ದಾರೆ.

ಅಜಯ ಸಿಂಹರ ಮೂಲ ಪತ್ರದಲ್ಲಿದ್ದ ಆದರೆ ವಿಕದಲ್ಲಿ ಕತ್ತರಿ ಪ್ರಯೋಗಕ್ಕೊಳಗಾದ ಒಂದು ಪ್ಯಾರಾಗ್ರಾಫ್ ಉಲ್ಲೇಖನೀಯ: "ತಪ್ಪು ಮಾಹಿತಿಯ ಆಧಾರದ ಮೇಲೆ ಕೆಲವು ಮುಖ್ಯ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಂಡಿರುತ್ತೀರಿ ಎಂದು ಸ್ಪಷ್ಟವಾಗಿರುತ್ತದೆ. ಅದರಲ್ಲಿ ಕೆಲವರು ನನ್ನನ್ನು ನಿನ್ನೆಯಿಂದ ದೂರವಾಣಿ ಮೂಲಕ ಸಂಪರ್ಕಿಸಿ ಅವರು ಹೇಳಿದ್ದು ಒಂದಾದರೆ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ ಎಂದು ತಿಳಿಸಿದ್ದಾರೆ. ಇದು ಪತ್ರಿಕೆಯ ಸಂಪಾದಕರಾಗಿ ನಿಮ್ಮ ಸ್ವಾತಂತ್ರ್ಯ? ನೀವು ನ್ಯಾಯಯುತ, ಆತ್ಮಸಾಕ್ಷಿಯುಳ್ಳ ಸಜ್ಜನ ವ್ಯಕ್ತಿಯಾಗಿದ್ದರೆ, ವಾಸ್ತವಾಂಶವನ್ನು ವಿವರಿಸಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ನಮ್ಮ ಕಚೇರಿಯಿಂದ ಕಳುಹಿಸಲಾದ ಪತ್ರಗಳನ್ನು ಪ್ರಕಟಿಸಿ ನಂತರ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಬಹುದಾಗಿತ್ತು"

ಹೋಗಿ ಆ ಮೂಲ ಪತ್ರವನ್ನು ನೋಡಿ, ನಿಜಕ್ಕೂ ಅಜಯ ಸಿಂಗರ ಪತ್ರ ಒಂದು Class Act - ವಿಕದ ಒಳಹೂರಣವನ್ನು ಚೆನ್ನಾಗಿ ಬಯಲಿಗೆಳೆದಿದ್ದಾರೆ ಮತ್ತು ವಿಶ್ವೇಶ್ವರ ಭಟ್ಟರ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸಿದ್ದಾರೆ. "ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಿಗೆ ಅಲ್ಲ"ವೆಂಬ ಪದಗಳ ಹಿಂದಿರುವ ಅಜಯ ಸಿಂಹರ ನೋವನ್ನು ವಿಕದ ವರ್ಗಾವಣೆ ಏಜೆಂಟ್ ಗಡಣ, fixerಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬಹುದೇ?

ವಿಕ ಪ್ರಮುಖ ವ್ಯಕ್ತಿಗಳ ಅಭಿಪ್ರಾಯವನ್ನು ತಿರುಚಿ ಬರೆದು ಡಿಜಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿದರೆ, ವಿಶ್ವೇಶ್ವರ ಭಟ್ಟರ ಈ ಓರಾಟಕ್ಕೆ ಇತರ main stream ಪತ್ರಿಕೆಗಳಿಂದ, ಮಾಧ್ಯಮಗಳಿಂದ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

ವಿಶ್ವೇಶ್ವರ ಭಟ್ಟರನ್ನು ಬೆಂಬಲಿಸಿದ ಏಕೈಕ ಸಂಪಾದಕ ಯಾರು ಗೊತ್ತೇ? ಮಂಗಳೂರಿನಲ್ಲಿ "ಕರಾವಳಿ ಅಲೆ"ಯೆಂಬ ಸೆಕ್ಸ್ ಪತ್ರಿಕೆ ನಡೆಸುತ್ತಿರುವ ಬಿ.ವಿ.ಸೀತಾರಾಮ್ ಮಾತ್ರ! ಎಂತಹ ವಿಪರ್ಯಾಸ ನೋಡಿ! ಯಾವ ಬಿವಿ ಸೀತಾರಾಂನ್ನು "ಅಂಡೆ ಪಿರ್ಕಿ"ಯೆಂದು ಬಣ್ಣಿಸಿದ್ದ ವಿಶ್ವೇಶ್ವರ ಭಟ್ಟರ ಬೆಂಬಲಕ್ಕೆ ಈಗ ನಿಂತಿರುವುದು ಅದೇ ಅಂಡೆ ಪಿರ್ಕಿ ಸೀತಾರಾಮ!

ವಿಕದ, ವಿಶ್ವೇಶ್ವರ ಭಟ್ಟರ ಅಧ:ಪತನಕ್ಕೆ ಬೇರೇನು ಸಾಕ್ಷಿ ಬೇಕು!??

Thursday, June 17, 2010

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ. ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ.ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!
ವಿಜಯ ಕರ್ನಾಟಕದ ಸಬ್ ಎಡಿಟರುಗಳಿಂದ ಹಿಡಿದು, ಅಂಕಣಕಾರರು ಸಂಪಾದಕರೆಲ್ಲಾ ವರ್ಗಾವಣೆ ದಂಧೆಯ ಸೈಡು ಬ್ಯುಸಿನೆಸ್ ನಡೆಸುವುದು ವಿಧಾನಸೌಧ ಯಡ ತಾಕುವವರೆಲ್ಲರಿಗೂ ಗೊತ್ತಿರುವಂತ್ತದ್ದೇ.

ಯಾವಾಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತೋ ಆ ದಿನದಿಂದಲೇ "ಈ ಸರ್ಕಾರ ಅಧಿಕಾರಕ್ಕೆ ಬಂದದ್ದು ನಮ್ಮ ಪತ್ರಿಕೆಯಿಂದಾಗಿಯೇ" ಎಂದು ವಿಜಯ ಕರ್ನಾಟಕದ ಅಂಕಣಕಾರರು, ಸಂಪಾದಕರು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬುದು ಸುಳ್ಳಲ್ಲ.

ಪ್ರಭಾವೀ ಖಾತೆಗಳ ಸಚಿವರ ಅಟೆಂಡರುಗಳು, ಪಿ.ಎ.ಗಳೇ "ಸಾರ್ ವಿಕ ಭಟ್ಟರ ಹತ್ತಿರ ಫೋನು ಮಾಡಿಸಿ" ಎಂದೋ, "ತ್ಯಾಗರಾಜ್ ಶೋಭಕ್ಕರಿಗೆ ಕ್ಲೋಸು, ಅವರ ಬಳಿ ಸಾಹೇಬ್ರಿಗೆ ಫೋನ್ ಮಾಡಿಸಿ"ಯೆಂದೋ ವಿ.ಕ.ಪತ್ರಕರ್ತರ ಅಂಕಣಕಾರರ ಖಾಸಗೀ ಮೊಬೈಲ್ ನಂಬರ್ ನೀಡುತ್ತಾರೆ.

ಇನ್ನು ಡಿ.ಆರ್.ಅಶೋಕರಾಮ್ ಎಂಬ ವಿ.ಆರ್.ಎಲ್.ಕಂಪೆನಿಯ ಕಾರಖೂನ ಕಮ್ "ವಿ.ಕ.ಅಂಕಣಕಾರ" ಅತ್ತ ಎಂ.ಎಲ್.ಸಿ. ವಿಜಯಾನಂದರೆ ಹೆಸರಲ್ಲಿ, ಇತ್ತ ಬಳ್ಳಾರಿ ರೆಡ್ಡಿಗಳ ಏಜೆಂಟರಂತೆ ಇದ್ದ ಬಿದ್ದ ಸಚಿವರ ಮನೆಗಳಲ್ಲಿ ಕಚೇರಿಗಳಲ್ಲಿ ಕಂಡು ಬರುತ್ತಾರೆ.

ಶಾಲಾ ಶಿಕ್ಷಕರ ವರ್ಗಾಣೆಯಿಂದ ಹಿಡಿದು ಉನ್ನತ ಶಿಕ್ಷಕ ಇಲಾಖೆ (ಹೇಗೂ ಲಿಂಬಾವಳಿ "ನಮ್ಮ ಎಬಿವಿಪಿ ಹುಡುಗ" ನೋಡಿ), ಶೋಭಕ್ಕ ಇದ್ದಾಗ ಪಂಚಾಯತಿ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಸರಕಾರೀ ಮೆಡಿಕಲ್ ಕಾಲೀಜುಗಳ ಗುಮಾಸ್ತರಿಂದ ಹಿಡಿದು ಪೋಲಿಸ್ ಇಲಾಖೆಯ ವರ್ಗಾವಣೆಯಲ್ಲೂ ವಿ.ಕ.ದ ಪತ್ರಕರ್ತ ಮಿತ್ರರು ಕೈಯಾಡಿಸುವುದು ಖಮಾಯಿಸುವುದು ವಿಧಾನಮಂಡಲ ಬೀಟ್ ನ ಎಲ್ಲರಿಗೂ ತಿಳಿದಿರುವ ಸಂಗತಿ.
ಆದರೆ ಯಾವಾಗ ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಪೋಲೀಸ್ ವರ್ಗಾವಣೆ ಬೋರ್ಡ್ ಸ್ಥಾಪಿಸಿತೋ, ಅಂದಿನಿಂದ ಈ ವಿ.ಕ. ಪತ್ರಕರ್ತ coterie ಗೆ ಪೋಲಿಸ್ ಇಲಾಖೆಯ ವರ್ಗಾವಣೆ ಕೆಲಸವಿಲ್ಲದಂತಾಗಿ ಹೋಗಿ ಮೈ ಪರೆಚುಕೊಳ್ಳುತ್ತಿದ್ದಾರೆ.

ಇದರ ಪರಿಣಾಮವೇ ಇದ್ದಕ್ಕಿದ್ದಂತೆ ಯಾವುದೋ ಅನಾಮಧೇಯ ಪತ್ರದ ಜಾಡು ಹಿಡಿದು ಪೇದೆ ವಿ.ಕ.ದ ಕಚೇರಿಗೆ ಹೋದದ್ದನ್ನೇ ನೆಪ ಹಿಡಿದು ಡಿ.ಜಿ. ಅಜಯ್ ಸಿಂಗರ ವಿರುದ್ಧ ಕೀಳಭಿರುಚಿಯ ವರದಿಗಳನ್ನು ವಿಜಯ ಕರ್ನಾಟಕ ಪ್ರಕಟಿಸಿ ನಮ್ಮ ಕಾನೂನು ಪಾಲಕರನ್ನು ಕುಗ್ಗಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.

ಅದೂ ನಕ್ಸಲರಂತಹ ಹೇಡಿಗಳು ಪೋಲಿಸರ ರುಂಡ ಚೆಂಡಾಡುತ್ತಿರುವಾಗ ಪೋಲಿಸರ ಹಿಂದಿರುವ ಬದಲು ಕೇವಲ ತಮ್ಮ ವರ್ಗಾವಣೆ ಶಿಫಾರಸುಗಳಿಗೆ ಸೊಪ್ಪು ಹಾಕಿಲ್ಲವೆಂದು ಅಜಯ್ ಸಿಂಗರಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಹೀಯಾಳಿಸಿ ಬರೆಯುವುದು "ವಿಜಯ ಕರ್ನಾಟಕ" ಸಂಪಾದಕೀಯ ಮಂಡಳಿಗೆ "ಶೋಭೆ" ತರುವ ವಿಷಯವಲ್ಲ.

ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಕಂಡ ಸಭ್ಯ ಅಧಿಕಾರಿಗಳಲ್ಲಿ ಅಜಯ್ ಸಿಂಗ್ ಒಬ್ಬರು. ವರ್ಗಾವಣೆ ದಂಧೆಯನ್ನು ಯಕ:ಶ್ಚಿತ್ ನಿಲ್ಲಿಸಿರುವ ಅಜಯ್ ಸಿಂಗ್ CM ಕಚೇರಿಯಿಂದ ಬಂದ ಶಿಫಾರಸುಗಳನ್ನೇ ಕಡೆಗಣಿಸಿರುವಾಗ ವಿಜಯ ಕರ್ನಾಟಕದ ದಲ್ಲಾಳಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸರಿಯಾಗಿಯೇ ಇದೆ.

ತಾವೇ ಸೂಪರ್ ಮಿನಿಸ್ಟರ್, ತಾವೇ ಸೂಪರ್ ಗವರ್ಮೆಂಟು ಎಂದು ಬೀಗುತ್ತಿದ್ದ ವಿ.ಕ.ದ ಭಟ್ಟರು, ತ್ಯಾಗರಾಜ್ ಅಶೋಕರಾಮ್ ರಂತಹ ದಲ್ಲಾಳಿಗಳು ಅಜಯ್ ಸಿಂಗರಂತಹ ಅಧಿಕಾರಿಗಳ ವಿರುದ್ಧ ಏನೇನೋ ದಿನಗಟ್ಟಳೆ ಬರೆದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಹೊರಬಂದು ಆತ್ಮಾವಲೋಖನ ಮಾಡಿಕೊಳ್ಳಬೇಕಾಗಿದೆ.

**************
ಕೊನೆ ಮಾತು: ಶೋಭಕ್ಕನನ್ನು ಹಿಗ್ಗಾ ಮುಗ್ಗ ಹೊಗಳುವ ತ್ಯಾಗರಾಜ್, ಅಶೋಕರಾಮರಂತಹ ವರ್ಗಾವಣೆ ದಲ್ಲಾಳಿಗಳಿಗೊಂದು ಪ್ರಶ್ನೆ - ಶೋಭಕ್ಕ ಇತ್ತೀಚೆಗೆ ಮಾನಸ ಸರೋವರಕ್ಕೆ ಹೋಗಿ ಬಂದರು ತಾನೆ? ಅತ್ತ ಬಡ ಯಾತ್ರಿಕರು ಬಸ್ಸಿನಲ್ಲಿ, ಜೀಪಿನಲ್ಲಿ ಒದ್ದಾಡಿಕೊಂಡು ಮಾನಸ ಸರೋವರಕ್ಕೆ ಹೋದರೆ, ಶೋಭಕ್ಕ ಹೆಲಿಕಾಪ್ಟರಿನಲ್ಲಿ ಬುರ್ರೆಂದು ನೇಪಾಳ ಚೀನಾ ಹೋಗಲು ಆದ ಖರ್ಚು ಎಷ್ಟು ಎಂದು ಕೇಳುವ ಧೈರ್ಯ ತಮಗಿದೆಯೇ? ಯಾವುದೇ ಆದಾಯವಿಲ್ಲದೇ ಯಕ:ಶ್ಚಿತ್ ಎಂ.ಎಲ್.ಎ. ಆಗಿರುವ ಶೋಭಕ್ಕನಿಗೆ ಹೀಗೆ ಕೋಟ್ಯಾಂತರ ರೂಪಾಯಿ ಸಿಕ್ಕಿದ್ದು ಎಲ್ಲಿಂದ?

ಯಾವುದೋ ಹಳಸಲು "ಸುದ್ದಿಮನೆ" ಬದಲು ಅಥವಾ "ಹಾಲಪ್ಪ tape" ಎಂಬ political manipulatative ಗೆ ಬಲಿಬಿದ್ದು "ನಮ್ಮದು ತನಿಖಾ ಪತ್ರಿಕೋದ್ಯಮ" ಎಂದು ಕೊಚ್ಚಿಕೊಳ್ಳುವ ಬದಲು, ಒಂದಿನಿತೂ ಆದಾಯವಿಲ್ಲದೆಯೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾನಸ ಸರೋವರಕ್ಕೆ ಬುರ್ರೆಂದು ಹಾರಿಹೋದ ಶೋಭಕ್ಕರ finance ಮಾಡಿದ್ದು ಯಾರೆಂದು ಹುಡುಕಿ ನಿಜವಾದ ಪತ್ರಿಕೋದ್ಯಮ ಏನೆಂದು ತೀರಿಸುವ ತಾಖತ್ತು "ವಿಜಯ ಕರ್ನಾಟಕ"ದ ಪತ್ರಕರ್ತರೆಂಬ ವರ್ಗಾವಣೆ ಏಜೆಂಟರುಗಳಿಗಿದೆಯೇ?
&&&&&

Wednesday, March 3, 2010

"ಕನ್ನಡ ಪ್ರಭ ಲೇಖನ ನನ್ನದಲ್ಲ": ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ

ಕನ್ನಡ ಪ್ರಭದ ಸಂಪಾದಕೀಯ ಮಂಡಳಿಯ ಅಸಲೀ ರೂಪ ಬಯಲಾಗಿದೆ.

ಇಸ್ಲಾಮ್ ಮತ್ತು ಪ್ರವಾದಿಯ ಬಗ್ಗೆ ಹೀನಾಯಮಾನವಾಗಿ ಬರೆದು ಆ ಗಲೀಜನ್ನು ತಸ್ಲೀಮಾ ಬಾಯಿಗೆ ಒರೆಸಿ ಬಚಾವ್ ಆಗುತ್ತೇವೆಯೆಂದು ಕನ್ನಡ ಪ್ರಭದ ಎಣಿಸಿದ್ದರೆ ಈಗ ಆದದ್ದೇ ಬೇರೆ. ವೀಸಾ ನವೀಕರಣಕ್ಕಾಗಿ ಭಾರತದಲ್ಲಿರುವ ತಸ್ಲೀಮಾ ತಾನೆಂದೂ ಪ್ರವಾದಿ ಮತ್ತು ಬುರ್ಖಾ ಬಗ್ಗೆ ಬರೆದಿಲ್ಲವೆಂದು ಹೇಳಿರುವುದು ಕನ್ನಡ ಪ್ರಭ ಅಸಲಿಯತ್ತನ್ನು ತೋರಿಸುತ್ತದೆ.

ಆದದ್ದು ಇಷ್ಟೇ: ದೇವೇಗೌಡ ಮತ್ತು ತಲೆಹರಟೆ ಕಾಂಗ್ರೆಸಿಗ ಗವರ್ನರ್ ಭಾರಾಧ್ವಾಜ್ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ನಡೆಸಿರುವ ಸಂಚಿಗೆ ಕನ್ನಡ ಪ್ರಭ ಕೂಡಾ ತನ್ನ ಕಿರು ಕಾಣಿಕೆ ಸಲ್ಲಿಸಿದೆ. ಹೇಗೂ ಸಂಪಾದಕೀಯ ಮಂಡಳಿ ಸುವರ್ಣಕ್ಕೆ ಗುಳೇ ಹೋಗಿದೆ, ಸರ್ಕ್ಯುಲೇಷನ್ನೂ ಎಕ್ಕಟ್ಟಿ ಹೋಗಿದೆ. ಇಂದೋ ನಾಳೆಯೋ ಎಂಬಂತೆ ದಿನ ದೂಡುತ್ತಿರುವ ಕನ್ನಡ ಪ್ರಭದ ಸಂಪಾದಕೀಯ ಮಂಡಳಿಗೆ ದೇವೇಗೌಡರ "ಕಾಣಿಕೆ" ಎಷ್ಟು ಎಂದು ಕೇಳಬೇಕಾಗಿದೆ.

ಅತ್ತ ಲೇಖನ ಪ್ರಕಟವಾಗುತ್ತಿದ್ದಂತೆ ಇತ್ತ ಹಾಸನ ಶಿವಮೊಗ್ಗಾಕ್ಕೆ ಸಾವಿರಾರು ಜನರನ್ನು ಕಳಿಸಿದ್ದು ಯಾರು? ಕೆಲವೇ ಘಂಟೆಗಳಲ್ಲಿ ಗಲಭೆ ಆಯೋಜಿಸಿದ್ದು ಯಾರು? "ಸಿಂಧು" ಎಂಬ ಹೆಸರಲ್ಲಿ ಪ್ರಕಟವಾದ ಈ ಲೇಖನದ ಮೂಲ ಲೇಖಕ ಯಾರು?

ಪ್ರಾಯಶ: ತಸ್ಲೀಮಾ ನಾರ್ವೆಯೋ ಸ್ವೀಡನಲ್ಲೋ ಇದ್ದರೆ ಇದು ಬಯಲಾಗುತ್ತಿರಲಿಲ್ಲ. ಆದರೆ ಕನ್ನಡ ಪ್ರಭದ ದುರಾದೃಷ್ಟಕ್ಕೆ ಆಯಮ್ಮ ವೀಸಾ ಕೆಲಸಕ್ಕಾಗಿ ಇದೇ ಸಮಯದಲ್ಲಿ ದೆಹಲಿಯಲ್ಲಿದ್ದು ಕೂಡಲೇ ಸ್ಪಷ್ಟೀಕರಣ ನೀಡಿ ಕನ್ನಡ ಪ್ರಭದ ಅಸಲು ಬಯಲಾಗುವಂತಾಗಿದೆ.

ಖಾದ್ರಿ ಶಾಮಣ್ಣ, ವೈಯೆನ್ಕೆಯಂತಹವರ ಸಾರಥ್ಯದಲ್ಲಿ ಮೆರೆದಿದ್ದ, ಒಂದು ಕಾಲದಲ್ಲಿ ಸ್ವತಂತ್ರ ಪತ್ರಿಕೋದ್ಯಮಕ್ಕೆ ಹೆಸರಾಗಿದ್ದ ಕನ್ನಡ ಪ್ರಭಕ್ಕೆ ಗೌಡ-ಭಾರಾಧ್ವಾಜರಂತಹ ರಾಜಕಾರಣಿಗಳ ಅಮೇಧ್ಯ ತಿಂದು ಬದುಕುವಂತಹ ಪರಿಸ್ಥಿತಿ ಬಂದಿರುವುದು ಎಂಥಹಾ ವಿಪರ್ಯಾಸ ನೋಡಿ?

Sunday, February 7, 2010

Villanization - then Shivaraj Patil, now Sharad Pawar - why is media giving free pass to Sonia Gandhi and Manmohan Singh?



I first noticed this trend during Mumbai attacks.

When a hunt for suitable scapegoat started after the attacks, media started focusing on Shivaraj Patil (and his dressing habits)

Now when there appears to be no end to price increase of basic commodities, media has started ganging up on Sharad Pawar.

Can you notice what is common in both cases?

Yes, absolute free pass given to UPA President Sonia Gandhi and Prime Minister Manmohan Singh by the media! It is as if these two people who literally run India today, have no responsibility at all for appointing useless ministers such as Patil and Pawar.

Agreed, there is issue of coalition partners and keeping region/caste balance in the ministry. But as leaders who appointed these persons in the first place why media is not asking any accountability on part of Sonia Gandhi and Manmohan Singh?

Why is media being soft on Sonia and Manmohan? Why is no one asking Sonia or MM "Why did you appoint these useless people to these posts"? In any company those who hire bad employees are taken to task, why not with Govt? Or is this an example of excellent media management by Congress?

Any government which allowed attacks like 26/11 - where someone could use a boat to beat our bluewater Navy and Coast Guard and land undetected on our shores - would have been shown the door in any democracy. But Congress with media's help, nicely diverted all attacks towards Shivaraj Patil painting him as a villain. Job well done because Congress won both Loksabha and then state elections in Maharastra.

Congress party's handling of media then and today when common man is upset against price rise is excellent example of how media can be manipulated by those in power.

Rakesh Mathias
6 February 2010
rakesh.mathias AT gmail.com

Wednesday, January 13, 2010

1 Crore Rs to Bahrain Kannada Sangha - why should poor tax payers of Karnataka fund rich NRI association?

As I suspected in my earlier blog post, BJP Government in Karnataka has again surrendered to a powerful Kannada newspaper Editor.

1 Crore Rupees has been released to Bahrain Kannada Sangha by Karnataka Government (subject to RBI) after above mentioned Editor returned to Bangalore from a fresh "sanmana" and lambasted CM for not keeping his words to Bahrain Kannada Association on 1 Crore Rupees.

In other words, poor tax payers of Karnataka will be subsidizing weekend kitty parties of NRIs in one of the world's richest country. Bahrain's per capita income is almost $18,000 compared to approx $500 per capita income of Karnataka. Can there be bigger irony than this?

Our CM is known to announce 1-2 crore rupees to every religious or cultural place he visits. While in principle I oppose government grants to any religious institutions, I understand how these donation may help social service done by temples. At least one can assume money is spent within India.

But donating 1 Crore to an NRI association in one of the world's richest countries?

Especially when Karnataka is still to recover from one of the worst floods in centuries?

Why send 1 crore to Bahrain when various "Academies" established by Karnataka govt are in coma because other than announcing Presidents to the academies, Chief Minister (who also holds Kannada & Cultural portfolio) has done nothing to rejuvenate them?

As I explained in my earlier post, I've been to Bahrain and don't doubt sincerity of Kannada Sangha there. But Kannadigas in Bahrain are no exception to what we see in Karnataka or for that matter Indian diaspora.

Anyone who has been to NRI events knows what takes place there - weekend parties, kitty parties, usual Bharatanatyam and Carnatic music with bored second generation enduring those torture sessions. NRIs of course think that by attending these events (and making bored teenagers sit through the boring concerts), they are keeping Kannada culture "alive".

Even though Kannadigas form a tiny portion of Bahrain's population, there are already so many associations along caste and community lines - Billavas Association, Bunts Association, Konkani Association, Gowdas Bahrain, Mangalore Catholics, Karnataka Muslims Association among others.

Today it is 1 Crore for Kannada Sangha. Tomorrow if some other association invites CM and presents tacky 10 Dinar souvenir and honours him, will he announced 1 Crore rupees to them as well?

Lastly, what mechanism does Karnataka govt have to monitor fund utilization outside the country? Even inside the country in front of citizens we know how govt funds are spent - that being the case how can one make sure this 1 Crore is not misused once it leaves India?